"ಬನೂ ಇಸ್ರಾಈಲ್ ವಿಭಾಗವು ಎಪ್ಪತ್ತೆರಡು ಪಂಗಡಗಳಾಗಿ ಛಿದ್ರವಾಗಿದ್ದರೆ ನನ್ನ ಸಮುದಾಯವು ಎಪ್ಪತ್ತಮೂರು ಪಂಗಡಗಳಾಗಿ ವಿಭಜನೆಯಾಗುವುದು. ಅವರ ಪೈಕಿ ಒಂದು ವಿಭಾಗವನ್ನು ಹೊರತುಪಡಿಸಿ ಉಳಿದವರೆಲ್ಲಾ ನರಕದ ಹಾದಿ ಹಿಡಿಯುವರು" ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ನುಡಿಯಿದು. ರಕ್ಷೆ ಹೊಂದುವ ಆ ವಿಭಾಗ ಯಾವುದೆಂದು ಸ್ವಹಾಬಿಗಳು ಕೇಳಿದಾಗ 'ಅದು ನಾನು ಮತ್ತು ನನ್ನ ಸ್ವಹಾಬಿಗಳ ಹಾದಿಯನ್ನು ಹಿಂಬಾಲಿಸುವವರು' ಎಂದರು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು. ಇಮಾಂ ತುರ್ಮುದೀ, ಇಮಾಂ ಅಹ್ಮದ್, ಇಮಾಂ ಅಬೂದಾವೂದ್ ಮುಂತಾದ ಹದೀಸ್ ವಿದ್ವಾಂಸರು ಈ ಹದೀಸನ್ನು ವರದಿ ಮಾಡಿದ್ದಾರೆ. ರಕ್ಷೆ ಹೊಂದುವ ವಿಭಾಗವನ್ನು ಅಹ್ಲುಸ್ಸುನ್ನತ್ ವಲ್ಜಮಾಅತ್ ಎಂದು ನಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೆಸರೆತ್ತಿ ಸ್ಪಷ್ಟವಾಗಿ ಹೇಳಿದ್ದಾಗಿ ಇಮಾಂ ಅಬುಲ್ಲೈಸ್ ಸಮರ್ಖಂದಿಯವರ ತಂಬೀಹುಲ್ ಗಾಫಿಲೀನ್ನಲ್ಲಿ ಕಾಣಬಹುದು. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ವಚನವು ಕಾಲಾಂತರದಲ್ಲಿ ನಿಜವಾಯಿತು. ಅವರು ಹೇಳಿದ ಹಾಗೆ ಇಲ್ಲಿ ಎಪ್ಪತ್ತ ಮೂರು ಪಂಗಡಗಳು ಪ್ರತ್ಯಕ್ಷವಾಯಿತು. ಇಮಾಂ ಮುಹ್ಯುದ್ದೀನ್ ಅಬ್ದುಲ್ ಖಾದಿರುಲ್ ಜೀಲಾನಿ(ರ) ಪ್ರಸ್ತುತ ಎಪ್ಪತ್ತಮೂರು ವಿಭಾಗವನ್ನು ತಮ್ಮ ಗುನ್ಯತು ತ್ವಾಲಿಬೀನ್ನಲ್ಲಿ ವಿವರಿಸಿದ್ದಾರೆ. ಅವರು ಹೇಳಿದರು: ಎಪ್ಪತ್ತಮೂರು ಪಂಗಡಗಳ ಮೂಲವು ಹತ್ತು ಪ್ರಮುಖ ವಿಭಾಗದಲ್ಲಿ ಸೇರುತ್ತದೆ. ಪ್ರತಿಯೊಂದರಲ...
ಇದು ಅಹ್ಲುಸ್ಸುನ್ನತಿ ವಲ್ ಜಮಾಅತಿನ ನೈಜ ಆಶಯಾದರ್ಶಗಳನ್ನು ವಿವರಿಸುವ ಬ್ಲಾಗ್ ಆಗಿದೆ. More info cont - Nawaz Saqafi Al Amjadi Ullala.