Skip to main content

ಮಹ್ಳರತುಲ್ ಬದ್ರಿಯ್ಯ ಎಂಬ ದ್ಸಿಕ್ರ್ ಹೇಳುವಾಗ ಪಾಲಿಸಬೇಕಾದ ನಿಬಂದನೆಗಳು


ಮಹ್ಳರತುಲ್ ಬದ್ರಿಯ್ಯ ಎಂಬ ದ್ಸಿಕ್ರ್ ಹೇಳುವಾಗ ಪಾಲಿಸಬೇಕಾದ ನಿಬಂದನೆಗಳು

ಮಹ್ಳರತುಲ್ ಬದ್ರಿಯ್ಯ ಆತ್ಮೀಯ ಮಜ್ಲಿಸ್ ನಲ್ಲಿ ಹೇಳಬೇಕಾದ ಈ ದ್ಸಿಕ್ರ್ ಗಳ ಕ್ರೇೂಢೀಕರಣವನ್ನು ಸುಲ್ತಾನುಲ್ ಉಲಮಾ ಶೖಖುನಾ ಎ.ಪಿ ಉಸ್ತಾದರು ಹೇಳಲು ಪ್ರತ್ಯೇಕ ಅನುಮತಿ ನೀಡಿರುವಂತಹದ್ದಾಗಿದೆ. ಸಂಪೂರ್ಣ ಆತ್ಮಾನುಭೂತಿ ಕರಗತವಾಗಲು ಕೆಳಗೆ ವಿವರಿಸುವಂತಹ ನಿರ್ದೇಶನಗಳನ್ನು ಪಾಲಿಸುವುದು ಅನಿವಾರ್ಯವಾಗಿದೆ.
🔖ಎಲ್ಲಾ ಮೊಹಲ್ಲಾಗಳಲ್ಲಿ,ಮಸೀದಿ,ದರ್ಸ್,ಮದ್ರಸಾಗಳಲ್ಲಿ,ಸೆಂಟರ್ ಗಳಲ್ಲಿ ಮತ್ತು ಮನೆಗಳನ್ನು ಕೇಂದ್ರವಾಗಿರಿಸಿ ಸೌಕರ್ಯವಿರುವ ದಿವಸಗಳಲ್ಲಿ ಭಕ್ತಿಪೂರ್ಣವಾಗಿ ಈ ಮಜ್ಲಿಸ್ ನಡೆಸಬೇಕಾಗಿದೆ.
🔖ಇದನ್ನು 1:30 ಗಂಟೆಯಲ್ಲಿ ಮುಗಿಸಬೇಕಾಗಿದ್ದು ಅದರಲ್ಲಿ 45 ನಿಮಿಷ ಮಹ್ಳರತುಲ್
ಬದ್ರಿಯ್ಯದ ದ್ಸಿಕ್ರ್, 30 ನಿಮಿಷ ಉಧ್ಬೇೂದನೆ ಮತ್ತು 15 ನಿಮಿಷ  ದುಆ ಮಾಡಲು ಕ್ರಮವಾಗಿ ಸಮಯ ತೆಗದುಕೊಳ್ಳಬೇಕಾಗಿದೆ.
🔖ಮೊದಲನೆಯದಾಗಿ ಸೂರಃ  ಫಾತಿಹ,ಇಖ್ಲಾಸ್,ಮುಅವ್ವಿಝತೈನಿ ಓದಿ ದುಆ ಮಾಡಬೇಕಾಗಿದ್ದು ತದನಂತರ ಎಲ್ಲರೂ ಒಟ್ಟಾಗಿ ಅಸ್ಮಾಉಲ್ ಹುಸ್ನಾ ಹೇಳಬೇಕಾಗಿದ್ದು.
🔖ನಂತರ ಇರುವ ನಾಲ್ಕು ದ್ಸಿಕ್ರ್ ಗಳನ್ನು ಅರ್ಥವನ್ನು ಚಿಂತಿಸಿ  ಧ್ವನಿತಗ್ಗಿಸಿ ಪ್ರತಿಯೊಂದನ್ನೂ 100 ಸಲ ಹೇಳುವುದು.
🔖ಐದನೇ ದ್ಸಿಕ್ರ್  الله ಎನ್ನುವ 'ಜಲಾಲತ್ ನ ಇಸ್ಮ್' ಇದನ್ನು ಎಲ್ಲರೂ ಎದ್ದು ನಿಂತು ಹೇಳಬೇಕಾಗಿದೆ.
🔖ನಂತರ ಪ್ರವಾದಿ ಮುಹಮ್ಮದ್ صل الله عليه وسلم ರ ಮೇಲೆ 50 ಅಥವಾ 100 ಸ್ವಲಾತ್ ಕುಳಿತು ಕೊಂಡು ಹೇಳುವುದು.
🔖ಕೊನೆಯಲ್ಲಿ ಸಮಸ್ತ ಮುಶಾವರದ ಸ್ಥಾಪಕ ನಾಯಕರಲ್ಲಿ ಓರ್ವರಾದ ಅಹ್ಮದ್ ಕೇೂಯ ಶಾಲಿಯಾತಿಯವರು ರಚಿಸಿರುವ ಅಸ್ಮಾಉಲ್ ಬದ್ರಿಯ್ಯೀನ್ ಎಲ್ಲರೂ ಒಟ್ಟಾಗಿ ಪದ್ಯದ ದಾಟಿಯಲ್ಲಿ ಹೇಳಿ ನಾಲ್ಕು ಗೆರೆ ಓದಿದ ಬಳಿಕ ಅದರ ಜವಾಬನ್ನು ಉಚ್ಚರಿಸುವುದು.
🔖ನಂತರ ದುಆ ನೆರವೇರಿಸುವುದು.
ಸಮಯವಿದ್ದರೆ ಕುಂಡೂರ್ ಉಸ್ತಾದರು ರಚಿಸಿದ 'ಆರಂಬ ಪೂವಾಯ' ಎಂಬ ಬೈತ್ ಹೇಳುವುದು.
🔹🔹🔹🔹🔹🔹🔹🔹🔹🔹

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...