ಕಾಂತಪುರಂ ಉಸ್ತಾದ್ ಕೋಟ್ಯಂತರ ರೂಪಾಯಿ ಸಂಪಾದಿಸಿ ಐಷಾರಾಮಿ ಜೀವನ ನಡೆಸುತ್ತಾರೆ ಎಂದು ನಾಡಿನುದ್ದಗಲಕ್ಕೂ ಹೇಳಿ ನಡೆಯುವವರೊಂದಿಗೆ. ಸುಲ್ತಾನುಲ್ ಉಲಮಾ ಉಸ್ತಾದರು ತನ್ನ ಅತಿದೊಡ್ಡ ನಿಧಿಯಾದ ತಮ್ಮ ಶಿಷ್ಯರಿಗೆ ಮರ್ಕಝಿನಲ್ಲಿ ಹೇಳಿದ ಹೃದಯ ಕರಗಿಸುವ ಮಾತುಗಳು ... ನನಗೆ ಒಳ್ಳೆಯ ಅಡಿಕೆ ತೋಟವಿದೆ. ಅದರಿಂದ ಪ್ರತೀ ವರ್ಷ ಅಡಿಕೆ ಮಾರಿ ಉತ್ತಮ ಸಂಖ್ಯೆ ನನಗೆ ಲಭಿಸುತ್ತಿತ್ತು. ಈ ಬಾರಿ ನನಗೆ 40,000 ಸಿಕ್ಕಿತು, ಕಳೆದ ಬಾರಿ ನನಗೆ 30,000 ಸಿಕ್ಕಿತು ಮತ್ತು ಅದರ ಹಿಂದಿನ ವರ್ಷ ನನಗೆ 50,000 ಸಿಕ್ಕಿತು. ಇದು ಮಾಸಿಕ ಆದಾಯವಲ್ಲ, ಇದು ಒಂದು ವರ್ಷದ್ದಾಗಿದೆ. ನನ್ನ ಬಳಿ ಒಂದು ಅಂಗಡಿ ಇದೆ ಮತ್ತು ಅದರಿಂದ ತಿಂಗಳಿಗೆ ನಾಲ್ಕು ಸಾವಿರ ರೂಪಾಯಿ ಸಿಗುತ್ತದೆ. ಇದರ ಹೊರತು ನನ್ನದೆಂದು ಹೇಳುವ ಯಾವುದೊಂದೂ ನನ್ನ ಬಳಿ ಇಲ್ಲ. ನನಗೆ ಅನಾರೋಗ್ಯ ಉಂಟಾಗಿ ಹಾಸಿಗೆ ಹಿಡಿದರೆ ಚಿಕಿತ್ಸೆಗಾಗಿಯೂ ನನ್ನ ಬಳಿ ಹಣ ಇಲ್ಲ. ಮಾಸಿಕ ಮತ್ತು ವಾರ್ಷಿಕವಾಗಿ ಸಿಗುವ ಈ ಆದಾಯ ನನಗೆ ಹೇಗೆ ಸಾಕಾಗಬಹುದು. ನಾನು ಶುಕ್ರವಾರ ಮನೆಯಲ್ಲಿದ್ದಾಗ ಮನೆಗೆ ಬರುವವರಿಗೆ ಆಹಾರವನ್ನು ನೀಡಲು ಅಥವಾ ಬಡವರು ನನ್ನನ್ನು ಕೇಳಿದಾಗ ನೀಡಲು ಈ ಸಂಖ್ಯೆ ಸಾಕಾಗುವುದಿಲ್ಲ. ಮುತಅಲ್ಲಿಮರು, ಅನಾಥರು ಮತ್ತು ಇತರ ಧಾರ್ಮಿಕ ಚಟುವಟಿಕೆಗಳಿಗಾಗಿ ನಾನು ಸಾಕಷ್ಟು ದೇಣಿಗೆ ಪಡೆದಿದ್ದೇನೆ. ಆದರೆ ಇಲ್ಲಿಯವರೆಗೆ ನನ್ನ ಅಗತ್ಯಗಳಿಗಾಗಿ ನಾನು ಸಂಗ್ರಹಿಸಿದ ದೇಣಿಗೆಯಿಂದ ಐದು ಪೈಸೆ ಕ...
ಇದು ಅಹ್ಲುಸ್ಸುನ್ನತಿ ವಲ್ ಜಮಾಅತಿನ ನೈಜ ಆಶಯಾದರ್ಶಗಳನ್ನು ವಿವರಿಸುವ ಬ್ಲಾಗ್ ಆಗಿದೆ. More info cont - Nawaz Saqafi Al Amjadi Ullala.