ಪವಿತ್ರ ಭೂಮಿ ಸಲಾಲಃಕ್ಕೆ ಒಂದು ಯಾತ್ರೆ KCF ಒಮಾನ್ ಸಲಾಲ ಯಾತ್ರೆ- 2019 ಭಾಗ ೪ ✍ MHB Ullal. ಉವೈಸುಲ್ ಕರ್ನೈನ್(ರ.ಅ) ರ ಝಿಯಾರತ್ ನಂತರ ನಮ್ಮೆಲ್ಲರ ಮನಸ್ಸು ಮದೀನಾದ ಕಡೆಗೆ ಹೋಗಿತ್ತು. ನಮ್ಮ ಯಾತ್ರೆ ಮುಂದುವರೆಯಿತು. ಬಸ್ಸ್ ನಲ್ಲಿ ಪ್ತವಾದಿ ಪ್ರ ಕೀರ್ತನೆಗಳನ್ನು ಹಾಡಿದರು. ನಂತರ ನಾವು ತಲುಪಿದ್ದು ಅರಬೀ ಸಮುದ್ರದ ತಟದಲ್ಲಿರುವ ಪ್ರಕ್ರತಿ ರಮಣೀಯ *ಮಗ್ಸಲ್ ಬೀಚ್* ಗೆ. ಅಲ್ಲಿಯೇ ಮಧ್ಯಾಹ್ನದ ಊಟ ಕೂಡಾ ಮಾಡಿದೆವು. ಸುಂದರವಾದ ಒಂದು ತಾಣವಾದ್ದರಿಂದ ಎಲ್ಕರೂ ಅಲ್ಲಿ ಫೋಟೋಗಳನ್ನು ಕ್ಲಿಕ್ಕಿಸುತ್ತಾ ಸ್ವಲ್ಪ ಅಲ್ಲಿಯೇ ವಿರಾಮ ತೆಗೆದುಕೊಂಡೆವು. ನಂತರ ಅಲ್ಲಿಂದ ನಮ್ಮ ಯಾತ್ರೆ ಹೋದದ್ದು ನಾವು ದಿನಾಲೂ ನಮ್ಮ ಕಷ್ಟ ಪರಿಹಾರಕ್ಕಾಗಿ ಹೋದುವ *ನಾರಿಯತ್ ಸ್ವಲಾತ್ ರಚಿಸಿದ ಸಾಲಿಮ್ ಬಿನ್ ಅರಬಿಯ್ಯ(ರ.ಅ)* ಎಂಬ ಔಲಿಯಾರ ಮಕ್ಬರ ಇರುವಲ್ಲಿಗೆ. ಆದರೆ ಅಲ್ಲಿ ಗೇಟ್ ಕಾಮಗಾರಿ ನಡೆಯುತ್ತಿದ್ದ ಕಾರಣ ಗೇಟ್ ಬಂದ್ ಆಗಿತ್ತು. ನಾವು ಹೊರಗಿನಿಂದಲೇ ಝಿಯಾರತ್ ಮಾಡಿ ಬಂದೆವು. ಅಲ್ಲಿಂದ ಮುಂದೆ *ಸ್ವಾಲಿಹ್ ನಬಿಯವರ ಒಂಟೆಯು* ಬಂಡೆ ಕಲ್ಲಿನಿಂದ ಹೊರಬಂದ ಸ್ಥಳವನ್ನು ಹೊರಗಡೆಯಿಂದ ವೀಕ್ಷಿಸಿ, ನಂತರ ಕೇರಳದ ರಾಜ ಭಾರತದ ಪ್ರಥಮ ಸ್ವಹಾಬಿ *ಅಬೂಬಕ್ಕರ್ ತಾಜುದ್ದೀನ್(ರ ) (ಚೇರಮಾನ್ ಪೆರುಮಾಳ್)* ಮಕ್ಬರ ಝಿಯಾರತ್ ನಡೆಸಲು ಹೋದೆವು. ಅವರ ಬಗ್ಗೆ ನಾನು ಹೆಚ್ಚ...