ವಿಷ ಮಿಶ್ರಿತವಾದ ಆಯುಧದೊಂದಿಗೆ ಕೊಲ್ಲಲು ಬಂದ ವ್ಯಕ್ತಿಗೆ ಪ್ರೀತಿಯ ಆಸರೆ ನೀಡಿದ ಪೈಗಂಬರ್ ﷺِ ✍️ ಗಫೂರ್ ಬಾಯಾರ್ 〰️〰️〰️〰️〰️〰️〰️ ಆ ವ್ಯಕ್ತಿಯ ಹೆಸರು ಆಜಾಝ್ ಖೈಬರ್'ನ ಧೀರ ಶೂರ ಪರಾಕ್ರಮಿಗಳ ಪೈಕಿ ಒಬ್ಬನಾಗಿದ್ದ. ನಬಿﷺِರನ್ನು ಕೊಂದು ಅರಬ್ ಸಾಮ್ರಾಜ್ಯದ ಹೀರೋ ಆಗಬೇಕೆಂಬ ದುರಾಸೆಯಿಂದ ವಿಷ ಮಿಶ್ರಿತ ಕತ್ತಿಯೊಂದನ್ನು ಸೊಂಟಪಟ್ಟಿಯಲ್ಲಿ ಅಡಗಿಸಿ ವೇಷ ಮರೆಸಿಕೊಂಡು ನಬಿ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮರು ನಿವಾಸವಾಜ ಮದೀನಾದ ಮಸ್ಜಿದುನ್ನಬವಿಗೆ ಆಗಮಿಸಿದನು. ಆಗ ನಬಿ ﷺِ ರವರು ಆರಾಧನಾ ಮಗ್ನರಾಗಿದ್ದರು. ಮಸೀದಿಯ ಬಾಗಿಲಿನಲ್ಲಿ ಕುಖ್ಯಾತ ಶೈತಾನನ್ನೂ ಬೆದರಿಸಿ ಬೆನ್ನಟ್ಟಿದ್ದ ಧೈರ್ಯಶಾಲಿ ಉಮರ್ ಬಿನ್ ಖತ್ತಾಬ್(ರ) ರವರು ಕಾವಲು ಕಾಯುತ್ತಿದ್ದರು. ಹಾಗೆ ಮದೀನಾ ಮಸೀದಿಯ ಮುಂದೆ ಬಂದು ನಿಂತ ಆಗಂತುಕನನ್ನು ಅಡಿಯಿಂದ ಮುಡಿಯ ತನಕ ಒಮ್ಮೆ ದುರುಗುಟ್ಟಿ ನೋಡಿದ ಉಮರ್ (ರ) ರವರು ತಮ್ಮ ಕಂಚಿನ ಕಂಠದಲ್ಲಿ ಯಾರು ನೀನು? ಎಂದರು. ನಾನು ಆಜಾಝ್.. ಖೈಬರ್ನಿಂದ ಬಂದಿದ್ದೇನೆ.. ಸರಿ.. ನಿನಗೆ ಏನು ಬೇಕು..? ಪ್ರವಾದಿ ಮುಹಮ್ಮದ್ ﷺِ ರನ್ನು ಕಾಣಲು ಬಂದಿದ್ದೇನೆ ಎಂದುತ್ತರಿಸಿದರು ಆಜಾಝ್. ಈಗ ನಬಿ ﷺِ ರು ಆರಾಧನಾ ನಿರತರಾಗಿದ್ದಾರೆ. ಸ್ವಲ್ಪ ಹೊತ್ತು ಕಾಯಿರಿ. ಎಂದರು ಉಮರ್ (ರ) ಸರಿ ಎಂದ ಆಜಾಝ್, ನಬಿ ﷺِ ರವರ ನಮಾಝ್ ಮುಗಿಯುವ ತನಕ ಅಲ್ಲೇ ಕಾಯುತ್ತಾ ಕುಳಿತನು. ನಬಿ ﷺِರವರ ನಮಾಝ್ ಮುಗಿದ ನಂತರ ಆಜಾಝ್'...
ಇದು ಅಹ್ಲುಸ್ಸುನ್ನತಿ ವಲ್ ಜಮಾಅತಿನ ನೈಜ ಆಶಯಾದರ್ಶಗಳನ್ನು ವಿವರಿಸುವ ಬ್ಲಾಗ್ ಆಗಿದೆ. More info cont - Nawaz Saqafi Al Amjadi Ullala.