Skip to main content

Posts

Showing posts from April, 2021

ವಿಜ್ಞಾನ ಲೋಕದ ವಿಸ್ಮಯ ಸಜಿಪ ಉಸ್ತಾದ್..

 ವಿಜ್ಞಾನ ಲೋಕದ ವಿಸ್ಮಯ ಸಜಿಪ ಉಸ್ತಾದ್.. ಮೂಲ: ಬಶೀರ್ ನದ್ವಿ ಕೋಟ್ಟಿಲ ಅನು: ಅಶ್ರಫ್ ನಾವೂರು, ಕೆ.ಜಿ.ಎನ್ ಮಿತ್ತೂರು ವರ್ಣಭೇದದ ಜೊತೆ ಅಸ್ಪ್ರಶ್ಯರು, ಕೀಲ್ಜಾತಿಗಳಾದ ಶೂದ್ರ ಪಂಗಡದ 'ಥೀಂಡಾ' ಜಾತಿಯಲ್ಲಿ ಜನ್ಮತಾಳಿ, ಬೆಳೆದು, ಸತ್ಯವಚನ¹ ಹೇಳಿ ಮಾನವೀಯತೆಯಲ್ಲಿ ಅಚ್ಚರಿ ಮೂಡಿಸಿ, ವೈಜ್ಞಾನಿಕ ಲೋಕದ ಬೆಳ್ಳಿ ತಾರೆಯಾಗಿ ಜ್ವಲಿಸಿ, ಆಧ್ಯಾತ್ಮಿಕ ಸರಣಿಯಲ್ಲಿ ಮುರಬ್ಬಿಯಾಗಿ ಪರಿವರ್ತಿತವಾದ ಪುಣ್ಯ ಜನ್ಮ.. ಅಲ್-ಆಲಿಮುಲ್ ಅಲ್ಲಾಮಾ ವಹೀದುಝ್ಝಮಾನ್ ಮುತ್ತಬಿಉಸ್ಸುನ್ನಃ ಚೆರುವತ್ತೂರು ಅಬ್ದುಲ್ಲಾ ಮುಸ್ಲಿಯಾರ್ ಅಲ್- ಬಾಖವಿ ರಹಿಮ‌ವುಲ್ಲಾಹ್.  ಆಡು ಮೇಯಿಸುವವನಾಗಿ ಬೆಳೆದು, ಜಾನುವಾರು ವ್ಯಾಪಾರಿಗಳೊಂದಿಗೆ ಕೇರಳಕ್ಕೆ ತಲುಪಿ ಇಸ್ಲಾಂ ಸ್ವೀಕರಿಸಿ, ಪಳ್ಳಿದರ್ಸ್‌ಗಳಲ್ಲಿ ಅಧ್ಯಯನ ಮಾಡಿ, ಬಗ್ದಾದ್ ಸಹಿತ ಅನೇಕ ಚಾರಿತ್ರಿಕ ಹಿನ್ನಲೆಯಿರುವ ನಗರಗಳಿಗೆ ಕಾಲ್ನಡಿಗೆಯ ಮೂಲಕ ಸಂಚರಿಸಿ, ಪುಣ್ಯ ನಾಡು ಮಕ್ಕಾ, ಮದೀನಾಗೆ ತಲುಪಿ ಹಜ್ಜ್ ನಿರ್ವಹಿಸಿ, ಹರಮಿನಲ್ಲಿ ವಾಸಿಸಿ ಆಧ್ಯಾತ್ಮಿಕ ಅನುಭೂತಿ ಪಡೆಯಲು ಮುನ್ನುಗ್ಗಿ, ದೀರ್ಘ ಕಾಲ ದರ್ಸ್ ನಡೆಸಿ ಹಲವಾರು ಶಿಷ್ಯರನ್ನು ಸಮಾಜಕ್ಕರ್ಪಿಸಿದ ಇತಿಹಾಸದಲ್ಲಿ ಅಪೂರ್ವ ವ್ಯಕ್ತಿತ್ವವಾಗಿದ್ದಾರೆ ಚೆರುವತ್ತೂರು ಅಬ್ದುಲ್ಲಾ ಮುಸ್ಲಿಯಾರ್ (ಸಜಿಪ ಉಸ್ತಾದ್).  *ಬಾಲ್ಯಕಾಲ* ಜನನ, ಮಂಗಳೂರಿನ ಕಿನ್ಯಾ ಸಮೀಪದ ಪನೀರ್ ಎಂಬ ಗ್ರಾಮದಲ್ಲಿ. *ಬದಲಾವಣೆಯ ಅಭೂತಪೂರ್ವ ಕ್ಷಣ* ಅಂದು ಕ್ರಿ.ಶ 1935. ಮಂಗ...

ಇಸ್ಲಾಂ ಮಹಿಳೆಗೆ ನೀಡಿದ ಮಾನ್ಯತೆ

 ಸಿರಿಯಾ ಮೂಲದ, ನೆಬಾಟ್ಯಾನ್ ಜನಾಂಗಕ್ಕೆ ಸೇರಿದ ಕ್ರೈಸ್ತನೊಬ್ಬ ಕಬ್ಬಿಣದ ವಸ್ತುವೊಂದನ್ನು ಕಳ್ಳತನ ಮಾಡಿ ಸಿಕ್ಕಿಬಿದ್ದ. ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತು. ಕಳ್ಳನನ್ನು ಬಂಧಿಸುವಂತೆ ಆದೇಶ ಹೊರಡಿಸಿದ ಖಾಝಿ ಅಬೂಬಕರ್ ಇಬ್ನ್ ಮುಹಮ್ಮದುಬ್ನು ಹಝ್ಮ್ ಕೈ ಕತ್ತರಿಸುವಂತೆ ತೀರ್ಪು ಹೊರಡಿಸಿದರು. ಇನ್ನೇನು ಕೆಲವೇ ನಿಮಿಷಗಳಲ್ಲಿ ಕಳ್ಳ ತನ್ನ ಕೈ ಕಳೆದುಕೊಳ್ಳುವುದರಲ್ಲಿದ್ದ. ಈ ಸುದ್ದಿ ಅಲ್ಲಿನ ಪ್ರಸಿದ್ದ ವಿಧ್ವಾಂಸೆಯಾಗಿದ್ದ ಅಮ್ರಾ ಬಿನ್ತ್ ಅಬ್ದುಲ್ ರಹ್ಮಾನ್‌ರಿಗೆ ತಿಳಿಯಿತು. ಅವರು ತನ್ನ ಶಿಷ್ಯೆಯೊಬ್ಬರನ್ನು ಖಾಝಿ ಬಳಿಗೆ ಕಳುಹಿಸಿದರು. ನ್ಯಾಯಾಲಯದ ಮೆಟ್ಟಿಲೇರಿ ಬಂದ ಯುವತಿಯತ್ತ ನೆರೆದಿದ್ದ ಅಷ್ಟೂ ಮಂದಿಯ ಚಿತ್ತ ಹೊರಳಿದವು.  "ನನ್ನನ್ನು ಇಲ್ಲಿಗೆ ಅಮ್ರಾ ಕಳುಹಿಸಿರುವರು"  ಯುವತಿಯವರ ಮಾತು ಖಾಝಿಯನ್ನು ತಟ್ಟನೇ ಎಚ್ಚೆತ್ತುಕೊಳ್ಳುವಂತೆ ಮಾಡಿತು. ಅವರ ಮೊಗದಲ್ಲಿ ಗೌರವ ಮಿಶ್ರಿತ ಗಂಭೀರತೆ ಎದ್ದು ಬಂದವು. ಕಾರಣ ಅಮ್ರಾ ಬಿನ್ತ್ ಅಬ್ದುಲ್ ರಹ್ಮಾನ್ ಮದೀನಾದ ಪ್ರಸಿದ್ಧ ಹದೀಸ್ ನಿಪುಣೆಯೂ, ಕಾನೂನು ತಜ್ಞೆಯೂ ಆಗಿದ್ದರು.  "ನಗಣ್ಯ ಮೌಲ್ಯದ ವಸ್ತುವೊಂದನ್ನು ಅಪಹರಿಸಿದ ವ್ಯಕ್ತಿಯ ಕೈ ಕತ್ತರಿಸುವಂತೆ ತಾವು ತೀರ್ಪು ನೀಡಿದ್ದೀರಂತೆ" ಹೌದು ಎಂದರು ಖಾಝಿ. ಅವರಿಗೆ ತನ್ನ ತೀರ್ಪಿನಲ್ಲಿ ಏನೋ ಎಡವಟ್ಟು ಉಂಟಾಗಿದೆಯೆಂಬ ಒಳ ಅರಿವು ಉಂಟಾಯಿತು.  "ಕಾಲು ದೀನಾರ್‌‌ಗಿಂತ ಕೆಳಗಿನ ಮೌಲ್ಯದ ವಸ್ತುವನ್ನು ಕಳವುಗೈದ...