ಈ ರಕ್ತ ಮಿಶ್ರಿತ ಕುರಾನ್ ಮರೆಯುವುದುಂಟೇ? ಅದು,೨೦೧೩ ಮಾರ್ಚ್ ೨೩. ಸಿರಿಯದ ರಾಜಧಾನಿ ಡಮಸ್ಕಸಿನ ಪ್ರಧಾನ ಮಸೀದಿಯೊಂದರಲ್ಲಿ ಭೀಕರ ಸ್ಫೋಟವೊಂದು ಸಂಭವಿಸುತ್ತದೆ.ಪರಿಣಾಮ ನಲ್ವತ್ತೆಂಟು ನಾಗರಿಕರು ಬಲಿಯಾಗುತ್ತಾರೆ.ಜಾಗತಿಕ ಮಟ್ಟದಲ್ಲಿ ಈ ಸ್ಫೋಟದ ಸುದ್ದಿ ಚರ್ಚೆಯಾಗುತ್ತದೆ.ಅಲ್ಲಿನ ಸರಕಾರ ಮತ್ತು ವಿಪಕ್ಷ ಪರಸ್ಪರ ಆರೋಪ ಪ್ರತ್ಯಾರೋಪಗಳನ್ನು ಮಾಡಿ ಕೈ ತೊಳೆದುಕೊಳ್ಳಲು ಮುಂದಾಗುತ್ತಾರೆ,ಯಾವ ಉಗ್ರವಾದಿ ಸಂಘಟನೆಯೂ ಈ ಸ್ಫೋಟದ ಜವಾಬ್ದಾರಿಯನ್ನು ವಹಿಸಲು ಮುಂದಾಗಲ್ಲ,ಯಾಕೆ ಗೊತ್ತಾ! ಆ ನಲ್ವತ್ತೆಂಟು ನಾಗರಿಕರ ಪೈಕಿ,ಮುಸ್ಲಿಂ ಧರ್ಮಗುರುವೊಬ್ಬರು ಸಾವಿಗೀಡಾಗಿರುತ್ತಾರೆ.ಆ ಕಾಲದಲ್ಲಿ ಇಡೀ ಮುಸ್ಲಿಂ ಜಗತ್ತಿಗೆ ಮೇರು ಗ್ರಂಥಗಳನ್ನು ಸಂಭಾವನೆಗೈದ ಅತ್ಯುನ್ನತ ಧರ್ಮಗುರುಗಳ ಪೈಕಿ ಒಬ್ಬರಾಗಿದ್ದರು ಅವರು.ಜಾಗತಿಕ ಮಟ್ಟದಲ್ಲಿ ಆ ಧರ್ಮ ಗುರುವಿನ ಕೊಲೆಗೆ ವ್ಯಾಪಕ ಖಂಡನೆಗಳು ಕೇಳಿ ಬರುತ್ತದೆ.ಪ್ರತಿಭಟನೆಗಳು ಮೇಲಿಂದ ಮೇಲೆ ವ್ಯಕ್ತವಾಗುತ್ತದೆ.ಅಷ್ಟಕ್ಕೂ ಆ ಧರ್ಮ ಗುರು ಯಾರು ಗೊತ್ತೇ?ಇಸ್ಲಾಂ ಧರ್ಮವನ್ನು ಮುಂದಿಟ್ಟು ಉಗ್ರವಾದ ಮೆರೆಯುವ ನೂತನವಾದಿ ಭಯತ್ಪಾದಕರ ವಿರುದ್ಧ ನಿರಂತರವಾಗಿ ಹೋರಾಡಿದ,ಮುಸ್ಲಿಂ ಜಗತ್ತಿನ ಮಹೋನ್ನತ ಧರ್ಮಗುರು ಸಯೀದ್ ರಮದಾನ್ ಅಲ್ ಬೂತಿ. ಬೂತಿಯೂ ಇಮಾಂ ಗ್ರ್ಯಾಂಡ್ ಮಸೀದಿಯಲ್ಲಿ ಉಪನ್ಯಾಸ ನೀಡುತ್ತಿದ್ದ ವೇಳೆ,ಅವರು ಆಸೀನರಾಗಿರುವ ಮೇಜಿನಡಿಯಲ್ಲಿ ಬಾಂಬ್ ಸ್ಫೋಟಿಸುತ್ತದೆ.ಬೂತಿಯನ್ನು ಕೊಲ್ಲಲ್...
ಇದು ಅಹ್ಲುಸ್ಸುನ್ನತಿ ವಲ್ ಜಮಾಅತಿನ ನೈಜ ಆಶಯಾದರ್ಶಗಳನ್ನು ವಿವರಿಸುವ ಬ್ಲಾಗ್ ಆಗಿದೆ. More info cont - Nawaz Saqafi Al Amjadi Ullala.