Skip to main content

Posts

Showing posts from March, 2020

ಮನೆಯಲ್ಲಿ ಪತ್ನಿ ಮಕ್ಕಳೊಂದಿಗೆ ಜಮಾಅತ್

ಮನೆಯಲ್ಲಿ ಪತ್ನಿ ಮಕ್ಕಳೊಂದಿಗೆ ಜಮಾಅತ್ "ಏಕಾಂಗಿಯಾಗಿ ನಮಾಜ್ ಮಾಡುವುದಕ್ಕಿಂತ ಜಮಾಅತ್ ಆಗಿ ನಮಾಜ್ ಮಾಡಿದರೆ ಇಪ್ಪತ್ತೇಳು ಪಟ್ಟು ಜಾಸ್ತಿ ಪುಣ್ಯ ಲಭಿಸುತ್ತದೆ" (ಮುತ್ತು ನೆಬಿ ﷺ  ) *A) ತಂದೆ ಮತ್ತು ಮಗ* ಒಬ್ಬ ಇಮಾಂ ಆಗಿ ನಿಲ್ಲಬೇಕು,  ಮತ್ತೊಬ್ಬ ಇಮಾಮಿನ ಬಲಬದಿಯಲ್ಲಿ ಸ್ವಲ್ಪ ಹಿಂದಕ್ಕೆ ಸರಿದು ನಿಲ್ಲಬೇಕು. *B) ತಂದೆ ಹಾಗೂ ಒಂದಕ್ಕಿಂತ ಹೆಚ್ಚು ಗಂಡು ಮಕ್ಕಳು* ಒಬ್ಬ ಇಮಾಂ ನಿಲ್ಲುವುದು, ಉಳಿದವರು ಒಂದೇ ಸಫ್ಫ್ ಆಗಿ ಇಮಾಮಿನ ನೇರ ಹಿಂಬದಿಯಲ್ಲಿ ನಿಲ್ಲುವುದು. *C) ಗಂಡ ಮತ್ತು ಹೆಂಡತಿ ಮಾತ್ರ* ಗಂಡ ಇಮಾಂ ನಿಲ್ಲಬೇಕು, ಹೆಂಡತಿ ನೇರ ಹಿಂದೆ ಸರಿದು (ಸಫ್ಫ್ ನಿಲ್ಲುವಂತೆ) ನಿಲ್ಲಬೇಕು. *D) ಗಂಡ, ಹೆಂಡತಿ ಮತ್ತು ಒಬ್ಬ ಮಗ* ಗಂಡ ಅಥವಾ ಮಗ ಇಮಾಂ ನಿಲ್ಲಬೇಕು, ಮತ್ತೊಬ್ಬ ಇಮಾಮಿನ ಬಲಬದಿಯಲ್ಲಿ ಸ್ವಲ್ಪ ಹಿಂದಕ್ಕೆ ಸರಿದು ನಿಲ್ಲಬೇಕು. ಹೆಂಡತಿ ಇಮಾಮಿನ ನೇರ ಹಿಂದಕ್ಕೆ ಸರಿದು ನಿಲ್ಲಬೇಕು (ಸಫ್ಫ್ ನಿಲ್ಲುವಂತೆ) *E) ಗಂಡ, ಹೆಂಡತಿ ಮತ್ತು ಒಂದಕ್ಕಿಂತ ಹೆಚ್ಚು ಗಂಡು ಮಕ್ಕಳು* ಗಂಡಸರಲ್ಲಿ ಒಬ್ಬ ಇಮಾಂ ನಿಲ್ಲಬೇಕು, ಉಳಿದ ಗಂಡಸರು ಇಮಾಮಿನ ನೇರ ಹಿಂಬದಿಯಲ್ಲಿ ಸಫ್ಫಾಗಿ ನಿಲ್ಲಬೇಕು ಮತ್ತೆ ಅದರ ಹಿಂದೆ ಹೆಂಡತಿ ನಿಲ್ಲಬೇಕು. *F) ಗಂಡ, ಹೆಂಡತಿ, ಗಂಡು ಮಕ್ಕಳು ಮತ್ತು ಹೆಣ್ಣು ಮಕ್ಕಳು* ಗಂಡಸರಲ್ಲಿ ಒಬ್ಬ ಇಮಾಂ ನಿಲ್ಲಬೇಕು, ಅದರ ಹಿಂದೆ ಉಳಿದ ಗಂಡಸರು ಮತ್ತೆ ಅದರ ಹಿಂದೆ ಹೆಂಡತಿ ಮತ್ತು ಹೆಣ...

ಕಾರಾಗ್ರಹದ ಕತ್ತಲೆ ಕೋಣೆಯಲ್ಲಿ ಜಗತ್ತನ್ನು ಬೆಳಗಿಸಲು ನಿಮಿತ್ತವಾದ ಮಿಕ್ಕ ಆಲೋಚನೆಗಳು

2020 ದೇಶದಾದ್ಯಂತ ಕೋರೋನ ವೈರಸ್ ನಿಮಿತ್ತ ಲಾಕ್‌ಡೌನ್ ಘೋಷಿಸಲಾಗಿತ್ತು. ನಿನ್ನೆ ತನಕ ಹೊರ ಜಗತ್ತಿನಲ್ಲಿ ವಿಹರಿಸುತ್ತಿದ್ದ, ಶಹರದ ಗದ್ದಲದಲ್ಲಿ ಕರಗಿ ಹೋಗುತ್ತಿದ್ದ, ಬೆರೆತು ಬದುಕುವ ಕಲೆಯನ್ನೇ ಕರಗತ ಮಾಡಿಕೊಂಡಿದ್ದ ಜನಕ್ಕೆ ಈ ಮನೆಯ ಏಕತಾನತೆ ರೇಜಿಗೆ ಹುಟ್ಟಿಸದಿರುತ್ತಾ..? ಯಾಂತ್ರಿಕ ಮತ್ತು ವ್ಯಾವಹಾರಿಕ ಲೋಕದಲ್ಲಿ ಮಗ್ನನಾಗಿದ್ದ ಮನುಷ್ಯನನ್ನು ಕ್ಷಣದೊಳಗೆ ಈ ವಿಲಕ್ಷಣ ಏಕಾಂತ ಆವರಿಸುವಾಗ ಉಂಟಾಗುವ ಆ ನೋವು, ಯಾತನೆಗಳಿದೆಯಲ್ಲಾ..? ಅದು ಅಸಹನೀಯವೇ ಸರಿ.  ನಮ್ಮದೇ ಮನೆ ಆಗ ಸೆರೆಮನೆಯಾಗಿತ್ತು. ಒಂಥರಾ ಕಾರಾಗೃಹದ ಫೀಲಿಂಗು. ಸಜೆಯಿಲ್ಲದಿದ್ದರೂ ಮರ್ಧಿಸಲ್ಪಡುವಷ್ಟು ಯಾತನೆ. ಆದರೆ ನೆನಪಿಡಿ.  ಇಡೀ‌ ಜಗತ್ತನ್ನು ಬೆಳಗಿಸಲು ನಿಮಿತ್ತವಾದ ಮಿಕ್ಕ ಆಲೋಚನೆಗಳು ಕವಲೊಡೆದದ್ದೂ ಇದೇ ಕಾರಾಗೃಹದ ಕತ್ತಲ ಕೋಣೆಯಲ್ಲೇ.! ಇಬ್ನು ಸೀನಾ ವೈದ್ಯ ಜಗತ್ತಿನ ಅನಭಿಷಿಕ್ತ ದೊರೆ. ತನ್ನ ಅಪ್ರತಿಮ ವಿದ್ವತ್ತಿನಿಂದ ಇಂದಿಗೂ ಪಾಶ್ಚಾತ್ಯ ಜಗತ್ತಿನಲ್ಲಿ ಸ್ಮರಿಸಲ್ಪಡುತ್ತಿರುವ ಮುಸ್ಲಿಂ ವಿಜ್ಞಾನಿ. ಖಲೀಫಾ ಸಂಶ್ ಅದ್ದೌಲರವರ ಆಡಳಿತದ ಅವಧಿಯಲ್ಲಿ ವೈದ್ಯ ಪ್ರಮುಖರೂ, ಮಂತ್ರಿಯೂ ಆಗಿದ್ದರು ಇಬ್ನು ಸೀನಾ. ಖಲೀಫಾರ ಮರಣದ ಬಳಿಕ ಕೆಲವು ರಾಜಕೀಯ ದುರುದ್ದೇಶಗಳಿಂದಾಗಿ ಹಮದಾನ್‌ನ ಖಲೀಫಾ ಅವರನ್ನು ಬಂಧಿಸಿ ಜೈಲಿಗಟ್ಟಿದರು. ಧೃತಿಗೆಡದ ಇಬ್ನು ಸೀನಾ ಜೈಲಿನಲ್ಲಿ ಹಲವು ಪುಸ್ತಕಗಳನ್ನು ಬರೆದರು. ಜೀವಶಾಸ್ತ್ರ, ವೈದ್ಯಶಾಸ್ತ್ರ ಮತ್ತು ಔಷಧಗಳಿಗ...

ಮಾನವನೆಂಬ ಅದ್ಭುತ ಜೀವಿ ಭಾಗ 👉‌2

ಮಾನವನೆಂಬ ಅದ್ಭುತ ಜೀವಿ ಭಾಗ 👉‌2 *ಮುನ್ನೂರು ವರ್ಷ ಆಕಾಶ ನೋಡದ ಹಝ್ರತ್ ಆದಮ್!* *✍🏻ಯೂಸುಫ್ ನಬ್‌ಹಾನಿ ಕುಕ್ಕಾಜೆ* 📞00971 553499119    ▪  *ಬೇರೊಂದು* ಗಮನಾರ್ಹ ಸಂಗತಿಯೆಂದರೆ, ಅಲ್ಲಾಹನು ಆದಮರಿಗೆ ಸುಜೂದು ಮಾಡಲು ನಿರ್ದೇಶಿಸಿದಾಗ ಪ್ರಥಮವಾಗಿ ಸುಜೂದು ಮಾಡಿದ್ದು ಇಸ್‌ರಾಫೀಲ್ (ಅ) ಆಗಿತ್ತು. ಆ ಕಾರಣದಿಂದ ಅಲ್ಲಾಹನ ಭಾಗದ ಕಾಣಿಕೆ ಮತ್ತು ಗೌರವ ಎಂಬಂತೆ, ಅವರು ಸುಜೂದು ಮಾಡಿ ಎದ್ದೇಳಿದಾಗ ಅವರ ಹಣೆಯಲ್ಲಿ ಪವಿತ್ರ ಖುರ್‌ಆನ್ ಸಂಪೂರ್ಣವಾಗಿ ಬರೆಯಲಾಗಿತ್ತು. (printing)    ▪ *ಅಲ್ಲಾಹನು* ಮನುಷ್ಯ ಪಿತಾ ಹಝ್ರತ್ ಆದಮ್ (ಅ) ರನ್ನು ಸೃಷ್ಟಿಸಿ ನಂತರ ಸ್ವರ್ಗ ಪ್ರವೇಶಿಸಿ  ಅಲ್ಲಿರುವ ಎಲ್ಲಾ ಸುಖ ಸೌಖರ್ಯಗಳನ್ನು ಬಳಸಲು ಅನುಮತಿ ಕೊಟ್ಟು ನಂತರ ಒಂದು ಮರದತ್ತ ಸನ್ನೆ ಮಾಡಿ *"ಈ ಮರದತ್ತ ನೀವು ಬರಬಾರದು. ಮಾತ್ರವಲ್ಲ ಅದರಿಂದ ಯಾವುದೇ ಹಣ್ಣನ್ನು ಕಿತ್ತು ತಿನ್ನಬಾರದು"* ಎಂದು ಆಜ್ಞಾಪಿಸಿದನು. ಆ ಆಜ್ಞೆಗೆ ಸಂಪೂರ್ಣವಾಗಿ‌ ವಿಧೇಯನಾದ ಹಝ್ರತ್ ಆದಮರು *"ನಾನು ಮತ್ತು ನನ್ನ ಬಾಳ ಸಂಗಾತಿ ಬೀವಿ ಹವ್ವಾ ಎಂದಿಗೂ ನಿನ್ನ ಆಜ್ಞೆ ಉಲ್ಲಂಘನೆ ಮಾಡಲಾರೆವು."* ಎಂದು ಕರಾರು ಮಾಡಿದರು.    ▪  *ಆದರೆ* ಇಬ್‌ಲೀಸನ ಕುತಂತ್ರಕ್ಕೆ ಬಲಿಯಾದ ಅವರು ಅಲ್ಲಾಹನಾಗಿ ಮಾಡಿದ ಕರಾರನ್ನು ಮರೆತು ನಿಷೇಧಿತ ಮರದಿಂದ ಹಣ್ಣು ಕಿತ್ತು ತೆಗೆದರು. ಅರಬಿ ಭಾಷೆಯಲ್ಲಿ *"نسيان"* (ನಿಸ್‌ಯ...

ಸಾಂಕ್ರಾಮಿಕ ರೋಗಕ್ಕೆ ಮಂಕೂಸ್ ಮೌಲಿದ್ ಪರಿಹಾರವೇ

ಸಾಂಕ್ರಾಮಿಕ ರೋಗಕ್ಕೆ ಮಂಕೂಸ್ ಮೌಲಿದ್ ಪರಿಹಾರವೇ -------------------------------------------------- 📝 ಮುನೀರ್ ಸಖಾಫಿ ಸಾಲೆತ್ತೂರು. ರೋಗವನ್ನು ಅಲ್ಲಾಹನು ನೀಡುತ್ತಾನೆ. ಅಲ್ಲಾಹನು ರೋಗ ನೀಡುವುದರೊಂದಿಗೆ ಅದಕ್ಕಿರುವ ಔಷಧಿಯನ್ನೂ  ಇಟ್ಟಿದ್ದಾನೆ. ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಒಂದು ಹದೀಸ್ ನೋಡಿ, تداووا فان الله عزوجل لم ينزل داء الا وضع له دواء (الادب المفرد للبخاري 463  ಹ.ನಂಬ್ರ) ನೀವು ಚಿಕಿತ್ಸೆ ಮಾಡಿರಿ,ಅಲ್ಲಾಹನು ಯಾವ ರೋಗವನ್ನು ನೀಡಿದ್ದಾನೋ ಅದಕ್ಕಿರುವ ಔಷಧಿಯನ್ನೂ ನೀಡಿದ್ದಾನೆ. (ಇಮಾಮ್ ಬುಖಾರಿಯ ಅದಬುಲ್ ಮುಫ್ರದ್ 1/109 )ಸಹಿತ ನೂರಾರು ಮುಹದ್ದಿಸ್ ಗಳು ಈ ಹದೀಸ್ ವರದಿ ಮಾಡಿದ್ದಾರೆ. ರೋಗಕ್ಕೆ ಎರಡು ರೀತಿಯಲ್ಲಿ ಚಿಕಿತ್ಸೆ ನಡೆಸಬಹುದಾಗಿದೆ. 1.ಭೌತಿಕವಾದ ಚಿಕಿತ್ಸೆ 2.ಅಭೌತಿಕವಾದ ಚಿಕಿತ್ಸೆ. ನುರಿತ ವೈಧ್ಯರನ್ನು ಸಮೀಪಿಸಿ ತನ್ನ ರೋಗಕ್ಕಿರುವ ಚಿಕಿತ್ಸೆಯನ್ನು ಮಾಡುವುದು  ಒಂದನೇಯದ್ದಾದರೆ ಖುರ್'ಆನ್ ಮತ್ತು ಹದೀಸ್ ಗಳ ಮೂಲಕ ವರದಿಯಾದ ದ್ಸಿಕ್ರ್ ಗಳನ್ನು ಪಠಿಸುವ ಮೂಲಕ ಮಾಡುವ ಚಿಕಿತ್ಸೆಯಾಗಿದೆ ಎರಡನೇಯದ್ದು. ಈ ಎರಡು ರೂಪಗಳನ್ನು ಇಸ್ಲಾಮ್  ಅಂಗೀಕರಿಸಿದೆ. ಕೆಲವೊಮ್ಮೆ ವೈಧ್ಯರು ಹೇಳುವುದುಂಟು.ನಮ್ಮ  ಕೊನೇ ಪ್ರಯತ್ನವೂ ಮುಗಿದಿದೆ.ಇನ್ನೇನಾದರು ನಿಮ್ಮ ಪ್ರಾರ್ಥನೆಯ ಮೂಲಕ ವಾಸಿಯಾಗಬೇಕಿದೆ. ರೋಗದ ವೇಳೆ ಔಷಧಿ ಸ...

ಸಾಂಕ್ರಾಮಿಕ ರೋಗ ಏನು ಮಾಡಬೇಕು

1) ಸಾಂಕ್ರಾಮಿಕ ರೋಗಗಳು ತೀವ್ರವಾಗಿ ಹರಡುವಾಗ ಜನರು ಜಾಗರೂಕರಾಗಬೇಕು. ಹಾಗೂ ತಜ್ಞ ವೈದ್ಯರ ನಿರ್ದೇಶಗಳನ್ನು ಪಾಲಿಸಬೇಕು ಅದು ಎಲ್ಲರ ಕರ್ತವ್ಯ  ಕೂಡಾ ಎಂದು ವಿಶ್ವ ವಿಖ್ಯಾತ ವಿದ್ವಾಂಸ ಇಬ್ನು ಹಜರ್ ಹೈತಮೀ ( ರ ) ಹೇಳಿದ್ದಾರೆ *( ಫತಾವಲ್ ಕುಬ್‌ರಾ 4/4 )* ﻭﻣﻨﻬﺎ ﻳﻨﺒﻐﻲ ﺃﺧﺬا ﻣﻤﺎ ﻣﺮ ﻣﻦ ﻣﻨﻊ اﻟﺘﻌﺮﺽ ﻟﻠﺒﻼء، ﻭﻣﻦ ﻣﺸﺮﻭﻋﻴﺔ اﻟﺪﻭاء اﻟﺘﺤﺮﺯ ﺃﻳﺎﻡ اﻟﻮﺑﺎء ﻣﻦ ﺃﻣﻮﺭ ﺃﻭﺻﻰ ﺑﻬﺎ ﺑﻌﺾ ﺣﺬاﻕ اﻷﻃﺒﺎء ﻭاﻻﻋﺘﻨﺎء ﺑﺄﻣﻮﺭ ﺃﺧﺮﻯ ( الفتاوى الكبرى للشيخ ابن حجر رحمه الله - باب الوصية - الجزء الرابع - رقم الصفحة ٤) -------------------------------- 2) *ಸಾಂಕ್ರಾಮಿಕ ರೋಗ ಹರಡುವಾಗ ಈ ಕೆಳಗಿನ ದುಆಗಳನ್ನು ಹೆಚ್ಚಿಸೋಣ* 1.لا حول ولا قوة الا بالله.. *ಈ ಝಿಕ್ರ್ 99 ರೋಗಗಳಿಗೆ ಔಷಧ ವೆಂದು ನಬಿ ಸ್ವಲ್ಲಲ್ಲಾಹು ಅಲೈಹಿವಸಲ್ಲಂ ಹೇಳಿದ್ದಾರೆ* أللهم اني أعوذ بك من البرص والجنون والجذام ومن سيئ الأسقام  ನಬಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ನಿತ್ಯ ನಡೆಸುತ್ತಿದ್ದ ಪ್ರಾರ್ಥನೆ. ----------------------------- 3) *ಸಾಂಕ್ರಾಮಿಕ ರೋಗ ಹರಡುವ ಎಲ್ಲಾ ದಿನಗಳಲ್ಲಿ* *سَلَامٌ قَوْلًا مِّن رَّبٍّ رَّحِيمٍ* *280 ಸಲ ಪಠಿಸಿದರೆ; ಸಾಂಕ್ರಾಮಿಕ ರೋಗಗಳಿಂದ ರಕ್ಷಣೆ ಪಡೆಯಬಹುದು.* علاج الوباء : من ذكر و سلام قولا من رب رحيم » [يس: 58] ...

ಸಾಂಕ್ರಾಮಿಕ ರೋಗ, ಮನೆಯಲ್ಲಿಯೇ ಇರಿ

ಮನೆಯಲ್ಲಿಯೇ ಇರಿ * ಘಟನೆ - 1 * ಉಮರ್(ರ‌.ಅ)ರ ಆಳ್ವಿಕೆಯ ಕಾಲ.  ಸೈನ್ಯದ ಕಮಾಂಡರ್ ಅಬೂ ಉಬೈದಾ(ರ.ಅ) ಬೈತುಲ್ ಮುಖದ್ದಸ್ ವಿಜಯದ ನಂತರ ಶಾಮ್ ನಲ್ಲಿ ಪರ್ಯಟನೆ ಮಾಡುತ್ತಿದ್ದಾಗ ಅಲ್ಲಿ ಪ್ಲೇಗ್ ರೋಗ ಹರಡಿತು.    ಅಬೂ ಉಬೈದಾ(ರ.ಅ) ಸೈನ್ಯದಲ್ಲಿ ತುಂಬಾ ಅನಿವಾರ್ಯ ವೈಕ್ತಿಯಾಗಿದ್ದರು.ಮುಂದಿನ‌ ವಿಜಯಕ್ಕೆ ಅವರ ಅಗತ್ಯವಿತ್ತು. ಹೇಗಾದರೂ ಮದೀನಾಕ್ಕೆ ಮರಳಬೇಕೆಂದು ಉಮರ್(ರ.ಅ) ಒತ್ತಾಯಿಸಿದರು.  * ಆದರೆ ಸಾಂಕ್ರಾಮಿಕ ಕಾಯಿಲೆಯ ಸಂದರ್ಭದಲ್ಲಿ ಯಾವ ನಿಲುವು ತೆಗೆದುಕೊಳ್ಳಬೇಕೇಂದು  ಪ್ರವಾದಿವರ್ಯ  ﷺ  ರಿಂದ ಕಲಿತಿದ್ದ ಅಬೂ ಉಬೈದಾ(ರ.ಅ) ಅಲ್ಲಿಯೇ ಕುಳಿತು ಕೊಳ್ಳುವ ದಿಟ್ಟ ನಿರ್ಧಾರ ಕೈಗೊಂಡರು * .  . * ಯಾವುದೇ ಪ್ರದೇಶದಲ್ಲಿ ಪ್ಲೇಗ್ ಹರಡಿದ್ದು ನಿಮಗೆ ತಿಳಿದರೆ ನೀವು ಅಲ್ಲಿಗೆ ಹೋಗ ಬಾರದು. ನೀವು ವಾಸಿಸುವ ಸ್ಥಳದಲ್ಲಿ ಪ್ಲೇಗ್ ಹರಡಿದರೆ ನೀವು ಅಲ್ಲಿಂದ ಹೊರ ಹೋಗಲೂ ಬಾರದು." *   . ಸಾರ್ವಜನಿಕ ಸಂಪರ್ಕ ತಡೆಯ (Health courantain) ಕುರಿತ ಈ ಅಧಿಕೃತ ವಚನದ ಮಹತ್ವ ಮನಗಂಡ ಅಬೂ ಉಬೈದಾ(ರ.ಅ) ಸ್ವಯಂ-ಸಂಪರ್ಕ ತಡೆಯಲು ಹಾಗೂ ತನ್ನನ್ನು ತಾನೇ ತಡೆಯಲು ಇಚ್ಛಿಸಿದರು.  ಈ ಸಮಯದಲ್ಲಿ ನಾನು ಮದೀನಾಕ್ಕೆ ಪಯಣಿಸಿದರೆ ನನ್ನ ಕಾರಣ ಈ ರೋಗ‌ ಇತರರಿಗೆ ಹರಡುತ್ತದೆ " ಎಂದು ಅವರು ಸ್ವತಃ ಮನವರಿಕೆ ಮಾಡಿಕೊಂಡರು. ಕೊನೆಗೆ  ಸೈನಿಕನಾಗಿ ಮತ್ತು ನಾಯಕನಾಗಿ ಅನೇಕ ...

ಮಾನವನೆಂಬ ಅದ್ಭುತ ಜೀವಿ..

ಮಾನವನೆಂಬ ಅದ್ಭುತ ಜೀವಿ.. *ಭಾಗ    👉 1* *✍🏻ಯೂಸುಫ್ ನಬ್‌ಹಾನಿ ಕುಕ್ಕಾಜೆ* 📞00971 553499119    ▪ *ಪವಿತ್ರ* ಖುರ್‌ಆನಿನಲ್ಲಿ ಅಲ್ಲಾಹನು  *"ಮನುಷ್ಯ, ಮನುಷ್ಯರು"* (الانسان، الانس، أناس، الناس) ಎಂಬ ಪದಗಳನ್ನು ಸುಮಾರು ನೂರಕ್ಕಿಂತಲೂ ಹೆಚ್ಚು ಕಡೆಗಳಲ್ಲಿ ಬಳಸಿದ್ದಾನೆ. ಮಾತ್ರವಲ್ಲ *"ಆದಮನ ಸಂತತಿಯನ್ನು ನಾವು ಗೌರವಿಸಿದ್ದೇವೆ. ನಾವು ಸೃಷ್ಟಿದವುಗಳ ಪೈಕಿ ಹೆಚ್ಚಿನವರಿಗಿಂತಲೂ ಅವರಿಗೆ ನಾವು ಹೆಚ್ಚು ಶ್ರೇಷ್ಠತೆಯನ್ನು ದಯೆಪಾಲಿಸಿದ್ದೇವೆ. ‌ಮನುಷ್ಯನನ್ನು ನಾವು ಬಹಳ ಅಂದವಾದ ರೂಪದಲ್ಲಿ ಸೃಷ್ಟಿಸಿದ್ದೇವೆ."* ಇತ್ಯಾದಿ ಪವಿತ್ರ ಖುರ್‌ಆನಿನ ಸೂಕ್ತಗಳು ಮಾನವನ ಸ್ಥಾನಮಾನವನ್ನು ಸೂಚಿಸುತ್ತದೆ. ಉಲಮಾಗಳ ಅಭಿಪ್ರಾಯದಂತೆ ಮನುಷ್ಯನಷ್ಟು ಚಂದದ ಜೀವಿಯನ್ನು ಅವನು ಸೃಷ್ಟಿಸಿಲ್ಲ ಎಂದಾಗಿದೆ.    ▪ *ಅಲ್ಲಾಹನು* ಮನುಷ್ಯಪಿತಾ ಹಝ್ರತ್ ಆದಮ್ (ಅ) ರನ್ನು ಸೃಷ್ಟಿಸಲು ಬಯಸಿದಾಗ *"ನಾನು ನಿನ್ನಿಂದ ಒಬ್ಬ ಮನುಷ್ಯನನ್ನು ಸೃಷ್ಟಿಸಲು ಸ್ವಲ್ಪ ಮಣ್ಣು ತೆಗೆಯುತ್ತೇನೆ. ಆ ಮನುಷ್ಯನ ಸಂತತಿಗಳಲ್ಲಿ ಕೆಲವರು ಸ್ವರ್ಗಕ್ಕೂ ಕೆಲವರು ನರಕಕ್ಕೂ ಹೋಗುವರು"* ಎಂದು ಭೂಮಿಗೆ ಸಂದೇಶ ಕಳುಹಿಸಿದ್ದನು. ತನ್ನ ದೇಹದ ಮಣ್ಣಿನಿಂದ ಸೃಷ್ಟಿಸಲ್ಪಡುವ ಒಂದು ಜೀವಿಯು ನರಕ ಪ್ರವೇಸುವುದೆಂದು ತಿಳಿದಾಗ ಭೂಮಿಯು ಉಸಿರುಗಟ್ಟಿ ಅಳಲು ಶುರುಮಾಡಿತು. ಆ ತಡೆಯಲಾರದ ಸಂಕಟದ ಕಾರಣದಿಂದ ಭೂಮಿಯು ಒಡೆದು ನದಿಗಳ...

ಎರಡು ಕಫನ್ ಬಟ್ಟೆಯಿಂದ ಕಫನ್ ಮಾಡಲ್ಪಟ್ಟ ಭಾಗ್ಯವಂತೆ ಮಹಿಳೆ

ಎರಡು ಕಫನ್ ಬಟ್ಟೆಯಿಂದ ಕಫನ್ ಮಾಡಲ್ಪಟ್ಟ ಭಾಗ್ಯವಂತೆ ಮಹಿಳೆ *✍🏻ಯೂಸುಫ್ ನಬ್‌ಹಾನಿ ಕುಕ್ಕಾಜೆ* 📞00971 553499119    ▪ *ಪ್ರವಾದಿ* ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಬಾಳ ಸಂಗಾತಿ ಬೀವಿ ಖದೀಜಾಃ (ರ) ರು ಮರಣ ಶಯ್ಯೆಯಲ್ಲಿರುವಾಗ ತನ್ನ ಸಮೀಪವಿದ್ದ ಪತಿ ಪ್ರವಾದಿಯವರಲ್ಲಿ ಮುಸ್ಲಿಮ್ ಉಮ್ಮತಿಗೆ ಕೆಲವು ಮರೆಯಲಾಗದ ವಸಿಯ್ಯತ್‌ಗಳನ್ನು ಮಾಡಿದ್ದರು.    *ಬೀವಿ ಖದೀಜಾಃ (ರ)*: ನಮ್ಮ ಸುಮಾರು ಇಪ್ಪತ್ತೈದು ‌ವರ್ಷಗಳ ದಾಂಪತ್ಯ ಬದುಕಿನಲ್ಲಿ ನನಗೆ ನಿಮ್ಮನ್ನು ಬೇಕಾದ ಹಾಗೆ ಸಂತೋಷ ಪಡಿಸಲು ಸಾದ್ಯವಾಗಲಿಲ್ಲ. ನನ್ನ ಕರ್ಮದಲ್ಲೋ ಮಾತಿನಲ್ಲೋ‌ ಏನಾದರೂ ತಮ್ಮ ಮನಸ್ಸಿಗೆ ಬೇಸರವಾಗುವುದು ಉಂಟಾಗಿದ್ದರೆ, ನೀವು ನನಗೆ ಮಾಫಿ ಮಾಡಬೇಕು.  *ಪ್ರವಾದಿ ಮುಹಮ್ಮದ್ (ಸ ಅ)*: ಇಲ್ಲ.. ಇಲ್ಲ.. ಹಾಗೆ ಹೇಳುವ ಅಗತ್ಯವಿಲ್ಲ. ನಿನ್ನಿಂದ ನನಗೆ ಬೇಸರವಾಗುವ ಯಾವ ಘಟನೆಯೂ ನಡೆದಿಲ್ಲ. ಶ್ರೀಮಂತ ಮತ್ತು ಪ್ರತಿಷ್ಠಿತ ಕುಟುಂಬದಲ್ಲಿ ಹುಟ್ಟಿ ಬದುಕಿದ ಕುಲೀನೆಯಾದ ನಿನಗೆ ಬಡತನವನ್ನು ಇಷ್ಟಪಟ್ಟ ನನ್ನ ಮನೆಯಲ್ಲಿ ಎಷ್ಟೋ ತೊಂದರೆಗಳಾಗಿರಬಹುದು. ನೀನು ಅದನ್ನೆಲ್ಲಾ ಲೆಕ್ಕಿಸದೆ ಪವಿತ್ರ ಇಸ್ಲಾಮಿಗೆ ಬೇಕಾಗಿ ಎಷ್ಟೋ ಹಣ ಖರ್ಚಿ ಮಾಡಿದಿ. ನಿನ್ನ ಹಣವಾಗಿತ್ತು ನನಗೆ ಈ ಮಹಾಕಾರ್ಯದಲ್ಲಿ ಮುಂದೆ ಸಾಗಲು ಉತ್ತೇಜನ ಮಾಡಿ ಹುರುಪು ಕೊಟ್ಟದ್ದು. ಆದ್ದರಿಂದ ಅಂತಹ ಕ್ಷಮಾಪಣೆಯ ಮಾತು ನೀನು ಹೇಳುವ ಅಗತ್ಯವಿಲ್ಲ.  ...

ಫರೋವನ ಮನೆಗೆ ಬೇಟಿಕೊಟ್ಟ ಇಬ್‌ಲೀಸ್

ಫರೋವನ ಮನೆಗೆ ಬೇಟಿಕೊಟ್ಟ ಇಬ್‌ಲೀಸ್ *✍🏻ಯೂಸುಫ್ ನಬ್‌ಹಾನಿ ಕುಕ್ಕಾಜೆ* 📞00971553499119    ▪ *ಒಮ್ಮೆ* ಇಬ್‌ಲೀಸನು (ಲ) ಫಿರ್ಔನನ ಈಜಿಪ್ತಿನಲ್ಲಿದ್ದ ದರ್ಬಾರಿಗೆ ಸಂದರ್ಶನ ಕೊಟ್ಟನು. ಫಿರ್ಔನನು ತನ್ನ ಅರಮನೆಯ ಅಂಗಳದಲ್ಲಿ ಬಹಳ ಆರಾಮವಾಗಿ ಕುಳಿತಿದ್ದನು. ಅಲ್ಲಿ ತಲುಪಿದ ಇಬ್‌ಲೀಸನು ಅವನಲ್ಲಿ ಕೇಳಿದನು. *"ನೀನು ಜನರಲ್ಲಿ ದೈವ, ದೇವರು ಅಂತ ವಾದಿಸುತ್ತಿಯಾ..?"* ಆಗ ಫರೋವನು ಹೇಳಿದನು. *"ಹೌದು."* "ನೀನು ದೇವರು ಎಂಬುದಕ್ಕೆ ಏನಾದರು ಆಧಾರವಿದೆಯಾ..?" ಫರೋವನಲ್ಲಿ ಇಬ್‌ಲೀಸನ ಎರಡನೇ ಪ್ರಶ್ನೆಯಾಗಿತ್ತು.    ▪ *ಕೂಡಲೇ* ಫರೋವನು (ಲ) ತನ್ನ ಎಲ್ಲಾ ಇಂದ್ರಜಾಲ ವಿದ್ಯೆ ಗೊತ್ತಿರುವ ಪರಿಣತರನ್ನು ಹಾಜರುಪಡಿಸಿ ಅವರಿಂದ ಅದ್ಭುತಗಳನ್ನು ಪ್ರದರ್ಶನ ಮಾಡಲು ಹೇಳಿದನು. ಸುಮಾರು ಒಂದು ಸಾವಿರದಷ್ಟು ಇಂದ್ರಜಾಲ ವಿದ್ಯೆ ತಿಳಿದಿದ್ದ ಪರಿಣತರು ತಮ್ಮ ಕೈಯಲ್ಲಿದ್ದ ಹಗ್ಗದ ತುಂಡುಗಳನ್ನು ನೆಲದಲ್ಲಿ ಹಾಕಿದಾಗ ಬಗೆ ಬಗೆಗಿನ ಹಾವುಗಳು ಪ್ರತ್ಯಕ್ಷವಾಯಿತು.    ▪ *ಇಬ್‌ಲೀಸನು*  ಒಂದು ಶ್ವಾಸ ಬಿಟ್ಟನು. ಶ್ವಾಸ ಬಿಟ್ಟದ್ದೇ ತಡ ಅಲ್ಲಿದ್ದ ಎಲ್ಲಾ ಹಾವುಗಳು ದೂಳೀಪಟವಾಯಿತು. ನಂತರ ಒಂದು ಶ್ವಾಸ ಕೂಡ ಬಿಟ್ಟನು. ಆಗ ಮೊದಲ ಅವರು ತೋರಿಸಿದ ಹಾವಿಗಿಂತಲೂ ದೊಡ್ಡ ಹಾವುಗಳು ಪ್ರತ್ಯಕ್ಷವಾದವು. ಫರೋವನಲ್ಲಿ ಇಬ್‌ಲೀಸನು ಕೇಳಿದನು. *"ಈಗ ಯಾರ ಇಂದ್ರಜಾಲ ಉಷಾರು..? ನಿನ್ನದಾ ಅಥವಾ ನನ್ನದಾ..?"...

ಮೂರ್ಛೆತಪ್ಪಿ ಕುಸಿದು ಬಿದ್ದ ಇಮಾಮ್ ದಾವೂದ್ ಅತ್ವಾಯೀ (ರ)

ಮೂರ್ಛೆತಪ್ಪಿ ಕುಸಿದು ಬಿದ್ದ ಇಮಾಮ್ ದಾವೂದ್ ಅತ್ವಾಯೀ (ರ) *✍🏻ಯೂಸುಫ್ ನಬ್‌ಹಾನಿ ಕುಕ್ಕಾಜೆ* 📞00971 5534991199 ▪ *ಪ್ರಖ್ಯಾತ* ಪಂಡಿತ ಮತ್ತು ಸೂಫಿವರ್ಯರಾದ ಶೈಖ್ ದಾವೂದ್ ಅತ್ವಾಯೀ (ರ) ರವರು ಒಮ್ಮೆ ಒಂದು ದಾರಿಯಾಗಿ ಹೋಗುತ್ತಿರುವಾಗ ಥಟ್ಟನೆ ಮೂರ್ಛೆತಪ್ಪಿ ಕುಸಿದು ಬಿದ್ದರು. ನಂತರ ಅವರ ಸಂಗಡಿಗರು ಅವರನ್ನು ಅವರ ಮನೆಗೆ ಎತ್ತಿಕೊಂಡು ಹೋದರು. ಸ್ವಲ್ಪ ಕಳೆದು ಮೂರ್ಛೆ ಮರಳಿ ಬಂದಾಗ ಅಲ್ಲಿ ನೆರೆದಿದ್ದವರಲ್ಲಿ ಒಬ್ಬರು ಮೂರ್ಛೆ ತಪ್ಪಿಹೋದ ಕಾರಣವೇನೆಂದು ಇಮಾಮರಲ್ಲಿ ಕೇಳಿದರು. ಇಮಾಮ್ ದಾವೂದ್ ಅತ್ವಾಯೀ (ರ) ಹೇಳಿದರು. *"ಏನಿಲ್ಲ. ಕೆಲವು ವರ್ಷಗಳ ಮುಂಚೆ ನನ್ನ ಬದುಕಿನಲ್ಲಿ ಒಮ್ಮೆ ಆ ಜಾಗದಲ್ಲಿ ಕುಳಿತು ಒಬ್ಬರನ್ನು  "ಗೀಬತ್" (ಹಿಂದಿನಿಂದ ದೂರುವುದು) ಹೇಳಿದ್ದೆನು. ಇವತ್ತು ನಾನು ಆ ಜಾಗ ತಲುಪಿದಾಗ ಅದರ ನೆನಪಾಗಿ ನಾಳೆ ಪರಲೋಕದಲ್ಲಿ ಅಲ್ಲಾಹುವಿನ ಸನ್ನಿಧಿಯಲ್ಲಿ ವಿಚಾರಣೆ ಮಾಡುವಾಗ ಈ ತಪ್ಪಿಗೆ ಹೇಗೆ ಉತ್ತರ ಕೊಡುವುದು ಎಂಬ ಹೆದರಿಕೆ ಬಂದಾಗ ತಾನರಿಯದೆಯೇ ಮೂರ್ಛೆತಪ್ಪಿ ಬಿದ್ದೆನು."*    ▪ *ಇಮಾಮ್* ಹಸನುಲ್ ಬಸ್ವರೀ (ರ) ರನ್ನು ಒಬ್ಬರು ಹಿಂದಿನಿಂದ *ಗೀಬತ್* ಹೇಳಿದರು. ಗೀಬತ್ ಹೇಳಿದ ವಿಷಯ ಇಮಾಮರಿಗೆ ತಿಳಿದಾಗ ಗೀಬತ್ ಹೇಳಿದ ವ್ಯಕ್ತಿಗೆ ಬಹಳ ಉತ್ತಮ ದರ್ಜೆಯ ಒಂದು ಪೆಟ್ಟಿಗೆ ಖರ್ಜೂರ ಉಡುಗೊರೆಯಾಗಿ ಕೊಟ್ಟು ಕಳುಹಿಸಿದರು.    ▪ *ತಪ್ಪು* ಮಾಡಿದ ವ್ಯಕ್ತಿಗೆ ಹದಿಯ ಕಳುಹಿಸಿದ ...

ಒಂದೇ ಉಡುಪಿನಲ್ಲಿ ದಿನ ದೂಡುತ್ತಿದ್ದ ಗವರ್ನರ್

ಒಂದೇ ಉಡುಪಿನಲ್ಲಿ ದಿನ ದೂಡುತ್ತಿದ್ದ ಗವರ್ನರ್ *✍🏻ಯೂಸುಫ್ ನಬ್‌ಹಾನಿ ಕುಕ್ಕಾಜೆ* 📞00971 553499119 ▪ *ಒಮ್ಮೆ* ಇಸ್ಲಾಮಿನ ಎರಡನೇ ಖಲೀಫಾಃ ಹಝ್ರತ್ ಉಮರುಲ್ ಫಾರೂಕ್ (ರ) ರವರು ಸಿರಿಯಾದ *"ಹಿಮಸ್"* ಪ್ರಾಂತದ ಅಂದಿನ ಗವರ್ನರ್ ಆಗಿದ್ದ ಖ್ಯಾತ ಸ್ವಹಾಬಿ ಹಝ್ರತ್ ಸಯೀದ್ ಬಿನ್ ಆಮಿರ್ (ರ) ರವರಿಗೆ ಅವರ ಆಡಳಿತ ಪ್ರದೇಶದಲ್ಲಿರುವ ಎಲ್ಲಾ ಕಡು ಬಡವರ ಪಟ್ಟಿ ಮಾಡಿ ಕೇಂದ್ರ ಸರಕಾರದ ರಾಜಧಾನಿಯಾಗಿದ್ದ ಮದೀನಕ್ಕೆ ಕಳುಹಿಸಿ ಕೊಡಲು ಹೇಳಿದರು. ಕೇಂದ್ರ ಆಡಳಿತದ ಜವಾಬ್ದಾರಿಯಲ್ಲಿರುವ ಸಾರ್ವಜನಿಕ ಸೊತ್ತನ್ನು (ಬೈತುಲ್ ಮಾಲ್) ಬಡವರಿಗೆ ಪಾಲು ಮಾಡಿಕೊಡಲಾಗಿತ್ತು ಈ ಸುತ್ತೋಲೆ.    ▪ *ಸಿರಿಯಾದಿಂದ* ಖಲೀಫರ ಹತ್ತಿರ ಬಂದ ಬಡವರ ಪಟ್ಟಿಯಲ್ಲಿ ಅಲ್ಲಿನ ಗವರ್ನರ್ *"ಸಯೀದ್ ಬಿನ್ ಆಮಿರ್"* ರವರ ಹೆಸರೂ ಇತ್ತು. ಪಟ್ಟಿ ನೋಡಿದ ಹಝ್ರತ್ ಉಮರುಲ್ ಫಾರೂಖ್ (ರ) ರವರು ಅದ್ಭುತಗೊಂಡು ಅಲ್ಲಿನ ಕೆಲವು ಹಿರಿಯರನ್ನು ಸಂಪರ್ಕಿಸಿ ಇದರ ಬಗ್ಗೆ ವಿಚಾರಣೆ ನಡೆಸಿದಾಗ ಅವರು ಹೇಳಿದರು. *"ನಮ್ಮ ಗವರ್ನರ್ ನೀವು ತಿಂಗಳಲ್ಲಿ ಅವರಿಗೆ ಕೊಟ್ಟು ಕಳುಹಿಸುವ ಸಂಬಳದಲ್ಲಿ ಮನೆಯ ಅಗತ್ಯ ಊಟ ಮತ್ತು ಔಷಧಿಗೆ ಹೊರತು ಬಾಕಿಯಿರುವ ಎಲ್ಲವನ್ನೂ ಬಡವರಿಗೆ ಧಾನ ಮಾಡುತ್ತಾರೆ."*    ▪ *ಆಗ* ಖಲೀಫರು ಅವರಲ್ಲಿ ಕೇಳಿದರು. *"ನಿಮಗೆ ಊರಿನವರಿಗೆ ಅವರ ಬಗ್ಗೆ ಬೇರೆ ಏನಾದರೂ ಕೊರತೆ ಹೇಳಲಿಕ್ಕೆ ಇದೆಯಾ..?"* ಆಗ ಅವರು  ...

ದೂರು ಕೊಡಲು ಹೋದವನ ಮೇಲೆ ಕೇಸು ದಾಖಲು

ದೂರು ಕೊಡಲು ಹೋದವನ ಮೇಲೆ ಕೇಸು ದಾಖಲು *✍🏻ಯೂಸುಫ್ ನಬ್‌ಹಾನಿ ಕುಕ್ಕಾಜೆ* 📞00971 553499119    ▪ *ಖಲೀಫಾ* ಉಮರ್ (ರ) ರ ಆಡಳಿತ ಕಾಲದಲ್ಲಿ ಒಬ್ಬ ಬಡಪಾಯಿಯು ಖಲೀಫರ ಸನ್ನಿಧಿಗೆ ಬಂದು ಹೇಳಿದನು. *"ಖಲೀಫರೇ.., ನನ್ನ ಮಗನ ಸ್ವಭಾವ ಮತ್ತು ಗುಣ ನಡತೆ ಸರಿ ಇಲ್ಲ. ತಂದೆ ತಾಯಿಗಳಿಗೆ ಗೌರವ ಕೊಡುವುದಿಲ್ಲ. ನಾವು ಹೇಳಿದಂತೆ ಕೇಳುವುದಿಲ್ಲ. ಹೇಳಿದ ಯಾವ ಕೆಲಸವನ್ನು ಕೂಡ ಮಾಡುವುದಿಲ್ಲ. ಯಾವ ಕೆಲಸಕ್ಕೆ ಹೋಗುವುದಿಲ್ಲ."*    ▪  *ಕೂಡಲೇ* ಖಲೀಫರು ಅವನ ಮಗನನ್ನು ತನ್ನ ಸನ್ನಿಧಿಗೆ ಹಾಜರುಪಡಿಸಿ ತಂದೆ ತಾಯಿಗಳ ಗೌರವ ಮತ್ತು ಅವರಿಗೆ ಇಸ್ಲಾಮಿನಲ್ಲಿರುವ ಬೆಲೆಯ ಬಗ್ಗೆ ಸವಿಸ್ತಾರವಾಗಿ ಅವನಿಗೆ ವಿವರಿಸಿ ಕೊಟ್ಟರು. ಖಲೀಫರ ಉಪದೇಶವನ್ನು ಚೆನ್ನಾಗಿ ಆಲಿಸಿದ ಆ ಬಾಲಕನು ಕೊನೆಗೆ ಖಲೀಫರಲ್ಲಿ ಕೇಳಿದನು. *"ಖಲೀಫರೇ.., ಹಾಗಾದರೆ ತಂದೆಯಾದ ಒಬ್ಬರಿಗೆ ಮಕ್ಕಳಿಗೆ ಬೇಕಾಗಿ ಮಾಡಬೇಕಾದ ಕರ್ತವ್ಯ ಏನೂ ಇಲ್ಲವೇ.."*  ಖಲೀಫರು ಹೇಳಿದರು. *"ಖಂಡಿತವಾಗಿ ಇದೆ"*  ಆಗ ಆ ಹುಡುಗ ಹೇಳಿದನು. *"ಹಾಗಾದರೆ ಅದೇನೆಂದು ನನಗೆ ಒಂದು ಸವಿಸ್ತಾರವಾಗಿ ವಿವರಿಸಿ ಕೊಡುವಿರೇ ಖಲೀಫರೇ..?"*    ▪ *ಹಝ್ರತ್* ಉಮರ್ (ರ) ರವರು ಹೇಳಿದರು. *"ಮೊದಲಾಗಿ ಹುಟ್ಟಿದ ಕೂಡಲೇ ಒಂದು ಒಳ್ಳೆಯ ಹೆಸರು ಇಡಬೇಕು. ನಂತರ ವಿವೇಕ ಪ್ರಾಯ ತಲುಪುವಾಗ ಇಸ್ಲಾಮಿನ ಬಗ್ಗೆ ಕಲಿಸಿ ಕೊಡಬೇಕು. ಮದ್ರಸಕ್ಕೆ ದಾಖಲು ಮಾಡಬೇಕು ಇತ್...

ಭಾಷಣ ಮಾಡದೆಯೇ ಭಾಷಣಗಾರನಾದ ಅ‌ಅ್‌ರಾಬಿ

ಭಾಷಣ ಮಾಡದೆಯೇ ಭಾಷಣಗಾರನಾದ ಅ‌ಅ್‌ರಾಬಿ *✍🏻ಯೂಸುಫ್ ನಬ್‌ಹಾನಿ ಕುಕ್ಕಾಜೆ* 📞00971 553499119    ▪ *ಎಲ್ಲರೂ*  ಭಾಷಣ ಮಾಡಿ ಜನರೆಡೆಯಲ್ಲಿ ಹೆಸರು ವಾಸಿಯಾಗುತ್ತಿರುವಾಗ ಏನೂ ತಿಳಿಯದ ಒಬ್ಬ ಗ್ರಾಮವಾಸಿ ಅ‌ಅ್‌ರಾಬಿಗೆ  ಹೆಸರುವಾಸಿಯಾಗಬೇಕೆಂಬ ಹಂಬಲವಾಯಿತು.    ▪ *ಒಂದು* ದಿನ ತನ್ನ ಊರಿನಲ್ಲಿ ಜುಮಾಃ ನಮಾಝು ಕಳೆದ ಕೂಡಲೇ ಆತ ಎದ್ದುನಿಂತು ಹೇಳಿದ. *"ಜುಮಾಃ ನಮಾಝಿನಿ ದುಆ ಮುಗಿದ ನಂತರ ಯಾರೂ ಹೋಗಬಾರದು. ನನಗೆ ಒಂದು ಗಂಭೀರ ಭಾಷಣ ಮಾಡಲಿಕ್ಕಿದೆ."*    ▪ *ನಮಾಝು* ಮುಗಿದ ನಂತರ ಯಾರೂ ಹೊರ ಹೋಗದೆ *ಅ‌ಅ್‌ರಾಬಿ* ಏನು ಭಾಷಣ ಮಾಡುತ್ತಾನೆಂದು ನೋಡಬೇಕೆಂದು ಬಹಳ ಕುತೂಹಲದಿಂದ ಎಲ್ಲರೂ ಕಾದು ಕುಳಿತರು.    ▪ *ಭಾಷಣದ* ಪ್ರಾರಂಭದ ಬಿಸ್ಮಿ, ಹಂದ್, ಸ್ವಲಾತ್ ಮುಗಿದ ಕೂಡಲೇ ಅ‌ಅ್‌ರಾಬಿ ಹೇಳಿದ. *"ನಾನಿವತ್ತು ನಿಮ್ಮಲ್ಲಿ ಭಾಷಣ ಮಾಡುವ ವಿಷಯ ನಿಮಗೆ ಏನೆಂದು ಗೊತ್ತಿದೆಯಾ.?*" ಎಲ್ಲರೂ ಏಕ ಸ್ವರದಲ್ಲಿ ಹೇಳಿದರು. *"ಗೊತ್ತಿಲ್ಲ."*    ▪ *"ಇಷ್ಟೊಂದು ಮಹತ್ವದ ವಿಷಯದಲ್ಲಿ ಭಾಷಣ ಮಾಡುವಾಗ ಅದರ ವಿಷಯ ಏನೆಂದು ತಿಳಿಯದ ನಿಮ್ಮಂತಹಾ ಮೂರ್ಖರಿಗೆ ನನ್ನಂತಹಾ ಬುದ್ದಿವಂತರು ಏನು ಭಾಷಣ ಮಾಡುವುದು.? ಸುಮ್ಮನೆ ಸಮಯ ಹಾಳು ಮಾಡಬೇಕಷ್ಟೆ."* ಎಂದು ಹೇಳಿ ಭಾಷಣ ಮಾಡದೆ ವೇದಿಕೆಯಿಂದ ಕೆಳಗಿಳಿದು ಹೋದನು.  ‌ ▪ *ಎರಡನೆಯ* ಶುಕ್ರವಾರವೂ ಕಳೆದ ಶುಕ್ರವಾರದಂದು...

ಸೂರಃ ಯಾಸೀನ್ ಕಂಠಪಾಠ ಪಠಿಸುವ ಅದ್ಭುತ ಗಿಳಿ

ಸೂರಃ ಯಾಸೀನ್ ಕಂಠಪಾಠ ಪಠಿಸುವ ಅದ್ಭುತ  ಗಿಳಿ *✒ಯೂಸುಫ್ ನಬ್‌ಹಾನಿ ಕುಕ್ಕಾಜೆ* 📞00971553499119    ▪ *ಕೆಂಪು,* ಬಿಳಿ, ಹಳದಿ, ಹಸಿರು ಇತ್ಯಾದಿ ಬಣ್ಣಗಳಲ್ಲಿ ಕಾಣಲ್ಪಡುವ ಒಂದು ಚೆಲುವಾದ ಸುಂದರ ಪಕ್ಷಿ ಗಿಳಿ ಅಥವಾ ಗಿಣಿ. ಆದರೆ ಈಗ ಪರಿಸರ ಮಾಲಿನ್ಯ ಮತ್ತು ಇತರ ನೈಸರ್ಗಿಕ ಬದಲಾವಣೆಯಿಂದಾಗಿ ಕೆಂಪು, ಬಿಳಿ ಮತ್ತು ಹಳದಿ ಬಣ್ಣದ ಗಿಳಿಗಳ ಸಂತತಿ ಅವನತಿಯತ್ತ ಹೋಗಿದೆ. ಆದ್ದರಿಂದ ಇತ್ತೀಚಿನ ದಿನಗಳಲ್ಲಿ ಹಸಿರು ಬಣ್ಣದ್ದಲ್ಲದ ಗಿಳಿಗಳು ಕಾಣಸಿಗುವುದು ಬಹಳ ಅಪರೂಪವಾಗಿದೆ.    ▪ *ಸಾಮಾನ್ಯ* ಎರಡರಿಂದ ಆರರ ತನಕ ಮೊಟ್ಟೆಯಿಡುವ ಗಿಳಿಯು ಒಂದು ವರ್ಷದಲ್ಲಿ ಒಮ್ಮೆ ಮಾತ್ರ ಮೊಟ್ಟೆಯಿಡುತ್ತದೆ. ಸುಮಾರು ಇಪ್ಪತ್ತು ದಿನಗಳ ಕಾವು ಕೊಡುವಿಕೆಯ ನಂತರ ಹೊರಬರುವ ಮರಿಯ ಕಣ್ಣು ಮುಚ್ಚಿರುತ್ತದೆ. ಕೆಲವು ದಿನಗಳ ತಾಯಿಯ ಶುಶ್ರೂಷೆಯ ನಂತರ ಮರಿಯ ಕಣ್ಣು ತೆರೆಯಲ್ಪಡುತ್ತದೆ. ನಂತರ ಕ್ರಮೇಣ ಹಾರಲು ತೊಡಗುತ್ತದೆ. ತಾಯಿ ಕಾವು ಕೊಡುವ ಮತ್ತು ಶುಶ್ರೂಷೆ ಮಾಡುವ ಸಂದರ್ಭದಲ್ಲಿ ಸಂಗಾತಿಯಾದ ಗಂಡು ಗಿಳಿಯು ಆಹಾರವನ್ನು ಹುಡುಕಿ ತರುತ್ತದೆ.    ▪ *ಬಹಳ* ಅಗಲವಾದ ನಾಲಗೆ ಮತ್ತು ಕೊಕ್ಕಿರುವ ಈ ಪಕ್ಷಿಯ ಎದುರಲ್ಲಿ ನಿಂತು ಹೇಳುವ ಮಾತನ್ನು ಚೆನ್ನಾಗಿ ಕೇಳಿ ಬಾಯಿಪಾಠ ಮಾಡಿ ನಂತರ ಪುನರುಚ್ಚರಿಸುವುದರಲ್ಲಿ ಬಹಳ ನಿಪುಣ. ಈ ವಿಷಯದಲ್ಲಿ ಇದಕ್ಕೆ ಸಮಾನವಾದ ಒಂದು ಮೃಗ ಅಥವಾ ಪಕ್ಷಿ ಈ ಪ್ರಪಂಚದಲ್ಲಿ ಬೇರೆಯಿಲ್ಲ....

ಒಬ್ಬನ ಕಹಿ ಇನ್ನೊಬ್ಬನಿಗೆ ಸಿಹಿ

ಒಬ್ಬನ ಕಹಿ ಇನ್ನೊಬ್ಬನಿಗೆ ಸಿಹಿ *✍🏻ಯೂಸುಫ್ ನಬ್‌ಹಾನಿ ಕುಕ್ಕಾಜೆ* 00971553499119    ▪ *ಒಂದು* ಊರಿನಲ್ಲಿ ಗ್ರಾಮವಾಸಿಯಾದ ಒಬ್ಬ ಅ‌ಅ್‌ರಾಬಿಯು ಒಂದು ದಿನ ತನ್ನ ಪತ್ನಿಯಲ್ಲಿ ಹೇಳಿದ. *"ಹೇ.. ಇವತ್ತು ನನ್ನ ಕೆಲವು ಮಿತ್ರರು ನಮ್ಮ ಮನೆಗೆ ಅತಿಥಿಯಾಗಿ ಬರುತ್ತಾರೆ. ಅದ್ದರಿಂದ ಮನೆ ಮತ್ತು ಮನೆ ಪರಿಸರವೆಲ್ಲಾ ಬಹಳ ಸ್ವಚ್ಚವಾಗಿರಬೇಕು. ಇಶಾ ನಮಾಝಿಗೆ ಮನೆಗೆ ತಲುಪುತ್ತೇವೆಂದು ಹೇಳಿದ್ದಾರೆ. ನೀನು ಈಗಲೇ ರೆಡಿಯಾಗಬೇಕು. ಒಳ್ಳೆಯ ಆಹಾರ ತಯಾರು ಮಾಡಬೇಕು. ನಾನೀಗ ನಮ್ಮ ತೋಟದಿಂದ ಏನಾದರೂ ಹಣ್ಣು ಹಂಪಲು ತೆಗೆದುಕೊಂಡು ಬರುತ್ತೇನೆ. ಎಲ್ಲಾ ತಯಾರು ಮಾಡಿಡು."*    ▪ *ನಂತರ* ಅ‌ಅ್‌ರಾಬಿಯು ತನ್ನ ತೋಟದತ್ತ ಹೋಗಿ ಅಲ್ಲಿಂದ ಹಲವಾರು ನಮೂನೆಯ ಹಣ್ಣು ಹಂಪಲುಗಳನ್ನು ಕಿತ್ತು ಮನೆಗೆ ತಲುಪುವಾಗ ಸೂರ್ಯಾಸ್ತಮಾನವಾಗಿತ್ತು. ಮನೆಯಲ್ಲಿಯಾದರೆ ಸತ್ಕಾರಕ್ಕೆ ಬೇಕಾದ ಯಾವುದೇ ಸಿದ್ದತೆಯೂ ನಡೆದಿರಲಿಲ್ಲ. ಅಲ್ಲಲ್ಲಿ ಕಸಕಡ್ಡಿಗಳು ಮತ್ತು ಕೊಳಕಿನಿಂದ ಕೂಡಿದ್ದ ಮನೆಯಲ್ಲಿ ಅವನ ಹೆಂಡತಿ ಹೇಳಿದ ಮಾತಿಗೆ ಯಾವುದೇ ಬೆಲೆ ಕೊಡದೆ ಒಂದು ಕಡೆ ಆರಾಮವಾಗಿ ಮಲಗಿದ್ದಳು. ಎಲ್ಲಾ ಸಿದ್ಧತೆಗಳನ್ನು‌ ಮಾಡಬೇಕೆಂದು ಹೇಳಿಯೂ ಏನೂ ಮಾಡದೆ ಮಲಗಿ ಕಂಡಾಗ ಪಿತ್ತ ನೆತ್ತಿಗೇರಿದ ಆತ ಅವಳಿಗೆ ಒಂದು ಕಬ್ಬಿಣದ ಸಲಾಕೆ ತೆಗೆದು ಬಲವಂತವಾಗಿ ಹೊಡೆದನು. ಹೊಡೆದ ಹೊಡೆತಕ್ಕೆ ಅವಳು ಮೂರ್ಛೆತಪ್ಪಿ ಬಿದ್ದಳು.    ▪ *ಹಲವಾರು* ಅ‌ಅ್‌ರಾಬ...

ಹಜರುಲ್ ಅಸ್‌ವದ್ ಇದರ ಕುರಿತು ನಿಮಗೆಷ್ಟು ತಿಳಿದಿದೆ

ಹಜರುಲ್ ಅಸ್‌ವದ್ ಇದರ ಕುರಿತು ನಿಮಗೆಷ್ಟು ತಿಳಿದಿದೆ *👉 ಒಂದು ಇಣುಕು ನೋಟ..* *✍🏻ಯೂಸುಫ್ ನಬ್‌ಹಾನಿ ಕುಕ್ಕಾಜೆ* 📞00971553499119    ▪ *ಅಲ್ಲಾಹುವಿನ* ಪವಿತ್ರ ಭವನವಾದ ಕ‌ಅಬಾಲಯದ ಒಂದು ಪಾರ್ಶ್ವದಲ್ಲಿರುವ *"ಹಜರುಲ್ ಅಸ್‌ವದ್"* ಎಂಬ ಕಲ್ಲು ಅದರ ಪ್ರಾರಂಭದಲ್ಲಿ ಅದು ಒಂದು ಸದಾಚಾರಿಯಾದ (ಸ್ವಾಲಿಹ್) ಅಲ್ಲಾಹುವಿನ ಮಲಕ್ ಆಗಿತ್ತು.    ▪ *ಮನುಷ್ಯ* ಪಿತಾ ಹಝ್ರತ್ ಆದಮ್ (ಅ) ರನ್ನು ಅಲ್ಲಾಹನು ಸೃಷ್ಟಿಸಿ ಸ್ವರ್ಗದಲ್ಲಿ ವಾಸಿಸಲು ಮತ್ತು ಅಲ್ಲಿರುವ ಎಲ್ಲಾ ಸುಖ ಸೌಲತ್ತುಗಳನ್ನು ಉಪಯೋಗಿಸಲು ಅನುಮತಿ ಕೊಟ್ಟಿದ್ದನು. ಅದಾಗ್ಯೂ ಅಲ್ಲಿರುವ ಒಂದು ಮರಕ್ಕೆ ಸನ್ನೆ ಮಾಡಿ ಅತ್ತ ಹೋಗ ಬಾರದಾಗಿಯೂ ಅದರಿಂದ ಯಾವುದೇ ಹಣ್ಣನ್ನು ಕಿತ್ತಬಾರದಾಗಿಯೂ ತಾಕೀತು ಮಾಡಿದ್ದನು. ಅಲ್ಲದೆ ಅವರಿಬ್ಬರನ್ನೂ ಆ ಕಡೆ ಹೋಗದಂತೆ ನೋಡಿಕೊಳ್ಳುವ ಪೂರ್ಣ ಜವಾಬ್ದಾರಿ ಮತ್ತು ಹೊಣೆಗಾರಿಕೆಯನ್ನು ಈ ಹೇಳಿದ ಮಲಕಿಗೆ ಕೊಟ್ಟಿದ್ದನು.    ▪ *ಅಲ್ಲಾಹುವಿನ* ತಕ್‌ದೀರ್ ಪ್ರಕಾರ ಹಝ್ರತ್ ಆದಮ್ (ಅ) ರು ಆ ಮರದಿಂದ ಹಣ್ಣನ್ನು ಕಿತ್ತು ತಿಂದು ಒಂದು ಮಹಾ ದುರಂತವು ನಡೆಯುವ ಸಾಧ್ಯತೆಯಿದೆಯೆಂದು ತಿಳಿದಾಗ ಆ ಮಲಕ್ ಅಲ್ಲಿಂದ ಅಪ್ರತ್ಯಕ್ಷರಾದರು. ಆಗ  ಅಲ್ಲಾಹನು ಆ ಮಲಕನ್ನು  ದೃಷ್ಟಿಯಿಟ್ಟು ಬಹಳ ಗಂಬೀರದ ಗದರಿಕೆಯ ಒಂದು ನೋಟ ನೋಡಿದನು. ಆ ಕಾರಣದಿಂದ ಕೂಡಲೇ ಆ ಮಲಕ್ ಒಂದು ಮಾಣಿಕ್ಯ ಅಥವಾ ವೈಡೂರ್ಯದ ಕಲ್ಲಾಗಿ ...

ಪರಿಶ್ರಮವಿಲ್ಲದೆ ಅಲ್ಲಾಹನಾಗಿ ಲಾಭದಾಯಕ ವ್ಯಾಪಾರ

ಪರಿಶ್ರಮವಿಲ್ಲದೆ ಅಲ್ಲಾಹನಾಗಿ ಲಾಭದಾಯಕ ವ್ಯಾಪಾರ *✍🏻ಯೂಸುಫ್ ನಬ್‌ಹಾನಿ ಕುಕ್ಕಾಜೆ* 📞00971 553499119 ▪ *ವಿಶ್ವ ವಿಖ್ಯಾತ* ಪಂಡಿತ ಇಮಾಮ್ *ಅಸ್‌ಮ‌ಈ* (ರ) ರವರು (ಹಿಜ್‌ರಾ 121 - 216) ಒಂದು ದಾರಿಯಾಗಿ ಹೋಗುತ್ತಿರುವಾಗ ಒಬ್ಬಳು ಕೆಲಸದಾಳು ಒಂದು ಬುಟ್ಟಿ ತುಂಬಾ ದಾಳಿಂಬೆ ಹಣ್ಣನ್ನು ತಲೆಯಲ್ಲಿ ಹೊತ್ತುಕೊಂಡು ಹೋಗುತ್ತಿದ್ದಳು.    ▪ *ಆ ದಾರಿಯಾಗಿ* ಹೋಗುತ್ತಿದ್ದ ಒಬ್ಬ ಯುವಕ ಆ ಬಡಪಾಯಿ ಮಹಿಳೆಯ ಹಿಂದಿನಿಂದ ಹೋಗಿ ದಾಳಿಂಬೆ ಬುಟ್ಟಿಯಿಂದ ಒಂದು ದಾಳಿಂಬೆಯನ್ನು ಕದ್ದು ತೆಗೆದನು. ಇಮಾಮ್ ಅಸ್‌ಮ‌ಈ (ರ) ರವರು ಈ ಕದ್ದ ದಾಳಿಂಬೆಯನ್ನು ಈತ ಏನು ಮಾಡುತ್ತಾನೆಂದು ನೋಡಲು ಅವನ ಹಿಂದಿನಿಂದ ಹೋದರು. ಸ್ವಲ್ಪ ಮುಂದೆ ಸಾಗಿದಾಗ ಯುವಕನು ಅದನ್ನು ಒಬ್ಬ ಭಿಕ್ಷುಕನಿಗೆ ಕೊಟ್ಟನು.    ▪ *ಇಮಾಮ್‌ರವರು* ಅವನಲ್ಲಿ ಕೇಳಿದರು. *"ಏನಿದು ಅವಸ್ಥೆ..? ನಾನು ಭಾವಿಸಿದ್ದು ನಿನಗೆ ಹಸಿವಿಗೆ ತಿನ್ನಲಿಕ್ಕೆ ಆಗಿರಬಹುದು ಎಂದು. ಆದರೆ ನೀನು ಇದನ್ನು ಬೇರೊಬ್ಬರಿಗೆ ದಾನ ಮಾಡಿದಿ. ಇದು ಬಹಳ ಅದ್ಭುತವಾದ ಒಂದು ಸಂಗತಿ"*  ಆಗ ಆತ ಹೇಳಿದ. *"ಇಮಾಮರೇ., ನೀವು ಯಾವ ಯುಗದಲ್ಲಿ ಇದ್ದೀರಿ..? ನಾನು ಯಾವುದೇ ಪರಿಶ್ರಮವಿಲ್ಲದೆ ಅಲ್ಲಾಹನಾಗಿ ಒಂದು ಲಾಭದಾಯಕ ವ್ಯಾಪಾರ ಮಾಡಿದ್ದು. ಕುಳಿತಲ್ಲಿಗೇ ಪ್ರತಿಫಲ."*    ▪ *ಇಮಾಮರು* ಕೇಳಿದರು. *"ಅದೇನು ಅಂತಹಾ ಲಾಭದಾಯಕ ವ್ಯಾಪಾರ..? ವಿವರಿಸಿ ಕೊಡುತ್ತಿಯಾ..?"...

ಇಪ್ಪತ್ತು ರೂಪಾಯಿಗೆ ಇಪ್ಪತ್ತು ವರ್ಷದ ಆಯುಷ್ಯ

ಇಪ್ಪತ್ತು ರೂಪಾಯಿಗೆ ಇಪ್ಪತ್ತು ವರ್ಷದ ಆಯುಷ್ಯ *✍🏻ಯೂಸುಫ್ ನಬ್‌ಹಾನಿ ಕುಕ್ಕಾಜೆ* 📞00971553499119    ▪ *ಪ್ರವಾದಿ* ದಾವೂದ್ (ಅ) ರ ಎಲ್ಲಾ ತರಗತಿ ಮತ್ತು ಮಜಿಲಿಸುಗಳಲ್ಲಿ ಸಾಧಾರಣ ತಪ್ಪದೆ ಹಾಜರಾಗುತ್ತಿದ್ದ ಅವರ ಆಪ್ತರಾದ ಒಬ್ಬರ ಬಗ್ಗೆ ಒಮ್ಮೆ ಹಝ್ರತ್ ಅಝ್‌ರಾಯೀಲ್ (ಅ) ಬಂದು ಹೇಳಿದರು. *"ದಾವೂದರೆ.., ನಾನು ಮೂರು ದಿನ ಕಳೆದು ಈತನ ರೂಹನ್ನು ಹಿಡಿಯುವೆನು. ಈತನಿಗೆ ಇನ್ನು ಬರೇ ಮೂರು ದಿನದ ಆಯುಷ್ಯ ಮಾತ್ರವಿರುವುದು"*    ▪ *ದಾವೂದ್* (ಅ) ರಿಗೆ ಅಝ್‌ರಾಯೀಲ್ (ಅ) ರಿಂದ ಈ ವಾರ್ತೆ ಕೇಳಿದಾಗ ಬಹಳ ಸಂಕಟವಾಯಿತು. ತನ್ನ ಮಜಿಲಿಸಿನಲ್ಲಿ ಯಾವಾಗಲೂ ಹಾಜರಾಗುವ ಒಬ್ಬ ಆಪ್ತ ಪರಲೋಕಕ್ಕೆ ಹೋಗುತ್ತಾನೆಂದು ತಿಳಿದಾಗ ಆಕಾಶವೇ ತನ್ನ ಮೇಲೆ ಬಿದ್ದಂತಾಯಿತು. ಆದರೆ ಏನೂ ಮಾಡುವಂತಿಲ್ಲ. ಎಲ್ಲವನ್ನೂ ಅದುಮಿಯಿಟ್ಟು ಸುಮ್ಮನಾದರು.    ▪ *ಮೂರು* ದಿನಗಳು ಕಳೆಯಿತು. ಒಂದು ವಾರವಾಯಿತು. ಮಾತ್ರವಲ್ಲ ಒಂದು ತಿಂಗಳಾದರೂ ಆ ವ್ಯಕ್ತಿ ಜೀವಂತವಾಗಿಯೇ ಇದ್ದರು. ಇದರಿಂದ ಪ್ರವಾದಿ ದಾವೂದ್ (ಅ) ರು ಬಹಳ ಆಶ್ಚರ್ಯಗೊಂಡರು. ಹೀಗಿರುವಾಗ ಒಂದು ದಿನ ಪುನಃ ಮಲಕ್ ಅಝ್‌ರಾಯೀಲ್ (ಅ) ಅವರ ಬಳಿ ಬಂದಾಗ ಅವರಲ್ಲಿ ಈ ಬಗ್ಗೆ ವಿಚಾರಿಸಿದರು. ಆಗ ಅಝ್‌ರಾಯೀಲ್ (ಅ) ಹೇಳಿದರು. *"ಈತನ ಆಯುಷ್ಯ ಮುಗಿಯುವ ನಿಗದಿತ ದಿನಕ್ಕಿಂತ ಒಂದು ದಿನ ಮುಂಚಿ ಈತ ಒಬ್ಬ ಭಿಕ್ಷುಕನಿಗೆ ಇಪ್ಪತ್ತು ದಿರ್‌ಹಮ್ ಸದಖಾ (ದಾನ) ಕೊಟ್ಟನು. ಸದ...

ಎಂಟಾಣೆಯ ಕಾರುಬಾರು

ಎಂಟಾಣೆಯ ಕಾರುಬಾರು *✍🏻ಯೂಸುಫ್ ನಬ್‌ಹಾನಿ ಕುಕ್ಕಾಜೆ* 📞00971553499119    ▪ *ಒಮ್ಮೆ ಪ್ರವಾದಿ* ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಒಂದು ಕಂದೂರ (ಖಮೀಸ್) ಖರೀದಿಸಲು ಬಜಾರಿಗೆ ಹೋದರು. ಹೋಗುವಾಗ ಪ್ರವಾದಿಯವರ ಜೇಬಿನಲ್ಲಿ ಎಂಟು *ದಿರ್‌ಹಮ್* ಇತ್ತು.    ▪ *ದಾರಿಮಧ್ಯೆ* ಯಾವುದೋ ಒಂದು ಮನೆಯ ದಾಸಿ ಹುಡುಗಿ (ಕೆಲಸದಾಳು) ಬಹಳ ಬೇಸರದಿಂದ ಅಳುತ್ತಿದ್ದಳು. ಪ್ರವಾದಿಯವರು ಅವಳಲ್ಲಿ ಕೇಳಿದರು. *"ನೀನು ಯಾಕೆ ಅಳುತ್ತಿರುವಿ..? ಏನು ಕಾರಣ..? ಏನಾಗಿದೆ ನಿನಗೆ ಹೇಳು..?"* ಆಗ ಅವಳು ಹೇಳಿದಳು. *"ನಾನು ಒಂದು ಮನೆಯಲ್ಲಿ ಕೆಲಸಕ್ಕಿದ್ದೇನೆ. ಇವತ್ತು ಮನೆಯವರು ಸಾಮಾನು ಖರೀದಿಸಲು ಎರಡು ದಿರ್‌ಹಮ್ ಕೊಟ್ಟು ನನ್ನನ್ನು ಬಜಾರಿಗೆ ಕಳುಹಿಸಿದ್ದರು. ಆದರೆ ದಾರಿಮಧ್ಯೆ ಆ ಹಣ ನನ್ನಿಂದ ಎಲ್ಲೋ ಬಿದ್ದು ಹೋಗಿದೆ. ಎಲ್ಲಿ ಎಂದು ಗೊತ್ತಿಲ್ಲ. ಈಗ ಖಾಲಿ ಕೈಯಲ್ಲಿ ಮನೆಗೆ ಹೋದರೆ ನನ್ನನ್ನು ಹೊಡೆಯುತ್ತಾರೆ."*    ▪ *ಇದನ್ನು* ಕೇಳಿದಾಕ್ಷಣ ತನ್ನ ಕೈಯಲ್ಲಿದ್ದ ಎಂಟು ದಿರ್‌ಹಮಿನಿಂದ ಎರಡು ದಿರ್‌ಹಮನ್ನು ಅವಳಿಗೆ ಕೊಟ್ಟು ನೇರವಾಗಿ ಬಜಾರಿಗೆ ಹೋಗಿ ಅಲ್ಲಿ ಒಂದು ಅಂಗಡಿಯಿಂದ ನಾಲ್ಕು ದಿರ್‌ಹಮ್ ಕೊಟ್ಟು ಒಂದು ಒಳ್ಳೆಯ ದರ್ಜೆಯ ಕಂದೂರ ಖರೀದಿಸಿದರು.    ▪ *ಹೊಸ* ಕಂದೂರ ಖರೀದಿಸಿ ಮನೆಗೆ ಮರಳಿ ಬರುವಾಗ ಒಬ್ಬ ಬಡಪಾಯಿಯು ದಾರಿಯಲ್ಲಿ *"ನನಗೆ ಧರಿಸಲು ವಸ್ತ್ರ ಇಲ್ಲ. ಯಾರಾದರು ನನಗೆ...

ಹಝ್ರತ್ ಖಲಿರ್ (ಅ) ಒಂದು ತೋಟದಲ್ಲಿ ಕೆಲಸಕ್ಕೆ ನಿಂತಾಗ

ಹಝ್ರತ್ ಖಲಿರ್ (ಅ) ಒಂದು ತೋಟದಲ್ಲಿ ಕೆಲಸಕ್ಕೆ  ನಿಂತಾಗ *✍🏻ಯೂಸುಫ್ ನಬ್‌ಹಾನಿ ಕುಕ್ಕಾಜೆ* 📞00971 553499119     ▪ *ಒಮ್ಮೆ* ಹಝ್ರತ್ ಖಲಿರ್ (ಅ) ರವರು ಒಂದು ನದಿಯ ಕಿನಾರೆಯಲ್ಲಿ ಹಾದು ಹೋಗುತ್ತಿರುವಾಗ ಒಬ್ಬ ಬಡಪಾಯಿ ಭಿಕ್ಷುಕ ಬಂದು ಹೇಳಿದ. *"ದನಿಯವರೇ.., ನನಗೆ ಹಸಿವಾಗುತ್ತದೆ. ಊಟ ಮಾಡಲು ಹಣ ಇಲ್ಲ. ನನಗೆ ಏನಾದರು ಕೊಡಿ."* ಆಗ ಹಝ್ರತ್ ಖಲಿರ್ (ಅ) ರವರು *"ನನ್ನಲ್ಲಿ ನಿನಗೆ ಕೊಡಲು ಒಂದು ನಯಾ ಪೈಸೆ ಕೂಡ ಇಲ್ಲ. ಏನು ಮಾಡುವುದು..? ನನ್ನಲ್ಲಿರುವುದು ಈ ಶರೀರ ಮಾತ್ರ. ಬೇಕಾದರೆ ನನ್ನನ್ನು ಮಾರಾಟ ಮಾಡಿ ಅದರಿಂದ ಸಿಗುವ ಹಣ ತೆಗೆದುಕೊಳ್ಳು."* ಎಂದು ಉತ್ತರಿಸಿದರು.    ▪ *ಭಿಕ್ಷುಕ* ಅವರನ್ನು ಬಹಳ ಸಂತೋಷದಿಂದ ದಾಸರನ್ನು ಮಾರಾಟ ಮಾಡುವ ಸಂತೆಯಲ್ಲಿ ಕೊಂಡುಹೋಗಿ ಒಬ್ಬ ರೈತನಿಗೆ ಒಳ್ಳೆಯ ಬೆಲೆಗೆ ಮಾರಾಟ ಮಾಡಿ ಹಣ ಜೇಬಿನಲ್ಲಿ ಹಾಕಿ ಅವನ ಮನೆಯತ್ತ ನಡೆದನು.    ▪ *ಇತ್ತ* ರೈತನಾದ ಮಾಲಿಕನು ಅವರನ್ನು ತನ್ನ ತೋಟದ ಕೆಲಸಕ್ಕೆ ನೇಮಕ ಮಾಡಿದನು. ನಿಜವಾಗಿ ಅವನಿಗೆ ಇದು ಒಬ್ಬ ಪ್ರವಾದಿಯೆಂದು ತಿಳಿದಿರಲಿಲ್ಲ. ಹಝ್ರತ್ ಖಲಿರ್ (ಅ) ರವರು ತೋಟ ಮತ್ತು ಗದ್ದೆಯಲ್ಲಿ ಬಹಳ ಕಠಿಣವಾದ ಕೆಲಸಗಳನ್ನು ಯಾವುದೇ ಒತ್ತಡವಿಲ್ಲದೆ ಬಹಳ ಚೆನ್ನಾಗಿ ಮಾಡುತ್ತಿದ್ದರು. ಹೀಗಿರುವಾಗ ಒಂದು ದಿನ ಅವರ ಚಲನವಲನಗಳಲ್ಲಿ ಸಂಶಯಗೊಂಡ ಯಜಮಾನ ಅವರಲ್ಲಿ ಕೇಳಿದ. *"ನೀವು ಯಾರು..? ನಿಮ್ಮ ಹೇಸರೇನು..?"* ...

ತಾಯಿಯ ಶಾಪದ ಕಾರಣ ದಿನಾಲೂ ಖಬರಿನಿಂದ ಹೊರಬಂದು ಕಿರುಚುವ ವ್ಯಕ್ತಿ

ತಾಯಿಯ ಶಾಪದ ಕಾರಣ ದಿನಾಲೂ ಖಬರಿನಿಂದ ಹೊರಬಂದು ಕಿರುಚುವ ವ್ಯಕ್ತಿ *✍🏻ಯೂಸುಫ್ ನಬ್‌ಹಾನಿ ಕುಕ್ಕಾಜೆ* 📞00971 553499119    ▪ *ಕೆಲವು* ಸಾದಾಚಾರಿಗಳು ಒಮ್ಮೆ ಒಂದು ಖಬರ್ಸ್ತಾನಿಯ ಹತ್ತಿರದ ಒಂದು ದಾರಿಯಾಗಿ ಸಂಚಾರ ಮಾಡುತ್ತಿರುವಾಗ ಒಂದು ಖಬರ್ ಒಡೆದು ಇಭ್ಭಾಗವಾಯಿತು. ಕೂಡಲೇ ಅದರಿಂದ ಕತ್ತೆಯ ತಲೆಯಿರುವ ಒಬ್ಬ ವ್ಯಕ್ತಿ ಹೊರಬಂದು ಕಬರಿನ ಮೇಲೆ ನಿಂತು ಕತ್ತೆ ಕಿರುಚುವಂತೆ ಬಹಳ ಎತ್ತರದ ದನಿಯಲ್ಲಿ ಮೂರು ಸಲ ಕಿರುಚಿದನು. ನಂತರ ಖಬರಿನ ಒಳಗೆ ಹೋದನು. ಒಳಗೆ ಹೋದ ಕೂಡಲೇ ಇಭ್ಭಾಗವಾಗಿದ್ದ ಖಬರ್ ಪರಸ್ಪರ ಜೋಡಿಕೊಂಡಿತು.    ▪ *ಈ ಭಯಾನಕ* ದೃಶ್ಯ ಕಂಡ ಅವರು ಅಲ್ಲಿರುವ ಹತ್ತಿರದ ಒಂದು ಮನೆಯವರಲ್ಲಿ ಇದರ ಬಗ್ಗೆ ವಿಚಾರಿಸಿದಾಗ ಅವರು ಹೇಳಿದರು. "ಈತನು ಒಬ್ಬ ಕುಡುಕನಾಗಿದ್ದ. ಯಾವಾಗಲೂ ಶರಾಬು ಕುಡಿದು ಬಂದು ತನ್ನ ತಾಯಿಯನ್ನು ಹೊಡೆಯುವುದು, ಅವರನ್ನು ಕತ್ತೆ ಎಂದು ಕರೆಯುವುದು ಇವನ ನಿತ್ಯ ಕೆಲಸವಾಗಿತ್ತು. ಒಂದು ದಿನ ಮೂಗಿನ ತನಕ ಕುಡಿದು ಬಂದು ಅವನ ತಾಯಿಗೆ ಹೊಡೆದನು. ನೋವು ಸಹಿಸಲಾರದೆ ತಾಯಿ ಕೂಗಿದಾದ ಅವನು ಹೇಳಿದನು. *"ನೀನು ಕತ್ತೆಯಂತೆ ಕೂಗಬೇಡ"* ಅವನ ತಾಯಿ ಹೇಳಿದರು. *"ನಾನು ನಿನ್ನ ತಾಯಿಯೆಂಬ ನೆನಪಿರಲಿ. ನಾನು ಕತ್ತೆಯಲ್ಲ. ನಿನ್ನನ್ನು ಹೆತ್ತ ತಾಯಿ. ನಿನಗೆ ನನ್ನ ಭಯವಿಲ್ಲದಿದ್ದರೂ ಅಲ್ಲಾಹನನ್ನು ಭಯಪಡು. ಕತ್ತೆ ನಾನಲ್ಲ ಕತ್ತೆ ನೀನು."* ನಂತರ ಆತ ಮರಣಹೊಂದಿದನು. ದಫನ ಮಾಡಿದ ದಿನದ...

ಮನೆ ಬಾಗಿಲಿನ ಆಡಂಬರ ನೋಡಿ ಭಿಕ್ಷೆ ಬೇಡಲು ಹೋದ ಬಡಪಾಯಿ

ಮನೆ ಬಾಗಿಲಿನ ಆಡಂಬರ ನೋಡಿ ಭಿಕ್ಷೆ ಬೇಡಲು ಹೋದ ಬಡಪಾಯಿ   ▪ *ಒಬ್ಬ ಬಡಪಾಯಿ ಭಿಕ್ಷುಕ* ಭಿಕ್ಷೆ ಬೇಡುತ್ತಾ ಹೋಗುತ್ತಿರುವಾಗ ಬಹಳ ದುಬಾರಿ ವೆಚ್ಚದಲ್ಲಿ ಕೆತ್ತನೆ ಕೆಲಸದಲ್ಲಿ ನಿರ್ಮಾಣ ಮಾಡಿದ ಒಂದು ಆಡಂಬರ ಮುಖದ್ವಾರವಿರುವ (Gate) ಮನೆಯನ್ನು ಕಂಡನು.    ▪ *ಮನೆ* ಮೆಟ್ಟಲು ಹತ್ತಿದಾಗ ಮನೆ ಮಾಲಿಕ ಒಂದು ಚಾಯ ಕೂಡ ಕುಡಿಯಲು ಸಾಕಾಗದ ಚಿಲ್ಲರೆ ಪೈಸೆ ಭಿಕ್ಷೆಯಾಗಿ ಕೊಟ್ಟನು.    ▪ *ಮಾರನೆಯ* ದಿನ ಆ ಭಿಕ್ಷುಕ ಒಂದು ಕೊಡಲಿಯನ್ನು ಹಿಡಿದು ಆ ಮನೆಯತ್ತ ಬರುತ್ತಿದ್ದನು. ಈ ದೃಶ್ಯ ಕಂಡಾಗ ಒಬ್ಬ ಕೇಳಿದ. *"ಇದೇನು ಕೊಡಲಿ ಹಿಡಿದುಕೊಂಡು ಹೋಗುತ್ತಿರುವುದು..?"* ಆಗ ಆ ಭಿಕ್ಷುಕ ಹೇಳಿದನಂತೆ. *"ಇವತ್ತು ಎರಡರಲ್ಲಿ ಒಂದು ನಡೆಯಬೇಕು. ಒಂದಾ ಬಾಗಿಲಿನ ಘನತೆಗೆ ಸಮಾನವಾದ ಭಿಕ್ಷೆ ಸಿಗಬೇಕು. ಅಥವಾ ಭಿಕ್ಷೆಗೆ ಸಮಾನವಾದ ಬಾಗಿಲಾಗಬೇಕು."* ಸಂಗ್ರಹ : ಇಮಾಮ್ ಸ್ವಫೂರಿಯ *ನುಝ್‌ಹತುಲ್ ಮಜಾಲಿಸ್* ಎಂಬ ಗ್ರಂಥ.

ಪ್ರವಾದಿ ಮೂಸಾ (ಅ) ರವರ ಬೆತ್ತದ ಬಗ್ಗೆ ನಿಮಗೇನು ಗೊತ್ತು.

ಪ್ರವಾದಿ ಮೂಸಾ (ಅ) ರವರ ಬೆತ್ತದ ಬಗ್ಗೆ ನಿಮಗೇನು ಗೊತ್ತು. *✍🏻ಯೂಸುಫ್ ನಬ್‌ಹಾನಿ ಕುಕ್ಕಾಜೆ* 📞00971553499119    ▪ *ಹಝ್ರತ್* ಮೂಸಾ (ಅ) ರ ಬೆತ್ತದ ಬಗ್ಗೆ ಪವಿತ್ರ ಖುರ್‌ಆನಿನಲ್ಲಿ ಹಲವಾರು ಕಡೆ ಉಲ್ಲೇಖವಿದೆ.    ▪ *ಆ* ಬೆತ್ತವು ಸ್ವರ್ಗದಲ್ಲಿ ಬೆಳೆದ ಒಂದು ಮರದಿಂದ ಮಾಡಿದ್ದಾಗಿದೆ. ಪ್ರವಾದಿ ಶುಅಯಿಬ್ (ಅ) ರವರಿಗೆ ಮಲಕ್ ಮುಖಾಂತರ ಅಲ್ಲಾಹನಿಂದ ದೊರೆತ ಆ ಬೆತ್ತವನ್ನು ಪ್ರವಾದಿ ಶುಅಯಿಬ್ (ಅ) ರವರು ಅವರ ಮಗಳನ್ನು ಹಝ್ರತ್ ಮೂಸಾ (ಅ) ರವರು ಮದುವೆಯಾದಾದ ಅವರಿಗೆ ಉಡುಗೊರೆಯಾಗಿ ಕೊಟ್ಟಿದ್ದರು.    ▪ *ಅದರ* ಉದ್ದ ಹಝ್ರತ್ ಮೂಸಾ (ಅ) ರವರ ಉದ್ದವಾಗಿದ್ದ ಹತ್ತು ಅಡಿಯಾಗಿತ್ತು. (Feet) ಬೇರೊಂದು ಅಭಿಪ್ರಾಯ ಪ್ರಕಾರ ಹನ್ನೆರಡು ಅಡಿಯಾಗಿರುತ್ತದೆ. ▪ *ಅದನ್ನು* ಸಾಧಾರಣ ನಡೆಯುವಾಗ ಊರುಗೋಲಾಗಿ ಉಪಯೋಗಿಸುತ್ತಿದ್ದರು.    ▪ *ಆಡುಗಳನ್ನು* ಮೇಯಿಸುವಾಗ ಅವುಗಳಿಗೆ ಹೊಡೆಯಲು ಮತ್ತು ಗಧರಿಸಲು ಬಳಸುತ್ತಿದ್ದರು.    ▪ *ಬೆತ್ತವು* ಪವಾಡವಾಗಿ ಕೆಲವೊಮ್ಮೆ ಮಾತಾಡುತ್ತಿತ್ತು. ಅಂತೆಯೇ ಅವರು ಏಕಾಂಗಿಯಾಗಿರುವಾಗ ಬೋರ್ ಹೊಡೆಯದಿರಲು ಒಬ್ಬ ಮಿತ್ರನಂತೆ ಅವರೊಂದಿಗೆ ಮಾತನಾಡುತ್ತಿತ್ತು. ಹಲವಾರು ವಿಷಯಗಳ ಬಗ್ಗೆ ಅವರಿಗೆ ಸಲಹೆ ನೀಡುತ್ತಿತ್ತು. ಹಾಗೆಯೇ ಕೆಲವೊಮ್ಮೆ ಅಗತ್ಯ ಬರುವಾಗ ಕಾಳಿಂಗ ಸರ್ಪವಾಗಿಯೂ ಮಾರ್ಪಡುತ್ತಿತ್ತು.    ▪ *ಕತ್ತಲೆಯ* ರಾತ್...

ಪ್ರವಾದಿ ಮೂಸಾ (ಅ) ರವರಿಗೆ ಸ್ವರ್ಗದಲ್ಲಿ ಒಬ್ಬ ಕಸಾಯಿಗಾರ ಮಿತ್ರ

ಪ್ರವಾದಿ ಮೂಸಾ (ಅ) ರವರಿಗೆ ಸ್ವರ್ಗದಲ್ಲಿ ಒಬ್ಬ ಕಸಾಯಿಗಾರ ಮಿತ್ರ *✍🏻ಯೂಸುಫ್ ನಬ್‌ಹಾನಿ ಕುಕ್ಕಾಜೆ* 📞09971 553499119 ▪ *ಒಮ್ಮೆ* ಪ್ರವಾದಿ ಮೂಸಾ (ಅ) ರವರು ಅಲ್ಲಾಹನಲ್ಲಿ ಕೇಳಿದರು. *"ಅಲ್ಲಾಹನೇ..., ಸ್ವರ್ಗದಲ್ಲಿ ನನ್ನ ಮಿತ್ರ ಯಾರು..?"*    ▪ಅಲ್ಲಾಹನು ಹೇಳಿದನು. *"ಮೂಸಾರವರೇ.., ನೀವೊಂದು ದೂರದ ಊರಿಗೆ ಹೋಗಬೇಕು. ಅಲ್ಲಿ ಒಂದು ಮಾಂಸದ ಅಂಗಡಿಯಲ್ಲಿ ಒಬ್ಬ ಖಸಾಯಿಗಾರನಿದ್ದಾನೆ. ಅವನೇ ಸ್ವರ್ಗದಲ್ಲಿ ನಿಮ್ಮ ಮಿತ್ರ."*    ▪ *ಹಝ್ರತ್* ಮೂಸಾ (ಅ) ರವರು ಅಲ್ಲಾಹನ ನಿರ್ದೇಶದಂತೆ ಖಸಾಯಿಗಾರನನ್ನು ಹುಡುಕಿ ಹೋದರು. ಅಂಗಡಿ ತಲುಪಿದಾಗ ಒಬ್ಬ ಯುವಕ. ರಾತ್ರಿಯಾದ ಕಾರಣ ಅಂಗಡಿ ಮುಚ್ಚುವ ಗೌಜಿಯಲ್ಲಿದ್ದಾನೆ. ಹಝ್ರತ್ ಮೂಸಾ (ಅ) ರವರು ಅವನಲ್ಲಿ ತಾನು ಪ್ರವಾದಿ ಮಾಸಾ ಎಂದು ಹೇಳದೆ ಒಬ್ಬ ಮುಸಾಫಿರ್‌ನಂತೆ ವರ್ತಿಸಿದರು.    ▪ *ಯುವಕ* ಹಝ್ರತ್ ಮೂಸಾ (ಅ) ರಲ್ಲಿ ಹೇಳಿದ. *"ನೀವು ಬಹಳ ದೂರದ ಊರಿನಿಂದ ಮುಸಾಫಿರಾಗಿ ಬಂದವರಂತೆ ಕಾಣುತ್ತದೆ. ಆದ್ದರಿಂದ ನನಗೆ ಈಗ ಮಾತನಾಡಲು ಸಮಯವಿಲ್ಲ. ಇವತ್ತು ನಮ್ಮ ಮನೆಗೆ ಹೋಗುವ. ಊಟಮಾಡಿ ಮಲಗಿ ಬೆಳಗ್ಗೆ ನಿಮಗೆ ವಾಪಾಸು ಹೋಗಬಹುದು."*    ▪ *ಯುವಕನ* ಅತಿಥಿ ಸತ್ಕಾರಕ್ಕೆ ಹಝ್ರತ್ ಮೂಸಾ (ಅ) ಓಗೊಟ್ಟರು.‌ ಮನೆ ತಲುಪಿತು. ಆ ವ್ಯಕ್ತಿ ಅಂಗಡಿಯಲ್ಲಿ ಇರುವಾಗಲೂ ಮನೆಗೆ ಹೋಗುವಾಗಲೂ ಆತನ ಕೈಯಲ್ಲಿ ಚರ್ಮದಿಂದ ಮಾಡಿದ ಒಂದು ತೊಟ್ಟಿಲಿನ ಆ...

ಹಗ್ಗ ಅಲುಗಾಡಿದ್ದಷ್ಟೇ.

ಹಗ್ಗ ಅಲುಗಾಡಿದ್ದಷ್ಟೇ. *ಯೂಸುಫ್ ನಬ್‌ಹಾನಿ ಕುಕ್ಕಾಜೆ* 📞00971 553499119    ▪ *ಒಂದು* ಊರಿನಲ್ಲಿ ಮೂರು ಸದಸ್ಯರನ್ನೊಳಗೊಂಡ ಒಂದು ಬಡ ಕುಟುಂಬ ಬಹಳ ಸಂತೋಷದಿಂದ ಜೀವನ ನಡೆಸುತ್ತಿತ್ತು.. ಬಡವರಾದರೂ ಇವರಿಗೆ ಯಾವುದೇ ತೊಂದರೆ ಇರಲಿಲ್ಲ. ದಿನಗಳು ಬಹಳ ಆರಾಮವಾಗಿ ಹೋಗುತಿತ್ತು.    ▪  *ಬಡವರಾದರೂ* ನೆಮ್ಮದಿಯಿಂದ ಜೀವನ ನಡೆಸುವ ಒಂದು ಕುಟುಂಬವನ್ನು ಕಂಡಾಗ ಹೊಟ್ಟೆಕಿಚ್ಚು ಸಹಿಸಲಾದಗ ಇಬ್‌ಲೀಸನು (ಲ) ಇವರನ್ನು ಹೇಗಾದರು‌ ಮಾಡಿ ತೂಫಾನ್ ಮಾಡಬೇಕೆಂದು ಯೋಚಿಸಿ ಅವರ ಮನೆಯತ್ತ ನಡೆದನು.    ▪ *ಮನೆ* ತಲುಪಿದಾಗ ಮನೆಯೊಡತಿ ಮನೆಯಂಗಳದಲ್ಲಿ ಹಸುವಿನಿಂದ ಹಾಲು ಕರೆಯುತ್ತಿದ್ದಳು. ಹಸುವನ್ನು ಕುತ್ತಿಗೆಗೆ ಹಗ್ಗ ಹಾಕಿ ಒಂದು ಕಂಬಕ್ಕೆ ಕಟ್ಟಲಾಗಿತ್ತು. ಮೋಸಗಾರ ಇಬ್‌ಲೀಸನು ಮೆಲ್ಲನೆ ಹಸುವನ್ನು ಕಟ್ಟಿದ ಹಗ್ಗವನ್ನು ಎಳೆದನು. ಹಸುವು ಯಾರೋ ನನ್ನನ್ನು ಎಳೆದು ಆಕ್ರಮಣ ‌ಮಾಡುತ್ತಾರೆಂದು ಭಾವಿಸಿ ಅಲ್ಲಿಂದ ಧುಮುಕುವ ರಭಸದಲ್ಲಿ ಹಸುವಿಸ ಕಾಲಿನ ಒಂದು ಹೊಡೆತ ಹಾಲು ಕರೆಯುವಾಗ ತಾಯಿಯ ಹತ್ತಿರ ಕುಳಿತಿದ್ದ ಪುಟ್ಟ ಮಗುವಿಗೆ ಬಿತ್ತು. ಮಗು ನಿಮಿಷದಲ್ಲೇ ಸಾವನ್ನಪ್ಪಿತು.    ▪ *ತನ್ನ* ಮಗುವಿನ  ಮರಣಕ್ಕೆ ಕಾರಣವಾದ ಹಸುವನ್ನು ಮಹಿಳೆಯು ಸಹಿಸಲಾಗದ ಕೋಪದ ಕಾರಣದಿಂದ ಅಲ್ಲಿದ್ದ ಒಂದು ಕತ್ತಿಯನ್ನು ತೆಗೆದು ಅದರ ತಲೆ ಕಡಿದಳು.    ▪ *ಸಂಜೆಯಾಗುವಾಗ* ಮನೆ ಮಾಲಿಕ ಕೆ...

ಉಪ್ಪು ತಿಂದವನು ನೀರು ಕುಡಿದ.

ಉಪ್ಪು ತಿಂದವನು ನೀರು ಕುಡಿದ. *✍🏻ಯೂಸುಫ್ ನಬ್‌ಹಾನಿ ಕುಕ್ಕಾಜೆ* 📞00971 553499119    ▪ *ಒಂದು* ರಾಜನ ರಾಜ ದರ್ಬಾರಿನಲ್ಲಿ ಹಲವಾರು ಮಂದಿ ಕೆಲಸಗಾರರಿದ್ದರು. ಅವರಲ್ಲಿ ಒಬ್ಬನು ರಾಜನಿಗೆ ಬಹಳ ಆಪ್ತನಾಗಿದ್ದ. ಅವನನ್ನು ರಾಜನು ತನ್ನ ಸಬೆಯಲ್ಲಿ ಮಂತ್ರಿ ಕೂಡ ಮಾಡಿದ್ದ. ಅಲ್ಲದೆ ಅವನಿಗೆ ಇತರ ಕೆಲಸಗಾರರಿಗಿಂತ ಹೆಚ್ಚಿನ ಸೌಕರ್ಯ ಮತ್ತು ಸಂಬಳವನ್ನು ಕೂಡ ಕೊಡುತ್ತಿದ್ದ.    ▪ *ರಾಜನ* ಈ ನಡವಳಿಕೆಯಿಂದ ಹೊಟ್ಟೆಗಿಚ್ಚಾದ ಇತರ ಕೆಲವು ಕೆಲಸಗಾರರು ಹೇಗಾದರು ಮಾಡಿ ಈ ಮಂತ್ರಿಯ ಕತೆ ಮುಗಿಸಬೇಕೆಂಬ ತೀರ್ಮಾನಕ್ಕೆ ಬಂದರು. ಹಾಗೆಯೇ ಅವರಲ್ಲಿ ಒಬ್ಬ ಹೇಳಿದ. *"ನೀವು ಗಾಬರಿ ಪಡಬೇಡಿ. ನಾನದಕ್ಕೆ ಬೇಕಾದ ವ್ಯವಸ್ಥೆ ಮಾಡುತ್ತೇನೆ. "*    ▪ *ಒಂದು* ದಿನ ಈ ವ್ಯವಸ್ಥೆ ಮಾಡುತ್ತೇನೆಂದು ಹೇಳಿದ ವ್ಯಕ್ತಿ ರಾಜ ಸನ್ನಿಧಿಗೆ ಹೋಗಿ ಹೇಳಿದ. *"ಮಹಾರಾಜರೇ..., ನಿಮಗೆ ಬಹಳ ಆಪ್ತನಾಗಿರುವ ಆ ಮಂತ್ರಿ ನಿಮ್ಮ ಬಗ್ಗೆ ಹೊರಗೆ ಏನೆಲ್ಲಾ ಬೇಡದ್ದು ಹೇಳುತ್ತಿದ್ದಾನೆ. ನಿಮ್ಮ ಬಾಯಿ ವಾಸನೆಯಿಂದ ಅವನಿಗೆ ನಿಮ್ಮ ಹತ್ತಿರ ಬರಲಾಗುವುದಲ್ಲಂತೆ."*    ▪ *ಚಾಡಿಕೋರನಿಂದ* ಈ ಸುಳ್ಳು ಮಾಹಿತಿಯನ್ನು ಕೇಳಿದಾಕ್ಷಣ ರಾಜನ ಸಿಟ್ಟು ನೆತ್ತಿಗೇರಿತು. ಕೂಡಲೇ ಆ ವ್ಯಕ್ತಿಯಲ್ಲಿಯೇ, ಮಂತ್ರಿಯನ್ನು ರಾಜ ದರ್ಬಾರಿಗೆ ಬರಲು ಹೇಳಿ ಕಳುಹಿಸಿದ. ನಂತರ ಮಂತ್ರಿಯನ್ನು ಬೇಟಿಯಾದ ಆ ಚಾಡಿಕೋರ ಅವನಿಗೆ ತಿನ್ನಲು ಆಹಾರ ಕೊಟ್...

ರೋಮಾಂಚಕಾರಿ ಕುದುರೆ ಪುರಾಣ ಐಶ್ವರ್ಯದ ಸಂಕೇತವಾದ ಕುದುರೆ

ರೋಮಾಂಚಕಾರಿ ಕುದುರೆ ಪುರಾಣ ಐಶ್ವರ್ಯದ ಸಂಕೇತವಾದ ಕುದುರೆ * ✍🏻ಯೂಸುಫ್ ನಬ್‌ಹಾನಿ ಕುಕ್ಕಾಜೆ * 📞00971 553499119    ▪ * ಸಾಕುಮೃಗಗಳ *   ಪೈಕಿ ಬಹಳ ಘನತೆ, ಹೆಮ್ಮೆ ಮತ್ತು ಗೌರವವಿರುವ ಒಂದು ಆಡಂಬರ ಪ್ರಾಣಿಯಾಗಿದೆ ಕುದುರೆ.    ▪ * ಪವಿತ್ರ * ಕುರ್‌ಆನಿನಲ್ಲಿ ಈ ಪ್ರಾಣಿಯ ಬಗ್ಗೆ ಹಲವಾರು ಕಡೆ ಉಲ್ಲೇಖವಿದೆ. ಅಲ್ಲದೆ ಅಲ್ಲಾಹನು ಇದರ ಹೆಸರೇಳಿ ಆಣೆ ಹಾಕಿದ ಅಧ್ಯಾಯ (ಸೂರಃ) ಕೂಡ ಪವಿತ್ರ ಕುರ್‌ಆನಿನಲ್ಲಿದೆ. ಮಾತ್ರವಲ್ಲ ಈ ಮೃಗದ ಮಹತ್ವವನ್ನು ಎತ್ತಿ ಹೇಳಿ ಡಝನುಗಟ್ಟಳೆ ಸಹೀಹಾದ ಪ್ರವಾದಿ ಹದೀಸುಗಳು ವರದಿಯಾಗಿದೆ. ಒಟ್ಟಿನಲ್ಲಿ ಕುದುರೆಯನ್ನು ಇತರ ಮೃಗಗಳಿಗೆ ಹೋಲಿಸಿದರೆ ಕುದುರೆಗಿರುವ ಸ್ಥಾನಮಾನ, ಘನತೆ ಮತ್ತು ಗೌರವ ಇತರ ಮೃಗಗಳಿಗೆ ಇಲ್ಲ.    ▪ * ಮನುಷ್ಯನನ್ನು * ಹೊರತುಪಡಿಸಿ ಪ್ರಾಣಿಗಳಲ್ಲಿ ಇಷ್ಟೊಂದು ಚೆಲುವಾದ ಸುಂದರ ಜೀವಿ ಬೇರೊಂದಿಲ್ಲ ಎಂದು ಹಿಜ್‌ರಾ ಏಳನೆಯ ಶತಮಾನದ ಪ್ರಸಿದ್ಧ ಪಂಡಿತ ಇಮಾಮ್ ಖಝ್‌ವೀನಿಯವರು ಅಭಿಪ್ರಾಯ ಪಟ್ಟಿದ್ದಾರೆ.    ▪ * ಗಂಡು ಹೆಣ್ಣು * ಪರಸ್ಪರ ನಾಲ್ಕು ವರ್ಷ ಪ್ರಾಯವಾಗುವಾಗಲೇ ಲೈಂಗಿಕ ಚಟುವಟಿಕೆಯಲ್ಲಿ ತೊಡಗುತ್ತದೆ. ಗರ್ಭಧಾರಣೆಯಾಗಿ ಹನ್ನೊಂದು - ಹನ್ನೆರಡು ತಿಂಗಳಾಗುವಾಗ ಮರಿ ಹಾಕುತ್ತದೆ. ಬರೇ ಒಂದೇ ಒಂದು ಮರಿ ಮಾತ್ರ.     ▪ * ಕುದುರೆಯು * ಸುಮಾರು ನಲುವತ್ತರಿಂದ ಐವತ್ತು ವರ್ಷಗಳ ...