Skip to main content

Posts

Showing posts from October, 2019

ಹೆಬ್ಬಾವಿನ ಸವಾಲಿಗೆ ನಾನು ಕೊಟ್ಟ ಉತ್ತರ

🎓🎓 ಮಾಸ್ಟರ್ ಮೈಂಡ್ 🎓🎓   ಹೆಬ್ಬಾವಿನ ಸವಾಲಿಗೆ ನಾನು ಕೊಟ್ಟ ಉತ್ತರ ಅವತ್ತೊಂದು ದಿನ ರಾತ್ರಿ 11 ಗಂಟೆ ಕಳೆದಿತ್ತು.ನಾನು ನಿದ್ರೆಯಲ್ಲಿದ್ದೆ. ತಂದೆಯವರು ಹೊರಗಡೆಯ ವಾಶ್ ರೂಮ್ ನಿಂದ ಮನೆಯೊಳಗೆ ಪ್ರವೇಶಿಸುವಾಗ ಮೇಲ್ಗಡೆಯಿಂದ ಏನೇೂ ಹೇೂದಂತೆ ಕಂಡಿತು. ಕತ್ತಲೆ ಕವಿದಿದ್ದರಿಂದ ಅದು ಏನೆಂದು ತಿಳಿಯದಾದಾಗ ನಿದ್ದೆಯಿಂದ ಎದ್ದು ನಾನು ನೆರೆ ಮನೆಯವರನ್ನೆಲ್ಲಾ ಕರೆದೆ. ಅವರಲ್ಲೊಬ್ಬರು ಟಾರ್ಚ್ ಹಿಡಿದು ಮನೆಯ ಮೇಲ್ಬಾಗ ಹತ್ತಿ ನೇೂಡಿದರು. ಆಶ್ಚರ್ಯವಂಬಂತೆ ಮನೆಯ ಮೇಲ್ಛಾವಣಿಯಲ್ಲಿ ಒಂದು ಡೊಡ್ಡ ಹೆಬ್ಬಾವು ಅಂಗಾತ ಮಲಗಿತ್ತು. ತಕ್ಷಣವೇ ಹಾವು ಹಿಡಿಯಬಲ್ಲ ಪರಿಣತ ಅಲ್ಲಿಗಾಗಮಿಸಿದ ಮತ್ತು ಅದನ್ನು ತನ್ನ ಕೈಯಲ್ಲಿಡಿದು ನಮ್ಮ ಮನೆಯ ಎದುರುಗಡೆ ತಂದಾಕಿದ. ಹಾವು ಸುರುಟಿ ಕೊಂಡಿತ್ತು ಮತ್ತು ತಲೆ ಮಾತ್ರ ಹೊರ ಕಾಣುವಂತಿತ್ತು.ನಾವೆಲ್ಲ ಮನೆಯ ಜಗಲಿಯಲ್ಲಿ ನಿಂತು ಹಾವನ್ನೇ ನೇೂಡುತ್ತಿದ್ದೆವು. ಅಷ್ಟರಲ್ಲಿ ನಮ್ಮನ್ನೇ ನೇೂಡುತ್ತಿದ್ದ ಹಾವು ಏನೇೂ ಒಂದು ವಿಷಯ ಹೇಳುವಂತೆ ಭಾಸವಾಯಿತು. ಓ ಮನುಜಾ ಇಂದು ನಾನು ನಿಮ್ಮ ಮನೆಗೆ ಬಂದಾಗ ನೀವೆಲ್ಲರೂ ಹೆದರಿ ನನ್ನಿಂದ ರಕ್ಷಣೆ ಪಡೆಯಲು ನೆರೆಮನೆಯವರನ್ನು ಕರೆದಿರಿ ಹಾಗೂ ನನ್ನನ್ನು ಹಿಡಿಯಲು ಪರಿಣತನೂ ಬಂದು ನಿಮಗೆ ನೆರವಾದನು. ಆದರೆ , ಒಂದು ವೇಳೆ ನಾಳೆ ನೀನು ಮರಣ ಹೊಂದಿ ಆರಡಿ ಮಣ್ಣಿನಡಿಯ ಖಬ್ರ್ ನಲ್ಲಿ ನಿನ್ನನ್ನಿಟ್ಟರೆ ಅಲ್ಲಿ ಇದೇ ನಾನು ನಿನ್ನ ...

ಜೀವಿಗಳೊಂದಿಗೆ ಕರುಣೆ

ಪ್ರತಿಫಲ _ಓರ್ವ ಯಾತ್ರಿಕ ದಾರಿಯೊಂದರಲ್ಲಿ ನಡೆಯುತ್ತಿದ್ದಾಗ ಆತನಿಗೆ ತೀವ್ರ ಬಾಯಾರಿಕೆಯುಂಟಾಯಿತು. ನೀರನ್ನು ಅರಸುತ್ತಾ ನಡೆಯುತ್ತಿರಲು, ಆತನಿಗೆ ಬಾವಿಯೊಂದು ಕಂಡಿತು. ಬಾವಿಯೊಳಗೆ ಇಳಿದು ನೀರು ...

ಭೂಲೋಕದಲ್ಲಿ ಏನಿದೆ....? ಸ್ವರ್ಗದಲ್ಲಿ ಏನಿದೆ.... (ಸಂಕ್ಷಿಪ್ತ)

ಭೂಲೋಕದಲ್ಲಿ ಏನಿದೆ....? ಸ್ವರ್ಗದಲ್ಲಿ ಏನಿದೆ.... (ಸಂಕ್ಷಿಪ್ತ) ✒ಅಬ್ದುಲ್ ನಾಸಿರ್ ಕಾವೂರು🍇 *(ಕೊನೆಯವರೆಗೂ ಓದಿ)* ಈ ಭೂಲೋಕದ ಬಗ್ಗೆ ಕೂಲಂಕುಷವಾಗಿ ಚಿಂತಿಸುವಾಗ ಕೆಲವೊಂದು ವಿಷಯಗಳು ಅರ್ಥಮಾಡಲು ಸಾಧ್ಯವಾಗುತ್ತದೆ. ಇಲ್ಲಿ ಯಾರೂ ಸುಖವಾಗಿ ಇರುವುದಿಲ್ಲ. ದುಡ್ಡಿರುವವರೆಲ್ಲರೂ ಹಾಯಾಗಿ ಇರುತ್ತಾರೆ ಎಂದು ನಾವು ಅಂದುಕೊಳ್ಳುತ್ತೇವೆ ಅದು ನಮ್ಮ ಶುದ್ಧ ಮೂರ್ಖತನ. ಒಂದು ವಸ್ತುವು ಶಾಶ್ವತವಾಗಿ ಇರಬೇಕು. ಅದಕ್ಕೆ ಕೊನೆ ಇರಬಾರದು, ಅದರಲ್ಲಿ ಯಾವುದೇ ದೋಷಗಳು ಇರಬಾರದು, ಅದರ ಕಾರಣದಿಂದ ನಾವು ಕಷ್ಟ ಅನುಭವಿಸಬಾರದು. ಹೀಗೆಲ್ಲಾ ಇದ್ದರೆ ಅದಕ್ಕೊಂದು ಅರ್ಥವಿರುತ್ತೆ. ಆದರೆ ಈ ಲೋಕದಲ್ಲಿ ಅಂತಹಾ ಸ್ಪೆಷಾಲಿಟಿ ಏನೂ ಇಲ್ಲ. ಇಲ್ಲಿ ಏನು ಮಾಡಬೇಕಾದರೂ ಕಷ್ಟ ಪಡಬೇಕು, ಆರೋಗ್ಯ ಹಾಲುಮಾಡಬೇಕು, ಒಂದುವೇಳೆ ಕಷ್ಟ ಪಟ್ಟು ಆರೋಗ್ಯ ಹಾಳುಮಾಡಿ ತುಂಬಾ ಹಣ ಮಾಡಿ ದೊಡ್ಡ ಶ್ರೀಮಂತನಾದರೂ ಕೂಡಾ ಆ ಸಮಯಕ್ಕೆ ಆಯುಷ್ಯ ಮುಗಿಯುವ ಹಂತದಲ್ಲಿರುತ್ತೇವೆ. ಶರೀರದ ಚರ್ಮವೆಲ್ಲಾ ಸುರುಗಟ್ಟಿ, ಕಣ್ಣುಗುಡ್ಡೆಗಳು ಒಳಹೋಗಿ, ಕೂಡಲೆಲ್ಲಾ ಉದುರಿ ಹೋಗಿಬಿಟ್ಟಿರುತ್ತದೆ. ಇಷ್ಟೆಲ್ಲಾ ಮಾಡಿ ಏನು ಪ್ರಯೋಜನ...? ಕೊನೆಗೆ ತಾನು ಮಾಡಿದ್ದೆಲ್ಲಾ ವಾರೀಸುದಾರರಿಗೆ ಕೊಟ್ಟು ಮಣ್ಣಿನ ಸಣ್ಣ ರಂಧ್ರದಲ್ಲಿ ಮಣ್ಣಾಗುವ ಶರೀರ..... ಇನ್ನು ಒಬ್ಬ ತುಂಬಾ ವೇಗವಾಗಿ ಬೆಳೆದ ಅವನ ಬ್ಯುಸ್ನಸ್ ತುಂಬಾ ದೊಡ್ಡದಾಯಿತು. ಸಣ್ಣ ಪ್ರಾಯದಲ್ಲೇ ತುಂಬಾ ಹಣ ಗಳಿಸಿ ತುಂಬಾ ದೊಡ್ಡ ಶ್...

ಬಾಳ ಸಂಗಾತಿಗಾಗಿ ಸಾವನ್ನಪ್ಪುವ ಸಹಸ್ರಾಯುಷಿ ಗರುಡ

ಬಾಳ ಸಂಗಾತಿಗಾಗಿ ಸಾವನ್ನಪ್ಪುವ ಸಹಸ್ರಾಯುಷಿ ಗರುಡ *✒ಯೂಸುಫ್ ನಬ್‌ಹಾನಿ ಕುಕ್ಕಾಜೆ.* 📞 00971 553499119   ▪ *ಕಾಡಿನಲ್ಲಿ* ವನ್ಯ ಜೀವಿಗಳಿಗೆ ಸಿಂಹ ರಾಜನಾಗಿರುವಂತೆ ಪಕ್ಷಿ ಸಾಮ್ರಾಜ್ಯದ ರಾಜನಾಗಿರುತ್ತದೆ ರಣಹದ್ದು ಅಥವಾ ಗರುಡ. (Eagle)   ▪ *ಪ್ರಾಥಮಿಕ* ಗೋಚರಕ್ಕೆ ಗಿಡುಗನಂತೆ ಕಾಣುವುದಾದರೂ ನಿಜವಾಗಿ ಗಿಡುಗ ಮತ್ತು ರಣಹದ್ದಾಗಿ ಅಜಗಜಾಂತರ ವ್ಯತ್ಯಾಸವಿದೆ. ಗಿಡುಗನನ್ನು ಕಂಡಲ್ಲಿ ಕೊಲ್ಲಲು ಸುನ್ನತ್ತಿದೆ. ಆದರೆ ಹದ್ದು ಅದರಲ್ಲಿ ಒಳಪಡುವುದಿಲ್ಲ. ಹಾರಾಟ ಶೈಲಿಯಲ್ಲಿ ಗಿಡುಗನಾಗಿ ಸಾಮೀಪ್ಯವಿರುವುದಾದರೂ ಜೀವನ ಶೈಲಿಯು ಸಂಪೂರ್ಣ ವ್ಯತ್ಯಾಸವಾಗಿರುತ್ತದೆ.   ▪ *ಪಕ್ಷಿಗಳ ಪೈಕಿ* ಬಹಳ ಬಲಿಷ್ಠ ಮತ್ತು ದೃಡಕಾಯ ಶರೀರವುಳ್ಳ ಒಂದಾಗಿದೆ ಗರುಡ. ಎಂತಹಾ ದೊಡ್ಡ ಶವವನ್ನೂ ತನ್ನ ಕಾಲಿನ ಚೂಪಾದ ಉಗುರಿನಿಂದ ಸೀಳಿ ತಿನ್ನುವ ಮತ್ತು ಬೃಹದಾಕಾರದ ಆಡುಮರಿ,  ಕರು ಅಂತೆಯೇ ಇನ್ನಿತರ ಜೀವಿಗಳನ್ನು ಮೇಲಕ್ಕೆ ಎತ್ತಿ ಕೊಂಡು ಹೋಗುವ ತಾಕತ್ತು ಕೂಡ ಇದಕ್ಕಿದೆ.  ಪ್ರಪಂಚದ ಕೆಲವೇ ಕೆಲವು ಪ್ರದೇಶಗಳಲ್ಲಿ ಮಾತ್ರ ಇದನ್ನು ಕಾಣ ಸಿಗುವ ಇದು ಸುಮಾರು ಒಂದು ಸಾವಿರ ವರ್ಷಗಳ ತನಕ ಬದುಕುತ್ತದೆ ಎಂದು ಹೇಳಲಾಗುತ್ತದೆ.   ▪ *ಪಕ್ಷಿಗಳ* ರಿಝ್‌ಖ್ ನ (ಜೀವನೋಪಾಯ) ಅಧಿಕಾರ ನೀಡಲಾದ ಅಥವಾ ಆ ಬಗ್ಗೆ ನಿಯುಕ್ತರಾಗಿರುವ ಮಲಕ್‌ನ ನಿಜರೂಪ ಕೂಡ ಪಕ್ಷಿಗಳ ನೇತಾರ ರಣಹದ್ದಿನ ರೂಪವಾಗಿ ಹೋಲಿಕೆಯಿದೆ ಎಂಬುದು ಇದರ ಬೇ...

ಶೈಖುಲ್ ಜಲೀಲ್ ಔಲಾದೇ ಉಮ್ಮೇ ಬತೂಲ್ ಸಯ್ಯಿದುನಾ ಇಮಾಂ ಮುಹಮ್ಮದ್ ಬಿನ್ ಸುಲೈಮಾನುಲ್ ಜಝೂಲಿ رَضِىَ اللّٰەُ عَنْهُ

ಶೈಖುಲ್  ಜಲೀಲ್ ಔಲಾದೇ ಉಮ್ಮೇ ಬತೂಲ್ ಸಯ್ಯಿದುನಾ ಇಮಾಂ ಮುಹಮ್ಮದ್ ಬಿನ್ ಸುಲೈಮಾನುಲ್ ಜಝೂಲಿ رَضِىَ اللّٰەُ عَنْهُ ✒ ಮುಹಮ್ಮದ್ ಹುಸೈನ್ ರಝಾ. بسم اللّٰہ الرحمٰن الرحیم اَلصَّلَاةُ وَالسَّلَامُ عَلَيْكَ يَا سَيَّدِ يَارَسُولُ اللّٰه ﷺ _ಮುಸ್ಲಿ ಉಮ್ಮತ್ ಗಳ ನಲ್ಮೆಗಾಗಿ ಬಹಳಷ್ಟು ಅಕಾಬಿರ್ ಉಲಮಾಗಳು ನಾನಾ ಜ್ಞಾನ ಶಾಖೆಗೆ ಒಳಪಟ್ಟ ಧಾರಾಳ  ಲಕ್ಷಗಟ್ಟಲೆ ಗ್ರಂಥಗಳನ್ನು ರಚಿಸಿದ್ದಾರೆ ಅದರಲ್ಲಿ ನಬೀಯೇ ಕರೀಂ ರಊಫುರ್ರಹೀಮ್ صَلَّى اللهُ تَعَالٰى عَلَيْهِ وَاٰلِهٖ وَسَلَّم ರವರ ಪವಿತ್ರ ವಚನಗಳನ್ನು ಶೇಖರಿಸಿ ಬರೆಯಲಾದ ಹದೀಸ್, ತಫ್ಸೀರ್, ಫಿಖ್ಹ್, ತಾರೀಖ್, ಸೀರತ್, ಗ್ರಂಥಗಳ ಹೊರತು ಪಡಿಸಿದರೆ ಆಶೀಖೀನ್ ಗಳ ಮನಸ್ಸಿಗೆ ಅವರ್ಣನೀಯ ಸಂತೋಷ ಸಂತೃಪ್ತಿ ಆಹ್ಲಾದವನ್ನು ಉಂಟುಮಾಡುವ ಕೆಲವು ಗ್ರಂಥಗಳಂತೂ ಜಗತ್ತಿನ ಮೂಲೆ ಮೂಲೆಗಳಲ್ಲೂ ಸುಪ್ರಸಿದ್ಧ ಹಾಗೂ ಜನ_ _ಸಾಮಾನ್ಯರೆಡೆಯಲ್ಲೂ ಕೂಡ ಅತ್ಯಂತ ಮೆಚ್ಚುಗೆಯನ್ನು ಹಾಗೂ ಬೇಡಿಕೆಯನ್ನು ಗಳಿಸಿದ್ದು ಅದ್ಭುತವೇ ಸರಿ! ಅದರಲ್ಲಿ ನಬೀಯೇ ರಹ್ಮತ್ ಶಫೀಯೇ ಉಮ್ಮತ್ صَلَّى اللهُ تَعَالٰى عَلَيْهِ وَاٰلِهٖ وَسَلَّم ರವರ ಜೀವನ ಚರಿತ್ರೆಯನ್ನು ಸಂಗ್ರಹಿಸಿ ಬರೆಯಲಾದ  ಸೀರತ್ ಗ್ರಂಥಗಳೂ ಹಾಗೂ ನಬಿ صَلَّى اللهُ تَعَالٰى عَلَيْهِ وَاٰلِهٖ وَسَلَّم ರವರ ಶ್ರೇಷ್ಠತೆ ಹಾಗೂ ಸ್ವಲಾತ್ ಮತ್ತು ಖಸೀದಾ ಕವಿತೆಗಳು ಸೇರಿ...

ವಲಿಯುಲ್ಲಾಹಿ ಜಮಾಲುಲ್ ಔಲಿಯ ಅಂದ್ರಪ್ಪಾಪ್ಪ (ಖ:ಸಿ) ವಲಿಯಾಕಂಡಿಪ್ಪಿಡಿಕ, ಪಾನೂರ್, ಕಣ್ಣೂರ್ ಜಿಲ್ಲೆ

ವಲಿಯುಲ್ಲಾಹಿ ಜಮಾಲುಲ್ ಔಲಿಯ ಅಂದ್ರಪ್ಪಾಪ್ಪ (ಖ:ಸಿ) ವಲಿಯಾಕಂಡಿಪ್ಪಿಡಿಕ, ಪಾನೂರ್, ಕಣ್ಣೂರ್ ಜಿಲ್ಲೆ ********************* ​اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَ...

ರಕ್ತ ಸಂಬಂಧಕ್ಕಿಂತಲೂ ಮಿಗಿಲಾದ ಬಂಧವೇ ಸ್ನೇಹ ಬಂಧ

ರಕ್ತ ಸಂಬಂಧಕ್ಕಿಂತಲೂ ಮಿಗಿಲಾದ ಬಂಧವೇ ಸ್ನೇಹ ಬಂಧ _✍🏻 ಜಹಫರ್ ಸಾಧಿಕ್ ಕಟ್ಟದಪಡ್ಪು_            _ಸ್ನೇಹ ಎಂಬುವುದು ಎಲ್ಲಾ ಅರ್ಥಗಳಿಗೂ ಮೀರಿದಂತಹ  ಬಂಧ, ನಮ್ಮ ಜೀವನದಲ್ಲಿ ಅನಿರೀಕ್ಷಿತವಾಗಿ ಹುಟ್...

ಆಲೋಚನೆ ಇದಾಗಿರಲಿ

ಆಲೋಚನೆ ಇದಾಗಿರಲಿ ಮಹಾತ್ಮರಾದ ಶೈಖ್ ಮುಹಮ್ಮದ್ ಮುತವಲ್ಲಿ ಶ್ಶಅರಾವೀರವರು ಹೇಳುತ್ತಾರೆ; "ದುನ್ಯಾದ ಬಗ್ಗೆ ನೀವು ಚಿಂತಿಸಬೇಕಿಲ್ಲ, ಅದು ಅಲ್ಲಾಹನ ತೀರ್ಮಾನದಂತಿದೆ. ಆಹಾರ ಪಾನೀಯಗಳ ಬಗ್ಗೆಯೂ ವ್ಯಾ...

ಐದು ಕಾರ್ಯಗಳನ್ನು ಐದು ಕಾರ್ಯಗಳಿಂದ ತಿಳಿಯಬಹುದು

ಐದು ಕಾರ್ಯಗಳನ್ನು ಐದು ಕಾರ್ಯಗಳಿಂದ ತಿಳಿಯಬಹುದು 1) ಮರದ ವಿಶಿಷ್ಟತೆ ತಿಳಿಯುವುದು ಅದರ ಫಲಗಳಿಂದ. ಒಂದು ಮರವು ಫಲ ನೀಡುವಾಗ ಅದರ ಪ್ರಯೋಜನಗಳು ಉಪಕಾರವು ತಿಳಿಯಲ್ಪಡುತ್ತದೆ. ಆ ವ್ರಕ್ಷವು ಫಲ ನೀಡದೇ ಇ...

ಮುತ್ತು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವ ಸ್ವಲ್ಲಮ್ ರವರ ಸಮುದಾಯದ ಆಯುಷ್ಯ

ನಾವು ಮೂರ್ಖರೊ.. ?? ಮೂಸಾ ನಬಿ (ಅ) ರೊಂದಿಗೆ ಒಮ್ಮೆ ಅವರ ಅನುಯಾಯಿಗಳು ಸಂಕಟ ಹೇಳುತ್ತಾರೆ...  "ಅವರ ಮಕ್ಕಳು ಬಾಲ್ಯದಲ್ಲಿಯೇ ಮರಣ ಹೊಂದುತ್ತಾರೆ ಆದ್ದರಿಂದ ನಮ್ಮ ಮಕ್ಕಳಿಗಾಗಿ ಪ್ರಾರ್ಥಿಸಿ ಎಂದು.. ಸಾವಿರ  ವರ...

ಯಾ ಶೈಖ್ ಅಬೂಬಕ್ಕರ್, ತಮ್ಮ SYS ಗೆ ಪ್ರವಾದಿವರ್ಯರ ಸಮ್ಮತವಿದೆ

ಯಾ ಶೈಖ್ ಅಬೂಬಕ್ಕರ್, ತಮ್ಮ SYS ಗೆ ಪ್ರವಾದಿವರ್ಯರ ಸಮ್ಮತವಿದೆ ✍ *ಉರ್ಣಿ ಸಖಾಫಿ* 2004ರಲ್ಲಿ ಕೇರಳದಲ್ಲಿ ನಡೆದ ಸುನ್ನೀ ಯುವಜನ ಸಂಘ (SYS) ಗೋಲ್ಡನ್ ಜೂಬ್ಲಿ ಮಹಾ ಸಮ್ಮೇಳನಕ್ಕೆ ಮದೀನದ ಪ್ರಧಾನ ಮುದರ್ರಿಸರೂ ಆದ ಖ...