Skip to main content

Posts

Showing posts from February, 2020

ರಜಬ್ ಅಲ್ಲಾಹನ ತಿಂಗಳು

ರಜಬ್ ಅಲ್ಲಾಹನ ತಿಂಗಳು ▪ರಜಬ್ ಹಲವಾರು ಅಜಬ್‌ಗಳನ್ನು ತನ್ನೊಡಲಲ್ಲಿಟ್ಟು ಪ್ರತೀ ವರ್ಷವೂ ಆಗಮಿಸುತ್ತಿದೆ. ವರ್ಣಿಸಲು ಅಸಾಧ್ಯವಾದ ಹಿರಿಮೆ-ಮಹಿಮೆ ಈ ಮಾಸಕ್ಕಿದೆ. ▪ರಜಬ್ ಅರಬಿ ತಿಂಗಳುಗಳಲ್ಲಿ ಏಳನೆಯದ್ದು. 'ರಜಬ್' ಎಂಬ ಪದಕ್ಕೆ ಘನತೆ, ಗೌರವ, ನಾಚಿಕೆ, ಅಸ್ವಬ್ (ಯಥೇಷ್ಠ ಸುರಿಯುವುದು) ಅಸ್ವಮ್ಮ್ (ಕಿವಿ ಕೇಳದ) ಶಹರಜ್ಮ್ ಮುಂತಾದ ಹಲವಾರು ಹೆಸರುಗಳಿವೆ. ▪ರಜಬ್ ತಿಂಗಳಲ್ಲಿ ಜಗಳ, ಯುದ್ಧ, ಕಲಹ ಮಾಡುವುದೆಂದರೆ ಅರಬರು ಹೆದರುತ್ತಲೂ, ನಾಚುತ್ತಲೂ ಇದ್ದರಂತೆ. ಹಾಗಾಗಿ ರಜಬನ್ನು ಜಾಹಿಲಿಯ್ಯಾದ ಕಾಲದಲ್ಲಿಯೇ ತುಂಬಾ ಗೌರವದಿಂದ ಕಾಣುತ್ತಿದ್ದರು. ಇಸ್ಲಾಮ್ ಈ ಮಾಸದಲ್ಲಿ ಯುದ್ಧವನ್ನು ನಿಷಿದ್ಧಗೊಳಿಸಿದೆ. ▪ಈ ತಿಂಗಳನ್ನು ಅಸ್ವಬ್ (ಅಪಾರ ಸುರಿಯುವುದು) ಎಂದವರು ಹೇಳುವುದೇನೆಂದರೆ ಈ ಪವಿತ್ರ ತಿಂಗಳಲ್ಲಿ ಅಲ್ಲಾಹನ ರಹ್ಮತ್, ಬರ್ಕತ್, ನಿಅ'ಮತ್ ಹೇರಳವಾಗಿ ಸುರಿಯಲು ಆರಂಭವಾಗುತ್ತದೆ. ಅಸ್ವಮ್ಮ್ (ಕಿವಿಕೇಳದ) ಅಂದರೆ ಈ ತಿಂಗಳಲ್ಲಿ ಯುದ್ಧವೇ ನಿಷಿದ್ಧವಾದುದರಿಂದ ಯುದ್ಧಾಯುಧಗಳ ಶಬ್ದವೇ ಕೇಳಿಸದೆ ಇರುವುದರಿಂದ ಈ ಮಾಸಕ್ಕೆ ಈ ಹೆಸರು ಬಂದಿದೆ.  ಶಹ್ರ್ ರ್ರಜ್‌ಮ್ (ಕಲ್ಲೆಸೆದು ಓಡಿಸುವುದು) ಎಂಬ ಹೆಸರಿನಿಂದ ಈ ಮಾಸವನ್ನು ಕರೆದ ಆರಿಫೀನ್‌ಗಳು ಹೇಳುವುದೇನೆಂದರೆ ಆರಾಧನೆಗೆ ತೊಂದರೆ ಕೊಡುವ, ಆರಾಧನೆಗಳನ್ನು ತಡೆಯುವ ಪಿಶಾಚಿಗಳನ್ನು ಓಡಿಸುವ ಕಾರ್ಯವು ವಿಶೇಷವಾಗಿ ಈ ತಿಂಗಳಿನಿಂದ ಆರಂಭವಾಗುವುದರಿಂದ ಈ ಹೆಸರು ಬರಲು ಕಾ...

ಬುರ್ಖಾ ನಿಷೇಧಿಸುವಾಗ ಇರುವ ಈಮಾನ್ ಬುರ್ಖಾ ಫಿಟ್ಟಿಂಗ್ ಮಾಡುವಾಗ ಇಲ್ಲವಾಯಿತೆ

ಬುರ್ಖಾ ನಿಷೇಧಿಸುವಾಗ ಇರುವ ಈಮಾನ್ ಬುರ್ಖಾ ಫಿಟ್ಟಿಂಗ್ ಮಾಡುವಾಗ ಇಲ್ಲವಾಯಿತೆ...? @ಮುಹಮ್ಮದ್ ಇಲ್ಯಾಸ್ ಪಿಲಿಕೂರು  ಗೆಳೆಯರೆ ನಾವು ಇದು ಯಾಕೆ ಚಿಂತಿಸುತ್ತಿಲ್ಲ ಎಂದು ಅರ್ಥವಾಗುತ್ತಿಲ್ಲ... ಕೆಲವು ದಿವಸಗಳ ಹಿಂದೆ ಕೇಂದ್ರ ಸರ್ಕಾರ *ಬುರ್ಖಾ* ನಿಷೇದಮಾಡುವ ತೀರ್ಮಾನ ಕೈಗೊಂಡಿತು ಆ ಸಮಯದಲ್ಲಿ ಇಡಿ ಭಾರತ ದೇಶವೆ ಇದರ ವಿರುದ್ಧ ಹೋರಾಟ ನಡೆಸಿತು ಕೊನೆಯ ಉಸಿರು ತನಕ ನಾವು ಈ ಕಾಯ್ದೆಯನ್ನು ಜಾರಿ ಮಾಡಲು ಬಿಡುದಿಲ್ಲ ಎಂದು ಕೆಲವರು ಗಂಟಘೋಷವಾಗಿ ಹೇಳಿದರು.      ಗೆಳೆಯರೇ ನಾವಿಲ್ಲಿ ಬಹಳ ಆಳವಾಗಿ ಚಿಂತಿಸಬೇಕಾದ ವಿಷಯ ಇದೆ ಬುರ್ಖಾ ಎನ್ನುವುದು ಒಂದು ರಕ್ಷಾ ಕವಚ ಆಗಬೇಕೆ ವಿನಃ ಪಾಶ್ಚಾತ್ಯ ಸಂಸ್ಕೃತಿ ಆಗಬಾರದು ಈ ಅತ್ಯಾಧುನಿಕ ಯುಗದಲ್ಲಿ ಹಲವಾರು ಬಣ್ಣ ಬಣ್ಣದ ತರಹ ತರಹದ ಬುರ್ಖಾಗಳಿವೆ ಕೆಲವೊಮ್ಮೆ ಈ ಬಣ್ಣದ ಬುರ್ಖಾಗಳೇ ನಮ್ಮ ಸಹೋದರಿಯರನ್ನು ಸಮಾಜದಲ್ಲಿ ಎತ್ತಿ ತೋರಿಸುತ್ತದೆ ಆದರೆ ಅದಕ್ಕಿಂತ ದೊಡ್ಡ ದುರಂತ ಅಂದರೆ *ರಕ್ಷಾ ಕವಚವಾಗಿ* ಉಪಯೋಗಿಸುವ ಈ ಬುರ್ಕಾವನ್ನು ಫಿಟ್ಟಿಂಗ್ ಮಾಡಿ ತಮ್ಮ ಶರೀರದ ಸೌಂದರ್ಯವು ಪ್ರಪಂಚಕ್ಕೆ ಎದ್ದು ಕಾಣುವ ರೀತಿಯಲ್ಲಿ ಹೊಲಿಸುತ್ತಾರೆ, ಇನ್ನು ಕೆಲವರು ಬಹಳ ಸಡಿಲವಾಗಿ (loose) ಹೋಲಿಸಿದರೂ ಅದನ್ನು ಎತ್ತಿ ಕೈಯಲ್ಲಿ ಹಿಡಿದು ನಡೆಯುತ್ತಾರೆ ಕಾರಣ ಕೇಳಿದರೆ ಬರುವ ಉತ್ತರ ಅದು ನೆಲಕ್ಕೆ ತಾಗಿದರೆ ನಜಸ್ ಆಗುತ್ತೆ ಅಲ್ಲವೇ.? ಎಂದು ಆದರೆ ಅವರ ಔರತ್ (ಔರ...

ಕುಟುಂಬ ಸಂಬಂಧ ಮುರಿಯಬೇಡಿ

ಕುಟುಂಬ ಸಂಬಂಧ ಮುರಿಯಬೇಡಿ  ಮಾನವನು ಸಂಘಜೀವಿಯಾಗಿದ್ದಾನೆ. ಇತರರೊಂದಿಗೆ ಕೂಡಿ ಬಾಳುವುದು ಅವನ ಪ್ರಕೃತಿದತ್ತ ಗುಣವಾಗಿದೆ. ಆದ್ದರಿಂದ ಅವನಿಗೆ ಏಕಾಂಗಿಯಾಗಿ ಜೀವಿಸಲು ಕೆಲವು ದಿನಗಳ ಮಟ್ಟಿಗೆ ಸಾಧ್ಯವಾದರೂ ಅದು ಶಾಶ್ವತವಾಗಿಸಲು ಅವನಿಂದ ಸಾಧ್ಯವಿಲ್ಲ. ಇನ್ನು ಯಾರ ಹಂಗಿಲ್ಲದೇ ಏಕಾಂಗಿಯಾಗಿ ಜೀವಿಸುವುದು ಮಾನಸಿಕ ಸ್ಥಿಮಿತ ಕಳಕೊಂಡಿರುವ ಹುಚ್ಚರು ಮಾತ್ರ. ಮನುಷ್ಯರಲ್ಲಿ ಕೂಡಿ ಬಾಳುವ ಗುಣ ಇರುವುದರಿಂದಲೇ ಅವನು ಒಂದು ಕುಟುಂಬವನ್ನು ಬಯಸುತ್ತಾನೆ. ಓರ್ವ ಮನುಷ್ಯನ ಸುತ್ತಲೂ ಸಂಬಂಧಗಳ ಸರಪಳಿಯು ಪೋಣಿಸಲ್ಪಟ್ಟಿದೆ. ತಂದೆ, ತಾಯಿ, ಪತ್ನಿ, ಮಕ್ಕಳು, ಸಹೋದರ-ಸಹೋದರಿಯರು, ಅತ್ತೆ, ಮಾವ ಹೀಗೆ ಈ ಸರಪಳಿಯು ಅವನನ್ನು ಬಂಧಿಸಿ ಸಹಬಾಳ್ವೆಯ ಸುಖವನ್ನು ನೀಡುತ್ತಿರುತ್ತದೆ. ಆದ್ದರಿಂದಲೇ ಮಾನವನು ಈ ಸರಪಳಿಯಿಂದ ಬಂಧಮುಕ್ತಗೊಳ್ಳಲು ತಯಾರಾಗುತ್ತಿಲ್ಲ. ಓರ್ವ ವಿಶ್ವಾಸಿಗೆ ಕುಟುಂಬದ ಮೇಲೆ ಹಲವಾರು ಬಾಧ್ಯತೆಗಳಿವೆ. ಅಲ್ಲಾಹನೊಂದಿಗೂ ಸ್ವಂತದೊಂದಿಗೂ ಇರುವ ಬಾಧ್ಯತೆಗಳ ಬಳಿಕ ಇಸ್ಲಾಮಿನಲ್ಲಿ ಅತ್ಯಂತ ಹೆಚ್ಚು ಮಹತ್ವ ಇರುವುದು ಈ ಸಂಬಂಧಗಳಿಗಾಗಿದೆ. ಆದ್ದರಿಂದ ಕುಟುಂಬ ಸಂಬಂಧಕ್ಕೆ ಧಕ್ಕೆ ಯಾಗುವಂತಹ ಯಾವುದೇ ಕೆಲಸವು ಓರ್ವ ನೈಜ ವಿಶ್ವಾಸಿ ಯಿಂದ ಘಟಿಸಬಾರದು. ಕುಟುಂಬ ಸಂಬಂಧಕ್ಕೆ ಇಸ್ಲಾಮ್ ಅತೀ ಹೆಚ್ಚು ಮಹತ್ವ ನೀಡಿದೆ. ಕುಟುಂಬದೊಂದಿಗೆ ಹಳಸಲು ಸಂಬಂಧವಿರಿಸಿ ನಾವು ಮಾಡುವ ಸತ್ಕರ್ಮಗಳು ನಿರರ್ಥಕ ವಾಗಬಹುದು. ಇಂದು ಸಮಾಜದಲ್ಲಿ ಜನಾನುರಾಗಿಯಾ...

ಖಾಝಿ ಶೈಖ್ ಸಈದ್ ಮುಸ್ಲಿಯಾರ್ (ಖ:ಸಿ) ಕಿಝೂರ್, ಪಯೊಟ್ಟ, ಕಳನಾಡ್, ಕಾಸರಗೋಡು.

ಖಾಝಿ ಶೈಖ್ ಸಈದ್ ಮುಸ್ಲಿಯಾರ್ (ಖ:ಸಿ) ಕಿಝೂರ್, ಪಯೊಟ್ಟ, ಕಳನಾಡ್, ಕಾಸರಗೋಡು. ➖➖➖➖➖➖➖ 🕌🕌🕌🕌🕌🕌🕌 ​اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ​ ☪☪☪☪☪☪☪☪☪ ✍ ಗಫೂರ್ ಬಾಯಾರ್ ********************** ಸುಮಾರು ಒಂದೂವರೆ ಶತಮಾನಗಳ ಹಿಂದೆ ಕೇರಳ ಸಮೂಹವನ್ನು ಆಧ್ಯಾತ್ಮಿಕ ಪ್ರಭೆಯಿಂದ ಬೆಳಗಿಸಿದ ಮಹಾ ವಿದ್ವಾಂಸರಾಗಿದ್ದಾರೆ. ಖಾಝಿ ಸ‌ಈದ್ ಮುಸ್ಲಿಯಾರ್ (ಖ.ಸಿ)ರವರು. ಕಾಸರಗೋಡು ಜಿಲ್ಲೆಯ ಕುಂಞಾರ್‌ನ ಖಾಝಿ ಅಹ್ಮದ್ ಮುಸ್ಲಿಯಾರ್ (ಖ.ಸಿ) ಪುತ್ರರಾದ ಖಾಝಿ ಸ‌ಈದ್ ಮುಸ್ಲಿಯಾರ್ (ಖ.ಸಿ)ರವರು ಚಿಕ್ಕ ವಯಸ್ಸಿನಲ್ಲೇ ಉತ್ಸಾಹದಿಂದ ಬಹಳಷ್ಟು ಧಾರ್ಮಿಕ ವಿದ್ಯೆ ಕರಗತ ಮಾಡಿಕೊಂಡ ನಂತರ ಅಲ್ ಅಝ್ಹರ್ ಎಂದು ಅರಿಯಲ್ಪಡುವ ಪೊನ್ನಾನಿಗೆ ತೆರಳಿ ಉನ್ನತ ವ್ಯಾಸಂಗ ಪಡೆದರು. ಖಾಝಿ ಸ‌ಈದ್ ಮುಸ್ಲಿಯಾರ್ (ಖ.ಸಿ)ರವರು, ಪ್ರವಾದಿ ﷺِ ಪ್ರೇಮದ ಮೂಲಕ ಜಗತ್ತೇ ತಿರುಗಿ ನೋಡುವಂತಹ ಅಸಾಮಾನ್ಯ ಸಾಧನೆ ಮಾಡಿದ ಮಹಾ ವಿದ್ವಾಂಸರೂ, ಸ್ವಾತಂತ್ರ್ಯ ಹೋರಾಟಗಾರರೂ ಆದ ವೆಳಿಯಂಗೋಡು ಉಮರ್ ಖಾಝಿ (ರ) ರವರ ಸಹಪಾಠಿಯೂ, ಆತ್ಮೀಯ ಮಿತ್ರರೂ ಆಗಿದ್ದರು. ಇಸ್ಲಾಮಿಕ್ ಧಾರ್ಮಿಕ ಸಂಹಿತೆಗಳ (ಶರಿಆತ್) ಬಗ್ಗೆ ಅಗಾಧ ಪಾಂಡಿತ್ಯ ಹೊಂದಿದ್ದ ಮಹಾನರು, ಫತ್ವಾ ನೀಡುವ ಅರ್ಹತೆ ಹೊಂದಿರುವ ಬ...

ಗೌಸೇ ಆಝಮ್ ಪವಾಡಗಳು

ಗೌಸೇ ಆಝಮ್ ಪವಾಡಗಳು (ಲೇಖಕರು: ಎಂ. ಎ ಅಬ್ದುಲ್ ಖಾದರ್ ಮುಸ್ಲಿಯಾರ್ (ರಹಿಮಹುಲ್ಲಾ) ಕನ್ನಡಕ್ಕೆ- ಇಸ್ಮಾಯಿಲ್ ಸ'ಅದಿ ಮಾಚಾರ್ ) ಕೋಳಿಯ ಮುಳ್ಳು ಮುಹಮ್ಮದಿಬ್ನು ಖಾಇದುಲ್ ಅವಾನಿ  (ರದಿಯಲ್ಲಾಹು ಅನ್ಹು) ಎಂಬವರು ಹೇಳಿದರು. 'ಒಬ್ಬಳು ಸ್ತ್ರೀ ತನ್ನ ಮಗನೊಂದಿಗೆ ಶೈಖ್ ಜೀಲಾನಿಯ ಬಳಿ ತಲುಪಿದರು. ತನ್ನ ಮಗುವನ್ನು ಶೈಖವರಿಗೆ ಸಮರ್ಪಿಸಿ ಇವನನ್ನು ನೀವು ಆತ್ಮೀಯ ರಂಗದಲ್ಲಿ ಪಳಗಿಸಬೇಕೆಂದು ಕೋರಿದರು. ಅವರು ಮಗುವನ್ನು ಸ್ವೀಕರಿಸಿ ಆತ್ಮೀಯವಾಗಿ ಬೆಳೆಸತೊಡಗಿದರು. ಹೀಗಿರಲು ಒಂದು ಬಾರಿ ಮಗನನ್ನು ನೋಡಲು ಆ ತಾಯಿ ಬಂದರು. ಹಸಿವಿನಿಂದಲೂ, ನಿದ್ರಾಹೀನತೆಯಿಂದಲೂ ತನ್ನ ಮಗ ಸಣಕಲಾಗಿದ್ದನ್ನು ಕಂಡ ತಾಯಿ, ತನ್ನ ಮಗನ ಆಹಾರ ಒಣಗಿದ ರೊಟ್ಟಿ ಎಂದು ತಿಳಿದ ಕೂಡಲೇ ದುಃಖದಿಂದ ಶೈಖವರ ಬಳಿ ಬಂದರು. ಆಗ ಶೈಖವರ ಮುಂಭಾಗದಲ್ಲಿ ತಿಂದು ಮುಗಿದ ಕೋಳಿಯೊಂದರ ಮುಳ್ಳು ರಾಶಿಬಿದ್ದಿತ್ತು. ಆ ಸ್ತ್ರೀ ಹೇಳಿದರು. “ನೀವು ಕೋಳಿಮಾಂಸ ತಿನ್ನುತ್ತಾ ನನ್ನ ಮಗನಿಗೆ ಒಣಗಿದ ರೊಟ್ಟಿ ನೀಡುವುದಾ?” ಶೈಖ್ ಮುಳ್ಳುಗಳ ಮೇಲೆ ಕೈಯಿಟ್ಟು ಹೇಳಿದರು. 'ಕೊಳೆತು ಹೋದ ಎಲುಬುಗಳನ್ನು ಜೀವಂತಗೊಳಿಸುವ ಅಲ್ಲಾಹನ ಅನುಮತಿಯೊಂದಿಗೆ ನೀ ಎದ್ದು ನಿಲ್ಲು' ಹೇಳಿದ್ದೇ ತಡ ಅದು ಜೀವಂತ ಕೋಳಿಯಾಗಿ ಮಾರ್ಪಟ್ಟಿತು. ಅದು ಜೋರಾಗಿ ಹೀಗೆ ಹೇಳಿತು. “ಲಾ ಇಲಾಹ ಇಲ್ಲಲ್ಲಾಹು” ಶೈಖವರು ಸ್ತ್ರೀಯೊಂದಿಗೆ ಹೇಳಿದರು. 'ಈ ಒಂದು ಅವಸ್ಥೆಗೆ ನಿಮ್ಮ ಮಗ ತಲುಪಿದರೆ ಅ...

ಭೌತಿಕ, ಅಭೌತಿಕ ಪರಿಹಾರ

ಸಮಸ್ಯೆಗಳ ವೇಳೆ ಅಲ್ಲಾಹನ ಪ್ರವಾದಿಗಳು ಏನು ಮಾಡುತ್ತಿದ್ದರು?....              ಹೌದು ನಮಗೆದುರಾಗುವ ಯಾವುದೇ ಸಮಸ್ಯೆಗಳ ಪರಿಹಾರಕ್ಕಾಗಿ ಭೌತಿಕ, ಅಭೌತಿಕ ಹೀಗೆ ಎರಡು ಪರಿಹಾರ ಮಾರ್ಗಳು ನಮಗಿರುತ್ತದೆ...    *ಎಲ್ಲಾ ಸೃಷ್ಟಿಗಳ ಸೃಷ್ಠಿಕರ್ತನೂ, ಸರ್ವಾಧಿಕಾರಿಯೂ, ಸರ್ವ ಶಕ್ತನೂ, ಸೃಷ್ಟಿ ಸಂರಕ್ಷಕನೂ ಆದ ಅಲ್ಲಾಹನ ಮೊರೆ ಹೋಗುವುದು, ಅವನಲ್ಲಿ ಪರಿಹಾರ ಬೇಡುವುದು, ಅವನಿಗೆ ಇಷ್ಠವಾಗುವ ಕಾರ್ಯಗಳನ್ನು ಹೆಚ್ಚಾಗಿ ಮಾಡುವುದು, ಅವನಿಗೆ ಇಷ್ಟವಾಗದ ತಪ್ಪುಗಳು ನಮ್ಮಲ್ಲಿದ್ದರೆ ಅವುಗಳನ್ನು ತಿದ್ದುವುದು ಇವೆಲ್ಲಾ  ಅಭೌತಿಕ ಪರಿಹಾರ ಮಾರ್ಗಗಳಾಗಿವೆ.* ಅಲ್ಲಾಹನ ಪ್ರವಾದಿಗಳಿಗೆ ಸಮಸ್ಯಗಳೆದುರಾದಾಗ ಅವರು ವಿವಿಧ ರೀತಿಯ ಅಭೌತಿಕ ಪರಿಹಾರ ಮಾರ್ಗಗಳನ್ನು ಕಂಡುಕ್ಕೊಂಡದ್ದಾಗಿ ಕುರ್ಆನ್ ಹೇಳಿವೆ.         ಉದಾಹರಣೆಗೆ *ಆದಮ್ ಅಲೈಹಿಸ್ಸಲಾಮ್-ರವರು* ತಾನು ಸಿಲುಕಿದ ಸಮಸ್ಯೆದ ಪರಿಹಾರಕ್ಕಾಗಿ ..  ربنا ظلمنا أنفسنا و ان لم تغفر لنا وترحمنا لنكونن من الخاسرين ا... ಎಂಬ ದುಆ ಮಾಡಿ ಪರಿಹಾರ ಕಂಡುಕೊಂಡಿದ್ದರು,          *ಇಬ್ರಾಹೀಮ್ (ಅ)ರವರು* ನಂರೂದನ ಅಕ್ರಮಕ್ಕೆ ವಿದೇಯರಾದಾಗ حسبي الله و نعم الوكيل ಎಂದು ಹೇಳಿ ರಕ್ಷಣೆಯ ದಾರಿ ಕಂಡು ಕೊಂಡಿದ್ದರು, *ಯಅಕೂಬ್(ಅ)* ತನ್ನ  ಮಗ ಯೂಸುಫ್(ಅ...

ಎಪಿ ಉಸ್ತಾದ್

ಕೋಟ್ಯಾಂತರ ಅನುಯಾಯಿಗಳು, ವಿವಿಧ ಉನ್ನತ ಸರ್ಕಾರಿ ಹುದ್ದೆಗಳಲ್ಲಿರುವ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಉನ್ನತ ಸ್ಥಾನದಲ್ಲಿರುವ ಲಕ್ಷಾಂತರ ಶಿಷ್ಯಂದಿರನ್ನು ಸಂಪಾದಿಸಿರುವ ಎಪಿ ಉಸ್ತಾದರು *"ತನ್ನನ್ನು ನಿರಂತರವಾಗಿ ಸಾಮಾಜಿಕ ತಾಣಗಳಲ್ಲಿ ಮತ್ತು ವೇದಿಕೆಗಳಲ್ಲಿ ನಿಂತುಕೊಂಡು ತೆಜೋವದೆ ನಡೆಸಿ ವೈಯಕ್ತಿಕ ನಿಂದನೆ ನಡೆಸುವ ಪ್ರತಿಯೊಬ್ಬರ ಮೇಲೂ ಕೇಸು ಕೊಟ್ಟು ಬಿಡಿ"* ಎಂಬ ಒಂದೇ ಒಂದು ಹೇಳಿಕೆ ಕೊಟ್ಟು ತನ್ನನ್ನು ನಿಂದಿಸುವ ಮುನ್ನ ಪ್ರತಿಯೊಬ್ಬರೂ ಒಂದು ನಿಮಿಷ ಯೋಚಿಸುವಂತೆ ಮಾಡಿಸುವುದು ಎಪಿ ಉಸ್ತಾದರಿಗೆ ದೊಡ್ಡ ಕೆಲಸವೇನು ಆಗಿರಲಿಲ್ಲ. ಆದರೆ ಎಲ್ಲಾ ಆರೋಪಗಳಿಗು ಎಪಿ‌ ಉಸ್ತಾರ ಬಳಿ ಇದ್ದ ಪ್ರತಿಕ್ರಿಯೆ ಎಂದರೆ ಖಮರಿನಂತೆ ಹೊಳೆಯುವ ಮುಖದಲ್ಲಿನ ಒಂದು ಮುಗುಳು ನಗು ಮಾತ್ರವಾಗಿತ್ತು. ಆ ಒಂದು ಮುಗುಳು ನಗುವಿನಿಂದ ಎಪಿ ಉಸ್ತಾದರಿಗೆ ಏನು ಲಾಭವಾಗಿದೆ ಎಂದು ಗೊತ್ತಿಲ್ಲ, ಆದರೆ ಸಮುದಾಯದ ಸಾವಿರಾರು ಯುವಕರು ಕೇಸು ಕೋರ್ಟು ಅಂತ ಅಲೆದಾಡುವುದನ್ನು ಆ ಮುಗುಳು ನಗು ತಪ್ಪಿಸಿದೆ. *ಅಲ್ಲಾಹು ಈ ಮಹಾನರಿಗೆ ಆರೋಗ್ಯಪೂರ್ಣ ದೀರ್ಘಾಯುಷ್ಯ ನೀಡಿ ನಮ್ಮ ಮರಣದವರೆಗೂ ಈ ನಾಯಕತ್ವ ಲಭಿಸುವ ಭಾಗ್ಯವನ್ನು ಅಲ್ಲಾಹು ಕರುಣಿಸಲಿ.* ✒ *ಎಸ್ಸಾರ್ಜೆ ಮಾಡನ್ನೂರ್*

ಗಾಳಿಯು ವಾಹನವಾದದ್ದು ಹೇಗೆ..

ಗಾಳಿಯು ವಾಹನವಾದದ್ದು ಹೇಗೆ..!? ದಾವೂದ್ ನಬಿ ಅಲೈಹಿಸ್ಸಲಾಮರ ಅನುಗ್ರಹೀತ ಮಗನಾದ ಸುಲೈಮಾನ್ ನಬಿ ಅಲೈಹಿಸ್ಸಲಾಮರಿಗೆ ಒಮ್ಮೆ ಯುದ್ಧ ಕ್ಕಾಗಿ ಕುದುರೆಗಳ ಅವಶ್ಯಕತೆ ಎದುರಾದಾಗ ತನ್ನ ಸಮುದಾಯದೊಡನೆ ಕುದುರೆಗಳ ಸಂಗ್ರಹಣೆಗೆ ಆದೇಶ ನೀಡುತ್ತಾರೆ. ಹಾಗೆಯೇ ಆ ಸಮುದಾಯದ ಜನರು ಕುದುರೆಗಳನ್ನು ಸಂಗ್ರಹಿಸಿ ಪರಿಶೀಲನೆಗಾಗಿ ಸುಲೈಮಾನ್ ನಬಿ ಅಲೈಹಿಸ್ಸಲಾಮರ ಮುಂದೆ ತಂದರು. ತಂದ ಕುದುರೆಗಳಲ್ಲಿ ಸಾವಿರ ಕುದುರೆಗಳಿದ್ದವು. ಅವುಗಳನ್ನು ಪರಿಶೀಲಿಸಲು ಸುಲೈಮಾನ್ ನಬಿ ಅಲೈಹಿಸ್ಸಲಾಮರು ಆರಂಭಿಸಿದರು. ಲುಹ್ರ್ ನಮಾಝ್ ನಿರ್ವಹಿಸಿ ಆರಂಭಿಸಿದ ಪರಿಶೀಲನೆಯು 900 ಕುದುರೆಗಳ ಪರಿಶೀಲನೆಗೆ ತಲುಪುವಾಗ ಸೂರ್ಯನು ಅಸ್ತಮಿಸುತ್ತಾನೆ. ಮಗ್ರಿಬ್ ಸಮಯವಾಯಿತು. ಪರಿಶೀಲನೆಯಲ್ಲೇ ಮುಳುಗಿದ್ದ ಸುಲೈಮಾನ್ ನಬಿ ಅಲೈಹಿಸ್ಸಲಾಮರಿಗೆ ಅಸರ್ ನಮಾಝೇ ನಷ್ಟ ಹೊಂದಿತು. ಮರೆವು ಅವರನ್ನು ಸುತ್ತಿದ ಕಾರಣ ಅಸರ್ ನಮಾಝ್ ಕಳಾಹ್ ಹಾಗೋಯಿತು. ಇದರಿಂದ ಸುಲೈಮಾನ್ ನಬಿ ಅಲೈಹಿಸ್ಸಲಾಮರು ತುಂಬಾ ಬೇಸರಿತರಾದರು ಮಾತ್ರವಲ್ಲದೆ ಆ ಕ್ಷಣವೇ ಕುಸಿದು ಬಿಟ್ಟರು. ತಕ್ಷಣವೇ ಪರಿಶೀಲಿಸಿದ 900 ಕುದುರೆಗಳನ್ನು ಕೂಡ ತಮ್ಮೆಡೆ ಮರಳಿಸುವಂತೆ ಅನುಯಾಯಿಗಳೊಡನೆ ಹೇಳುತ್ತಾ, ಅಲ್ಲಾಹನೊಂದಿಗೆ ಹೇಳುತ್ತಾರೆ " ನಾನು ಇಷ್ಟ ಪಟ್ಟೆನು, ಕುದುರೆಗಳನ್ನು ತುಂಬಾನೆ ಇಷ್ಟಪಟ್ಟು ಬಿಟ್ಟೆನು, ಕುದುರೆಯ ಮೇಲಿನ ಮೋಹದಿಂದ ಅಸರ್ ನಮಾಝನ್ನು ಕೂಡ ನಾನು ಮರೆತು ಬಿಟ್ಟೆನು..!" ಎಂದು ಬೇಸರದಿ...

ಮುಸಲ್ಮಾನರ ದೇಶ ಪ್ರೇಮದ ಕುರಿತು ಸಂಶಯ ಬೇಡ

ಮುಸಲ್ಮಾನರ ದೇಶ ಪ್ರೇಮದ ಕುರಿತು ಸಂಶಯ ಬೇಡ @ಮುಹಮ್ಮದ್ ಇಲ್ಯಾಸ್ ಪಿಲಿಕೂರು ಲೇಖನದ ಶೀರ್ಷಿಕೆಯಲ್ಲಿ ತಿಳಿಸಿದ ಹಾಗೆ ದೇಶದ ಹಲವಾರು ಮಂದಿಗೆ ಮುಸ್ಲಿಮರ ದೇಶ ಪ್ರೇಮದ ಬಗ್ಗೆ ಬಹಳಷ್ಟು ಸಂಶಯ ಅವರು ಭಾರತಕ್ಕಾಗಿ ಏನು ಮಾಡಿದ್ದಾರೆ ಎಂದು ಕೇಳುವರು..       ಆದರೆ ಇತಿಹಾಸ ನಿಷ್ಕಲ್ಮಶವಾಗಿ ಕಲಿತವರಿಗೆ ತಿಳಿಯುತ್ತದೆ *ಮುಸ್ಲಿಮರ ರಕ್ತದಲ್ಲಿಯೇ ದೇಶ ಪ್ರೇಮ ಅವಿತುಕೊಂಡಿದೆ* ದೇಶ ಪ್ರೇಮವು ಈಮಾನಿನ ಭಾಗವಾಗಿದೆ ಎಂದು ಕಲಿಸುವ ಧರ್ಮದ ಅನುಯಾಯಿಗಳು ಆಗಿರುತ್ತಾರೆ ಮುಸ್ಲಿಮರು.        ಸರಿ ಸುಮಾರು ಎಂಟು ಶತಕಗಳ ಕಾಲ ಮುಸ್ಲಿಮರ ಆಳ್ವಿಕೆ ಈ ದೇಶದಲ್ಲಿ ಇದ್ದರೂ ಆ ರಾಜರು ಯಾರು ಕೂಡ ಈ ದೇಶವನ್ನು ಮುಸ್ಲಿಂ ರಾಷ್ಟ್ರವಾಗಿ ಮಾಡಲಿಲ್ಲ ಈ ದೇಶದ ಅಖಂಡತೆಯನ್ನು ಕಾಪಾಡಿದರು ಬಹಳಷ್ಟು ಕೊಡುಗೆಗಳನ್ನು ನೀಡಿದರು ಕೇವಲ ವ್ಯಾಪಾರಕ್ಕಾಗಿ ಬಂದ *ಪೋರ್ಚುಗೀಸರು,ಪ್ರೆಂಚರು,ಡಚ್ಚರು ಹಾಗೂ ಬ್ರಿಟಿಷರು* ಸರಿ ಸುಮಾರು 20 ದಶಕಗಳ ಕಾಲ ಗುಲಮರನ್ನಾಗಿ ಆಳಿದರು ಅಂದು ದೇಶವನ್ನು ಆಂಗ್ಲರ ಮುಷ್ಠಿಯಿಂದ ಬಿಡಿಸಲು ಭಾರತೀಯರು ಹೋರಾಡಿದರು 1857 ರಿಂದ ಪ್ರಾರಂಭವಾದ ಪ್ರಥಮ ಹೋರಾಟ ಸಂಗ್ರಾಮದಲ್ಲಿ ಜಾತಿ ಧರ್ಮ ಬೇದ ಮನ್ಯೇ ಹೋರಾಡಿದರು. ಅದರಲ್ಲಿ ಬಹಳಷ್ಟು ಅಂದರೆ 65  ಶೇಕಡದಷ್ಟು ಜನರು ಮುಸ್ಲಿಮರಿದ್ದರು ಎನ್ನುದಕ್ಕೆ ನಮಗೆ ಹೆಮ್ಮೆಯಿದೆ.       ನಮ್ಮ ದೇಶದ ಅಭಿಮಾನವಾದ ಹುತಾತ್ಮರ ಸ್ಮಾರಕವ...

ಗಣರಾಜ್ಯೋತ್ಸವ

ಗಣರಾಜ್ಯೋತ್ಸವ 🇳🇪  1947 ರ ಆಗಸ್ಟ್ 15 ರಂದು ಭಾರತ ತನ್ನ ಸ್ವಾತಂತ್ರ್ಯವನ್ನು ಗಳಿಸಿತು.  ನಮ್ಮ ಸಂವಿಧಾನವನ್ನು ನಮ್ಮ ಪ್ರಖ್ಯಾತ ಕಾನೂನು ತಜ್ಞರು ಸಮಾಲೋಚಿಸಿದರು.  ಜನವರಿ 26, 1950 ರಂದು ಭಾರತದ ಸಂವಿಧಾನವನ್ನು ಜಾರಿಗೆ ತಂದ ನಂತರ ಭಾರತವು ಗಣರಾಜ್ಯವಾಯಿತು.  ಸ್ವಾತಂತ್ರ್ಯ ಬಂದ ಮೂರು ವರ್ಷಗಳ ನಂತರ ಸಂವಿಧಾನ ಅಸ್ತಿತ್ವಕ್ಕೆ ಬಂದಿತು.  ಅದರಿಂದ ನಾವು ಅದರ ಮಹತ್ವವನ್ನು ನೋಡಬಹುದು.  ನಮ್ಮ ಸಂವಿಧಾನವು "ನಾವು ಭಾರತದ ಜನರು" ಎಂಬ ಮಾತಿನಿಂದ ಪ್ರಾರಂಭವಾಗುತ್ತದೆ.  ಸಂವಿಧಾನದ ಮುನ್ನುಡಿಯಲ್ಲಿ, ಭಾರತವನ್ನು ಸಾರ್ವಭೌಮ, ಸಮಾಜವಾದಿ ಮತ್ತು ಜಾತ್ಯತೀತ ಪ್ರಜಾಪ್ರಭುತ್ವ ಗಣರಾಜ್ಯವಾಗಿ ನಿರ್ಮಿಸುವುದು ಮತ್ತು ಎಲ್ಲಾ ನಾಗರಿಕರಿಗೆ ಸಮಾನತೆ, ನ್ಯಾಯ, ಸ್ವಾತಂತ್ರ್ಯ ಮತ್ತು ಭ್ರಾತೃತ್ವವನ್ನು ಉತ್ತೇಜಿಸುವುದು ಭಾರತದ ಉದ್ದೇಶವಾಗಿದೆ.  ಮುನ್ನುಡಿಯಲ್ಲಿ ಭಾರತವನ್ನು ತನ್ನ ನಿಗದಿತ ಗುರಿಯತ್ತ ಕೊಂಡೊಯ್ಯುವ ಕರ್ತವ್ಯ ಯಾರಿಗೆ ಇದೆ ? ಭಾರತದ ಜನರಾದ ನಮಗಿರಬೇಕು.  ನಮ್ಮ ಕಟ್ಟುಪಾಡುಗಳು ಸಂವಿಧಾನದ ವಸ್ತು ಮತ್ತು ವಿಷಯವನ್ನು ಸ್ಪಷ್ಟಪಡಿಸುತ್ತವೆ.  ನಮ್ಮ ಸಂವಿಧಾನವು ನಮಗೆ ಯಾರೂ ಉಡುಗೊರೆಯಾಗಿ ನೀಡಿದ್ದಲ್ಲ.  ನಾವು,ನಮ್ಮಿಂದಲೇ ಸೃಷ್ಟಿಸಲ್ಪಟ್ಟಿದ್ದೇವೆ ಮತ್ತು ನಮಗಾಗಿ ಸಮರ್ಪಿಸಿದ್ದೇವೆ.  ನಾವು ಆಡಳಿತ ರಚನೆಯನ್ನು ಉಳಿಸೋಣ.✋ ➖➖➖➖➖➖➖➖ *ತಾಜುದ್ಧೀನ್...

ನಿದ್ರಾರಾಹಿತ್ಯಕ್ಕೆ ಪರಿಹಾರ

ನಿದ್ರಾರಾಹಿತ್ಯಕ್ಕೆ ಪರಿಹಾರ •5ಗ್ರಾಂ ಅಶ್ವಗಂಧಿ ಚೂರ್ಣ, ಒಂದು ಚಮಚ ಸಕ್ಕರೆ ಅರ್ಧ ಚಮಚ ತುಪ್ಪ ಹಾಲಿನಲ್ಲಿ ಬೆರೆಸಿ ಕುದಿಸಿ ಮಲಗುವುದಕ್ಕಿಂತ ಅರ್ಧ ಗಂಟೆ ಮುಂಚೆ ಕುಡಿಯಬೇಕು. ಶಾಂತ ನಿದ್ರೆ ಬರುವುದಲ್ಲದೆ, ದುಸ್ವಪ್ನಗಳು ಬೀಳುವುದಿಲ್ಲ. •ಒಂದು ಚಮಚ ಜೇನಿನಲ್ಲಿ ನುಣ್ಣಗೆ ಪುಡಿ ಮಾಡಿದ ಸಬ್ಬಸಿಗೆ ಬೀಜದ ಚೂರ್ಣವನ್ನು ಒಂದು ಚಿಟಕಿಯಷ್ಟು ಅರ್ಧ ಕಪ್ಪು ನೀರಿನಲ್ಲಿ ಮಿಶ್ರಮಾಡಿ ಮಲಗುವುದಕ್ಕಿಂತ ಮುಂಚೆ ಕುಡಿಯಬೇಕು. ಮಕ್ಕಳಿಗೆ ಅರ್ಧ ಪ್ರಮಾಣ ಮಾತ್ರ ಹಾಕಬಹುದು. ಚೆನ್ನಾಗಿ ನಿದ್ದೆ ಬರುವುದು.. •ಬೂದುಗುಂಬಳದ ಸಿಪ್ಪೆ ಬೀಜಗಳನ್ನು ಒಟ್ಟಿಗೆ ನುಣ್ಣಗೆ ಅರೆದು ಪೇಸ್ಟಿನಂತೆ ಮಾಡಿಕೊಳ್ಳಬೇಕು. ಸ್ವಲ್ಪ ಕೊಬ್ಬರಿ ಎಣ್ಣೆಯಲ್ಲಿ ಬೆರೆಸಿ ಕಾಯಿಸಿ ಆರಿದ ನಂತರ ತಲೆಗೆ ಹಚ್ಚಿಕೊಂಡು ಬೆರಳಾಡಿಸಿ ತಿಕ್ಕಿಕೊಳ್ಳಬೇಕು. ನೆಮ್ಮದಿಯ ನಿದ್ರೆ ಬರುವುದು..

ಕೊಬ್ಬು ಕರಗಿಸಲು

ಕೊಬ್ಬು ಕರಗಿಸಲು •ಜೇನುತುಪ್ಪ ಎರಡು ಚಮಚ, ನಿಂಬೆ ಹಣ್ಣಿನ ರಸ ಎರಡು ಚಮಚ, ಕಾಯಿಸಿ ಆರಿಸಿದ ನೀರು ಇಲ್ಲವೆ ಬಿಸಿ ನೀರು ಒಂದು ಕಪ್ಪು ಈ ಮೂರನ್ನು ಚೆನ್ನಾಗಿ ಮಿಶ್ರಮಾಡಿ ಬೆಳಿಗ್ಗೆ ಎದ್ದ ಕೂಡಲೆ ಬರೀ ಹೊಟ್ಟೆಯಲ್ಲಿ ಸತತ ಮೂರು ತಿಂಗಳುಗಳ ಕಾಲ ಸೇವಿಸಿದರೆ ದೇಹದ ಕೊಬ್ಬು ಕರಗಿ ಸ್ಥೂಲ ಕಾಯ ನಿವಾರಣೆಯಾಗುವುದು ಹಾಗೂ ದೇಹದ ತೂಕವು ಕಮ್ಮಿಯಾಗಿ ದೇಹವು ಹಗುರವಾಗುವುದು. •ಒಂದು ಪೂರ್ಣ ನಿಂಬೆ ಹಣ್ಣಿನ ರಸಕ್ಕೆ ಎರಡು ಚಮಚ ಜೇನು ಬೆರೆಸಿ ಒಂದು ಅರ್ಧ ಕಪ್ಪು ನೀರಿನಲ್ಲಿ ಮಿಶ್ರಮಾಡಿ ಪ್ರತಿನಿತ್ಯ ಬೆಳಿಗ್ಗೇನೇ ಕುಡಿಯುತ್ತಿರಬೇಕು.. •100 ಗ್ರಾಂ ಬೆಳ್ಳುಳ್ಳಿಯನ್ನು ಸಿಪ್ಪೆ ಸುಳಿದು ನುಣ್ಣಗೆ ಜಜ್ಜಿಕೊಳ್ಳಬೇಕು. ಅರ್ಧ ಲೀಟರ್ ಅಪ್ಪಟ ಹಾಲಿನಲ್ಲಿ ಬೆರೆಸಿ ಕುದಿಸಬೇಕು. ಕುದಿದು ಗಟ್ಟಿಯಾದಾಗ ಇಳಿಸಿಕೊಂಡು ಅವರೆ ಕಾಳಿನ ಗಾತ್ರದ ಮಾತ್ರೆಗಳನ್ನು ಮಾಡಿಟ್ಟುಕೊಳ್ಳಬೇಕು. ಪ್ರತಿದಿನ ಬೆಳಿಗ್ಗೆ ಒಂದು ಅಥವಾ ಎರಡು ಮಾತ್ರೆಗಳನ್ನು ಬಿಸಿ ನೀರಿನೊಂದಿಗೆ ಸೇವಿಸಬೇಕು. ಬಿಟ್ಟು ಬಿಡದೆ 48 ದಿನಗಳು ಸೇವಿಸಿದರೆ ದೇಹದ ಕೊಬ್ಬು ಕರಗುವುದು ದೇಹ ಹಗುರವಾಗುವುದು..

ಮದೀನಾದ ಪವಿತ್ರ ಹಸಿರು ಖುಬ್ಬ

ಮದೀನಾದ ಪವಿತ್ರ ಹಸಿರು ಖುಬ್ಬ *ಹೌದು ಅದೊಂದು ವಿಸ್ಮಯ... ಅದು ನೋಡುವಾಗಲೇ ಏನೂ ಒಂದು ವಿಶೇಷ ಆನಂದ, ಹೃದಯಕ್ಕೆ ಒಂದು ರೀತಿಯ ಔಷಧಿ ಅಂತಾನೇ ಹೇಳಬಹುದು. ಸತ್ಯವಿಶ್ವಾಸಿಯ ಪಾಲಿಗೆ ಅದು ಕೇವಲ ಒಂದು ಕಟ್ಟಡವಲ್ಲ. ಬದಲಾಗಿ ಹೃದಯದ ಒಳಗೆ ಸದಾ ಮಹಾ ಆನಂದ ನೀಡುವ ಸುಂದರ ಆಕೃತಿಯಾಗಿದೆ, ಮದೀನಾದ ಬಿಳಿ ಅಮೃತ ಶಿಲೆಯ ಸ್ವರ್ಣಕೊಟ್ಟರದಲ್ಲಿರುವ ಪ್ರಪಂಚದ ಎಲ್ಲಾ ಸೌಂದರ್ಯವನ್ನು ಮರೆಮಾಚುವ ನಯನಮನೋಹರವಾದ ಪವಿತ್ರ ಹಸಿರು ಖುಬ್ಬ....* ಖುಬ್ಬ ಅಂದರೆ ನಾವು ತುಂಬಾ ಪ್ರೀತಿಸುತ್ತೇವೆ.... ಆ ಪ್ರೀತಿಯಿಂದಲೇ ನಾವು ಹಲವು ಕಾರ್ಯಕ್ರಮ ಮತ್ತು ಇತರ ವಿಷಯಗಳಿಗೆ ಪವಿತ್ರ ಖುಬ್ಬದ ಚಿತ್ರವನ್ನು ಹಾಕುತ್ತೇವೆ. ಆ ಪವಿತ್ರ ಫೋಟೋವು ಅದಕ್ಕೆ ಬೇರೆಯೇ ವಿಶೇಷ ಸೌಂದರ್ಯ ನೀಡುತ್ತದೆ. ಆದರೆ ನಾವು ಪವಿತ್ರ ಖುಬ್ಬದ ಚಿತ್ರ ಹಾಕುವಾಗ ಸ್ವಲ್ಪ ಗಮನಿಸಬೇಕು. ಆ ಪವಿತ್ರ ಖುಬ್ಬದ ಫೋಟೋ ನೆಲಕ್ಕೆ ಬೀಳುವುದು, ಅಥವಾ ಎಲ್ಲೂ ಒಂದು ಕಡೆ ಅದರ ಪವಿತ್ರ್ಯತೆಗೆ ಚ್ಯುತಿ ಬರುವ ರೂಪದಲ್ಲಿ ಇರುವುದು ಮುಂತಾದ ಯಾವುದೇ ರೀತಿಯ ಸಮಸ್ಯೆ ಬರುವ ಸಂಧರ್ಭ ಇರುವುದಾದರೆ ದಯವಿಟ್ಟು ಖುಬ್ಬದ ಚಿತ್ರವನ್ನು ಹಾಕಲು ಹೋಗಲೇಬೇಡಿ. ಒಬ್ಬ ಸತ್ಯವಿಶ್ವಾಸಿಗೆ, ಪ್ರವಾದೀ ﷺِ ಪ್ರೇಮಿಗೆ ಅದು ಸಹಿಸಲಾಗದ ಕಾರ್ಯವಾಗಿದೆ. ಸಾಧಾರಣವಾಗಿ ರಬೀವುಲ್ ಅವ್ವಲ್ ನಲ್ಲಿ ಫ್ಲೆಕ್ಸ್'ಗಳಿಗೆ ಪವಿತ್ರ ಖುಬ್ಬದ ಚಿತ್ರ ಹಾಕಿಸುತ್ತೇವೆ. ಆ ಪವಿತ್ರ ಖುಬ್ಬದ ಚಿತ್ರವಿರುವ  ಫ್ಲೆಕ್ಸನ್ನು ಕಾರ್ಯಕ್ರಮ ಮುಗ...

ಮಾತು ಮನಸ್ಸಿಗೆ ಆನಂದ ನೀಡಲಿ

ಮಂದಹಾಸ ✍ ನವಾಝ್ ಸಖಾಫಿ ಅಲ್ ಅಮ್ಜದಿ ಅಕ್ಕರೆಕೆರೆ ಉಳ್ಳಾಲ " ನೀನು ತುಂಬಾ ಕ್ಷೀಣಿಸಿದ್ದೀಯಲ್ವಾ, ತುಂಬಾ ದಪ್ಪಗಾಗಿದ್ದೀಯಲ್ವಾ, ಕೂದಲು ತುಂಬಾ ನೆರೆತ ಉಂಟಾಗಿದೆಯಲ್ವಾ " ಮುಂತಾದ ಮಾತುಗಳಿಂದ ಇತರರು ನಮ್ಮ ಬಗ್ಗೆ ಈ ರೀತಿ ಬೆಲೆ ಕಲ್ಪಿಸುವಿಕೆ ನಮ್ಮ ಎಷ್ಟೋ ದಿನ ರಾತ್ರಿಗಳನ್ನು ನಷ್ಟಪಡಿಸಿರುತ್ತದೆ. ಇಂತಹ ಜನರಿಂದ ಒಮ್ಮೆಯಾದರೂ ತಪ್ಪಿಸಿಕೊಳ್ಳಲು ಪ್ರಯತ್ನಿಸದವರು ವಿರಳ. ಈ ರೀತಿಯ ಮಾತುಗಳು ಮನಸ್ಸನ್ನು ವಿಘ್ನಗೊಳಿಸುತ್ತದೆ. ಅದೂ ಕೂಡಾ ಗುಂಪಿನ ಮಧ್ಯೆ ಈ ರೀತಿಯ ಮಾತುಗಳು ಇತರರಿಂದ ಬಂದರೆ ಮುಜುಗರಕ್ಕೊಳಗಾಗುವುದರ ಜೊತೆಗೆ ತನ್ನ ಬಗ್ಗೆ ಕೀಳು ಭಾವನೆ ಉಂಟಾಗುವುದು ಸಹಜವಾಗಿರುತ್ತದೆ.       ಒಬ್ಬ ವ್ಯಕ್ತಿಯನ್ನು ಭೇಟಿ ಮಾಡುವಾಗ ಅಥವಾ ಬೆರೆಯುವಾಗ ಸಾಧ್ಯವಾದಷ್ಟು ಉತ್ತಮ ಮಾತುಗಳಿಂದ ಪ್ರಾರಂಭಿಸಿರಿ. ಹೆಚ್ಚಾಗಿ ನಮ್ಮ ಮನಸ್ಸಿಗೆ ಇನ್ನೊಬ್ಬರ ತಪ್ಪು, ಅವರ ಕುಂದು ಕೊರತೆಗಳು, ಲೋಪದೋಷಗಳು ಮನುಷ್ಯ ಸಹಜವಾಗಿ ಬಂದು ಬಿಡಬಹುದು. ಆದರೆ ಅದಕ್ಕೆ ಪ್ರಾಧಾನ್ಯತೆ ನೀಡದೆ ಆ ವ್ಯಕ್ತಿಯಲ್ಲಿರುವ ಏನಾದರೂ ಉತ್ತಮ, ಮನಸ್ಸಿಗೆ ಮುದ ನೀಡುವ ಮಾತುಗಳಿಂದ ಪ್ರಾರಂಭಿಸುವುದಾಗಿದೆ ಒಳಿತು.

ದೇಶದ ಅಭಿವೃದ್ಧಿಯ ಪಥದಲ್ಲಿ ಮುಸ್ಲಿಮರ ಪಾತ್ರ

ದೇಶದ ಅಭಿವೃದ್ಧಿಯ ಪಥದಲ್ಲಿ ಮುಸ್ಲಿಮರ ಪಾತ್ರ 🇮🇳🇮🇳🇮🇳🇮🇳🇮🇳🇮🇳🇮🇳 ✍ ಗಫೂರ್ ಬಾಯಾರ್ ********************** ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಬ್ರಿಟಿಷರ ಬಂದೂಕಿಗೆ ಎದೆಯೊಡ್ಡಿ ವೀರ ಮರಣವನ್ನಪ್ಪಿ ಹುತಾತ್ಮರಾದುದಲ್ಲದೆ ಸ್ವಾತಂತ್ರ್ಯಾನಂತರವೂ ದೇಶದ ಏಕತೆ, ಸಮಗ್ರತೆ, ಅಖಂಡತೆ, ಮತ್ತು ಸಾರ್ವಭೌಮತ್ವಕ್ಕಾಗಿ ಭದ್ರ ಬುನಾದಿ ಹಾಕುವಲ್ಲಿ ಮುಂಚೂಣಿಯಲ್ಲಿದ್ದ ಸಮುದಾಯವಾಗಿದೆ ಮುಸ್ಲಿಂ ಸಮುದಾಯವೆನ್ನುವುದು ಹೆಮ್ಮೆಯ ಸಂಗತಿ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಸ್ಲಿಮರ ಪಾತ್ರವೇನೆನ್ನುವುದನ್ನು ಇತಿಹಾಸದ ಪುಟಗಳು ಸಾರಿ ಸಾರಿ ಹೇಳುತ್ತಿವೆ. ಮಾತ್ರವಲ್ಲ, ದೇಶ ಪ್ರೇಮವನ್ನು ಗುತ್ತಿಗೆಗೆ ಪಡೆದುಕೊಂಡಂತೆ ವರ್ತಿಸುವ ನಕಲಿ ದೇಶ ಪ್ರೇಮಿಗಳಿಗೆ, ದೆಹಲಿಯ ಕೆಂಪು ಕೋಟೆಯೊಂದರಲ್ಲೇ  ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ನಡೆದ ಹೋರಾಟದಲ್ಲಿ ಬ್ರಿಟಿಷರ ಬಂದೂಕಿಗೆ ಎದೆಯೊಡ್ಡಿ ವೀರ ಮರಣವನ್ನಪ್ಪಿದ 65,000 ಕ್ಕಿಂತ ಹೆಚ್ಚು ಮುಸ್ಲಿಂ ಧೀರ ಯೋಧರ ಹೆಸರುಗಳು ಉಲ್ಲೇಖಿಸಲ್ಪಟ್ಟಿದೆ. ಇನ್ನು ದೇಶದ ಉದ್ದಗಲಕ್ಕೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ ಹುತಾತ್ಮರಾದ ಮುಸ್ಲಿಂ ಯೋಧರ ಸಂಖ್ಯೆ ಅದೆಷ್ಟಿರಬಹುದೆಂದು ಒಮ್ಮೆ ಊಹಿಸಿ ನೋಡಿ..! ಮತಾಂಧತೆಯ ಅಮಲು ತಲೆಗೇರಿದ ನಕಲಿ ದೇಶ ಪ್ರೇಮಿಗಳು ತಮ್ಮ ಮತಾಂಧತೆಯ ಕನ್ನಡಕವನ್ನು ತೆಗೆದು ನೋಡಿದರೆ ದೇಶಕ್ಕಾ...

ಶುಕ್ರವಾರ ಮಸೀದಿಗೆ ಯಾವಾಗ ಹೋಗಬೇಕು

ಶುಕ್ರವಾರ ಮಸೀದಿಗೆ ಯಾವಾಗ ಹೋಗಬೇಕು ********************************** ಇಬ್ರಾಹಿಮ್ ಇಬ್ನು ಅದ್ಹಮ್ (ರ) ಪ್ರವಾದಿ (ಸ)ರವರ ಮಾತಿನಂತೆ ಶುಕ್ರವಾರ ಎಲ್ಲರಿಗಿಂತಲೂ ಮಂಚಿತವಾಗಿ ಮಸೀದಿಗೆ ತಲುಪಿದ್ದರು. ಜುಮಾ ನಮಾಜಿನ ಬಳಿಕ ಮಸೀದಿಯಿಂದ ಹೊರಗಿಳಿಯುವಾಗ ಒಂದು ಅಶರೀರವಾಣಿ ಕೇಳಿಸಿತು. ಓ ಇಬ್ರಾಹಿಮ್ ... ನಿಮಗಿಂತಲೂ ಮುನ್ನ ಬೇರೊಬ್ಬರು ಮಸೀದಿಗೆ ಬಂದಿದ್ದರು.. ಮುಂದಿನ ಶುಕ್ರವಾರ ಕಳೆದ ಬಾರಿಗಿಂತಲೂ ಮುಂಚಿತವಾಗಿ ಮಸೀದಿಗೆ ತಲುಪಿದರು. ಅಂದೂ ಕೂಡ ಅಶರೀರವಾಣಿ ಕೇಳಿಸಿತು. ನಿಮಗಿಂತಲೂ ಮುಂಚೆ ಬೇರೊಬ್ಬರು ಬಂದಿದ್ದಾರೆ. ಮುಂದಿನ ಶುಕ್ರವಾರ ಬೆಳಗ್ಗೆ ಸುಬಹ್ ನಮಾಜಿನ ನಂತರ ಮನೆಗೆ ಹೋಗದೆ ಅಲ್ಲೇ ಕೂತುಬಿಟ್ಟರು. ಅಂದು ಕೂಡಾ ಅಶರೀರವಾಣಿ ಕೇಳಿಸಿತು. ಇವತ್ತೂ ನಿಮಗಿಂತ ಮೊದಲು ಒಬ್ಬರು ಬಂದಿದ್ದರು. ಆಶ್ಚರ್ಯಚಕಿತರಾದ ಇಬ್ರಾಹಿಂ ಬಿನ್ ಅದ್ಹಂ (ರ) ಅಲ್ಲಾಹನೊಂದಿಗೆ ವಿನಯಾನ್ವಿತರಾಗಿ ಬೇಡಿಕೊಂಡರು. ಅಲ್ಲಾಹನೇ.. ಅದು ಯಾರೆಂದು ಹೇಳಿದರೆ ಅವರ ತೃಪ್ತಿ ಸಂಪಾದಿಸುವುದರೊಂದಿಗೆ ಅವರಂತೆ ನನಗೂ ಅದೇ ವೇಳೆಯಲ್ಲಿ ಮಸೀದಿಗೆ ಬರಬಹುದು ತಾನೇ..? ಆಗ ಅಶರೀರವಾಣಿ ಕೇಳಿಸಿತು. ಬರುವ ಶುಕ್ರವಾರ ಮಸೀದಿಯಿಂದ ಅತ್ಯಂತ ಕೊನೆಯಲ್ಲಿ ಮಸೀದಿಯಿಂದ ಹೊರ ಹೋಗುವವರೊಂದಿಗೆ ಕೇಳಿ ನೋಡಿ. ಅದರಂತೆ ಮುಂದಿನ ಶುಕ್ರವಾರ ಜುಮಾ ಮುಗಿದ ಬಳಿಕ ಎಲ್ಲರೂ ಹೋಗಿ ಮುಗಿಯುವ ತನಕ ಕಾದು ಕುಳಿತರು. ಕೊನೆಯಲ್ಲಿ ಹೋಗುವವರನ್ನು ನೋಡಿ ನಿಂತರು. ...

ಬಿಸಿ ನೀರು

ಊಟದ ನಂತರ ಒಂದು ಲೋಟ ಈ ನೀರು ಕುಡಿದರೆ ಏನಾಗುತ್ತೆ ಗೊತ್ತಾ…!! ಬಿಸಿ ನೀರನ್ನು ಕುಡಿಯುದರಿಂದ ನಿಮ್ಮ ದೇಹದ ಮೆಟಾಬಾಲಿಸಂ ನಿಯಂತ್ರಣದಲ್ಲಿ ಇರುತ್ತದೆ, ಇದರಿಂದ ನಿಮ್ಮ ತೂಕವನ್ನು ಸುಲಭವಾಗಿ ನಿಯಂತ್ರಿಸಬಹುದು, ಮೂಗಿನ ಹಾಗೂ ಗಂಟಲಿನ ಆರೋಗ್ಯವನ್ನು ಕಾಪಾಡುತ್ತದೆ, ಶೀತ, ಕೆಮ್ಮು, ಕಫ ಮುಂತಾದ ಸಮಸ್ಯೆಗೆ ಬಿಸಿ ನೀರು ಮನೆಮದ್ದು. ಇದನ್ನು ಕುಡಿಯುದರಿಂದ ಗಂಟಲಿನ ಕೆರೆತ ಕಡಿಮೆಯಾಗುತ್ತದೆ, ಕಟ್ಟಿದ ಮೂಗಿನಿಂದ ಬಲು ಬೇಗ ಉಪಶಮನ ನೀಡುತ್ತದೆ. ದೇಹದಲ್ಲಿರುವ ವಿಷ ಪದಾರ್ಥಗಳನ್ನು ಹೊರ ಹಾಕುತ್ತದೆ, ದೇಹದ ವಿಷ ಪದಾರ್ಥಗಳನ್ನು ಹೊರ ಹಾಕುವಲ್ಲಿ ಬಿಸಿ ನೀರು ಪ್ರಮುಖ ಪಾತ್ರ ವಹಿಸುತ್ತದೆ, ಬಿಸಿಯಾದ ನೀರನ್ನು ಕುಡಿದಾಗ ನಮ್ಮ ದೇಹದ ಉಷ್ಣತೆ ಜಾಸ್ತಿಯಾಗಿ ಆ ಮೂಲಕ ನಮ್ಮ ದೇಹದಲ್ಲಿರುವ ವಿಷ ಪದಾರ್ಥಗಳು ಬೆವರಿನ ರೂಪದಲ್ಲಿ ಹೊರ ಹಾಕಲ್ಪಡುತ್ತದೆ. ಅಕಾಲಿಕ ಮುಪ್ಪನ್ನು ತಡೆಯುತ್ತದೆ, ದೇಹದಲ್ಲಿರುವ ವಿಷಕಾರಕ ವಸ್ತುಗಳು ನಮ್ಮ ತ್ವಚೆಯು ಬೇಗ ಮುಪ್ಪಾದಂತೆ ಕಾಣುವ ಹಾಗೆ ಮಾಡುತ್ತವೆ, ಬಿಸಿ ನೀರನ್ನು ಕುಡಿಯುವುದರಿಂದ ಚರ್ಮದ ಜೀವಕೋಶಗಳ ಸ್ಥಿತಿಸ್ಥಾಪಕತ್ವ ಗುಣ ಜಾಸ್ತಿಯಾಗುತ್ತದೆ, ಇದು ನಿಮ್ಮ ಚರ್ಮವು ನೈಸರ್ಗಿಕವಾಗಿ ಹೊಳೆಯುವಂತೆ ಮಾಡುತ್ತದೆ. ಮೊಡವೆಗಳಿಂದ ಮುಕ್ತಿ, ಬಿಸಿ ನೀರು ನಮ್ಮ ದೇಹವನ್ನು ಶುದ್ಧೀಕರಿಸುವ ಮೂಲಕ ಮೊಡವೆಗೆ ಕಾರಣವಾದ ವಿಷ ಪದಾರ್ಥಗಳನ್ನು ಹೊರ ಹಾಕುತ್ತದೆ. ಕೂದಲಿನ ಆರೋಗ್ಯವನ್ನು ಕಾಪಾಡುತ್ತದೆ, ಬಿಸಿ ನೀರನ್ನು ಕ...

ಅಹ್ಮದ್ ಇಬ್ನು ಅತ್ವಾಹಿಲ್ಲಾಹಿ ಸಿಕಂದರಿ (ರ ) ವಫಾತಾದ ದಿನ

ಜುಮಾದಿಲ್ ಆಖಿರ್ -- 13. ಅಹ್ಮದ್ ಇಬ್ನು ಅತ್ವಾಹಿಲ್ಲಾಹಿ ಸಿಕಂದರಿ (ರ ) ವಫಾತಾದ ದಿನ ಇವರು ಶಾದುಲಿ ತ್ವರೀಕತ್‌ನ ಪ್ರಮುಖ ಶೈಖ್ ಆಗಿದ್ದು, ಪ್ರಗಲ್ಭ ವಿದ್ವಾಂಸರೂ, ಸೂಫಿವರ್ಯರೂ ಆಗಿದ್ದಾರೆ. ಜಗತ್ಪ್ರಸಿದ್ಧ ತಸವ್ವುಫ್ ಗ್ರಂಥ "ಹಿಕಂ " ಇವರ ರಚನೆಯಾಗಿದೆ. ಶಾದುಲೀ ಇಮಾಮರ ಸಂದೇಶಗಳನ್ನು , ತ್ವರೀಕತ್ತನ್ನು ವಿಶ್ವ ಪ್ರಸಿದ್ದಿ ಮಾಡುವುದರಲ್ಲಿ ಇವರ ಸೇವೆ ಗಮನಾರ್ಹ. ಅಲೆಕ್ಸಾಂಡ್ರಿಯ ಎಂಬ  ಪ್ರದೇಶದಲ್ಲಿ ಮಹಾತ್ಮರು ಜನಿಸಿದರು. ತಂದೆ,  ತಾತಂದಿರು ಮಾಲಿಕಿ ಮದ್‌ಹಬ್‌ನ ವಿದ್ವಾಂಸರಾಗಿದ್ದು ಅವರ ಹಾದಿಯಲ್ಲಿಯೇ ಸಿಖಂದರ್ (ರ )ರವರು ಸಾಗಿದರು. ಅಗಾಧವಾದ ಪಾಂಡಿತ್ಯವನ್ನು ಕರಗತ ಮಾಡಿಕೊಂಡರು.  ಹಿಜ್ರಾ 674 ಕೈರೋದಲ್ಲಿ ಫಕೀರರಾಗಿ ಜೀವನ ನಡೆಸುತ್ತಿದ್ದ ಸಂದರ್ಭ. ಶಾದುಲೀ ತ್ವರೀಕತ್‌ನ ಶೈಖ್ ಆಗಿದ್ದ ಅಬ್ಬಾಸಿಲ್ ಮುರ್ಸೀ ( ರ ) ರವರ ಸಭೆಗೆ ಒಮ್ಮೆ ಹೋಗಿದ್ದರು. ಅಲ್ಲಿ ಶೈಖ್‌ರವರ ಉಪದೇಶ ಮಹಾತ್ಮರ ಜೀವನದಲ್ಲಿ ಆತ್ಮೀಯ ಬದಲಾವಣೆ ಉಂಟು ಮಾಡಿತು.  *ಸೂಫಿಗಳ ಮಾತೆಂದರೆ ಮಾತು. ಅವರು ಅಲ್ಲಾಹುವಿ‌ನ ವಿಶೇಷ ಅನುಗ್ರಹ ಪಡೆದವರು. ಅವರ ಮಾತು ಎಂತಹ ಕಲ್ಲು ಹ್ರದಯವನ್ನು ಕರಗಿಸಬಲ್ಲದು*. ಮಹಾತ್ಮರಾದ ಸಿಖಂದರ್ (ರ) ರವರಿಗೆ ಇಂತಹ ಮಧುರ ಅನುಭವವಾಯಿತು. ಅವರು ಹೆಚ್ಚು ಚಿಂತಿಸಲಿಲ್ಲ. ನೇರವಾಗಿ ಶೈಖ್‌ರವರ ಶಿಷ್ಯತ್ವ ಸ್ವೀಕರಿಸಿದರು. ಸುಧೀರ್ಘ 12 ವರ್ಷಗಳ ಕಾಲ ಅವರಲ್ಲಿ ಕಲಿತರು.    ಮುಂದೆ ...

ಮರದೊಳಗೆ ನುಗ್ಗಿದ ಪ್ರವಾದಿ ಝಕರಿಯ್ಯಾ (ಅ)

ಮರದೊಳಗೆ ನುಗ್ಗಿದ ಪ್ರವಾದಿ ಝಕರಿಯ್ಯಾ (ಅ) *✍🏻ಯೂಸುಫ್ ನಬ್‌ಹಾನಿ ಕುಕ್ಕಾಜೆ* 📞00971 553499119    ▪ *ಪ್ರವಾದಿ* ಝಕರಿಯ್ಯಾ (ಅ) ರನ್ನು ಹತ್ಯೆ ಮಾಡಲು ಅವರ ಅಂದಿನ ಜನಾಂಗವಾದ ಇಸ್ರೇಲೀ ಸಂತತಿಗಳು ಖಡ್ಗ, ಕತ್ತಿ , ದೊಣ್ಣೆಯೊಂದಿಗೆ ಅವರ ವಾಸಸ್ಥಳಕ್ಕೆ ಬಂದರು.    ▪ *ಶತ್ರುಗಳು* ಕೊಲ್ಲಲು ಬರುತ್ತಾರೆಂದು ತಿಳಿದಾಗ ಅವರು ಮನೆಯಿಂದ ಹತ್ತಿರದ ಕಾಡಿನೊಳಗೆ ನುಗ್ಗಿದರು. ಇದನ್ನರಿತ ಶತ್ರುಗಳು ನಾಲ್ಕು ದಿಕ್ಕಿನಿಂದಲೂ ಆಯುಧಗಳೊಂದಿಗೆ ಕಾಡಿಗೆ ಪ್ರವೇಶಿಸಿದರು.    ▪ *ಏನು* ಮಾಡಬೇಕೆಂದು ತಿಳಿಯದೆ ಕಾಡಿನಲ್ಲಿ ತನ್ನ ಜೀವವನ್ನು ಒಂದು ಕೈಯಲ್ಲಿ ಹಿಡಿದು ಓಡುತ್ತಿದ್ದ ಹಝ್ರತ್ ಝಕರಿಯ್ಯಾ (ಅ) ರನ್ನು ಕಾಡಿನಲ್ಲಿ ಒಂದು ದೊಡ್ಡ ಮರವು  ಕರೆದು ಹೇಳಿತು. *"ಹಝ್ರತ್ ಝಕರಿಯ್ಯಾರವರೇ., ಈ ಕಡೆ ಬನ್ನಿ . ನಾನು ನನ್ನ ಕಾಂಡದ ಭಾಗವನ್ನು ಸೀಳಿ ಕೊಡುತ್ತೇನೆ. ನೀವು ಅದರೊಳಗೆ ಅವಿತುಕೊಳ್ಳಿ.*"    ▪ *ಅಂತೆಯೇ* ಬೃಹದಾಕಾರದ ಮರದ ಕಾಂಡವು ಇಭ್ಭಾಗವಾಯಿತು. ಕೂಡಲೇ ಪ್ರವಾದಿ ಝಕರಿಯ್ಯಾ (ಅ) ಅದರೊಳಗೆ ನುಗ್ಗಿದರು. ಅಷ್ಟರಲ್ಲಿ ಕಾಂಡವು ಜೋಡಿಕೊಂಡಿತು.    ▪ *ಇತ್ತ* ಅವರು ಮರದ ಒಳಗೆ ನುಗ್ಗಲು ಶ್ರಮಿಸುತ್ತಿರುವಾಗ ಅದನ್ನು ನೋಡಿದ  ಇಬ್‌ಲೀಸನು (ಲ) ಅವರ ಹಿಂದಿನಿಂದ ಓಡಿಹೋಗಿ ಅವರ ವಸ್ತ್ರವನ್ನು ಕೈಯಿಂದ ಹಿಡಿದು ಎಳೆದನು. ಇಭ್ಭಾಗವಾದ ಮರದ ಕಾಂಡವು ಪರಸ್ಪರ ಜ...

ಪವಿತ್ರ ರೌಲಾ ಶರೀಫಿನಿಂದ ಕೈ ಹೊರ ಚಾಚಿದ ಪ್ರವಾದಿ ಮುಹಮ್ಮದ್ (ಸ)

ಪವಿತ್ರ ರೌಲಾ ಶರೀಫಿನಿಂದ ಕೈ ಹೊರ ಚಾಚಿದ ಪ್ರವಾದಿ ಮುಹಮ್ಮದ್ (ಸ) *✍🏻ಯೂಸುಫ್ ನಬ್‌ಹಾನಿ ಕುಕ್ಕಾಜೆ* 📞00971553499119   ▪ *ಪ್ರಖ್ಯಾತ* ಪಂಡಿತ ಮತ್ತು ಸೂಫಿವರ್ಯರಾದ ಶೈಖ್ *ಅಹ್‌ಮದ್ ಅಲ್ ಕಬೀರುರ್ರಿಫಾಯೀ* (ರ) ಇರಾಕಿನಿಂದ ಹಜ್ಜಿಗೆ ತೆರಳುವ ಎಲ್ಲರಲ್ಲೂ *"ನೀವು ಮದೀನ ತಲುಪಿದರೆ  ನನ್ನ ಪಿತಾಮಹನಿಗೆ (ಅಜ್ಜ) ನನ್ನ ಸಲಾಮ್ ಹೇಳಬೇಕು. ನನಗೆ ಯಾವಾಗ ಆ ಸನ್ನಿಧಿಗೆ ಹೋಗುವ ಭಾಗ್ಯ ದೊರೆಯುತ್ತದೋ ಗೊತ್ತಿಲ್ಲ."* ಎಂದು ಹೇಳುತ್ತಿದ್ದರು.    ▪ *ಕೊನೆಗೆ* ಒಮ್ಮೆ ಇರಾಕಿನಲ್ಲಿದ್ದ ಶೈಖ್ ರಿಫಾಯಿಯವರಿಗೆ ಹಜ್ಜಿಗೆ ಹೋಗುವ ಭಾಗ್ಯ ಲಭಿಸಿತು. ಹಜ್ಜ್ ಮುಗಿದು ಮದೀನಾ ತಲುಪಿದ ಶೈಖ್ ರಿಫಾಯಿಯವರು ಮದೀನಾ ಮುನವ್ವರದ ರೌಲಾ ಶರೀಫಿನ ಹೊರಗಡೆ ಅದರ ಬಾಗಿಲಿನ ಹತ್ತಿರ ನಿಂತು ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರಲ್ಲಿ ಅಳುತ್ತಾ ಹೇಳಿದರು. *"ಹಲವಾರು ಅಡೆತಡೆ ತೊಂದರೆಗಳಿದ್ದ ಕಾರಣ ಈ ಮಹಾ ಸನ್ನಿಧಿಗೆ ಈ ತನಕ ನನಗೆ ಬರಲು ಸಾಧ್ಯವಾಗಿದೆ ಹೋಯಿತು. ಈಗ ತೊಂದರೆಗಳಿಗೆ ಪರಿಹಾರವಾದಾಗ ನಿಮ್ಮ ಈ ಮಹಾ ಸನ್ನಿಧಿಗೆ ತಲುಪಿದ್ದೇನೆ. ನಿಮ್ಮ ಜೀವಂತ ಕಾಲದಲ್ಲಿ ನನಗೆ ಹುಟ್ಟಿ ನಿಮ್ಮನ್ನು ಕಾಣುವ ಬಾಗ್ಯ ಸಿಗಲಿಲ್ಲ. ಆದ್ದರಿಂದ ನನಗೆ ನಿಮ್ಮ ಆ ಪವಿತ್ರ ಕೈಯನ್ನಾದರೂ ಒಮ್ಮೆ ಚಾಚಿ ಕೊಡುವಿರೇ..? ನಾನದನ್ನು ಒಮ್ಮೆ ತನ್ನ ತುಟಿಯಿಂದ ಚುಂಬಿಸುತ್ತೇನೆ. ಯಾವತ್ತೂ ನನ್ನನ್ನು ನಿರಾಶೆ ಮಾಡದಿರಿ."*   ...

ಪ್ರವಾದಿ ಯ‌ಅ್‌ಕೂಬ್ (ಅ) ಮತ್ತು ತೋಳ

ಪ್ರವಾದಿ ಯ‌ಅ್‌ಕೂಬ್ (ಅ) ಮತ್ತು ತೋಳ *✍🏻ಯೂಸುಫ್ ನಬ್‌ಹಾನಿ ಕುಕ್ಕಾಜೆ* 📞00971 553499119 ▪ *ಪ್ರವಾದಿ* ಯೂಸುಫ್ (ಅ) ರನ್ನು ಅವರ ಸಹೋದರರು ಟೊಳ್ಳು ಬಾವಿಗೆ ಎಸೆದು ತಂದೆಯವರಲ್ಲಿ ತೋಳ ಹಿಡಿಯಿತು ಎಂದು ಹೇಳಿದ್ದರು.    ▪ *ಪ್ರೀತಿಯ* ಪುತ್ರನು ಕಾಣೆಯಾದ ನಂತರ ತಂದೆ ಹಝ್ರತ್ ಯ‌ಅ್‌ಕೂಬ್ (ಅ) ಬೇಸರದಿಂದ ಯಾರಲ್ಲೂ ಮಾತನಾಡುತ್ತಿರಲಿಲ್ಲ. ಮಾತ್ರವಲ್ಲ ಸಿಕ್ಕಿದವರಲ್ಲೆಲ್ಲಾ ಮಗನ ಬಗ್ಗೆ ಏನಾದರು ಮಾಹಿತಿ ಇದೆಯೇ ಎಂದು ಕೇಳುತ್ತಿದ್ದರು.    ▪ *ಹೀಗಿರುವಾಗ* ಮಕ್ಕಳು ಹೇಳುವುದು ನಿಜವಾ ಎಂದು ತಿಳಿಯಲು ಒಂದು ದಿನ ಹತ್ತಿರದ ಕಾಡಿಗೆ ಹೋದರು. ಅಲ್ಲಿ ಹೋದ ಕೂಡಲೇ "ರೋಗಿ ಬಯಸಿದ್ದೂ ಹಾಲು. ವೈದ್ಯ ಕೊಟ್ಡದ್ದೂ ಹಾಲು" ಎಂಬ ಗಾದೆ ಮಾತಿನಂತೆ ಒಂದು ತೋಳವನ್ನು ಕಂಡರು. ತೋಳದಲ್ಲಿ ಹಝ್ರತ್ ಯ‌ಅ್‌‌ಕೂಬ್ (ಅ) ಕೇಳಿದರು. *"ನನಗೆ ನಿನ್ನಲ್ಲಿ ಒಂದು ಮಾತು ಕೇಳಲಿಕ್ಕಿದೆ. ಯಾವತ್ತೂ ಸುಳ್ಳು ಹೇಳಬಾರದು. ನೀನು ನನ್ನ ಮಗ ಯೂಸುಫ್‌ನನ್ನು ಕೊಂದು ತಿಂದಿದ್ದಿಯಾ..?"* ತೋಳ ಹೇಳಿತು. *"ಇಲ್ಲ... ನಾನು ತಿನ್ನಲಿಲ್ಲ. ನಾನು ಯಾಕೆ ನಿಮ್ಮ ಮಗನನ್ನು ತಿನ್ನುವುದು.?"*  ಯ‌ಅ್‌ಕೂಬ್; *ಹಾಗಾದರೆ ಅವನು ಜೀವಂತವಾಗಿಯೇ ಇದ್ದಾನಾ...?* ತೋಳ; *ಹೌದು. ಇದ್ದಾನೆ.* ಹಝ್ರತ್ ಯ‌ಅ್‌ಕೂಬ್;  *ಹಾಗಾದರೆ ಎಲ್ಲಿದ್ದಾನೆ.?* ತೋಳ; *ಮಲಕ್ ಜೀಬ್‌ರೀಲ್ (ಅ) ರಲ್ಲಿ ಕೇಳಿರಿ. ಅವರಿಗೆ ಅದರ ಬಗ್ಗೆ ಸರಿಯಾದ ಮಾಹ...

ಜೀವಪರ್ಯಂತ ಕಣ್ಣು ಮುಚ್ಚದ ಗೂಬೆ

ವಿಸ್ಮಯ ತುಂಬಿದ ಜೀವಜಗತ್ತು ಜೀವಪರ್ಯಂತ ಕಣ್ಣು ಮುಚ್ಚದ ಗೂಬೆ *ಗೂಬೆ ಮನೆ ನುಗ್ಗಿದರೆ ಅಪಶಕುನವೇ...?* *✒ಯೂಸುಫ್ ನಬ್‌ಹಾನಿ ಕುಕ್ಕಾಜೆ* 📞00971553499119    ▪ *ಹೊಟ್ಟೆಪಾಡಿಗಾಗಿ* ‌ರಾತ್ರಿ ಹೊತ್ತಿನಲ್ಲಿ ಮಾತ್ರ ಸಂಚಾರ ಮಾಡುವ ಕೆಲವು ಪಕ್ಷಿಗಳಲ್ಲಿ ಒಂದಾಗಿದೆ ಗೂಬೆ ಅಥವಾ ಗೂಗೆ. ರಾತ್ರಿ ಸಮಯ ಸಂಚಾರದಲ್ಲಿರುವ ಇದು ಹಗಲಿನಲ್ಲಿ ತನ್ನ ಗೂಡಿನಲ್ಲೇ ಇರುತ್ತದೆ.    ▪ *ಹಗಲುಹೊತ್ತು* ಕಣ್ಣಿಗೆ ದೃಷ್ಟಿ ಇಲ್ಲದಿರುವುದೇ ಇದಕ್ಕೆ ಮುಖ್ಯ ಕಾರಣವೆನ್ನಲಾಗಿದೆ. ಅಲ್ಲದೆ *"ನನ್ನಷ್ಷು ಸುಂದರಿಯಾದ ಪಕ್ಷಿ ಈ ಪ್ರಪಂಚದಲ್ಲಿ ಬೇರೆ ಯಾರೂ ಇಲ್ಲ. ಆದ್ದರಿಂದ ನಾನು ಹಗಲುಹೊತ್ತು ಸಂಚಾರಕ್ಕೆ ಹೊರಟರೆ ನನ್ನ ಚಂದ ನೋಡಿ ಇತರ ಪಕ್ಷಿಗಳು ಅಸೂಯೆಗೊಂಡು ಏನಾದರು ಹೇಳಿದರೆ ನನಗೆ ಕಣ್ಣದೃಷ್ಟಿ ಬೀಳಬಹುದು"* ಎಂಬ ಅಹಂಕಾರ ಈ ಪಕ್ಷಿಗೆ ಇರುವುದರಿಂದ ಹಗಲು ಹೊತ್ತಿನಲ್ಲಿ ಸಂಚಾರಕ್ಕೆ ಹೊರಡುವುದಿಲ್ಲ ಎಂದು ತತ್ವಜ್ಞಾನಿ ಜಾಹಿಳ್ ಅಭಿಪ್ರಾಯ ಪಟ್ಟಿದ್ದಾರೆ.    ▪ *ಹಗಲಿನಲ್ಲಿ* ಈ ಪಕ್ಷಿಯನ್ನು ಕಂಡರೆ ಇತರ ಪಕ್ಷಿಗಳು ಕೊಂದು ಬಿಡುತ್ತದೆ. ಹಗಲು ಸಂಚಾರದ ಎಲ್ಲಾ ಪಕ್ಷಿಗಳು ಇದರ ವೈರಿಯಾಗಿದ್ದರೂ ಕಾಗೆಯಾಗಿರುತ್ತದೆ ಕಟ್ಟಾವೈರಿ. ಅಂತೆಯೇ ರಾತ್ರಿಯ ರಾಜನಾದ ಇದು ಇತರ ಯಾವ ಬಲಿಷ್ಠವಾದ ಹಗಲು ಪಕ್ಷಿಯನ್ನೂ ರಾತ್ರಿ ತನಗೆ ಕಾಣಸಿಕ್ಕಿದಲ್ಲಿ ನಿರಾಯಾಸ ಕೊಂದು ಬಿಡುತ್ತದೆ. ಮಾತ್ರವಲ್ಲ ರಾತ್ರಿ ತನ್ನ ಹೊಟ್ಟೆ ...

ಇಮಾಮ್ ಶಾಫಿಯೀಯವರ ಮೂರು ತಪ್ಪುಗಳನ್ನು ಕಂಡುಹಿಡಿದ ಪುಟ್ಟ ಬಾಲಕಿ

ಇಮಾಮ್ ಶಾಫಿಯೀಯವರ ಮೂರು ತಪ್ಪುಗಳನ್ನು ಕಂಡುಹಿಡಿದ ಪುಟ್ಟ ಬಾಲಕಿ *✒ಯೂಸುಫ್ ನಬ್‌ಹಾನಿ ಕುಕ್ಕಾಜೆ* 📞00971553499119 ▪ *ಇಮಾಮ್* ಅಹ್‌ಮದ್ ಬಿನ್ ಹಂಬಲ್ (ರ) ರವರು ಇಮಾಮ್ ಶಾಫಿಯೀ (ರ) ರವರ ಒಬ್ಬ ಪ್ರಮುಖ ಶಿಷ್ಯರಾಗಿದ್ದರು. ಮಾತ್ರವಲ್ಲ ತನ್ನ ಗುರುವನ್ನು ಬಹಳ ಪ್ರೀತಿ ಮತ್ತು ಗೌರವದಿಂದ ಯಾವಾಗಲೂ ಕಾಣುತ್ತಿದ್ದರು.    ▪ *ಇಮಾಮ್* ಅಹ್‌ಮದ್ ಬಿನ್ ಹಂಬಲ್ (ರ) ರಿಗೆ ಧರ್ಮದಲ್ಲಿ ಬಹಳ ಭಯ ಭಕ್ತಿಯಿರುವ ಸದಾಚಾರಿಯಾದ ಒಬ್ಬಳು ಮಗಳಿದ್ದಳು. ಮಗಳಲ್ಲಿ ತಂದೆಯು ತನ್ನ ಗುರುವಾದ ಇಮಾಮ್ ಶಾಫಿಯವರ ಬಗ್ಗೆ ಯಾವಾಗಲೂ ಪ್ರಶಂಸಿಸಿ, ಹೊಗಳಿ ಹೇಳುತ್ತಿದ್ದರು. *"ನನ್ನ ಗುರುವಿಗೆ ಸಮಾನವಾದ ಒಬ್ಬ ಪಂಡಿತ ಈ ಹಾಲಿ ಜಗತ್ತಿನಲ್ಲಿ ಯಾರೂ ಇಲ್ಲ. ಅವರ ಪಾಂಡಿತ್ಯಕ್ಕೆ ಸಮಾನ ಅವರು ಮಾತ್ರ. ಅವರು ರಾತ್ರಿಯಿಂದ ಬೆಳಗಿನ ತನಕ ಸುನ್ನತ್ ನಮಾಝು ಮಾಡುತ್ತಾರೆ. ರಾತ್ರಿ ನಿದ್ರೆ ಬಹಳ ಕಡಿಮೆ. ಹಸಿವು ಹೋಗಲು ಮಾತ್ರ ಏನಾದರು ತಿನ್ನುತ್ತಾರೆ. ಹೊಟ್ಟೆತುಂಬಾ ತಿನ್ನುವ ಅಭ್ಯಾಸವೇ ಇಲ್ಲ."* ಇತ್ಯಾದಿ ಇತ್ಯಾದಿ...     ▪  *ಪುಟ್ಟ* ಬಾಲಕಿಗೆ ದಿನಾಲೂ ತಂದೆಯಿಂದ ಇದನ್ನು ಕೇಳುವಾಗ ತನ್ನ ತಂದೆಯ ಗುರುವಿನ ಮೇಲೆ ಬಹಳ ಪ್ರೀತಿ ಮತ್ತು ಗೌರವ ಬರುತ್ತಿತ್ತು. ಮಾತ್ರವಲ್ಲ ಅದು ಅವಳ ಇಸ್ಲಾಮಿನ ಬದುಕನ್ನೇ ಬಹಳ ಉತ್ತುಂಗಕ್ಕೆ ತಲುಪಿಸಿತು. ಎಲ್ಲಿಯತನಕವೆಂದರೆ, ಇದರ  ಪರಿಣಾಮವಾಗಿ  ಬಾಲಕಿಯು ಇಮಾಮ್ ಶಾಫಿಯೀಯವರ...

ಅಝ್‌ರಾಯೀಲ್ (ಅ) ರನ್ನು ಕನಸಲ್ಲಿ ಕಂಡ ಇಮಾಮ್ ಮಾಲಿಕ್ (ರ)

ಅಝ್‌ರಾಯೀಲ್ (ಅ) ರನ್ನು ಕನಸಲ್ಲಿ ಕಂಡ ಇಮಾಮ್ ಮಾಲಿಕ್ (ರ) *✒ಯೂಸುಫ್ ನಬ್‌ಹಾನಿ ಕುಕ್ಕಾಜೆ* 📞00971553499119    ▪ *ಮಾಲಿಕೀ* ಮಝ್‌ಹಬಿನ ನೇತಾರ ಇಮಾಮ್ ಮಾಲಿಕ್ ಬಿನ್ ಅನಸ್ (ರ) ರವರು ಒಮ್ಮೆ ಮಲಕ್ ಅಝ್‌ರಾಯೀಲ್ (ಅ) ರನ್ನು ಕನಸಲ್ಲಿ ಕಂಡರು. ಮನುಷ್ಯ, ಪ್ರಾಣಿ , ಪಕ್ಷಿ, ಎಲ್ಲದರ ರೂಹ್ ತೆಗೆಯುವ ಹೊಣೆಗಾರಿಕೆ ಇರುವ ಮಲಕನ್ನು ಕನಸಲ್ಲಿ ಕಂಡಾಗ, ದೊರೆತ ಒಂದು ಸುವರ್ಣಾವಕಾಶವೆಂದು ಭಾವಿಸಿ ಕೂಡಲೇ *"ತನ್ನ ಆಯುಷ್ಯ ಎಷ್ಟೆಂದು ಹೇಳುವಿರಾ"* ಎಂದು ಅಝ್‌ರಾಯೀಲರಲ್ಲಿ ಇಮಾಮ್ ಮಾಲಿಕ್ (ರ) ಕೇಳಿದರು.    ▪ *ಇಮಾಮ್* ಮಾಲಿಕರ ಈ ಪ್ರಶ್ನೆಗೆ ಅಝ್‌ರಾಯೀಲರು (ಅ) ತನ್ನ ಕೈಯ ಐದು ಬೆರಳನ್ನು ಬಿಡಿಸಿ ಕೈಯೆತ್ತಿ ತೋರಿಸಿದರು. ಇಮಾಮ್ ಮಾಲಿಕರಿಗೆ ಇದು ಐದು ವರ್ಷವೋ, ಐದು ತಿಂಗಳೋ, ಐದು ವಾರವೋ, ಐದು ದಿನವೋ ಇತ್ಯಾದಿ ಅನುಮಾನವಾಯಿತು. ಮಾತ್ರವಲ್ಲ ಸಂಶಯ ಕೇಳುವಷ್ಟರಲ್ಲಿ ನಿದ್ದೆಯಿಂದ ಎಚ್ಚರವಾಯಿತು...   ▪ *ಇಮಾಮ್* ಮಾಲಿಕರು ಬಹಳ ಚಿಂತೆಗೊಳಗಾದರು. ಆಯುಷ್ಯದ ಬಗ್ಗೆ ಪ್ರಶ್ನೆ ಕೇಳದಿದ್ದರೆ ತಲೆಬಿಸಿಯಾಗುತ್ತಿರಲಿಲ್ಲ. ಈಗ ಕೇಳಿದಾಗ ಈ ಉತ್ತರ ದೊರೆಯಿತು. ಏನು ಮಾಡುವುದೆಂದು ಆಲೋಚಿಸುತ್ತಿರುವಾಗ ಸಮಕಾಲಿನ ಪಂಡಿತ, ಜ್ಞಾನಸೂರ್ಯ, ಮತ್ತು ಕನಸು ವ್ಯಾಖ್ಯಾನದ ಮಹಾಪಿತ ಅಲ್ಲಾಮಾ *ಮುಹಮ್ಮದ್ ಬಿನ್ ಸೀರೀನ್ (ರ)* ರ ನೆನಪಾಯಿತು.    ▪ *ಮರುದಿನ* ಬೆಳಿಗ್ಗೆ ಮದೀನದಲ್ಲಿ ತನ್ನ ಹತ್ತಿರವೇ ವಾಸ...

ಹೊತ್ತು ಕೊಂಡೇ ಹೊತ್ತು ಮುಗಿಸುವ ಕತ್ತೆ

ವಿಸ್ಮಯ ತುಂಬಿದ ಜೀವಜಗತ್ತು ಕತ್ತೆ ಪುರಾಣ ಹೊತ್ತು ಕೊಂಡೇ ಹೊತ್ತು ಮುಗಿಸುವ ಕತ್ತೆ *✒ಯೂಸುಫ್ ನಬ್‌ಹಾನಿ ಕುಕ್ಕಾಜೆ* 📞00971553499119    ▪ *ಕತ್ತೆಯು* ಮೃಗಗಳ ಪೈಕಿ  ಸಾಧುವಾದ ಒಂದು ಮೃಗ. ಪವಿತ್ರ ಕುರ್‌ಆನಿನಲ್ಲೂ ಈ ಪ್ರಾಣಿಯ ಬಗ್ಗೆ ಹಲವಾರು ಕಡೆ ಪರಾಮರ್ಶೆಗಳಿವೆ.    ▪ *ಗರ್ಭಧಾರಣೆಯಾಗಿ* ಹನ್ನೊಂದು ತಿಂಗಳಾಗುವಾಗ ಮರಿ ಹಾಕುವ ಕತ್ತೆಯು ಎರಡುವರೆ ವರ್ಷವಾಗುವಾಗಲೇ ಗಂಡು ಹೆಣ್ಣು ಪರಸ್ಪರ ಲೈಂಗಿಕ ಚಟುವಟಿಕೆಯಲ್ಲಿ ತೊಡಗುತ್ತದೆ.    ▪ *ಕತ್ತೆಯು* ಸುಮಾರು ಮೂವತ್ತರಿಂದ ನಲುವತ್ತು ವರ್ಷಗಳ ತನಕ ಬದುಕುತ್ತದೆ. ಕೆಲವೊಮ್ಮೆ ಕೆಲವೊಂದು ಕತ್ತೆಗಳು ಅದಕ್ಕಿಂತಲೂ ಹೆಚ್ಚು ಬದುಕುತ್ತವೆ ಎಂದು ಹೇಳಲಾಗುತ್ತದೆ.     ▪ *ಅಬೂ ಸಯ್ಯಾರಃ* (ವಾಹನದ ಪಿತಾಮಹ) ಎಂದು ಖ್ಯಾತಿ ಪಡೆದಿದ್ದ  ಉಮೈಲಃ ಬಿನ್ ಖಾಲಿದ್ ರವರ ಒಡೆತನದಲ್ಲಿ ಒಂದು ಕಪ್ಪು ಬಣ್ಣದ ಕತ್ತೆಯಿತ್ತು. ಆ ಕತ್ತೆಯನ್ನು ನಲುವತ್ತು ವರ್ಷಗಳ ತನಕ ಅವರು ಎಡೆಬಿಡದೆ ಮಕ್ಕಾದ ಮುಝ್‌ದಲಿಫದಿಂದ ಮಿನಾದತ್ತ ಜನರನ್ನು ಬಾಡಿಗೆ ವಾಹನದಂತೆ ಕೊಂಡೊಯ್ಯಲು ಬಳಸಿದ್ದರು. ಈ ಕತ್ತೆಯ ಆರೋಗ್ಯ ಮತ್ತು ಆಯುಷ್ಯ ಕಂಡು ಅಂದಿನ ಜನರಿಗೆ ಅವರಲ್ಲಿ ಬಹಳ ಅಸೂಯೆಯಿತ್ತು. *“ಇಷ್ಟೊಂದು ಆರೋಗ್ಯ ಮತ್ತು ಆಯುಷ್ಯವಿರುವ ಕತ್ತೆ ಬೇರೆ ಇರಬಹುದಾ..?”* ಎಂದು ಖ್ಯಾತ ತತ್ವಜ್ಞಾನಿ ಜಾಹಿಳ್‌ರವರು ಕೂಡ ತನ್ನ  ಪ್ರಸಿದ್ಧ...