Skip to main content

ರಮದಾನಿನ ಕೃಷಿಕ !


ರಮದಾನಿನ ಕೃಷಿಕ !

ವಯೋಸಹಜ ರೋಗದಿಂದ ಚೇತರಿಸಿಕೊಂಡಿದ್ದ 
ಉಳ್ಳಾಲದ ಗುರು ತಾಜುಲ್ ಉಲಮಾ ತಂಙಳರನ್ನು ಭೇಟಿ ಮಾಡಲೆಂದು ಆಪ್ತರೊಬ್ಬರು ತೆರಳಿದ್ದರು. ಅದು ರಮದಾನ್ ಕಳೆದ ಶವ್ವಾಲ್ ತಿಂಗಳು. ಸಂದರ್ಶನಕ್ಕಾಗಿ ತೆರಳಿದ ಅವರಲ್ಲಿ ತಂಙಳ್ " ಎಲ್ಲವೂ ಹೋಯಿತು !" ಎಂದೇಳಿ ಅತ್ತಿದ್ದರು. ಅವರು ವಿವರ ಕೇಳಿದಾಗ ಉಳ್ಳಾಲ ತಂಙಳರ ಪ್ರತಿಕ್ರಿಯೆ ಹೀಗಿತ್ತು

ಕಳೆದ ರಮದಾನ್ ನಲ್ಲಿ ಹದಿನಾರು ಬಾರಿ ಪೂರ್ಣವಾಗಿ ಕುರಾನ್ ಓದಲು ಸಾಧ್ಯವಾಗಿತ್ತು. ಈ ರಮದಾನ್ ನಲ್ಲಿ ನನಗದು ಸಾಧ್ಯವಾಗಿಲ್ಲ.
ಎಲ್ಲವೂ ಹೋಯಿತು ಎಂದು ನೋಯುವ ಹೃದಯದೊಂದಿಗೆ ಹೇಳಿದ್ದರು.

ನನ್ನ ಇಷ್ಟ ಜನರೇ,
ಆ ಬಾರಿ ತಂಙಳ್ ಒಂಭತ್ತೋ/ ಹನ್ನೆರಡು ಖತಮ್ ಓದಿದ್ದರು. ಆದಾಗ್ಯೂ ತಂಙಳ್ ಎದೆಗುಂದಿದ್ದರು. ತಂಙಳುಸ್ತಾದರ ಪ್ರತಿಕ್ರಿಯೆ ಕಳವಳಕಾರಿಯಾಗಿತ್ತು. ಅಲ್ಲಾಹನ ಮೇಲಿರುವ ಅಗಾಧ ಭಯ ಭಕ್ತಿ ಮತ್ತು ಪೈಗಂಬರ್ ಮುಹಮ್ಮದ್ ﷺ ರೊಂದಿಗಿರುವ ಅದಮ್ಯ ಪ್ರೆಮಾನುಭಂದ ತಂಙಳ್ ರ ಬಾಲ್ಯದಲ್ಲೇ ಅಂತರ್ಗತವಾದ ಕಾರಣ ಆರಾಧನೆಯಲ್ಲಿ ಯಾವತ್ತೂ ವಿನಾಯಿತಿ ನಿರೀಕ್ಷಿದವರಲ್ಲ. ಶಾರೀರಿಕವಾಗಿ ಅಸ್ವಸ್ಥಗೊಂಡರೆ ಲಕ್ಷಗಟ್ಟಲೆ ದೈವಿಕ ಜಪಗಳನ್ನು ಮುದಿರಿಸಿ ಪ್ರಾರ್ಥಿಸುವುದು ಅವರ ಜೀವನಕ್ರಮ.ರಮದಾನ್ ಬಂತೆಂದರೆ ಎಲ್ಲಿಲ್ಲದ ಸಂತೋಷ. ಎಲ್ಲಾ ಕಾರ್ಯಕ್ರಮಗಳನ್ನೂ ಮೊಟಕುಗೊಳಿಸಿ ದಿನನಿತ್ಯ ಕುರಾನ್ ಓದುವ ಹವ್ಯಾಸ. ಅವರ ಓದು ಮತ್ತು ನಮಾಜು ನೋಡಿ ನಿಲ್ಲುವುದೇ ಒಂದು ಆನಂದವಾಗಿತ್ತು. ಓದುವ ಸೂಕ್ತಗಳ ವಿಷಯಕ್ಕೆ ತಕ್ಕಂತೆ ಅವರ ಮುಖಭಾವ ಬದಲಾಗುತ್ತಿತ್ತು. ಕೆಲವೊಮ್ಮೆ ಅಳುವರು. ಮತ್ತೆ ಕೆಲವೊಮ್ಮೆ ನಗುವರು. ನಿಂತುಕೊಂಡೇ ಹನ್ನೊಂದು ರಕಅತ್ ವಿತರ್ ನಮಾಜ್ ನಿರ್ವಹಿಸುವುದಂತು ಯುವಕರನ್ನೇ ನಾಚಿಸುವಂತಿತ್ತು. ಹೀಗೆ ರಮದಾನ್ ಧನ್ಯಗೊಳಿಸುವ ತಂಙಳುಪ್ಪಾಪ ಮಾದರಿ ಪೂರ್ಣವಾಗಿ ಬದುಕಿದವರು. ಪೈಗಂಬರ್ ಮುಹಮ್ಮದ್  ﷺ ವಚನ ನುಡಿಯುವಂತೆ
ಮರಣಾನಂತರ ಜೀವನಕ್ಕಾಗಿ ದುಡಿಯುವವನು ಬುದ್ಧಿವಂತನಾದರೆ
ದೇಹೆಚ್ಚೆಗಳಿಗೆ ಶರಣಾಗುವವನು ಮೂರ್ಖ.
ಬುದ್ಧಿವಂತರ ಸಾಲಿನಲ್ಲಿ ತಂಙಳ್ ಪ್ರಧಾನಿಯಾಗಿ ಬದುಕಿ ತೋರಿಸಿದರು. ಅವರ ಬರಕತ್ ನಿಂದಾದರೂ ಎರಡು ಬಾರಿಯಾದರೂ ಪೂರ್ಣವಾಗಿ ಓದುವ ಸೌಭಾಗ್ಯ ಅಲ್ಲಾಹನು ಕರುಣಿಸಲಿ ಎಂದು ಬೇಡುವೆನು.
ನೀವು ನನ್ನ ಜೊತೆಗೆ ಆಮೀನ್ ಹೇಳಿರಿ.

~ ಸಲಾಹ್

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...