Skip to main content

Posts

Showing posts from January, 2020

ಅಝ್‌ರಾಯೀಲ್ (ಅ) ರನ್ನು ಅಳುವಂತೆ ಮಾಡಿದ ಘಟನೆ

ಅಝ್‌ರಾಯೀಲ್ (ಅ) ರನ್ನು ಅಳುವಂತೆ ಮಾಡಿದ ಘಟನೆ! *✒ಯೂಸುಫ್ ನಬ್‌ಹಾನಿ ಕುಕ್ಕಾಜೆ* 📞00971553499119   ▪ *ಒಮ್ಮೆ ಮಲಕ್* ಅಝ್‌ರಾಯೀಲ್ (ಅ) ರವರನ್ನು ಅಲ್ಲಾಹನು ಒಂದು ಹೆಂಗಸಿನ ರೂಹನ್ನು ತೆಗೆಯಲು ಕಳುಹಿಸಿದನು. ಅಲ್ಲಾಹುವಿನ ಆಜ್ಞೆ ಕಟ್ಟುನಿಟ್ಟಾಗಿ ಪಾಲಿಸಬೇಕಾದ ಮಲಕ್ ಅಝ್‌ರಾಯೀಲ್ (ಅ) ರವರು ರೂಹ್ ತೆಗೆಯಲು ಬಂದಾಗ ಆ ಸಾಧು ಮಹಿಳೆಯು ಮನುಷ್ಯರು ಯಾರೂ ಇಲ್ಲದ ಒಂದು ನಿರ್ಜನ ಪ್ರದೇಶದಲ್ಲಿ ಒಂಟಿಯಾಗಿ ತನ್ನ ಪುಟ್ಟ ಕಂದನಿಗೆ ಮೊಲೆಯುಣಿಸುತ್ತಿದ್ದಳು.    ▪ *ಏಕಾಂಗಿಯಾಗಿ* ಯಾರೂ ಇಲ್ಲದ ಒಂದು ಜಾಗದಲ್ಲಿ ತನ್ನ ಕಂದನನ್ನು ಲಾಲಿಸುತ್ತಾ ಮೊಲೆಯುಣಿಸುತ್ತಿರುವ ಮಹಿಳೆಯನ್ನು ಕಂಡಾಗ ಯಾರೂ ಇಲ್ಲದ ಜಾಗವಾದ್ದರಿಂದ ಆ ಮಗುವಿನ ಮುಂದಿನ ಭವಿಷ್ಯವನ್ನು‌ ಆಲೋಚಿಸಿ ಮಲಕ್ ಅಝ್‌ರಾಯೀಲರಿಗೆ ಈ ಪ್ರಪಂಚವೇ ತನ್ನ ಮೇಲೆ ಬಿದ್ದಂತಾಯಿತು. ಬೇಸರದಿಂದ ಕಣ್ಣಲ್ಲಿ ನೀರು ಬಂತು. ಏನು ಮಾಡಬೇಕೆಂದು ತಿಳಿಯದೆ ಒಂದು ಕ್ಷಣ ನಿಂತಲ್ಲೇ ನಿಂತು ಹೋದರು. ಆದರೇನು ಮಾಡುವುದು.? ಏನೂ ಮಾಡುವಂತಿಲ್ಲ. ಅಲ್ಲಾಹನ ಕಟ್ಟುನಿಟ್ಟಿನ ಆಜ್ಞೆ ಪಾಲಿಸಲೇಬೇಕು. ಬೇರೆ ಏನೂ ಮಾಡುವಂತಿಲ್ಲ. ಕೊನೆಗೆ ಹೆಂಗಸಿನ ರೂಹ್ ತೆಗೆದುಕೊಂಡು ಮಲಕ್ ಅಝ್‌ರಾಯೀಲ್ ಆಕಾಶ ಲೋಕಕ್ಕೆ ಹೋದರು. ಹೆಂಗಸು ಮಯ್ಯಿತಾದರು. ಮಗು ನಿರ್ಜನ ಪ್ರದೇಶದಲ್ಲಿ ಒಂಟಿಯಾಗಿ ಅನಾಥವಾಯಿತು.    ▪ *ವರ್ಷಗಳು* ಕಳೆಯಿತು. ಸಾಧಾರಣ ಕಸಬಿನಂತೆ ಮತ್ತೊಮ್ಮೆ ಹೀಗೆಯೇ ಬೇರೊಬ್ಬರ ರ...

ಎಂಬತ್ತು ಛಡಿಯೇಟು ಕೊಡಲು ಇಮಾಮ್ ಮಾಲಿಕ್‌ರ ಫತ್ವಾ

ಎಂಬತ್ತು ಛಡಿಯೇಟು ಕೊಡಲು ಇಮಾಮ್ ಮಾಲಿಕ್‌ರ ಫತ್ವಾ *✒ಯೂಸುಫ್ ನಬ್‌ಹಾನಿ ಕುಕ್ಕಾಜೆ* 📞 00971553499119    ▪ *ಒಮ್ಮೆ* ಮದೀನದಲ್ಲಿ ಒಂದು ಹೆಂಗಸು ಮರಣ ಹೊಂದಿದರು. ಸಾಮಾನ್ಯ ಮರಣ ಹೊಂದಿದರೆ ಕಡ್ಡಾಯವಾಗಿ ಮಾಡುವ ಮೊದಲ ಕರ್ಮವಾದ ಜನಾಝವನ್ನು ಸ್ನಾನ ಮಾಡಿಸಲು ಪರಿಸರದ ಕೆಲವು ಮಹಿಳೆಯರು ಸ್ನಾನಗೃಹಕ್ಕೆ ಕೊಂಡು ಹೋದರು.    ▪ *ಅಂತೆಯೇ* ಸ್ನಾನ ಮಾಡಿಸುತ್ತಿರುವಾಗ ಒಂದು ಮಹಿಳೆ ಹೇಳಿದರಂತೆ. *"ಈ ಮಹಿಳೆ ಎಷ್ಟೋ ಮಂದಿಯೊಂದಿಗೆ ಅತ್ಯಾಚಾರ ಮಾಡಿರಬಹುದು*" ಸುಬ್‌ಹಾನಲ್ಲಾಹ್...! ಅಷ್ಟು ಹೇಳಿದ್ದೇ ತಡ, ಹೇಳಿದ ಮಹಿಳೆಯ ಕೈ ಮೃತ ಶರೀರದಲ್ಲಿ ಅಂಟಿಕೊಂಡಿತು. ಏನು ಮಾಡಿದರೂ ಯಾವ ಶಕ್ತಿ ಉಪಯೋಗಿಸಿಯೂ ಕೈಯನ್ನು ಅಂಟಿದಲ್ಲಿಂದ ತೆಗೆಯಲಾಗದೆ ತೊಂದರೆಗೀಡಾದರು. ಹೊರಗೆ ಕಫನ ಮತ್ತು ದಫನ ಮಾಡಲು ಕಾಯುತ್ತಿದ್ದವರು ಸ್ನಾನಗೃಹದಿಂದ ಮಯ್ಯಿತನ್ನು ಹೊರಗೆ ತರುವುದು ಕಾಣದೆಯಾದಾಗ ಕಂಗಾಲಾದರು.    ▪ *ಅಷ್ಟರಲ್ಲಿ* ಹೊರಗಿನಿಂದ ಬೇರೊಂದು ಮಹಿಳೆ  "ಸ್ನಾನಗೃಹದಲ್ಲಿ ಏನೋ ಅಸಾಮಾನ್ಯ ಘಟನೆ ನಡೆದಿರಬೇಕು. ಇಲ್ಲವಾದರೆ ಇಷ್ಟು ತಡವಾಗಲು ಸಾಧ್ಯವಿಲ್ಲ" ಎಂದು ಹೇಳಿ ಒಳಗೆ ಹೋದರು. ಒಳಗೆ ಹೋದಾಗ ಸ್ನಾನ ಮಾಡಿಸುತ್ತಿದ್ದ ಒಂದು ಮಹಿಳೆಯ ಕೈ ಮೃತ ಶರೀರದಲ್ಲಿ ಅಂಟಿ ಹೋಗಿದೆ. ತೆಗೆಯಲಾಗುವುದಿಲ್ಲ.    ▪ *ಒಟ್ಟಿನಲ್ಲಿ* ಸ್ನಾನಗೃಹದ ಹೊರಗಿರುವವರಿಗೂ ವಿಷಯ ತಿಳಿಯಿತು. ಮನೆಯಲ್ಲಿ ನೆರೆದವರೆಲ್ಲರೂ ...

ಮಯ್ಯಿತ್ ಹಂದಿಯ ರೂಪವಾಗಿ ಬದಲಾದಾಗ.

ಮಯ್ಯಿತ್ ಹಂದಿಯ ರೂಪವಾಗಿ ಬದಲಾದಾಗ..! *✒ಯೂಸುಫ್ ನಬ್‌ಹಾನಿ ಕುಕ್ಕಾಜೆ.*📞0097155349119    ▪ *ಒಂದು ದಿನ* ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಮತ್ತು ಕೆಲವು ಸ್ವಹಾಬಿಗಳು ಮದೀನಾ ಮಸೀದಿಯಲ್ಲಿ ಕುಳಿತು ಧಾರ್ಮಿಕವಾಗಿ ಚರ್ಚೆ ನಡೆಸುತ್ತಿದ್ದರು. ಆಗ ಒಬ್ಬ ಯುವಕ ಬಹಳ ದನಿಯಿಂದ ಅಳುತ್ತಾ ಮಸಿದಿಯೊಳಗೆ ಓಡಿ ಬಂದು ಹೇಳಿದರು. *"ಪ್ರವಾದಿಯವರೇ.., ನನ್ನ ತಂದೆ ಮರಣ ಹೊಂದಿದ್ದಾರೆ. ಮಯ್ಯಿತನ್ನು ಸ್ನಾನ ಮಾಡಿಸಲು ಮನೆಯಲ್ಲಿ ನಾನಲ್ಲದೆ ಬೇರೆ ಯಾರೂ ಇಲ್ಲ. ಅಲ್ಲದೆ ಕಫನ್ ಬಟ್ಟೆ ಖರೀದಿಸಲು ಒಂದು ನಯಾ ಪೈಸೆಯೂ ನನ್ನಲ್ಲಿ ಇಲ್ಲ. ಒಟ್ಡಿನಲ್ಲಿ ಬಹಳ ಕಂಗಾಲಾಗಿದ್ದೇನೆ."*    ▪ *ಕೂಡಲೇ* ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಕಫನ್ ಬಟ್ಟೆ ತೆಗೆದುಕೊಟ್ಟು ಹಝ್ರತ್ ಅಬೂಬಕರ್ ಸಿದ್ದೀಖ್ (ರ) ಮತ್ತು ಹಝ್ರತ್ ಉಮರ್ (ರ) ರನ್ನು ಆ ಮೃತರ ಮನೆಗೆ ಕಳುಹಿಸಿದರು. ಇಬ್ಬರೂ ಮನೆ ತಲುಪಿ ಮಯ್ಯಿತನ್ನು ಸ್ನಾನ ಮಾಡಿಸಲು ಸ್ನಾನಕೊಠಡಿಗೆ ಕೊಂಡುಹೋಗಲು ತಯಾರಾದಾಗ ಸುಬ್‌ಹಾನಲ್ಲಾಹ್... ಜನಾಝ ಒಂದು ಕಪ್ಪು ಬಣ್ಣದ ಹಂದಿಯ ರೂಪವಾಗಿ ಬದಲಾವಣೆಯಾಗಿತ್ತು. ಈ ಭಯಾನಕ ದೃಶ್ಯವನ್ನು ಕಂಡಾಗ ಈ ಇಬ್ಬರು ಸ್ವಹಾಬಿಗಳು ಕೂಡಲೇ ಪ್ರವಾದೀ ಸನ್ನಿಧಿಗೆ ಬಂಧು ವಿಷಯ ತಿಳಿಸಿದರು.    ▪ *ನಂತರ* ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಅವರೊಂದಿಗೆ ಮೃತರ ಮನೆಗೆ ಹೋದರು. ಹಂದಿಯ...

ಮಲಕ್ ರಿಝ್‌ವಾನ್ (ಅ) ರನ್ನು ಬೇಟಿಯಾದ ಹಝ್ರತ್ ಉಮರ್ (ರ) ರ ದಾಸಿ

ಮಲಕ್ ರಿಝ್‌ವಾನ್ (ಅ) ರನ್ನು ಬೇಟಿಯಾದ ಹಝ್ರತ್ ಉಮರ್ (ರ) ರ ದಾಸಿ *✍ಯೂಸುಫ್ ನಬ್‌ಹಾನಿ ಕುಕ್ಕಾಜೆ* 📞00971 553499119    ▪ *ಇಸ್ಲಾಮಿನ* ಎರಡನೇ ಖಲೀಫಾ ಹಝ್ರತ್ ಉಮರ್ ಬಿನ್ ಅಲ್ ಖತ್ತಾಬ್ (ರ) ರ ಮನೆಯಲ್ಲಿ *ಝಾಯಿದಾ* ಎಂಬ ಹೆಸರಿನ ಒಂದು ದಾಸಿ ಮನೆ ಕೆಲಸಕ್ಕಿದ್ದರು. ತನ್ನ ಕೆಲಸವನ್ನು ಬಹಳ ಅಚ್ಚುಕಟ್ಟಾಗಿ ಮಾಡುತ್ತಿದ್ದ ಆ ಮಹಿಳೆಯಲ್ಲಿ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರಿಗೂ ಬಹಳ ಇಷ್ಟವಾಗಿತ್ತು. ಮಾತ್ರವಲ್ಲ ಆ ಮಹಿಳೆಯನ್ನು ನೋಡುವಾಗಲೆಲ್ಲ *"ನೀನು ಭಾಗ್ಯವಂತೆ. ನೀನು ಅದೃಷ್ಟಶಾಲಿ"* ಎಂದು ಪ್ರವಾದಿಯವರು ಯಾವಾಗಲೂ ಹೇಳುತ್ತಿದ್ದರು.     ▪ *ಒಂದು ದಿನ* ಈ ದಾಸಿಯು ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಸನ್ನಿಧಿಗೆ ಬಂದು ಹೇಳಿದರು. "ನಾನಿವತ್ತು ಮನೆಯಲ್ಲಿ ಅಡುಗೆ ಮಾಡಲು ಕಟ್ಟಿಗೆ ತರಲು ಹತ್ತಿರದ ಬೆಟ್ಟಕ್ಕೆ ಹೋದೆನು. ಜಮೆ ಮಾಡಿದ ಕಟ್ಟಿಗೆಯ ಕಟ್ಟು ಬಹಳ ದೊಡ್ಡ ಗಾತ್ರದ್ದಾದರಿಂದ ನನಗೆ ಅದನ್ನು ಸ್ವಂತವಾಗಿ ತಲೆಯ ಮೇಲಿಟ್ಟು ಹೊರಲು ಕಷ್ಟಸಾಧ್ಯಯಿತು. ಹಾಗೆಯೇ ಏನು ಮಾಡುವುದು..? ಯಾರಾದರೂ ಸಹಾಯ ಮಾಡಲು ಸಿಗುತ್ತಾರಾ ಎಂದು ಆಲೋಚಿಸಿ ಕುಳಿತಿರುವಾಗ ಬಹಳ ಸುಂದರವಾದ ಒಬ್ಬ ಯುವಕ ಒಂದು ಕುದುರೆಯ ಮೇಲೆ ಕುಳಿತು ಸವಾರಿ ಮಾಡುತ್ತಾ ಬರುತ್ತಿದ್ದರು. ಎಷ್ಟು ಸುಂದರನೆಂದರೆ, ನಾನೊಮ್ಮೆಯೂ ನನ್ನ ಬದುಕಿನಲ್ಲಿ ಅಷ್ಟೊಂದು ಚೆಂದವಾದ ವ್ಯಕ್ತಿಯನ್ನು ಒಮ್ಮೆಯೂ ನೋಡಿರ...

ಕಟ್ಟಿಗೆ ಹೊತ್ತು ತಂದ ಪ್ರವಾದಿ

ಕಟ್ಟಿಗೆ ಹೊತ್ತು ತಂದ ಪ್ರವಾದಿ *✍🏻ಯೂಸುಫ್ ನಬ್‌ಹಾನಿ ಕುಕ್ಕಾಜೆ* 📞00971 553499119 ▪ *ಒಮ್ಮೆ* ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಮತ್ತು ಕೆಲವು ಸ್ವಹಾಬಿಗಳು ಒಂದು ದೀರ್ಘ ಪ್ರಯಾಣದಲ್ಲಿದ್ದರು‌. ಪ್ರಯಾಣ ಮಧ್ಯೆ ಮಧ್ಯಾಹ್ನದ ಭೋಜನದ ಸಮಯವಾದಾಗ ಒಂದು ಕಡೆ ತಂಗಿದರು.    ▪ *ಮಧ್ಯಾಹ್ನದ* ಊಟಕ್ಕೆ ಪ್ರಯಾಣ ಹೋಗುವಾಗಲೇ ಕೊಂಡುಹೋದ ಒಂದು ಆಡನ್ನು ದ್ಸಬಹ್ ಮಾಡಿ (ಚೂರಿಹಾಕಿ) ಪದಾರ್ಥ ಮಾಡುವ ತೀರ್ಮಾನಕ್ಕೆ ಬಂದರು. ಆಗ ಅವರಲ್ಲಿ ಒಬ್ಬರು ಸ್ವಹಾಬಿ ಹೇಳಿದರು. *"ನಾನಿದನ್ನು ಚೂರಿಹಾಕುತ್ತೇನೆ* ಮತ್ತೊಬ್ಬರು ಹೇಳಿದರು. *"ನಾನು ಚೂರಿಹಾಕಿದ ನಂತರ ಅದರ ಚರ್ಮ ಸುಲಿದು ಮಾಂಸ ಮಾಡುತ್ತೇನೆ*" ಇದನ್ನು ಕೇಳಿದಾಕ್ಷಣ ಮತ್ತೊಬ್ಬರು ಸ್ವಹಾಬಿ ಹೇಳಿದರು. *"ಹಾಗಾದರೆ ನಾನು ಸುಮ್ಮನಿರುವುದಾ..? ನಾನು ಮಾಂಸವನ್ನು ನೀರು ತಂದು ತೊಳೆಯುತ್ತೇನೆ*" ಆಗ ನಾಲ್ಕನೆಯ ವ್ಯಕ್ತಿ ಹೇಳಿದರು. *"ನೀವೆಲ್ಲಾ ಈ ಕೆಲಸಗಳನ್ನು ಮಾಡುವಾಗ ನಾನದನ್ನು ಪದಾರ್ಥ ಮಾಡುತ್ತೇನೆ."*    ▪ *ಈ ಪ್ರಯಾಣದಲ್ಲಿ* ಸ್ವಹಾಬಿಗಳಲ್ಲಿ ಇಷ್ಟೊಂದು ಸಾಮರಸ್ಯ ಮನೋಭಾವವನ್ನು ಕಂಡಾಗ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು *"ಹಾಗಾದರೆ ನಾನು ಸುಮ್ಮನಿರುವುದಾ...? ನನಗೆ ಕೆಲಸ ಬೇಡವೇ..? ನಾನು ಇದನ್ನು ಅಡುಗೆ ಮಾಡಲು ಗುಡ್ಡಕ್ಕೆ ಹೋಗಿ ಕಟ್ಟಿಗೆ ತರುತ್ತೇನೆ.*" ಎಂದು ಹೇಳಿ ಕಟ್ಟಿ...

ಪಿಶಾಚಿಗಳಿಗೆ ಇಬ್‌ಲೀಸನಿಂದ ಸೂಕ್ತ ಉಪದೇಶ

ಪಿಶಾಚಿಗಳಿಗೆ ಇಬ್‌ಲೀಸನಿಂದ ಸೂಕ್ತ ಉಪದೇಶ *✍🏻ಯೂಸುಫ್ ನಬ್‌ಹಾನಿ ಕುಕ್ಕಾಜೆ* 📞00971553499119    ▪ *ಪ್ರವಾದಿ* ಸುಲೈಮಾನ್ (ಅ) ರವರು ಪವಿತ್ರ ಬೈತುಲ್ ಮುಖದ್ದಸ್‌ನ ನಿರ್ಮಾಣದ ಬೃಹತ್ ಕಾಮಗಾರಿಯ ವೇಳೆ ಜಿನ್ನ್ , ಪಿಶಾಚಿ ಮತ್ತು ಶೈತಾನರಿಂದ ಬೆನ್ನೆಲುಬು ಮುರಿಯುವಂತಹಾ ಬಹಳ ಕಠಿಣ ಕೆಲಸಗಳನ್ನು ಮಾಡಿಸುತ್ತಿದ್ದರು. ಎಡೆಬಿಡದ ಕೆಲಸ. ಒಂದು ಬೀಡಿ ಕೂಡ ಸೇದಲು ಸಮಯವಿರಲಿಲ್ಲ. ಬಹಳ ಸಂಕಷ್ಟಕ್ಕೀಡಾದ ಶೈತಾನರು ಇವರಿಂದ ಹೇಗೆ ಬಚಾವು ಆಗುವುದು ಎಂದು ಆಲೋಚಿಸಿ ಕೊನೆಗೆ ಅವರ ಅಜ್ಜ ಇಬ್‌ಲೀಸನಲ್ಲಿ ದೂರು ಕೊಟ್ಟರು.    ▪ *ದೂರು* ಕೊಡಲು ಹೋದ ಪಿಶಾಚಿ ಶೈತಾನರಲ್ಲಿ ಇಬ್ಲೀಸನು ಕೇಳಿದನು. *"ಹಾಗಾದರೆ ನಿಮಗೆ ಬಿಡುವು ಇಲ್ಲವೇ.."* ಆಗ ಅವರು ಹೇಳಿದರು. *"ಇಲ್ಲ...ಇಲ್ಲ... ಬರೇ ರಾತ್ರಿ ಮತ್ತು‌ ಕೆಲಸಕ್ಕೆ ಹೋಗುವಾಗ ಮತ್ತು ಮರಳಿ ಬರುವಾಗ ಮಾತ್ತ ವಿರಾಮ. ಬೆಳಗಿನಿಂದ ಸಂಜೆಯ ತನಕ ಬಿಡುವಿಲ್ಲದ ಕೆಲಸ."* ಇಬ್‌ಲೀಸನು ಹೇಳಿದನು. *"ನೀವು ಬೇಜಾರು ಮಾಡದಿರಿ. ನಿಮಗಿಂತಲೂ ಕಷ್ಟದಲ್ಲಿ ಇರುವವರು ಎಷ್ಟೋ ಜನ ಇದ್ದಾರಲ್ಲಾ..? ನಿಮಗೆ ಇಷ್ಟಾದರೂ ಬಿಡುವಿದೆಯಲ್ಲವೇ..? ಸುಮ್ಮನಿರಿ. ಬದಿಯಲ್ಲಿರುವ ಕೊಡಲಿಯನ್ನು ಅನಗತ್ಯ ತೆಗೆದು ಕಾಲಿಗೆ ಹಾಕಬೇಡಿ"*    ▪ *ಪಿಶಾಚಿಗಳು* ಅವರ ತಂದೆ ಇಬ್‌ಲೀಸನಲ್ಲಿ ದೂರು ಕೊಟ್ಟ ವಿಷಯ ಹಝ್ರತ್ ಸುಲೈಮಾನ್ (ಅ) ರಿಗೆ ತಲುಪಿತು. ಕೂಡಲೇ ಪ್ರವಾದಿ ಸುಲೈಮಾನ್ (ಅ) ರವರು ಒಂ...

ಪ್ರಖ್ಯಾತ ಪಂಡಿತ ಕುಖ್ಯಾತ ಕಳ್ಳನೊಂದಿಗೆ

ಪ್ರಖ್ಯಾತ ಪಂಡಿತ ಕುಖ್ಯಾತ ಕಳ್ಳನೊಂದಿಗೆ *✍🏻ಯೂಸುಫ್ ನಬ್‌ಹಾನಿ ಕುಕ್ಕಾಜೆ* 📞00971 553499119    ▪ *ಒಂದು ದಿನ* ರಾತ್ರಿ ಇಮಾಮ್ ಮಾಲಿಕ್ ಬಿನ್ ದೀನಾರ್ (ರ) ರ ಮನೆಗೆ ಒಬ್ಬ ಕಳ್ಳನು ನುಗ್ಗಿದನು. ಮನೆಯಲ್ಲಿ ಎಲ್ಲಿ ಹುಡಿಕಿದರೂ ಕಳ್ಳನಿಗೆ ಕದಿಯಲು ಯೋಗ್ಯವಾದ ಯಾವುದೇ ಸಾಮಾನು ಸಿಗಲಿಲ್ಲ. ಕೊನೆಗೆ ಮನೆಯಲ್ಲಿ ಒಂದು ಕೊಠಡಿಯ ಒಳಗೆ ಹೋದಾಗ ಇಮಾಮ್ ಮಾಲಿಕ್ ಬಿನ್ ದೀನಾರರು (ರ) ಒಂಟಿಯಾಗಿ ನಮಾಝು ಮಾಡುತ್ತಿದ್ದರು.    ▪ *ನಮಾಝ್* ಮುಗಿದ ಬಳಿಕ ಇಮಾಮ್ ಮಾಲಿಕ್ ಬಿನ್ ದೀನಾರರು ಮನೆಗೆ ನುಗ್ಗಿದ ಕಳ್ಳನಲ್ಲಿ ಕೇಳಿದರು. *"ನೀನು ನಿನ್ನ ಇಹಲೋಕದ ಸುಖಕ್ಕೆ ಬೇಕಾದ ಏನದಾರೂ ಸಿಗಬಹುದಾ ಎಂದು ಹುಡುಕಿ ಬಂದರೂ ನಿನಗೆ ಏನೂ ಸಿಗಲಿಲ್ಲ. ಆದರೆ ನೀನು ಈ ತನಕ ನಿನ್ನ ಪರಲೋಕದ ಸುಖಕ್ಕೆ ಏನಾದರೂ ಹುಡುಕಿ ತಯಾರು ಮಾಡಿದ್ದಿಯಾ..?"*    ▪ *ಮಾಲಿಕ್* ಬಿನ್ ದೀನಾರ್ (ರ) ರಿಂದ ಉತ್ತರ ಕೊಡಲು ಅಸಾಧ್ಯವಾದ ಈ ಅರ್ಥವತ್ತಾದ ಮಾತು ಕೇಳಿದಾಗ ಕಳ್ಳನು ಒಂದು ನಿಮಿಷ ಮಾತನಾಡಲಾಗದೆ ಮೌನವಾಗಿ ಒಂದು ಕಡೆ ಕುಳಿತನು. ಬಳಿಕ ಇಮಾಮರು ಆತನನ್ನು ತನ್ನ ಹಾಸಿಗೆಯ ಮೇಲೆ ಕುಳ್ಳಿರಿಸಿ ಆತನಿಗೆ ಬೇಕಾದ ಉಪದೇಶ ಕೊಟ್ಟರು. ಅವರ ಉಪದೇಶದಿಂದ ಮನ ಪರಿವರ್ತನೆಯಾದ ಆತನಿಗೆ ತಾನು ಈ ತನಕ ಮಾಡುತ್ತಿದ್ದ ತಪ್ಪಿನ ಅರಿವಾಗಿ ಬಿಕ್ಕಿ ಬಿಕ್ಕಿ ಆಳಲು ತೊಡಗಿದನು.    ▪ *ಊರಲ್ಲೆಲ್ಲಾ* ಕಳ್ಳತನ ಮಾಡಿ ಕುಖ್ಯಾತನಾದ ಆತನನ್ನು...

ಆರೋಗ್ಯದ ಅಂಗಿ

ಆರೋಗ್ಯದ ಅಂಗಿ *✍🏻ಯೂಸುಫ್ ನಬ್‌ಹಾನಿ ಕುಕ್ಕಾಜೆ* 📞0097155 3499119  ▪ *ಪ್ರವಾದಿ* ಮೂಸಾ (ಅ) ರಿಗೆ ಒಮ್ಮೆ ಅನಾರೋಗ್ಯವಾಯಿತು. ಮಾಡಿದ ಯಾವ  ಚಿಕಿತ್ಸೆಯೂ ಫಲ ಕಾಣದೆ ಹೋದಾಗ ಅವರು ತನ್ನ ಸಂಕಟವನ್ನು ಅಲ್ಲಾಹನಲ್ಲಿ ಹೇಳಿದರು. ಕೂಡಲೇ ಅಲ್ಲಾಹನು ಜಿಬ್‌ರೀಲ್ (ಅ) ಮುಖಾಂತರ ಸ್ವರ್ಗದಿಂದ ಒಂದು ಅಂಗಿಯನ್ನು ತೆಗೆದು ಅವರಿಗೆ ಧರಿಸಲು ಆಜ್ಞಾಪಿಸಿದನು.    ▪ *ಅಲ್ಲಾಹನ* ಆಜ್ಞೆಯಂತೆ ಹಝ್ರತ್ ಜಿಬ್‌ರೀಲ್ (ಅ) ರು ಸ್ವರ್ಗದಿಂದ *ಖಮೀಸುಲ್ ಆಫಿಯಾ* (ಆರೋಗ್ಯದ ಅಂಗಿ) ಎಂಬ ಒಂದು ಅಂಗಿಯನ್ನು ತೆಗೆದು ಅವರಿಗೆ ಧರಿಸಿಕೊಟ್ಟರು. ಸುಬ್‌ಹಾನಲ್ಲಾಹ್.. ಧರಿಸಿದ್ದೇ ತಡ ಖಾಯಿಲೆ ಗುಣವಾಯಿತಲ್ಲದೆ ಅವರಿಗೆ ಮತ್ತೆ ತನ್ನ ಜೀವಮಾನದಲ್ಲಿ ಮರಣದ ತನಕ ಒಮ್ಮೆಯೂ ಒಂದು ಜ್ವರ ಕೂಡ ಬರಲಿಲ್ಲ.    ▪ *ಹಝ್ರತ್* ಮೂಸಾ (ಅ) ರವರ ವಫಾತಿನ ಸಮಯವಾದಾಗ ಅವರ ಬಳಿ ಮಲಕ್ ಜಿಬ್‌ರೀಲ್ (ಅ) ಮತ್ತು ಮಲಕ್ ಅಝ್‌ರಾಯೀಲ್ (ಅ) ಜಂಟಿಯಾಗಿ ಬಂದಿದ್ದರು. ಅಝ್‌ರಾಯೀಲ್ (ಅ) ರವರು ಅವರ ರೂಹನ್ನು ತೆಗೆದುಕೊಂಡು ಹೋಗುವಾಗ ಜಿಬ್‌ರೀಲ್ (ಅ) ಅವರು ಧರಿಸಿದ್ದ ಆ ಅಂಗಿಯನ್ನು ಕಳಚಿ ಕೊಂಡುಹೋದರು.    ▪ *ಕಳಚಿದ* ಈ ಅಂಗಿಯನ್ನು ಏನು ಮಾಡಬೇಕೆಂದು ಮಲಕ್ ಜಿಬ್‌ರೀಲರು ಅಲ್ಲಾಹನಲ್ಲಿ ಕೇಳಿದಾಗ ಅದನ್ನು ಸೂರ್ಯನಿಗೆ ಹೊದಿಸಲು ಆಜ್ಞಾಪಿಸಿದನು.    ▪ *ಗಮನಾರ್ಹ* ಸಂಗತಿಯೆಂದರೆ, ಈ ಕಾರಣದಿಂದ ಯಾವುದೇ ಖಾಯಿಲೆಗಳ ಅ...

ಬೀವಿ ರಾಬಿಅತುಲ್ ಅದವಿಯ್ಯ ಮತ್ತು ಸುಟ್ಟ ಆಡು

ಬೀವಿ ರಾಬಿಅತುಲ್ ಅದವಿಯ್ಯ ಮತ್ತು ಸುಟ್ಟ ಆಡು *✍🏻ಯೂಸುಫ್ ನಬ್‌ಹಾನಿ ಕುಕ್ಕಾಜೆ* 📞00971 553499119 ▪ *ಒಮ್ಮೆ* ಸೂಫಿವರ್ಯೆ ಪಂಡಿತೆ ಬೀವಿ ರಾಬಿಅತುಲ್ ಅದವಿಯ್ಯ (ರ) ರು ಒಂದು ದಾರಿಯಾಗಿ ಹೋಗುತ್ತಿರುವಾಗ ಒಬ್ಬನು ತನ್ನ ಮನೆಯಲ್ಲಿರುವ ಒಂದು ಔತನಕೂಟಕ್ಕೆ ಮಾರುಕಟ್ಟೆಯಿಂದ ಒಂದು ಸುಟ್ಟ ಆಡನ್ನು ಖರಿದಿಸಿ ತರುತ್ತಿದ್ದನು. ಬೀವಿ ರಾಬಿಅ (ರ) ರು ಅವನ ಕೈಯಲ್ಲಿರುವ ಈ ಸುಟ್ಟ ಆಡನ್ನು ತುಂಬಾ ಸಮಯ ಬಹಳ ಆಶ್ಚರ್ಯದಿಂದ ನೋಡಿದರು. ಬೀವಿಯವರ ಆಶ್ಚರ್ಯಕರ ನೋಟವನ್ನು ಗಮನಿಸಿದ ಆ ಬಡಪಾಯಿ ವ್ಯಕ್ತಿ ಅವರಲ್ಲಿ ಕೇಳಿದನು. *ಬೀವಿ ರಾಬಿಆರವರೇ.., ನಿಮಗೆ ಹುರಿದ ಆಡನ್ನು ಕಾಣುವಾಗ ಆಸೆ ಆಗುತ್ತದಾ...? ಪರವಾಗಿಲ್ಲ. ನಿಮಗೆ ಬೇಕಾದರೆ ಇದರಿಂದ ಒಂದು ತುಂಡು ತುಂಡುಮಾಡಿ ಕೊಡುತ್ತೇನೆ. "*    ▪ *ಬೀವಿ ಅದವಿಯ್ಯಾ* ಅವನಲ್ಲಿ ಹೇಳಿದರು. *"ನಿನ್ನ ಆಡನ್ನು ನೋಡಿ ನನಗೆ ಯಾವುದೇ ಆಸೆಯಾಗಲಿಲ್ಲ. ಆದರೆ ನನಗೆ ಈ ಸುಟ್ಟ ಆಡನ್ನು ನೋಡಿದಾಗ ಬಹಳ ಆಶ್ಚರ್ಯವಾಯಿತು. ಅದೇನೆಂದರೆ.., "ಆಡನ್ನು ಸುಡುವಾಗ ಅದನ್ನು ಕೊಂದ ನಂತರ ಬೆಂಕಿಗೆ ಹಾಕಲಾಗುತ್ತದೆ. ಆದರೆ ನಾಳೆ ಪರಲೋಕದಲ್ಲಿ ಮನುಷ್ಯನನ್ನು ಜೀವಂತವಾಗಿಯೇ ಬೆಂಕಿಗೆ ಹಾಕುವುದರ ಭಯಾನಕತೆಯ ಬಗ್ಗೆ ಆಲೋಚಿಸಿದಾಗ ತುಂಬಾ ಸಮಯ ನಿನ್ನ ಕೈಯಲ್ಲಿರುವ ಆಡನ್ನು ನೋಡಿದೆ."* ಸಂಗ್ರಹ; ಇಮಾಮ್ ಸ್ವಫೂರಿಯ *ನುಝ್‌ಹತುಲ್ ಮಜಾಲಿಸ್* ಎಂಬ ಗ್ರಂಥ.

ಪ್ರವಾದಿಯವರನ್ನು ಕನಸಲ್ಲಿ ನೋಡ ಬಯಸಿದ ಪಂಡಿತ

ಪ್ರವಾದಿಯವರನ್ನು ಕನಸಲ್ಲಿ ನೋಡ ಬಯಸಿದ ಪಂಡಿತ! *✍🏻ಯೂಸುಫ್ ನಬ್‌ಹಾನಿ ಕುಕ್ಕಾಜೆ* 📞00971 553499119    ▪ *ಹಿಜ್‌ರಾ* ನೂರ ಎಂಬತ್ತ ಎಂಟರಲ್ಲಿ ಹುಟ್ಟಿ ಇನ್ನೂರ ಅರುವತ್ತ ಒಂದರಲ್ಲಿ ವಿಧಿವಶರಾದ ಪ್ರಖ್ಯಾತ ಪಂಡಿತ ಮತ್ತು ಸೂಫಿವರ್ಯ ಶೈಖ್ ಅಬೂ ಯಝೀದುಲ್ ಬುಸ್ತಾಮಿ (ರ) ಹತ್ತಿರ ಸಮಕಾಲಿಕ ಊರಿನ ಪಂಡಿತರೊಬ್ಬರು ಬಹಳ ಬೇಸರದಿಂದ ಅಳುತ್ತಾ ಬಂದು ಹೇಳಿದರು. *"ಶೈಖ್ ಬುಸ್ತಾಮಿಯವರೇ.., ನಾನೊಬ್ಬ ಪಂಡಿತ. ಎಲ್ಲಾ ಆರಾಧನೆಗಳನ್ನೂ ತಪ್ಪದೆ ಮಾಡುತ್ತೇನೆ. ಒಂದು ದಿನದಲ್ಲಿ ಎಷ್ಟೋ ಸ್ವಲಾತ್ ಹೇಳುತ್ತೇನೆ. ಆದರೆ ನನ್ನ ಈ ಬದುಕಿನಲ್ಲಿ ಒಮ್ಮೆಯೂ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರನ್ನು ಕನಸಲ್ಲಿ ಕಾಣಲಿಲ್ಲ. ಮರಣ ಹೊಂದುವ ಮೊದಲು ಒಮ್ಮೆಯಾದರು ಕಾಣಬೇಕೆಂಬ ಆಸೆ ಮತ್ತು ಹಂಬಲವಿದೆ. ಅದಕ್ಕೆ ಬೇಕಾಗಿ ನಾನೇನು ಮಾಡಬೇಕು..?"*    ▪ *ಶೈಖ್* ಬುಸ್ತಾಮೀ (ರ) ನಗುತ್ತಾ ಕೇಳಿದರು. *"ಹಾದಾ.., ನಿಜವಾಗಿ ನಿಮಗೆ ಹಾಗೆ ಒಂದು ಆಸೆ ಇದೆಯಾ..?"* "ಹೌದು ಶೈಖ್‌ರವರೇ.. ದೇವರಾಣೆ ಇದೆ" ಎಂದು ಬಂದ ಪಂಡಿತರು ಹೇಳಿದರು.    ▪ *ಅಲ್ಲಾಹುವಿನ* ವಲಿಯ್ಯ್ ಆಗಿದ್ದ ಶೈಖ್ ಬುಸ್ತಾಮಿಯವರು ಅವರಲ್ಲಿ ಹೇಳಿದರು. *"ನೀವು ಮೊದಲಾಗಿ ನಿಮಗೆ ಹಣದಲ್ಲಿರುವ ದುರಾಸೆಯನ್ನು ಕಡಿಮೆ ಮಾಡಬೇಕು. ನಿಮ್ಮ ಮನೆಯ ಒಂದು ಕೋಣೆಯಲ್ಲಿ ನೆಲದಡಿಯಲ್ಲಿ ಹೊಂಡಮಾಡಿ ನೀವು ಹುಗಿದಿಟ್ಟ ಮುನ್ನೂರು ಪವನ್ (ಎರಡುವರೆ...

ಇಮಾಮ್ ಬುಖಾರಿಯನ್ನು ಪರಲೋಕಕ್ಕೆ ಕಾಯುತ್ತಿದ್ದ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್

ಇಮಾಮ್ ಬುಖಾರಿಯನ್ನು ಪರಲೋಕಕ್ಕೆ ಕಾಯುತ್ತಿದ್ದ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್! *✍🏻ಯೂಸುಫ್ ನಬ್‌ಹಾನಿ ಕುಕ್ಕಾಜೆ* 📞0097155 3499119    *ಹಿಜ್‌ರಾ ವರ್ಷ* ನೂರ ತೊಂಬತ್ತ ನಾಲ್ಕರಲ್ಲಿ ಹುಟ್ಟಿ ಇನ್ನೂರ ಐವತ್ತ ಆರರಲ್ಲಿ ವಫಾತಾದ ಜ್ಞಾನ ಶಿಖರ ಇಮಾಮ್ ಬುಖಾರಿಯವರ ಬಗ್ಗೆ ತಿಳಿಯದವರು ಈ ಮುಸ್ಲಿಮ್ ಜಗತ್ತಿನಲ್ಲಿ ಬಹುಶಃ ಯಾರೂ ಇರಲಿಕ್ಕಿಲ್ಲ. ಪವಿತ್ರ ಖುರ್‌ಆನಿನ ನಂತರ ಬಹಳ ಶ್ರೇಷ್ಠವಾದ *ಸಹೀಹುಲ್ ಬುಖಾರಿ* ಎಂಬ ಹದೀಸ್ ಗ್ರಂಥವನ್ನು ರಚಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಹದಿನಾರು ವರ್ಷಗಳ ಕಠಿಣ ಪರಿಶ್ರಮದಿಂದ ಊಟ ನಿದ್ದೆಯಿಲ್ಲದೆ ರಚಿಸಿದ ಸುಮಾರು ಏಳು ಸಾವಿರ ಚಿಲ್ಲರೆ ಪ್ರವಾದೀ ಹದೀಸುಗಳನ್ನು ಒಳಗೊಂಡ ಒಂದು ಹದೀಸ್ ಗ್ರಂಥವಾಗಿದೆ ಇದು.    ▪ *ಇಮಾಮ್* ಬುಖಾರಿಯವರ ಸಮಕಾಲೀನ ಪಂಡಿತರೂ ಅವರ ಊರಾದ ಸಮರ್‌ಖಂದ್ ಪಟ್ಟಣದ ಸಮೀಪ ನಿವಾಸಿಯೂ ಆದ *ಅಬ್ದುಲ್ ವಾಹಿದ್ ಬಿನ್ ಆದಮ್ ಅಲ್ ತ್ವವಾವೀಸೀ* (ರ) ಹೇಳುತ್ತಾರೆ. *"ನನಗೆ ಒಂದು ದಿನ ರಾತ್ತಿ ನಿದ್ದೆಯಲ್ಲಿ ಒಂದು ಅದ್ಭುತ ಕನಸು ಬಿತ್ತು. ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಮತ್ತು ಕೆಲವು ಗಣ್ಯ ಸ್ವಹಾಬಿಗಳು ಒಂದು ಕಡೆ ನಿಂತು ಯಾರಾನ್ನೋ ಕಾಯುತ್ತಿದ್ದಾರೆ. ನಾನು ಅವರ ಹತ್ತಿರ ಹೋಗಿ ಸಲಾಮ್ ಹೇಳಿದೆ. ಅಲ್ಲಿ ಜಮಾಯಿಸಿದ ಎಲ್ಲರೂ ನನ್ನ ಸಲಾಮಿಗೆ ಬಹಳ ಸಂತೋಷದಿಂದ ವ ಅಲೈಕುಮುಸ್ಸಲಾಮ್.. ಎಂದು ಉತ್ತರ ಕೊಟ್...

ಮುಸಲ್ಮಾನರ ದೇಶ ಪ್ರೇಮದ ಕುರಿತು ಸಂಶಯ ಬೇಡ

ಮುಸಲ್ಮಾನರ ದೇಶ ಪ್ರೇಮದ ಕುರಿತು ಸಂಶಯ ಬೇಡ @ಮುಹಮ್ಮದ್ ಇಲ್ಯಾಸ್ ಪಿಲಿಕೂರು ಲೇಖನದ ಶೀರ್ಷಿಕೆಯಲ್ಲಿ ತಿಳಿಸಿದ ಹಾಗೆ ದೇಶದ ಹಲವಾರು ಮಂದಿಗೆ ಮುಸ್ಲಿಮರ ದೇಶ ಪ್ರೇಮದ ಬಗ್ಗೆ ಬಹಳಷ್ಟು ಸಂಶಯ ಅವರು ಭಾರತಕ್ಕಾಗಿ ಏನು ಮಾಡಿದ್ದಾರೆ ಎಂದು ಕೇಳುವರು..       ಆದರೆ ಇತಿಹಾಸ ನಿಷ್ಕಲ್ಮಶವಾಗಿ ಕಲಿತವರಿಗೆ ತಿಳಿಯುತ್ತದೆ *ಮುಸ್ಲಿಮರ ರಕ್ತದಲ್ಲಿಯೇ ದೇಶ ಪ್ರೇಮ ಅವಿತುಕೊಂಡಿದೆ* ದೇಶ ಪ್ರೇಮವು ಈಮಾನಿನ ಭಾಗವಾಗಿದೆ ಎಂದು ಕಲಿಸುವ ಧರ್ಮದ ಅನುಯಾಯಿಗಳು ಆಗಿರುತ್ತಾರೆ ಮುಸ್ಲಿಮರು.        ಸರಿ ಸುಮಾರು ಎಂಟು ಶತಕಗಳ ಕಾಲ ಮುಸ್ಲಿಮರ ಆಳ್ವಿಕೆ ಈ ದೇಶದಲ್ಲಿ ಇದ್ದರೂ ಆ ರಾಜರು ಯಾರು ಕೂಡ ಈ ದೇಶವನ್ನು ಮುಸ್ಲಿಂ ರಾಷ್ಟ್ರವಾಗಿ ಮಾಡಲಿಲ್ಲ ಈ ದೇಶದ ಅಖಂಡತೆಯನ್ನು ಕಾಪಾಡಿದರು ಬಹಳಷ್ಟು ಕೊಡುಗೆಗಳನ್ನು ನೀಡಿದರು ಕೇವಲ ವ್ಯಾಪಾರಕ್ಕಾಗಿ ಬಂದ *ಪೋರ್ಚುಗೀಸರು,ಪ್ರೆಂಚರು,ಡಚ್ಚರು ಹಾಗೂ ಬ್ರಿಟಿಷರು* ಸರಿ ಸುಮಾರು 20 ದಶಕಗಳ ಕಾಲ ಭಾರತೀಯರನ್ನು ಗುಲಾಮರನ್ನಾಗಿಸಿ ಆಳಿದರು ಅಂದು ದೇಶವನ್ನು ಆಂಗ್ಲರ ಮುಷ್ಠಿಯಿಂದ ಬಿಡಿಸಲು ಭಾರತೀಯರು ಹೋರಾಡಿದರು 1857 ರಿಂದ ಪ್ರಾರಂಭವಾದ ಪ್ರಥಮ ಹೋರಾಟ ಸಂಗ್ರಾಮದಲ್ಲಿ ಜಾತಿ ಧರ್ಮ ಬೇದ ಮನ್ಯೇ ಹೋರಾಡಿದರು. ಅದರಲ್ಲಿ ಬಹಳಷ್ಟು ಅಂದರೆ 65  ಶೇಕಡದಷ್ಟು ಜನರು ಮುಸ್ಲಿಮರಿದ್ದರು ಎನ್ನುದಕ್ಕೆ ನಮಗೆ ಹೆಮ್ಮೆಯಿದೆ.       ನಮ್ಮ ದೇಶದ ಅಭಿಮಾನವಾ...