Skip to main content

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ

*ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವುದು.

ಬಳಿಕ ವಜ್ಜಹ್ತು, ಅಊದ್ಸು, ಫಾತಿಹಃ, ಅಲ್ ಬಖರ ಅಥವಾ ಅಲ್ ಬಖರ ಸೂರತಿನಷ್ಟು ಬೇರೆ ಸೂರತುಗಳಿಂದ ಓದುವುದು..

ನಂತರ ಒಂದನೇ ರುಕೂಹ್, ರುಕೂಹಿನಲ್ಲಿ ನೂರು ಆಯತ್ ಓದುವಷ್ಟು ಸಮಯ ತಸ್ಬೀಹ್ ಹೇಳಬೇಕು. 
ಬಳಿಕ ಈತಿದಾಲ್ ನಲ್ಲಿ *ಸಮಿಅಲ್ಲಾಹು ಲಿಮನ್ ಹಮಿದಃ* ಹೇಳಿ ರುಕೂಇನಿಂದ ಏಳುತ್ತಾ ಈತಿದಾಲ್ ನಲ್ಲಿ ಹೇಳುವ ದ್ಸಿಕ್ರ್ ಹೇಳಬೇಕು. ಬಳಿಕ ಅಊದ್ಸು, ಫಾತಿಹಃ, ಅಲ್ ಬಖರದ ಇನ್ನೂರು ಆಯತ್ ಓದುವಷ್ಟು ಕುರಾನಿನಿಂದ ಓದಬೇಕು. 
ಮತ್ತೆ ಎರಡನೇ ರುಕೂಹ್. ಇದರಲ್ಲಿ 80 ಆಯತ್ ಓದುವಷ್ಟು ತಸ್ಬೀಹ್ ಹೇಳುವುದು. ಬಳಿಕ ಸಮಿಅಲ್ಲಾಹು ಲಿಮನ್ ಹಮಿದಃ ಹೇಳಿ ರುಕೂಇನಿಂದ ಎದ್ದು ಈತಿದಾಲ್ ನಲ್ಲಿ ಹೇಳುವ ದ್ಸಿಕ್ರ್ ಹೇಳುವುದು.

ಮತ್ತೆ ಒಂದನೇ ಸುಜೂದ್ ಇದರಲ್ಲಿ ನೂರು ಆಯತ್ ಓದುವಷ್ಟು ಸಮಯ ತಸ್ಬೀಹ್ ಹೇಳುವುದು. ಎರಡು ಸುಜೂದ್ ಗಳ ಮಧ್ಯೆ ಇರುವ ಕೂರುವಿಕೆಯಲ್ಲಿ ಅದರದ್ದೇ ಆದ ದ್ಸಿಕ್ರ್ ಹೇಳುವುದು. ಬಳಿಕ ಎರಡನೇ ಸುಜೂದ್. ಇದರಲ್ಲಿ 80 ಆಯತ್ ಓದುವಷ್ಟು ಸಮಯ ತಸ್ಬೀಹ್ ಹೇಳುವುದು.

ನಂತರ ಎರಡನೇ ರಕಅತ್. ಅಊದ್ಸು, ಫಾತಿಹಾದ ಬಳಿಕ 150 ಆಯತಿನಷ್ಟು ಓದುವುದು. ಬಳಿಕ ಮೂರನೇ ರುಕೂಹ್, ಇದರಲ್ಲಿ 70 ಆಯತ್ ನಷ್ಟು ತಸ್ಬೀಹ್ ಹೇಳುವುದು. ಬಳಿಕ ಸಮಿಅಲ್ಲಾಹು ಲಿಮನ್ ಹಮಿದಃ ಹೇಳಿ ರುಕೂಇನಿಂದ ಎದ್ದು ಈತಿದಾಲ್ ನಲ್ಲಿ ಹೇಳುವ ದ್ಸಿಕ್ರ್ ಹೇಳುವುದು.

ನಂತರ ಅಊದ್ಸು, ಫಾತಿಹಾದ ಬಳಿಕ 100 ಆಯತಿನಷ್ಟು ಓದುವುದು, ಬಳಿಕ ನಾಲ್ಕನೇ ರುಕೂಹ್, ಇದರಲ್ಲಿ 50 ಆಯತ್ ನಷ್ಟು ತಸ್ಬೀಹ್ ಹೇಳುವುದು. ಬಳಿಕ ಸಮಿಅಲ್ಲಾಹು ಲಿಮನ್ ಹಮಿದಃ ಹೇಳಿ ರುಕೂಇನಿಂದ ಎದ್ದು ಈತಿದಾಲ್ ನಲ್ಲಿ ಹೇಳುವ ದ್ಸಿಕ್ರ್ ಹೇಳುವುದು.

ನಂತರ ಮತ್ತೆ ಮೂರನೇ ಸುಜೂದ್ ಇದರಲ್ಲಿ 70 ಆಯತ್ ಓದುವಷ್ಟು ಸಮಯ ತಸ್ಬೀಹ್ ಹೇಳುವುದು. ಎರಡು ಸುಜೂದ್ ಗಳ ಮಧ್ಯೆ ಇರುವ ಕೂರುವಿಕೆಯಲ್ಲಿ ಅದರದ್ದೇ ಆದ ದ್ಸಿಕ್ರ್ ಹೇಳುವುದು. ಬಳಿಕ ನಾಲ್ಕನೇ ಸುಜೂದ್. ಇದರಲ್ಲಿ 50 ಆಯತ್ ಓದುವಷ್ಟು ಸಮಯ ತಸ್ಬೀಹ್ ಹೇಳುವುದು.

ಸುಜೂದಿನಿಂದ ಎದ್ದು ಅತ್ತಹಿಯ್ಯಾತ್, ಸ್ವಲಾತ್ ದುಆಗಳ ಬಳಿಕ ಸಲಾಮ್ ಹೇಳಿ ನಮಾಜಿನಿಂದ ವಿರಮಿಸುವುದು.

*ಸಾಮಾನ್ಯ ನಮಾಜಿಗಿಂತ ಗ್ರಹಣ ನಮಾಜು ಭಿನ್ನ*

ಪ್ರತೀ ಎರಡು ರಕಅತ್ ನಲ್ಲೂ ಎರಡು ನಿಲ್ಲುವಿಕೆ ( ಖಿಯಾಮ್ ), ಎರಡು ರುಕೂಹ್ ಇರುವುದು.

*ನಮಾಜಿನ ಬಳಿಕ ಎರಡು ಖುತುಬಾ ಓದುವುದು ಸುನ್ನತ್ತಿದೆ. ತೌಬಾ, ಸ್ವದಖಃ ಮುಂತಾದ ಸತ್ಕರ್ಮಗಳು ನಿರ್ವಹಿಸಲು ಹಾಗು ಕೆಡುಕುಗಳಿಂದ ಮುಕ್ತರಾಗಿ ಜೀವಿಸಲು ಇಮಾಮ್ ಜನರನ್ನು ಪ್ರೇರೇಪಿಸಬೇಕು, ಜಮಾಅತ್ತಾಗಿ ನಿರ್ವಹಿಸುವುದು ಮತ್ತು ಮಸೀದಿಯಲ್ಲಿ ನಮಾಜು ಮಾಡುವಿಕೆ ಪ್ರತ್ಯೇಕ ಸುನ್ನತಾಗಿದೆ.

ಜಮಾಅತಾಗಿ ನಿರ್ವಹಿಸುವಾಗ
*ಅಸ್ಸಲಾತು ಜಾಮಿಅಃ* ಎಂದು ಮೊದಲು ಕರೆಯಲು ಸುನ್ನತ್ತಿದೆ. ಒಬ್ಬಂಟಿಗನಾಗಿಯೂ ಈ ನಮಾಜು ನಿರ್ವಹಿಸಬಹುದು. ಗ್ರಹಣ ನಮಾಜು ಪ್ರಬಲ ಸುನ್ನತ್ತಾದ ನಮಾಜಾಗಿದೆ. *ಅಪೂರ್ವವಾಗಿ ಸಿಗುವ ಸುನ್ನತ್*

_________________________________________

ಗ್ರಹಣ ಪ್ರಾರಂಭವಾಗಿ ಕೊನೆಗೊಳ್ಳುವುದರ ಒಳಗಾಗಿದೆ ಪ್ರಸ್ತುತ ನಮಾಜಿನ ಸಮಯ

By -

ಪಿ ಎಸ್ ಎಂ ಶಿಹಾಬುದ್ದೀನ್ ಸಖಾಫಿ ಉಳ್ಳಾಲ

Comments

Popular posts from this blog

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...