Skip to main content

Posts

Showing posts from March, 2019

ಅಂತ್ಯ ದಿನದ ಲಕ್ಷಣಗಳು 8

ಅಂತ್ಯ ದಿನದ ಲಕ್ಷಣಗಳು : 8 *ನರಕ ಏಳು ವಿಧ*       *1*  ಜಹನ್ನಂ : ಸತ್ಯವಿಶ್ವಾಸಿಗಳಲ್ಲಿ  ಮಹಾ ಪಾಪ ಎಸಗಿದವರು ವಾಸಿಸುವ ಸ್ಥಳವಿದು. ಪ್ರವಾದಿ(ಸ.ಅ)ರವರಿಂದ ಶಫಾಅತ್ ದೊರೆತರೆ ಮಾತ್ರ ಅವರು ಅದರಿಂದ ಹೊರಬರುವರು‌.       *2*  ಲಳಾ : ಇದು ಘೋರ ಬೆಂಕಿಯಿಂದ ಹೊತ್ತಿ ಉರಿಯುವ ನರಕ. ಇದರ ಬೆಂಕಿಗೆ ಹೊಗೆ ಇರುವುದಿಲ್ಲ. ಇಬ್ಲೀಸ್ ಅವನ ಅನುಚರರು ಮತ್ತು ಮಜೂಸಿ (ಅಗ್ನಿ ಆರಾಧಕ)ಗಳ ವಾಸಸ್ಥಳವಿದು.    *3* ಹುತ್ವಮ : ಇದು ಯಹೂದಿಗಳಿಗಾಗಿ ತಯಾರಿಸಲಾಗಿರುವ ನರಕ.    *4*  ಸ'ಈರ್ : ನಿರಂತರವಾಗಿ ಹೊತ್ತಿ ಉರಿಯುವ ಈ ಮಹಾ ಅಗ್ನಿ ಕುಂಡದಲ್ಲಿ ಬೆಂಕಿಯ ಹಾವು, ಚೇಳು ಮತ್ತು ಸಂಕೋಲೆಗಳಿವೆ. ನರಕಗಳ ಪೈಕಿ ಇದು ಅತೀ ಭೀಕರವಾದುದು. ನಸ್ರಾಣಿಗಳು ಅದರ ಅವಕಾಶಿಗಳಾಗಿರುತ್ತಾರೆ.    *5*  ಸಖರ್ : ಇದು ಯಹೂದಿಗಳ ಪೈಕಿ ಸ್ವಾಭಿ ಎಂಬ ಒಂದು ವರ್ಗದವರಿಗಾಗಿ ತಯಾರಿಸಲ್ಪಟ್ಟ ನರಕ.    *6*  ಜಹೀಮ್ : ಇದರ ಒಂದು ಕೆಂಡವು ಇಡೀಯ ಪ್ರಪಂಚವನ್ನೇ ಭಸ್ಮಗೊಳಿಸಬಲ್ಲದು. ಅತೀ ಕಠೋರ ಮತ್ತು ಅತ್ಯಂತ ನಿಕೃಷ್ಟವಾದ ಈ ನರಕದ ಯಾತನೆಗೆ ಬಹು ದೇವಾರಾಧಕರು ಮತ್ತು ವಿಗ್ರಹಾರಾಧಕರು ಬಲಿಯಾಗುವರು.    *7*  ಹಾವಿಯತ್ :  ಬಹಳ ಕಠಿಣ ತಾಪವನ್ನು ಹೊಂದಿದ ನರಕ. ಇದನ್ನು ಪ್ರವೇಶಿಸುವವರು ಎಂದೆಂದಿಗೂ ಅಲ್...

ಅಂತ್ಯ ದಿನದ ಲಕ್ಷಣಗಳು 7

ಅಂತ್ಯ ದಿನದ ಲಕ್ಷಣಗಳು : 7             *ಸಿರಾತ್ ಪಾಲ*      ನರಕಲೋಕದ ಮೇಲ್ಬಾಗದಲ್ಲಿ ಅಲ್ಲಾಹನು ಸಿರಾತ್ ಎಂಬ ಪಾಲನ್ನು ಹಾಕಿರುತ್ತಾನೆ. ಆ ಪಾಲದ ಮೇಲೆ ಪ್ರತಿಯೊಬ್ಬರೂ ಹಾದು ಹೋಗಲೇ ಬೇಕಾಗುತ್ತದೆ. ಸತ್ಯ ವಿಶ್ವಾಸಿಗಳು ಸತ್ಯ ನಿಷೇಧಿಗಳು ಹೀಗೆ ಎಲ್ಲರೂ ಆ ಪಾಲವನ್ನು ದಾಟಬೇಕಿದೆ. ಸತ್ಯ ನಿಷೇಧಿಗಳ ಪಾಲಿಗೆ ಅದು ತಲೆಗೂದಲಿಗಿಂತ ಸಣ್ಣದಾಗಿಯೂ ಖಡ್ಗಕ್ಕಿಂತ ಹರಿತವಾಗಿಯೂ ಕಾಣಿಸುತ್ತದೆ.       ಸತ್ಯವಿಶ್ವಾಸಿಗಳು ಸಿರಾತ್ ಪಾಲವನ್ನು ಯಾವುದೇ ಪ್ರಯಾಸವಿಲ್ಲದೆ ಸುಲಭದಿಂದ ದಾಟಿ ಬಿಡುತ್ತಾರೆ.       ಕೆಲವರು ಸಾಮಾನ್ಯ ರೀತಿಯಲ್ಲಿ ಮತ್ತೆ ಕೆಲವರು ಮಿಂಚಿನ ವೇಗದಲ್ಲಿ ಇನ್ನು ಕೆಲವರು ವಾಯುವಿನ ವೇಗದಲ್ಲಿ ಪಾಲವನ್ನು ದಾಟುತ್ತಾರೆ.       ಸಿರಾತ್ ಪಾಲದ ಹತ್ತಿರ ಕಾರಿರುಳು ಆವರಿಸುತ್ತದೆ.ಸಜ್ಜನರಿಗೆ ಮಾತ್ರ ಅಲ್ಲಿ ಬೆಳಕು ಕಾಣಿಸುತ್ತದೆ.        ಆ ದಿನ ಸತ್ಯವಿಶ್ವಾಸಿಗಳನ್ನೂ , ಕಪಟವಿಶ್ವಾಸಿಗಳನ್ನೂ  ಹಿಂದು ಮುಂದಾಗಿ ನಿಲ್ಲಿಸಲಾಗುವುದು. ಸತ್ಯವಿಶ್ವಾಸಿಗಳೊಂದಿಗೆ ಕಪಟ ವಿಶ್ವಾಸಿಗಳು ಹೇಳುತ್ತಾರೆ,         ನೀವು ನಮಗೋಸ್ಕರ ಸ್ವಲ್ಪ ನಿಧಾನವಾಗಿ ನಡೆಯಿರಿ.ನಿಮ್ಮ ಪ್ರಕಾಶವನ್ನು  ನಾವು ಸ್ವಲ್ಪ ಪಡೆಯುತ್ತೇವೆ ಎಂದು.     ...

ಅಂತ್ಯ ದಿನದ ಲಕ್ಷಣಗಳು 6

*ಅಂತ್ಯ ದಿನದ ಲಕ್ಷಣಗಳು :* 6 *ಅದ್'ನಾನ್'ನಿಂದ ಬೆಂಕಿ*       ಅದ್'ನಾನ್ ಎಂಬ ನಗರದಿಂದ ಏಳುವ ಭಾರೀ ಗಾತ್ರದ ಬೆಂಕಿ ಜ್ವಾಲೆಯೊಂದು ಇಡೀ ವಿಶ್ವವನ್ನೊಮ್ಮೆ ದಿಗ್ಭ್ರಮೆಗೊಳಿಸಿ ಬಿಡುತ್ತದೆ. ಭೂಮಿಯ ಅಂತರಿಕ್ಷದಲ್ಲಿ ಅಪಾರ ದೂರ ಕ್ರಮಿಸಬಲ್ಲ ಈ ವಿಕಿರಣ ಜನರನ್ನು ದಕ್ಷಿಣದಿಂದ ಉತ್ತರಕ್ಕೂ, ಉತ್ತರದಿಂದ ದಕ್ಷಿಣಕ್ಕೂ ಒತ್ತೊಯ್ಯುತ್ತದೆ. ಜಿನ್ನ್ ಸಮೂಹವು ಹೆದರಿ ದ್ವೀಪಗಳಿಗೆ ಓಡಿ ಬಿಡುತ್ತದೆ. ಮಲಕ್'ಗಳು ಅವರನ್ನು ಅಲ್ಲಿಂದ ಹಿಂದಕ್ಕೆ ಎಳೆದು ತರುತ್ತಾರೆ. ಭಾರೀ ಗಾತ್ರದ ಬೆಂಕಿಯ ಜ್ವಾಲೆಗಳು ಮಾನವನ ನೆಮ್ಮದಿಯನ್ನು ಕೆಡಿಸಿ ಬಿಡುತ್ತದೆ. ಅವರ ಬಾಳೇ ಅಲ್ಲೋಲ ಕಲ್ಲೋಲವಾಗಿ ಬಿಡುತ್ತದೆ‌.        ಜನರೆಲ್ಲ ಒಗ್ಗೂಡಿಸಿ ಇಲ್ಲೊಂದು ಮಹತ್ತರ ಸಭೆ ನಡೆಸಲಾಗುತ್ತದೆ. ಇದು ಅಂತ್ಯ ದಿನಕ್ಕೆ ಮುನ್ನ ನಡೆಯುವ ಒಂದು ಸಣ್ಣ "ಮಹ್'ಶರ"  ಎಂದು ಪಂಡಿತರು ಹೇಳಿದ್ದಾರೆ.   ಪ್ರವಾದಿ(ಸ.ಅ)ರವರು ಹೇಳುತ್ತಾರೆ.  "ಇಂದು ಕಣಿವೆಯೊಂದರಲ್ಲಿ ತಣಿದು ನಿಂತಿರುವ ಒಂದು ಅಗ್ನಿ ಖಂಡಿತಾ ನಿಮ್ಮ ಬಳಿಗೆ ಬರಲಿದೆ. ಅದರ ಹೆಸರು 'ಬರ್'ಹೂತ್' ಎಂದು. ಅದು ಜನರೆಡೆಗೆ ಆಗಮಿಸಿ ಭಯಂಕರವಾದ ಶಿಕ್ಷೆಯನ್ನು ಅವರಿಗೆ ಉಣಿಸಲಿದೆ. ಅವರ ದೇಹ ಮತ್ತು ಸಂಪತ್ತನ್ನು ನಾಶ ಪಡಿಸಿ 8 ದಿನಗಳ ಕಾಲ ಗಾಳಿಯಂತೆ ಭೂಮಿಯಲ್ಲಿ ಅದು ತಿರುಗಾಡುವುದು. ಅಷ್ಟೇ ಅಲ್ಲದೆ ರಾತ್ರಿ ಹೊತ್ತು ಅದರ ತಾಪ ಹೆಚ್ಚಾಗಿದ್ದು ಆಕಾಶ, ...

ಅಂತ್ಯ ದಿನದ ಲಕ್ಷಣಗಳು 5

*ಅಂತ್ಯ ದಿನದ ಲಕ್ಷಣಗಳು :* 5 *ಪ್ರವಾದಿ ಈಸಾ ನಬಿ(ಅ)ರವರ ಆಗಮನ*        ಜಗತ್ತು ದಜ್ಜಾಲಿನ ಬಿಗಿ ಮುಷ್ಟಿಯಲ್ಲಿ ಸಿಲುಕಿ ಜನರು ಕಂಗಲಾಗಿ ನಿಂತಿರುವಾಗ ಕ್ರಾಂತಿಯ ಕಹಳೆಯನ್ನು ಮೊಳಗಿಸುತ್ತಾ ಓರ್ವ ಮಹಾನ್ ಪ್ರವಾದಿಯ ಆಗಮನವಾಗುತ್ತದೆ. ಅವರೇ ಈ ಸಮುದಾಯದ ವಾಗ್ದತ್ತ ಮಸೀಹ್. ಅರ್ಥಾತ್ ಈಸಾ ನಬಿ(ಅ) ಈಗ ಆಕಾಶ ಲೋಕದಲ್ಲಿ ಜೀವಿಸುತ್ತಿದ್ದು ಅಂತ್ಯ ದಿನದಲ್ಲಿ ಇಳಿದು ಬರಲಿದ್ದಾರೆಂದು ಅನೇಕ ಹದೀಸ್'ಗಳಿಂದ ಶ್ರುತಪಟ್ಟಿದೆ. ಅವರು ಓರ್ವ ನೂತನ ಪ್ರವಾದಿಯಾಗಿ ಬರುವುದಿಲ್ಲ. ಶತಮಾನಗಳ ಹಿಂದೆ ಈ ಭೂಮಿ ಮೇಲೆ ಜೀವಿಸಿ ಇಲ್ಲಿನ ಗಾಳಿ--ನೀರು ಪ್ರಕೃತಿ ಪರಿಸರದ ರುಚಿ ಕಂಡವರು. ಶತಮಾನಗಳ ಹಿಂದೆ ಆ ಮಹಾನ್ ಪ್ರವಾದಿ(ಅ)ರನ್ನು ಅಲ್ಲಾಹನು ಆಕಾಶದೆಡೆಗೆ ಕರೆದುಕೊಂಡು ಅಲ್ಲೇ ನೆಲೆಸುವಂತೆ ಮಾಡಿರುವನು.          ಇಮಾಂ ಮಹ್'ದಿ ಮತ್ತು ಮುಸ್ಲಿಂ ಸಮುದಾಯದ ಮೇಲೆ ದಜ್ಜಾಲಿನ  'ಫಿತ್ನ'. ವ್ಯಾಪಕಗೊಳ್ಳುವ ಹೊತ್ತಿಗೆ ಅಲ್ಲಾಹು ಜಿಬ್ರೀಲ್(ಅ)ರನ್ನು ಈಸಾ ನಬಿ(ಅ)ರವರ ಹತ್ತಿರ  ಕಳುಹಿಸುತ್ತಾನೆ. ಆಗ ಈಸಾ ನಬಿ(ಅ) ಎರಡನೇ ಆಕಾಶದಲ್ಲಿ  ನೆಲೆಸಿರುತ್ತಾರೆ. ದೇವಚರ ಜಿಬ್ರೀಲ್(ಅ)ಮರು ಈಸಾ(ಅ) ರನ್ನು ಸಮೀಪಿಸಿ  "ಓ ಅಲ್ಲಾಹನ ಪವಿತ್ರ ದಾಸರೇ,  ಅಲ್ಲಾಹು ನಿಮಗೆ ಸಲಾಂ ಹೇಳಿದ್ದಾನೆ. ನೀವು ಭೂಮಿಗೆ ಇಳಿಯಬೇಕಂತೆ". ಎನ್ನುವರು. ಅಲ್ಲಾಹನ ಆದೇಶದಂತೆ, ಪ್ರವಾದಿ ಈಸಾ ನಬಿ(...

ಅಂತ್ಯ ದಿನದ ಲಕ್ಷಣಗಳು 4

ಅಂತ್ಯ ದಿನದ ಲಕ್ಷಣಗಳು : 4 *ಅಜ್ಞಾನದ ಅರಾಜಕತೆ :*     ಅಜ್ಞಾನ ಎಂಬುದು ಬಡತನಕ್ಕಿಂತಲೂ ಕಠೋರವಾದದ್ದು. ಇಲ್ಲಿ ಬಡವರಾಗಿ ಬದುಕುವುದರಿಂದ ನಮ್ಮ ಪಾರತ್ರಿಕ ಶ್ರೇಯಸ್ಸಿಗೆ ದಕ್ಕೆ ಬರಬೇಕೆಂದಿಲ್ಲ. ಆದರೆ ಅಜ್ಞಾನದ ಕಥೆ ಹೀಗಲ್ಲ. ಇದು ಇರುವಲ್ಲಿ ಧಾರ್ಮಿಕ ಪ್ರಗತಿ ಸಾಧ್ಯವಿಲ್ಲ. ಇದನ್ನು ತಿಳಿಯುವಾಗ ಧರ್ಮದ ಬಗ್ಗೆ ಗಂಧ ಗಾಳಿಯೂ ಇಲ್ಲದ ಲಕ್ಷಾಂತರ ಮಂದಿ ಪಾಮರರ ಪಾಡೇನು ಎಂದೆನಿಸುತ್ತದೆ. ಅಜ್ಞಾನವು ಸಮಾಜದ ನಿರಾಶದಾಯಕ ಪರಿಸ್ಥಿತಿಗೊಂದು ಉದಾಹರಣೆ. ವಿದ್ಯಾದಾಹಿಗಳ ಸಂಖ್ಯೆ ಕಡಿಮೆಯಾದಂತೆ ಸಮಾಜವನ್ನು ಅಜ್ಞಾನವು ಮುತ್ತಿಕೊಳ್ಳುತ್ತದೆ.  ಪ್ರವಾದಿ (ಸ.ಅ) ಅವರು ಈ ಬಗ್ಗೆ  "ಜ್ಞಾನವು ಕಡಿಮೆಯಾಗುವುದು ಅಜ್ಞಾನವು ಬಹಿರಂಗವಾಗುವುದು ಅಂತ್ಯ ದಿನದ ಲಕ್ಷಣ ಎಂದಿದ್ದಾರೆ. ಇದನ್ನು ಸರಿಯಾಗಿ ಆಲೋಚಿಸಿ ನೋಡಿದರೆ ಇಂದಿನ ಸ್ಥಿತಿಗೆ ಸರಿ ಹೊಂದಿರುವುದಾಗಿ ತಿಳಿಯುತ್ತದೆ. ತುಂಬು ಜ್ಞಾನವಿರುವ ವಿದ್ವಾಂಸರ ಸಂಖ್ಯೆ ಇಳಿಮುಖವಾಗುತ್ತಿದೆ. ಅರ್ಧಂಬರ್ಧ ತಿಳಿದವರು ಒಂದೆಡೆಯಾದರೆ ತಿಳಿಯದ್ದನ್ನು ತಿಳಿದಂತೆ ನಟಿಸುವವರು ಮತ್ತೊಂದೆಡೆ. ಇಂದು ವಿಶ್ವದಲ್ಲಿ ಕೋಟ್ಯಾಧಿಪತಿಗಳು ಕೋಟಿ ಸಂಖ್ಯೆಯಲ್ಲಿ ಸಿಗಬಹುದು. ಆದರೆ ಜ್ಞಾನದ ಆಳ--ಹರವನ್ನು ಹೊಂದಿದ ಪಂಡಿತರು ಬೆರಳಣಿಕೆಯಷ್ಟು ಮಾತ್ರ. ಈ ವಿಲಕ್ಷಣ ಬೆಳವಣಿಗೆಯ ಒಂದು ಮುಖವನ್ನು ತೆರೆದಿಡುವ ಒಂದು ಹದೀಸ್ ಹೀಗಿದೆ. " ಅಲ್ಲಾಹನು ನಿಮಗೆ ಜ್ಞಾನವನ್ನು ಕೊಟ್ಟ ನಂತರ ಅದನ್ನು ಕಿತ್ತು ...

ಅಂತ್ಯ ದಿನದ ಲಕ್ಷಣಗಳು 3

*ಅಂತ್ಯ ದಿನದ ಲಕ್ಷಣಗಳು :* 3 *~~~~~~~~~~~~~~~~~~~~~~~~~* *ಕೌಟುಂಬಿಕ ಕಲಹ :*  ಕೌಟುಂಬಿಕ ಸಂಬಂಧವನ್ನು ನಿಕಟಗೊಳಿಸುವ ಕಾರ್ಯ ತುಂಬಾ ಶ್ರೇಷ್ಠವಾದುದು!  ಪ್ರವಾದಿ(ಸ.ಅ)ರವರು  "ಕುಟುಂಬ ಸಂಬಂಧ ಮುರಿಯುವ ತನಕ ಅಂತ್ಯ ದಿನ ಸಂಭವಿಸಲಾರದು". ಎಂದು ಒತ್ತಿ ಹೇಳಿದ್ದಾರೆ.  ದುರದೃಷ್ಟದಿಂದ  ನಮ್ಮ ಇಂದಿನ ಕುಟುಂಬ ಸಂಬಂಧಗಳು ಒಡೆದು ಹೋಗುವ ಪರಿಸ್ಥಿತಿ ಸಂಜಾತವಾಗಿದೆ.  ಕೌಟುಂಬಿಕ ವಲಯದ ಸದಸ್ಯರೇ ಕ್ರೂರಿಗಳಾಗಿದ್ದಾರೆ. ಶಾಂತಿ ಸಮಾಧಾನದಿಂದ ಬಾಳಲು ಅವರು ಬಯಸುವುದಿಲ್ಲ‌‌. ಬದುಕಿನ ನೈತಿಕ ಮೌಲ್ಯಗಳ ಪಾಲನೆಯೇ ಶಾಂತಿ ಹಾಗೂ ಸೌಹಾರ್ಧಯುತ ಜೀವನಕ್ಕೆ ನಾಂದಿ ಎಂಬುವುದನ್ನು ಅವರು ಒಪ್ಪಿಕೊಳ್ಳುವುದಿಲ್ಲ.  ಕುಟುಂಬವಲಯದಲ್ಲಿ ಪರಸ್ಪರ ವಿರೋಧ ಒಳ ಘರ್ಷಣೆಗಳು, ವೈರತ್ವದ ಬೆಳೆ, ಹಗೆತನದ ಹೊಗೆ, ಇಡೀಯ ಕುಟುಂಬ ಸದಸ್ಯರನ್ನೇ ಅಲುಗಾಡಿಸುವಷ್ಟು ಗಾಢವಾಗಿ ಕಾಡತೊಡಗಿದೆ.       ಮಕ್ಕಳಿಗೆ ಹೆತ್ತವರಲ್ಲಿ ಗೌರವವಿಲ್ಲ, ಹೆಂಡತಿಗೆ ಗಂಡನ ಬಗ್ಗೆ ನಿರಾಸಕ್ತಿ, ಅಣ್ಣನಿಗೆ ತಮ್ಮನನ್ನು ಕಂಡರೆ ಆಗದು, ಶಿಷ್ಯಂದಿರಿಗೆ ಗುರುಗಳ ಬಗ್ಗೆ ನಿರ್ಲಕ್ಷ್ಯ ಭಾವ, ಬಹುಶಃ ಇದೇ ಕಾರಣದಿಂದಾಗಿ ಇಂದು ಮಾನವೀಯ ಸಂಂಧಗಳು ಕಮರಿ ಹೋಗುತ್ತಿದೆ ಎನ್ನಬಹುದು. ಒಂದು ಕುಟುಂಬ ರೂಪ ತಳೆಯಲು ಅದರ ಪ್ರತಿ ಸದಸ್ಯರೂ ಮುಖ್ಯವಾದುದರಿಂದ ಅವರೆಲ್ಲರೂ ಕುಟುಂಬ ಎಂಬ ಸುಭದ್ರ ಕೋಟೆಗೆ ಪೂರಕವಾಗಿ ವರ್ತಿಸುವವರಾಗಬೇಕು. ...

ಅಂತ್ಯ ದಿನದ ಲಕ್ಷಣಗಳು 2

*ಅಂತ್ಯ ದಿನದ ಲಕ್ಷಣಗಳು :* 2 *~~~~~~~~~~~~~~~~~~~~~~~~~* 🌎🌎🌎🌎🌎🌎🌎🌎🌎🌎 *ಹಝ್ರತ್ ಹುಸೈನ್(ರ)ರವರ ಹತ್ಯೆ :*  ಈ ಘಟನೆಯ ಕುರಿತು ಪ್ರವಾದಿ(ಸ.ಅ)ರವರು ಮೊದಲೇ ಸೂಚಿಸಿದ್ದರು.  "ನನ್ನ ಈ ಪುತ್ರ ವಧಿಸಲ್ಪಡಲಿದ್ದಾರೆ. ಇರಾಕಿನ ಇಂತಿಂಥ ಸ್ಥಳದಲ್ಲಿ ಅವನ ಹತ್ಯೆ ನಡೆಯುವುದು ಆ ದಿನ ನೀವು ಅವನನ್ನು ಕಂಡರೆ ನೆರವಾಗಿರಿ". ಎಂದಿದ್ದರು‌. ಇಮಾಂ ಹುಸೈನ್(ರ)ರವರ ಹತ್ಯೆ ಬಹಳ ಭೀಕರವಾದ ರೀತಿಯಲ್ಲಿ 601ನೇ ಇಸವಿಯಲ್ಲಿ ಕೂಫಾದ ಕರ್ಬಲಾ ಎಂಬಲ್ಲಿ ನಡೆಯಿತು.    ಅಂದು ಮೊಹರ್ರಂ ಹತ್ತು. ಜಗತ್ತಿನ ಇತಿಹಾಸದಲ್ಲಿ ನೂರಾರು ಘಟನೆಗಳಿಗೆ ಸಾಕ್ಷ್ಯವಹಿಸಿದ ದಿನ ಅವರ ಹತ್ಯೆಯ ಬಳಿಕ ಅವರ ಇತರ ಪುತ್ರರನ್ನೂ ವಧಿಸಲಾಯಿತು. ಆದರೆ ಪುತ್ರರಲ್ಲಿ ಒಬ್ಬರಾದ ಝೈನುಲ್ ಆಬಿದೀನ್ ಮಾತ್ರ ಬದುಕುಳಿದರು. ಇದಕ್ಕೆ ಕಾರಣ ಅಂದು ಆ ಮಹಾತ್ಮರು ರೋಗಿಯಾಗಿದ್ದುದು. ಹುಸೈನ್(ರ)ರವರ ಪಿತೃ ಸುಪುತ್ರರನ್ನೂ ಹತ್ಯೆಗೈಯ್ಯಲಾಗಿತ್ತು. ಹತರಾದ ಹುಸೈನ್(ರ)ರವರ ದೇಹದಲ್ಲಿ 33 ಗಾಯಗಳು ಮಚ್ಚಿನಿಂದ ಕಡಿದ 34 ಕಲೆಗಳು ಗೋಚರಿಸಿದ್ದವು‌.  *ಸ'ಊದಿಯಿಂದ ಅಗ್ನಿ :*  ಹಝ್ರತ್ ಅಬೂಹುರೈರಾ(ರ)ರವರಿಂದ ಇಮಾಂ ನುಖಾರಿವರು ವರದಿ ಮಾಡಿದ ಒಂದು ಹದೀಸ್'ನಲ್ಲಿ  " ಹಿಜಾಝ್'ನಿಂದ ಅಗ್ನಿ ಹೊರಡುವ ತನಕ ಅಂತ್ಯ ದಿನ ಸಂಭವಿಸಲಾರದು". ಎಂಬ ಪ್ರವಚನವಿದೆ. ಇದೇ ವಿಷಯದ ಕುರಿತು ಪ್ರಸ್ತಾಪವಾಗಿರುವ ದೀರ್ಘವಾದ ಬೇರೆ ಅನೇಕ ಹದೀಸ್'ಗಳನ...