Skip to main content

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

_✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_

_ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿಯು ಒಂದು ಕಲ್ಲನ್ನು ಹೇಗೆ ಸುಂದರವಾಗಿ ಕೆತ್ತನೆ ಮಾಡಿ ಒಂದು ಶಿಲೆಯಾಗಿ ತತ್ವ ರೂಪಿಸುತ್ತಾನೋ, ಅದೇ ರೀತಿ ಶಿಕ್ಷಕರು ವಿದ್ಯಾರ್ಥಿಯನ್ನು ತಿದ್ದಿ, ಶಿಕ್ಷಣವನ್ನು ನೀಡಿ ಒಬ್ಬ ಉತ್ತಮ ವ್ಯಕ್ತಿಯಾಗಿ ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ದೇಶಕ್ಕೆ ಉತ್ತಮ ನಾಗರಿಕರನ್ನು ರೂಪಿಸಿಕೊಡುವಲ್ಲಿ ಗುರುವಿನ ಪಾತ್ರ ಅನನ್ಯವಾಗಿದೆ. ವಿದ್ಯಾರ್ಥಿಗಳನ್ನು ಅಜ್ಞಾನದಿಂದ ವಿಜ್ಞಾನದೆಡೆಗೆ ಸಾಗಿಸುವವರಾಗಿದ್ದಾರೆ ಶಿಕ್ಷಕರು._

_ವಿದ್ಯಾರ್ಥಿಯಾಗಿರುವವನ ಮೊದಲ ಕರ್ತವ್ಯವೆಂದರೆ ಶಿಕ್ಷಕರ ಬಗ್ಗೆ ಗೌರವ ಬೆಳೆಸಿಕೊಳ್ಳುವುದಾಗಿದೆ. ಪ್ರತಿಯೊಬ್ಬ ಶಿಕ್ಷಕರನ್ನು ಯಾವುದೇ ಭೇದ ಭಾವ ಇಲ್ಲದೆ ಸಮಾನ ರೀತಿಯಿಂದ ಗೌರವಿಸುವುದು ಕೂಡ ವಿದ್ಯಾರ್ಥಿಗಳ ಕರ್ತವ್ಯ. ಅಪಾರ ಅನುಭವದಿಂದ ಕೂಡಿದ ಅವರ ಬೋಧನೆಯಿಂದ ನಮ್ಮ ಜ್ಞಾನದ ಮಟ್ಟವನ್ನು ಹೆಚ್ಚಿಸಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದು ಪ್ರತಿಯೊಬ್ಬ ವಿದ್ಯಾರ್ಥಿ ನೆನಪಿನಲ್ಲಿಡಬೇಕಾದ ಸಂಗತಿಯಾಗಿದೆ. ಶಿಕ್ಷಕರು ತಮ್ಮ ವಿದ್ಯಾರ್ಥಿಗಳ ಏಳಿಗೆಯನ್ನೇ ಬಯಸುತ್ತಾರೆ. ವಿವಿಧ ಜಾತಿ ಧರ್ಮಗಳ ವಿದ್ಯಾರ್ಥಿಗಳು ವಿದ್ಯಾಭ್ಯಾಸ ನಡೆಸುತ್ತಿದ್ದರೂ ಪ್ರತಿಯೊಬ್ಬರನ್ನೂ ಒಂದೆ ದೃಷ್ಟಿಕೋನದಿಂದಿರಿಸಿ ತನ್ನಲ್ಲಿರುವ ಅಪಾರ ಜ್ಞಾನವನ್ನು ವಿಧ್ಯಾರ್ಥಿಗಳಿಗೆ ದಾರೆಯೆರೆಯುತ್ತಾರೆ. ಅದೇ ರೀತಿ, ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ಗುರಿಯನ್ನು ತಲುಪಿದಾಗ ಪೋಷಕರಿಗಿಂತ ಹೆಚ್ಚು ಸಂಭ್ರಮ ಪಡುವವರು ಶಿಕ್ಷಕರಾಗಿದ್ದಾರೆ._

_ಹಿಂದಿನ ಕಾಲದಲ್ಲಿ ಗುರುವಿಗೆ ನೀಡುತ್ತಿದ್ದ ಗೌರವ ಇಂದು ಕಣ್ಮರೆಯಾಗುತ್ತಿದೆ. ಏಕಲವ್ಯ ತಮ್ಮ ಗುರುಗಳಾದ ದ್ರೋಣಾಚಾರ್ಯರು ಕೇಳಿದ ಗುರುದಕ್ಷಿಣೆಯನ್ನು ಒಂದು ಕ್ಷಣವೂ ಯೋಚಿಸದೆ ತನ್ನ ಹೆಬ್ಬೆರಳನ್ನೇ ಕತ್ತರಿಸಿ ಕೊಟ್ಟಿದ್ದಾನೆ. ಇಂದಿನ ಕಾಲದ ವಿದ್ಯಾರ್ಥಿಗಳು ಗುರುದಕ್ಷಿಣೆ ಕೊಡುವುದಿರಲಿ ಗುರುಗಳಿಗೆ ಗೌರವವನ್ನೇ ಕೊಡುವುದಿಲ್ಲ._

_ಇಂದಿನ ಕಾಲದಲ್ಲಿ ಶಿಕ್ಷಕರನ್ನೇ ನೋಡದೆ ಆನ್ಲೈನ್ ಶಿಕ್ಷಣ ವ್ಯವಸ್ಥೆ ಪ್ರಚಲಿತವಾಗುತ್ತಿದೆ. ಇದರಿಂದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ನಡುವಿನ ಬಾಂಧವ್ಯ ವಿದ್ಯಾರ್ಥಿಗಳಿಗೆ ನಷ್ಟ ಹೊಂದುತ್ತದೆ. ಅದೇ ರೀತಿ, ಹಲವಾರು ವ್ಯಸನಗಳಿಗೆ ಇಂದಿನ ಪ್ರಜ್ಞಾವಂತ ವಿದ್ಯಾರ್ಥಿಗಳು ಬಲಿಯಾಗುತ್ತಿದ್ದಾರೆಂಬುವುದೇ ವಿಷಾದದ ಸಂಗತಿ. ಈ ರೀತಿ ದಾರಿ ತಪ್ಪುತ್ತಿರುವ ವಿದ್ಯಾರ್ಥಿಗಳಿಗೆ ಯೋಗ್ಯ ಗುರುವಿನಿಂದ ಸರಿಯಾದ ಮಾರ್ಗದರ್ಶನ ದೊರೆಯದಿರುವುದೇ ಕಾರಣವೆನಿಸುತ್ತದೆ._

_ಭಾರತ ಕಂಡ ಅಗ್ರಗಣ್ಯ ಶಿಕ್ಷಕ, ಮಾಜಿ ರಾಷ್ಟಪತಿ, ಶಿಕ್ಷಣ ತಜ್ಣ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನುಮ ದಿನವಾದ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನವನ್ನಾಗಿ ಆಚರಣೆ ಗೈಯ್ಯಲಾಗುತ್ತಿದೆ. ಪಾಠದೊಂದಿಗೆ ಪಠ್ಯೇತರ ಚಟುವಟಿಕೆಗಳನ್ನು ಸೇರಿಸಿಕೊಂಡು ನೈತಿಕತೆಯೊಂದಿಗೆ, ಶಿಸ್ತುಬದ್ಧ, ಸಂಸ್ಕಾರಯುತ, ಮೌಲ್ಯಯುತ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡುತ್ತಿರುವ ಪ್ರತಿಯೊಬ್ಬ ಅಧ್ಯಾಪಕರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು._

Comments

Popular posts from this blog

ಮಾದರೀ ವಿದ್ವಾಂಸ ಪಟ್ಟಾಂಬಿ ಉಸ್ತಾದ್

ಉಳ್ಳಾಲದಲ್ಲಿ ಧಾರ್ಮಿಕ ಅರಿವನ್ನು ಪಸರಿಸುವಲ್ಲಿ ಅನನ್ಯ ಕೊಡುಗೆ ನೀಡಿದ, ವಿಶೇಷವಾಗಿ ಅಳೇಕಲದಲ್ಲಿ 4 ದಶಕಗಳಿಂದ ಧಾರ್ಮಿಕ ರಂಗದ ನೇತ್ರತ್ವವನ್ನು ವಹಿಸಿ ಗಮನಾರ್ಹ ಸೇವೆ ನೀಡುತ್ತಿರುವ ಪಟ್ಟಾಂಬಿ ಉಸ್ತಾದರ ಬದುಕಿನ ಕಡೆ ಹ್ರಸ್ವ ನೋಟ ಬೀರೋಣ. ತಾಜುಲ್ ಉಲಮಾ ಉಳ್ಳಾಲ ತಂಙಲ್ ಖ.ಸಿ ರವರ ಪ್ರಮುಖ ಶಿಷ್ಯ, ಸರಳತೆ, ವಿನಯ, ಪ್ರೀತಿ, ಕರುಣೆ ಮೇಲೈಸಿದ ಅಪರೂಪದ ವಿದ್ವಾಂಸ ಪಟ್ಟಾಂಬಿ ಉಸ್ತಾದ್. ಅಬೂಝಿಯಾದ್ ಮುಹಮ್ಮದ್ ಮದನಿ ಪಟ್ಟಾಂಬಿ ಉಸ್ತಾದ್ ಎಂದು ಅವರ ಹೆಸರನ್ನು ಪೂರ್ತಿಯಾಗಿ ಹೇಳಲಾಗುತ್ತದೆ.  ಉಸ್ತಾದರ ನೈಜ ನಾಮ ಮುಹಮ್ಮದ್ ಎಂದಾಗಿದೆ. ಪ್ರೀತಿಯಿಂದ ಮಗನ ಹೆಸರು ಸೇರಿಸಿ ಅಬೂ ಝಿಯಾದ್ ಎಂದು ತನ್ನ ಹೆಸರಿನ ಮುಂದೆ ಸೇರಿಸಿ ಬರೆಯುತ್ತಾರೆ. ಉಳ್ಳಾಲದಲ್ಲಿ ಪಟ್ಟಾಂಬಿ ಉಸ್ತಾದ್ ಎಂದೇ ಚಿರಪರಿಚಿತ. ಮದನಿ ಎಂಬುವುದು ನಮಗೆ ತಿಳಿದಿರುವಂತೆ ಉಳ್ಳಾಲ ಸಯ್ಯಿದ್ ಮದನಿ ಅರೆಬಿಕ್ ಕಾಲೇಜಿನಲ್ಲಿ ಕಲಿತು ಪಡೆದ ಬಿರುದಿನ ಹೆಸರಾಗಿದೆ. 1952 ಮಾರ್ಚ್ ನಾಲ್ಕರಂದು ಪಾಲೋಳಿ ಮಹ್ಮೂದ್ ಮತ್ತು ಕೋಲ್ಕಾಟ್ ಫಾತಿಮ ಎಂಬವರ ಮಗನಾಗಿ ಜನಿಸಿದರು. ತಂದೆ ತಾಯಿಗೆ ಉಸ್ತಾದ್ ಸೇರಿ ಇಬ್ಬರು ಗಂಡು ಮಕ್ಕಳು. ಉಸ್ತಾದರು ಹಿರಿಯವರು. ಉಸ್ತಾದರ ತಮ್ಮ ಐದು ವರ್ಷಗಳ ಮುಂಚೆ ಮರಣ ಹೊಂದಿರುವರು. ಮಲಪ್ಪುರಂ ಜಿಲ್ಲೆಯ ಪುಣಪ್ಪ ಶಾಲೆಯಲ್ಲಿ 8 ನೇ ತರಗತಿ ತನಕ ಲೌಕಿಕ ಶಿಕ್ಷಣ ಪಡೆದರು. ತನ್ನ ತಂದೆಯ ಸಹೋದರಿಯ ಊರಾದ ಅರಿಪ್ರ ಎಂಬಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರ...

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಈ ಕೊಳದ ನೀರಿನಿಂದ ಮಕ್ಕಾದ ಬೆಂಕಿ ನಂದಿತು

ಅಳೇಕಲ ಮಸೀದಿ ಸನಿಹ ಕೊಳವೊಂದಿದೆ. ಸುಮಾರು ಆರುನೂರು ವರ್ಷಗಳ ಹಿಂದೆಯೇ ಅಂದರೆ ಉಳ್ಳಾಲದ ಮೊದಲ ಸೂಫಿ ಸಂತರಾದ ವಲಿಯುಲ್ಲಾಹಿ ಅಚ್ಚಿಸಾಹಿಬ್ ಖ.ಸಿ ರವರ ಕಾಲದಲ್ಲೇ ಕೊಳವಿತ್ತು ಎಂದೂ ಅಲ್ಲ ಅವರ ಕಾಲದ ನಂತರ ಕೊಳ ನಿರ್ಮಾಣವಾದದ್ದು ಎಂದು ಎರಡಭಿಪ್ರಾಯವಿದೆ. ಏನೇ ಆದರೂ ಸಯ್ಯಿದ್ ಮದನಿ ಖ.ಸಿ ರವರ ಕಾಲದಲ್ಲಿ ಅಳೇಕಲದ ಕೊಳ ಪ್ರಸಿದ್ಧಿ ಪಡೆಯಿತು.  ಒಂದು ದಿನ ಸಯ್ಯಿದ್ ಮದನಿ ತಂಗಳ್ ಖ.ಸಿ ತನ್ನ ಪತ್ನಿಯ ಊರಾದ ಈ ಅಳೇಕಲದ ಮಸೀದಿ ಸಮೀಪದ ಇದೇ ಕೊಳದಲ್ಲಿ ನಮಾಝ್ ಗಾಗಿ ವುಲೂ ನಿರ್ವಹಿಸುತ್ತಿದ್ದರು. ವುಲೂ ನಿರ್ವಹಿಸುತ್ತಿರುವುದರ ಮಧ್ಯೆ ಒಂದೇ ಸಮನೆ ತನ್ನ ಎರಡು ಕೈಗಳಿಂದ ನೀರನ್ನೆತ್ತಿ ಮೇಲಕ್ಕೆ ಚಿಮ್ಮುತ್ತಲಿದ್ದರು. ಸನಿಹವಿದ್ದವರು ಮೂಕ ಪ್ರೇಕ್ಷಕರಾಗಿ ಇದನ್ನೇ ನೋಡುತ್ತಿದ್ದರು. ನೀರು ಚಿಮ್ಮಿಸುವುದನ್ನು ನಿಲ್ಲಿಸಿದಾಗ ಸನಿಹವಿದ್ದವರು ಆಶ್ಚರ್ಯದಿಂದ ಕೇಳಿದರು. ಮದನಿ ತಂಗಳರೇ. ತಾವು ಯಾಕೆ ವುಲೂವಿನ ಮಧ್ಯೆ ನೀರನ್ನು ಮೇಲಕ್ಕೆ ಚಿಮ್ಮಿಸಿದಿರಿ. ಮದನಿ ತಂಗಳ್ ಹೇಳಿದರು.ನಾನು ವುಲೂ ನಿರ್ವಹಿಸುತ್ತಿರುವುದರ ಮಧ್ಯೆ ಪವಿತ್ರ ಮಕ್ಕಾದ ಹರಂ ಶರೀಫ್ ನಲ್ಲಿ ಬೆಂಕಿ ಅನಾಹುತ ಸಂಭವಿಸುವುದನ್ನು ಕಂಡೆನು. ಅಲ್ಲಾಹನ ಆಜ್ಞೆಯಂತೆ ಆ ಬೆಂಕಿಯನ್ನು ನಂದಿಸಲು ನೀರನ್ನು  ಚಿಮ್ಮಿಸಿದೆ. ಅಲ್ಲಾಹನ ಅನುಗ್ರಹದಿಂದ ಬೆಂಕಿ ನಂದಿತು ಎಂದರು. ಸಯ್ಯಿದ್ ಮದನಿ ತಂಗಳ್ ರವರ ಈ ಅದ್ಬುತದಿಂದ  ಜನರು ಭಾರೀ ಅನಾಹುತದಿಂದ ರಕ್ಷೆ ಪಡೆದರು. ಆ...