Skip to main content

ಅಕ್ಕರೆಕೆರೆಯ ಕೀರ್ತಿಯನ್ನು ಬಾನೆತ್ತರಕ್ಕೇರಿಸಿದ ತೋಕೆ ಉಸ್ತಾದ್

*ಅಕ್ಕರೆಕೆರೆಯ ಕೀರ್ತಿಯನ್ನು ಬಾನೆತ್ತರಕ್ಕೇರಿಸಿದ ತೋಕೆ ಉಸ್ತಾದ್.....*

ಹೌದು...
       *ಇಂದು ಸಾಮಾಜಿಕ ಜಾಲತಾಣಗಳಾದ ವಾಟ್ಸಪ್, ಫೇಸ್ಬುಕ್ ತೆರೆದರೆ ಕಣ್ಣಿಗೆ ಕಾಣುವ ಒಂದು ಊರಿನ ಹೆಸರು ಉಳ್ಳಾಲದ ಅಕ್ಕರೆಕೆರೆ.*

*ಕಾರಣವೇನು ??*

*ನೌಶಾದ್ ಏಶನಿ ಎಂಬ ದಿಕ್ಕು ದೆಸೆಯಿಲ್ಲದ ಯಾವುದೇ ಸಂಘಟನೆಯಲ್ಲಿ ಇಲ್ಲದ, ಅವನ ಭಾಷೆಯಲ್ಲಿ ಹೇಳುವುದಾದರೆ ' ತಂದ ಇಲ್ಲಾತ್ತವನ್ ' ಯಾವುದೇ ಸಂಘಟನೆಯಲ್ಲೂ ಹೇಳ ಹೆಸರಿಲ್ಲದವ ಉಳ್ಳಾಲದ ಮೇಲಂಗಡಿಯಲ್ಲಿ ಬಂದು ವಾಂತಿ ಮಾಡಿ ಹೋದ.*

*ಅಬ್ಬಬ್ಬಾ !!*

*ಏನು ಪ್ರಚಾರ, ಎಂತೆಂತಹ ಮೆಸೇಜುಗಳು,ಪೋಸ್ಟರುಗಳು ಜಿಲ್ಲೆಯಾದ್ಯಂತ ರಾರಾಜಿಸಿದವು, ಅವನು ಬರುವ ನಾಲ್ಕು ವಾರ ಮುಂಚೆಯಿಂದಲೇ ಉಳ್ಳಾಲದ ಸರ್ವ ಫಿತ್ನಕೋರರ ಮತ್ತು ಅದಕ್ಕೆ ಸಹಕರಿಸಿದ ತ್ವರೀಕತ್ ವಾದಿಗಳ ಬಾಯಿಯಿಂದ ಒಸರುತ್ತಿದ್ದ ಮಾತು "ನೌಶಾದ್ ಅಹ್ಸನಿ ಉಳ್ಳಾಲತ್ಗ್ ಬಂಡೆ ಬಲ, ಅಹ್ಸನಿ ಉಸ್ತಾದ್ ಬನ್ನೆಂಗ್ ಎಲ್ಲರೆ ದಮ್ಮು ದೈಪಾಟಲಾ, ಎಪಿರೆಯುಂ ದಮ್ಮಿಕ್ಕಾಲ,ತೋಕೆರೆಯುಂ ದಮ್ಮಿಕ್ಕಾಲ,ತೋಕೆ ಪಿನ್ನೆ ಉಳ್ಳಾಲತ್ ಗ್ ಬರೇ ಬರಲ " ಅಂತ ಸಾರ್ವಜನಿಕ ಸ್ಥಳಗಳಲ್ಲಿ ನಾವೇ ಮೇಲು ಎಂಬಂತೆ ಒಟ್ರಾಸಿ ಮಾತನಾಡುತ್ತಿದ್ದ ಉಳ್ಳಾಲದ ಕೆಲವು ಫಿತ್ನಕೋರರು, ಅದಕ್ಕೆ ಸಪೋರ್ಟ್ ಆಗಿ ಎಲ್ಲಾ ಚಕ್ಕರೆಕಞ್ಞಿ ಚಂಘಟನೆಗಳು ( ಎಸ್.ಕೆ, ಪಿ ಎಫ್ ಐ, ಸಲಫಿ, ವಹ್ಹಾಬಿ, ಜಮಾಅತೆ ಇಸ್ಲಾಮಿ ಹಾಗು ಇತರೆ )*

*ನೀವು ಕೇಳಬಹುದು......*

*ನೌಶಾದ್ ಏಶನಿಯ ಕಾರ್ಯಕ್ರಮಕ್ಕೆ ಇವರೆಲ್ಲರೂ ಸಪೋರ್ಟ್ ಮಾಡ್ತಾರಾ ಎಂದು?*
*ಇವರೆಲ್ಲರಿಗೂ ಸುನ್ನತ್ ಜಮಾಅತಿನ ಆಶಯಾದರ್ಶ ಬೇಡ.ಇವರಿಗೆ ಬೇಕಾಗಿರುವುದು ಸುಲ್ತಾನುಲ್ ಉಲಮಾ,ಪೇರೋಡ್ ಉಸ್ತಾದ್,ಪೊನ್ಮಳ ಉಸ್ತಾದ್ ಹಾಗು ತೋಕೆ ಉಸ್ತಾದರ ಹಸಿಮಾಂಸ, ಸುನ್ನತ್ ಜಮಾಅತಿನ ಉಲಮಾಗಳನ್ನು ಸಾದಾತುಗಳನ್ನು ಯಾರು ಬೈಯ್ಯುತ್ತಾರೋ,ಯಾರು ಹಸಿ ಮಾಂಸ ತಿನ್ನುತ್ತಾರೋ ಅವರಿಗೆ ವೇದಿಕೆ ಸಜ್ಜು ಮಾಡುವುದು ಈ ಮೇಲಿನ ವಿಭಾಗದವರ ಹವ್ಯಾಸ,ಕಳೆದ ಸಲ ರಾಮಂದಳಿ ತುಂಬಾ ಪ್ರಚಾರದ ಸರಕಾಗಿದ್ದ.ಕೇರಳದ ಮೂಲೆ ಮೂಲೆಗಳಲ್ಲಿ ವಾಕರಿಸಿದ ಆತನನ್ನು ಉಳ್ಳಾಲದ ಫಿತ್ನವಾದಿಗಳು ಉಳ್ಳಾಲಕ್ಕೂ ಕರೆಯಿಸಿದರು.ಸಯ್ಯಿದ್ ಮದನಿ ತಂಗಳ್ ಮತ್ತು ತಾಜುಲ್ ಉಲಮಾ ಖ.ಸಿ ರವರ ಉಳ್ಳಾಲದ ಮಣ್ಣಿಗೆ ಆತ ಬಂದದ್ದೇ ಬಂದದ್ದು ಆತನ ಫೇಮಸುತನ ಕಡಿಮೆಯಾಗಿ ಇದೀಗ ಮೂಲೆಗುಂಪಾಗಿದ್ದಾನೆ.ಇದೀಗ ನೌಶಾದ್ ಏಶನಿ ಎಂಬವ ಈ ಸಲ ಭಾರೀ ಪ್ರಚಾರದಲ್ಲಿದ್ದ.ಕೇರಳದ ಪ್ರತೀ ಮೂಲೆ ಮೂಲೆಯಲ್ಲಿಯೂ ವಾಂತಿ ಮಾಡಿ ಇದೀಗ ಕರ್ನಾಟಕದ ಉಳ್ಳಾಲಕ್ಕೂ ಬಂದು ಉಲಮಾಗಳನ್ನು ಸಾದಾತುಗಳನ್ನು ನಿಂದಿಸಿ ಹಸಿಮಾಂಸ ತಿಂದು ಹೋಗಿದ್ದಾನೆ.ಅಂತ್ಯದಿನದ ಲಕ್ಷಣವೆಂಬಂತೆ ತನಗೆ ವಿದ್ಯಾದಾನ ಮಾಡಿದ ಉಸ್ತಾದರುಗಳನ್ನು ಉಳ್ಳಾಲದಲ್ಲಿ ನಿಂದಿಸಿ, ಮರಣ ಹೊಂದಿದವರ ಮೇಲೆ ಸುಳ್ಳು ಕಟ್ಟು ಕಥೆಗಳನ್ನು ಕಟ್ಟಿದ್ದಾನೆ. ಈತ ಕೂಡಾ ಕೆಲವೇ ಸಮಯಗಳಲ್ಲಿ ಮೂಲೆಗುಂಪಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.*

*ನೌಶಾದ್ ಏಶನಿ ಉಳ್ಳಾಲಕ್ಕೆ ಬಂದ ಮರುದಿನ ಉಳ್ಳಾಲದ ಅಕ್ಕರೆಕೆರೆಯಲ್ಲಿ ಅಮೀನುದ್ದೀನ್ ಚಾರಿಟೇಬಲ್ ಟ್ರಸ್ಟಿನವರ ಆಶ್ರಯದಲ್ಲಿ ತೋಕೆ ಉಸ್ತಾದರ ಒಂದು ದಿನದ ಪ್ರಭಾಷಣವಿತ್ತು.ಪ್ರಚಾರದ ಕಾರ್ಯವನ್ನು ಸರ್ವ ತ್ವರೀಕತ್ ವಾದಿಗಳೇ ಕೈಗೊಂಡಿರುವುದಂತೂ ಸುಳ್ಳಲ್ಲ. "ಅಕ್ಕರೆಕೆರೆಲ್ ತೋಕೆರೆ ಪ್ರೋಗ್ರಾಮುಂಡು,ನೌಶಾದ್ ಅಹ್ಸನಿರೆ ಸವಾಲ್ಗ್ ಧೈರ್ಯ ಇನ್ನೆಂಗ್ ತೋಕೆ ಮರುವಡಿ ಚೊಲ್ಲಟ್ಟ್,ತೋಕೆ ಬಂಡೆದೇ ಸಂಶಯ" ಅಂತ ಹೇಳಿ ಸಾಮಾಜಿಕ ಜಾಲತಾಣದಲ್ಲಿ ಮೆಸೇಜನ್ನು ವೈರಲ್ ಆಗಿ ಹರಿಯ ಬಿಟ್ಟಿದ್ದರು.*

👇🏼👇🏼👇🏼👇🏼👇🏼👇🏼👇🏼👇🏼👇🏼👇🏼👇🏼

*ತೋಕೆ ಉಸ್ತಾದರ ಆಗಮನ : ಸರ್ವ ತಿರುಬೋಕಿಗಳ ನರಳಾಟ.*

*ಸುನ್ನತ್ ಜಮಾಅತಿನ ನೈಜ ಆಶಯಾದರ್ಶವನ್ನು ತಿಳಿಸುವ ಸುಲ್ತಾನುಲ್ ಉಲಮಾ ನೇತ್ರತ್ವ ನೀಡುವ ಸಂಘಟನೆಯ ಉಲಮಾಗಳ ಪ್ರಭಾಷಣ ಕೇಳಲು ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಸದಾ ಸನ್ನದ್ಧವಾಗಿರುವ ಉಳ್ಳಾಲದ ಸುನ್ನೀ ಸಮೂಹ ಯಾವಾಗಲೂ ತಯ್ಯಾರಾಗಿರುವರು.ಅದರಲ್ಲೂ ತೋಕೆ ಉಸ್ತಾದರ ಪ್ರಭಾಷಣವೆಂದಾದರೆ ಉಳ್ಳಾಲದಲ್ಲಿ ಸುನ್ನೀ ಜನಸಾಗರವಾಗುತ್ತದೆ.ಕಾರಣ ಅವರು ಸುನ್ನತ್ ಜಮಾಅತಿನ ಆಶಯಾದರ್ಶವನ್ನು ತೆರೆದು ಹೇಳುವರು.ಯಾರ ಮುಂದೆಯೂ ಮಂಡಿಯೂರುವ ಜಾಯಮಾನದವರಲ್ಲ ತೋಕೆ ಉಸ್ತಾದ್,*
*ಅಂತೆಯೇ ತೋಕೆ ಉಸ್ತಾದ್ ಯಾರ ಬೆದರಿಕೆಗಳಿಗೂ ಜಗ್ಗದೆ,ಬಗ್ಗದೆ ಸುನ್ನತ್ ಜಮಾಅತಿನ ಆಶಯಾದರ್ಶವನ್ನು ತೆರೆದು ಎಳೆ ಎಳೆಯಾಗಿ ಬಿಡಿಸಿ ಹೇಳಿದರು.ತೋಕೆ ಉಸ್ತಾದರ ಪ್ರತಿಯೊಂದು ಮಾತು ಸರ್ವ ಕಪಟಿಗಳ, ಸರ್ವ ಬೈರಾಸ್ ಮುಸ್ಲಿಯಾರ್ ಅನುಯಾಯಿಗಳ,ಸರ್ವ ಕಪಟ ತ್ವರೀಕತ್ ವಾದಿಗಳ ಎದೆಯನ್ನು ಸೀಳುವಂತಿತ್ತು.ಯಾವುದೇ ಸಂಘಟನೆಯಲ್ಲಿ ಎಡ್ರಾಸ್ ಇಲ್ಲದ ತಿರುಬೋಕಿಗಳಿಗೆ ಉತ್ತರ ನೀಡಲು ಇರುವವರಲ್ಲ ನಮ್ಮ ಆಲಿಂ ಗಳು, ಸಿಂಹ ನಡೆದುಕೊಂಡು ಹೋಗುವಾಗ ಅದನ್ನು ಕಂಡು ತರತರದ ನಾಯಿಗಳು ಬೊಗಳುತ್ತಿರುತ್ತವೆ.ಆದರೆ ಆ ಸಿಂಹ ಅದನ್ನು ಕ್ಯಾರೇ ಮಾಡುವುದಿಲ್ಲ.ಅದೇರೀತಿ ಅಡ್ರಾಸ್ ಇಲ್ಲದ ತಿರುಬೋಕಿಗಳು ಬೊಗಳುತ್ತಿರುವಾಗ ಅವರಿಗೆ ಉತ್ತರ ಕೊಡುತ್ತಾ ಇರುವುದು ನಮ್ಮ ಕಾಯಕವಲ್ಲ.ನಮಗೆ ನಮ್ಮದೇ ಆದ ಕೆಲಸಗಳಿವೆ ಎಂಬ ತೋಕೆ ಉಸ್ತಾದರ ಮಾತುಂಟಲ್ಲಾ ಸರ್ವ ತಿರುಬೋಕಿ ತ್ವರೀಕತ್ತಿಗಳ ಕಪಾಳಕ್ಕೆ ಬಿಗಿದ ಹಾಗಿದೆ.ಅಂತೂ ಅಕ್ಕರೆಕೆರೆ ಸುನ್ನೀ ಜನ ಸಾಗರವಾಯಿತು.ಅಳಿಸಲಸಾಧ್ಯವಾದ ರೀತಿಯಲ್ಲಿ ಅಕ್ಕರೆಕೆರೆ ಚರಿತ್ರೆ ಪುಟಗಳಲ್ಲಿ ದಾಖಲಾಯಿತು.*

*ಕೊನೆಯದಾಗಿ.*

*ಅಕ್ಕರೆಕೆರೆ ತೋಕೆ ಉಸ್ತಾದರ ಆಗಮನದಿಂದ ಪುಳಕಿತಗೊಂಡಿತು,ಸರ್ವ ಕಪಟಿಗಳ ನಿದ್ದೆಗೆಟ್ಟಿತು,ಅಕ್ಕರೆಕೆರೆ ಚರಿತ್ರೆ ಪುಟಗಳಲ್ಲಿ ದಾಖಲಾಯಿತು*

🖊 ಹನೀಫ್ ಉಳ್ಳಾಲ

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...