Skip to main content

Posts

Showing posts from June, 2021

ಸಮಸ್ತ

ಅಲ್ ಹಮ್ದುಲಿಲ್ಲಾಹ್ ಈ ಧ್ವಜ ಪತಾಕೆ ಮತ್ತು ಸಮಸ್ತದ ಮಹೋನ್ನತ ಉಲಮಾ ಸಂಘಟನಾ ಶಕ್ತಿಯ ಸಣ್ಣ ಖಾದಿಮ್ ಆಗಿ  ಕಾರ್ಯಾಚರಿಸಲು ಅಲ್ಲಾಹನು ನೀಡಿದ ತೌಫೀಕ್ ಗೆ ಸರ್ವಸ್ತುತಿ. ವಹ್ಹಾಬಿ ಪಾಳಯವನ್ನು ಬೇರು ಸಮೇತ ಕಿತ್ತೆಸೆಯಲು ಪಣತೊಟ್ಟು ಮುಸ್ಲಿಂ ಸಮುದಾಯದ ಆಶಾಕಿರಣವಾಗಿ ಬೆಳೆದ ಸಂಘ ಶಕ್ತಿಯ ಸಣ್ಣ ಕಾರ್ಯಕರ್ತ ಎಂಬುದರಲ್ಲಿ ನನಗೆ ಅಭಿಮಾನವಿದೆ.  ವರಕ್ಕಲ್ ಮುಲ್ಲಕ್ಕೋಯ ತಂಙಲ್ ರಿಂದ ,ಪಾಂಙಿಲ್ ಉಸ್ತಾದರ ಹಾದಿಯಾಗಿ, ಸ್ವದಕತುಲ್ಲಾ ಉಸ್ತಾದರ, ಅಹ್ಮದ್ ಕೋಯ ಸ್ವಾಲಿಯಾತಿ ಮಹಾತ್ಮರುಗಳ , ಕಣ್ಣಿಯತ್ ಉಸ್ತಾದ್, ತಾಜುಲ್ ಉಲಮಾ, ಸಂಶುಲ್ ಉಲಮಾ, ನೂರುಲ್ ಉಲಮಾ ಈ ರೀತಿ ಮಹೋನ್ನತ ಪರಂಪರೆಯ ದಾರಿಯಲ್ಲಿ ಹೊಸ ದಿಸೆತೆರೆದುಕೊಟ್ಟ ಸುಲ್ತಾನುಲ್ ಉಲಮಾರ ಜೊತೆಗೆ ರಹೀಸುಲ್ ಉಲಮಾರ ನಾಯಕತ್ವದಲ್ಲಿ ಮುನ್ನಡೆಯುತ್ತಿರುವ ಈ ಸಂಘಟನಾ ಶಕ್ತಿಗೆ , ಅದರ ಹಿರಿಮೆಗೆ ಸರಿಸಾಠಿ ಮತ್ತೊಂದಿಲ್ಲ. ಅಲ್ಲಾಹು ಅಗಲಿದ ಮಹಾತ್ಮರು ಗಳಿಗೆ ಉನ್ನತ ಧರಜ ನೀಡಲಿ, ಇನ್ನು ನಾಯಕತ್ವ ನೀಡುತ್ತಿರುವ ಉಲಮಾಗಳಿಗೆ ಆಫಿಯತ್ ಮತ್ತು ದೀರ್ಘಾಯುಷ್ಯ ನೀಡಲಿ . ಆಮೀನ್.😍

ಸುನ್ನೀ ಸಮಸ್ತ ವಿಜಯದ ಹಾದಿಯಲ್ಲಿ

 ಸುನ್ನೀ ಸಮಸ್ತ ವಿಜಯದ ಹಾದಿಯಲ್ಲಿ ಅಂದು 1933, ಮಾರ್ಚ್ 5.. ಸಮಸ್ತ ಅಧ್ಯಕ್ಷರಿಗೆ ವಕೀಲರ ನೋಟಿಸ್. ಕೇರಳ ಜಂಇಯ್ಯತುಲ್ ಉಲಮಾದ ಹೆಸರಲ್ಲಿ ಫಾರೂಖ್‌ನಲ್ಲಿ ಸಮಸ್ತ ಸಮ್ಮೇಳನ ನಡೆಸಲು ಆಯೋಜಿಸಲಾಗಿದೆ ಎಂಬ ಮಾಹಿತಿ ನಮಗೆ ಸಿಕ್ಕಿದೆ. ಕೇರಳ ಜಂಇಯ್ಯತುಲ್ ಉಲಮಾ ಈಗಾಗಲೇ ನೊಂದಾಯಿತ ಸಂಸ್ಥೆಯಾಗಿದೆ.  ಈ ಸಂಘನೆಯ ಗಮನಕ್ಕೆ ಬಾರದೇ, ಅವರ ಅನುಮತಿಯನ್ನು ಪಡೆಯದೇ ಅವರ ಹೆಸರಲ್ಲಿ ಸಮ್ಮೇಳನ ನಡೆಸುವುದು ಕಾನೂನು ಬಾಹಿರವಾಗಿದೆ.  ಸಮ್ಮೇಳನ ನಡೆಸಿದ್ದಲ್ಲಿ ಕ್ರಿಮಿನಲ್ ಕ್ರಮ ಕೈಗೊಳ್ಳಲಾಗುವುದು. ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ದ ಆರನೇ ವಾರ್ಷಿಕ ಸಮ್ಮೇಳನಕ್ಕೆ ಮುಂಚಿತವಾಗಿ ವಕೀಲ ಕೆ. ಕೆ. ಪೋಕರ್ ಸಾಹೆಬ್ ಮುಖಾಂತರ ಸಲಫಿಗಳು ನೀಡಿದ ನೋಟಿಸ್ ಇದಾಗಿತ್ತು. ನಾಲ್ಕು ಮದ್‌ಹಬ್ ಗಳಲ್ಲಿ ಪ್ರಾವೀಣ್ಯತೆ ಪಡೆದಿದ್ದ,  20 ನೇ ಶತಮಾನದ ಮುಜದ್ದಿದ್ ಇಮಾಂ ಅಹ್ಮದ್ ರಝಾಖಾನ್ ( ರ ) ರವರ ಶಿಷ್ಯ  ಇಮಾಂ ಅಹ್ಮದ್ ಕೋಯ  ಶಾಲಿಯಾತೀ ( ರ ) ಸಮ್ಮೇಳನದ ಅಧ್ಯಕ್ಷರಾಗಿದ್ದರು. ಇಮಾಂ ಶಾಲಿಯಾತೀ ( ರ ) ತಕ್ಷಣ ಉತ್ತರಿಸಿದರು. ಸಮ್ಮೇಳನ ನಡೆಸುವುದು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಹೆಸರಲ್ಲಿ. ಅದಕ್ಕೂ ಕೇರಳ ಜಂಇಯ್ಯತುಲ್ ಉಲಮಾಕ್ಕೂ, ಯಾವುದೇ ಸಂಬಂಧವಿಲ್ಲ. ಅದರೊಂದಿಗೆ ಯಾವುದೇ ವ್ಯವಹಾರವೂ ಇಲ್ಲ. ಸಮಸ್ತ.. ಇಸ್ಲಾಮಿನ ನೈಜ ಆದರ್ಶ ಸಂಹಿತೆಯನ್ನು ‌ಹುಟ್ಟು ಹಾಕಲು ರಚಿಸಿದ ಸಂಸ್ಥೆ. ನೂತನವಾದಿಗಳು ಇಸ್ಲಾಮಿನ ತತ್ವಾದರ್ಶಗಳನ್ನು...

ಸಾಮರ್ಥ್ಯ ಸಂಘಟಿತರಾಗುವುದರಲ್ಲಿ ಮಾತ್ರವಾಗಿದೆ

ಒಂದು ಕಲ್ಲು ತೆಗೆದುಕೊಳ್ಳಿ ... ಅದನ್ನು ನೀವು ಒಂದು ನಾಯಿಗೆ ಎಸೆಯಿರಿ ...  ಆ , ನಾಯಿ ಹೆದರಿ ಓಡುವುದನ್ನು ನೀವು ನೋಡಬಹುದು! ಈಗ ಅದೇ ಕಲ್ಲನ್ನು ತೆಗೆದುಕೊಂಡು ಅದನ್ನು ಜೇನುಗೂಡಿನ ಕಡೆಗೆ ಎಸೆಯಿರಿ ...  ಆಗ ಆ ಜೇನುಗೂಡಿನ ಜೇನುನೊಣಗಳು ನಿಮಗೆ ಏನು ಮಾಡುತ್ತವೆ ಎಂಬುದು ನಿಮಗೆ ಅರ್ಥವಾಗುತ್ತದೆ!  ಎರಡೂ ಸಂದರ್ಭಗಳಲ್ಲಿ ಕಲ್ಲು - ಒಂದೇ ಕಲ್ಲು .  ಅದನ್ನು ಎಸೆದ ವ್ಯಕ್ತಿ - ಒಂದೇ ವ್ಯಕ್ತಿ ...  ಒಂದೇ ವ್ಯತ್ಯಾಸ. ಅಂದರೆ ನಾಯಿ ಒಬ್ಬಂಟಿಯಾಗಿತ್ತು ಮತ್ತು ಜೇನುನೊಣಗಳು ಸಮೂಹವಾಗಿತ್ತು  ಸ್ನೇಹಿತರೇ ಸಾಮರ್ಥ್ಯ ಸಂಘಟಿತರಾಗುವುದರಲ್ಲಿ ಮಾತ್ರವಾಗಿದೆ!

ಲಕ್ಷದ್ವೀಪ : ನೀರಮೇಲಿನ ನೆಲವೊಂದರ ಸಂಕಟ ಟಿ.ಎಂ ಅನ್ಸಾರ್ ಸ‌ಅದಿ ತಂಬಿನಮಕ್ಕಿ

 ಲಕ್ಷದ್ವೀಪ : ನೀರಮೇಲಿನ ನೆಲವೊಂದರ ಸಂಕಟ ಟಿ.ಎಂ ಅನ್ಸಾರ್ ಸ‌ಅದಿ ತಂಬಿನಮಕ್ಕಿ ಅದು ಸಾಗರದ ನಡುವೆ ಮೈ ಚೆಲ್ಲಿ ಮಲಗಿರುವ ಅಂಗೈ ಅಗಲದ ಪುಟ್ಟ ಭೂಮಿ. ಮೇಲೆ‌ನೀಲಾಕಾಶ. ಸುತ್ತಲೂ ಅದರದೇ‌ ಪ್ರತಿಬಿಂಬವನ್ನು ಹೊತ್ತಿರುವ ಜಲಧಿ. ಇಂತಹ ಸೊಬಗಿನ ನೆಲ ಕಳೆದ ಎರಡು ವಾರಗಳಿಂದ ದೇಶದಾದ್ಯಂತ ಸುದ್ದಿಯಲ್ಲಿದೆ. ದೇಶದ ಆಳ-ಅಗಲಕ್ಕೆ ವ್ಯಾಪಿಸಿರುವ ರಾಜಕೀಯ ಅರಾಜಕತೆ ಕಡಲ ನಡುವಿನ ಈ ತುಂಡು ಭೂಮಿಗೂ ವಕ್ಕರಿಸಿದೆ. ಸರಕಾರದ ಉಡಾಳ ನೀತಿಗೆ ದ್ವೀಪದ ಮಡಿಲು, ಅಲ್ಲಿನ ಜನರ ಒಡಲು ಎರಡೂ ಉಡುಗಿ ಹೋಗುತ್ತಿದೆ. ಅಲ್ಲಿ ಅಭಧ್ರತೆ ಮನೆಮಾಡಿದೆ. ಸ್ವಾಸ್ಥ್ಯ, ನೆಮ್ಮದಿ ಕದಡಿ ಹೋಗಿದೆ. ಜನ ಜೀವನ ಸಂತುಲಿತತೆ ಕಳೆದುಕೊಂಡಿದೆ. ಅಲ್ಲಿನ ವಿದ್ಯಮಾನ ಗಮನಿಸಿದರೆ ನೀರಮೇಲಿನ ಸ್ವರ್ಗ ಸದ್ಯದಲ್ಲೇ ನರಕ ಯಾತನೆ ಅನುಭವಿಸಲಿದೆಯೋ ಎಂಬ ಆತಂಕ ಮೂಡುತ್ತಿದೆ. ಹಾಗೆ ನೋಡಿದರೆ ಈ ಪುಟ್ಟ ಧರೆಗೆ ಗಂಡಾಂತರ ಅನ್ನೋದು ಅಪರಿಚಿತವಲ್ಲ. ಶತಮಾನಗಳಿಂದ ಅದು ದಬ್ಬಾಳಿಕೆಯ ಯಾತನೆ, ದಾಳಿಯ ನೋವು, ಪರಾಧೀನತೆಯ ಸಂಕಟವನ್ನು ಅನುಭವಿಸಿದೆ. ಅಲೆಗಳ ಹೊಡೆತ ಬಿದ್ದಂತೆ ವಿನ್ಯಾಸಗೊಳ್ಳುತ್ತಾ ಹೋದ ದ್ವೀಪ ಪ್ರಭುತ್ವದ ಹೊಡೆತ ತಿಂದು ಅನೇಕ ಬಾರಿ ವಿರೂಪಗೊಂಡಿದೆ. ಹೆದ್ದೆರೆಗೆ ಎದೆ ಸೆಟೆದು ನಿಂತ ಈ ನೆಲ ಆಳ್ವಿಕೆಯ ಅಟ್ಟಹಾಸದ ಮುಂದೆ ಅಪ್ಪಟ ಅಸಹಾಯಕ. ಅದಕ್ಕೆ ಕಾರಣ ಇಲ್ಲಿನ ಆಳ್ವಿಕೆಯ ಚುಕ್ಕಾಣಿ ಈ ನೆಲ ಮೂಲದವರಲ್ಲಿ ಇಲ್ಲದೇ ಹೋದದ್ದು. ಕ್ರಿ.ಪೂ 10ರ ಪೂರ್ವದಲ್ಲೇ ಇಂದಿನ ಸ್ವರೂಪದಲ್ಲಿ...