ಉಳ್ಳಾಲದಲ್ಲಿ ಧಾರ್ಮಿಕ ಅರಿವನ್ನು ಪಸರಿಸುವಲ್ಲಿ ಅನನ್ಯ ಕೊಡುಗೆ ನೀಡಿದ, ವಿಶೇಷವಾಗಿ ಅಳೇಕಲದಲ್ಲಿ 4 ದಶಕಗಳಿಂದ ಧಾರ್ಮಿಕ ರಂಗದ ನೇತ್ರತ್ವವನ್ನು ವಹಿಸಿ ಗಮನಾರ್ಹ ಸೇವೆ ನೀಡುತ್ತಿರುವ ಪಟ್ಟಾಂಬಿ ಉಸ್ತಾದರ ಬದುಕಿನ ಕಡೆ ಹ್ರಸ್ವ ನೋಟ ಬೀರೋಣ. ತಾಜುಲ್ ಉಲಮಾ ಉಳ್ಳಾಲ ತಂಙಲ್ ಖ.ಸಿ ರವರ ಪ್ರಮುಖ ಶಿಷ್ಯ, ಸರಳತೆ, ವಿನಯ, ಪ್ರೀತಿ, ಕರುಣೆ ಮೇಲೈಸಿದ ಅಪರೂಪದ ವಿದ್ವಾಂಸ ಪಟ್ಟಾಂಬಿ ಉಸ್ತಾದ್. ಅಬೂಝಿಯಾದ್ ಮುಹಮ್ಮದ್ ಮದನಿ ಪಟ್ಟಾಂಬಿ ಉಸ್ತಾದ್ ಎಂದು ಅವರ ಹೆಸರನ್ನು ಪೂರ್ತಿಯಾಗಿ ಹೇಳಲಾಗುತ್ತದೆ. ಉಸ್ತಾದರ ನೈಜ ನಾಮ ಮುಹಮ್ಮದ್ ಎಂದಾಗಿದೆ. ಪ್ರೀತಿಯಿಂದ ಮಗನ ಹೆಸರು ಸೇರಿಸಿ ಅಬೂ ಝಿಯಾದ್ ಎಂದು ತನ್ನ ಹೆಸರಿನ ಮುಂದೆ ಸೇರಿಸಿ ಬರೆಯುತ್ತಾರೆ. ಉಳ್ಳಾಲದಲ್ಲಿ ಪಟ್ಟಾಂಬಿ ಉಸ್ತಾದ್ ಎಂದೇ ಚಿರಪರಿಚಿತ. ಮದನಿ ಎಂಬುವುದು ನಮಗೆ ತಿಳಿದಿರುವಂತೆ ಉಳ್ಳಾಲ ಸಯ್ಯಿದ್ ಮದನಿ ಅರೆಬಿಕ್ ಕಾಲೇಜಿನಲ್ಲಿ ಕಲಿತು ಪಡೆದ ಬಿರುದಿನ ಹೆಸರಾಗಿದೆ. 1952 ಮಾರ್ಚ್ ನಾಲ್ಕರಂದು ಪಾಲೋಳಿ ಮಹ್ಮೂದ್ ಮತ್ತು ಕೋಲ್ಕಾಟ್ ಫಾತಿಮ ಎಂಬವರ ಮಗನಾಗಿ ಜನಿಸಿದರು. ತಂದೆ ತಾಯಿಗೆ ಉಸ್ತಾದ್ ಸೇರಿ ಇಬ್ಬರು ಗಂಡು ಮಕ್ಕಳು. ಉಸ್ತಾದರು ಹಿರಿಯವರು. ಉಸ್ತಾದರ ತಮ್ಮ ಐದು ವರ್ಷಗಳ ಮುಂಚೆ ಮರಣ ಹೊಂದಿರುವರು. ಮಲಪ್ಪುರಂ ಜಿಲ್ಲೆಯ ಪುಣಪ್ಪ ಶಾಲೆಯಲ್ಲಿ 8 ನೇ ತರಗತಿ ತನಕ ಲೌಕಿಕ ಶಿಕ್ಷಣ ಪಡೆದರು. ತನ್ನ ತಂದೆಯ ಸಹೋದರಿಯ ಊರಾದ ಅರಿಪ್ರ ಎಂಬಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರ...
ಇದು ಅಹ್ಲುಸ್ಸುನ್ನತಿ ವಲ್ ಜಮಾಅತಿನ ನೈಜ ಆಶಯಾದರ್ಶಗಳನ್ನು ವಿವರಿಸುವ ಬ್ಲಾಗ್ ಆಗಿದೆ. More info cont - Nawaz Saqafi Al Amjadi Ullala.