Skip to main content

ಝಿಯಾರತ್ತ್ ಕೇಂದ್ರ​ *👉🏻5⃣3⃣* ------------------------ ತಾತ್ತೂರ್ ಶುಹದಾಗಳು ಮಾವೂರ್, ಕೂಳಿಮಾಡ್ ಕಲ್ಲಿಕೋಟೆ.

ಕಲ್ಲಿಕೋಟೆ ಜಿಲ್ಲೆಯ ಕೂಳಿಮಾಡ್ ಮಾರ್ಗವಾಗಿ ಚಾಲಿಯಾರ್ ನದಿಯ ತೀರದಲ್ಲಿ ತಾತ್ತೂರ್ ಎಂಬ ಸಣ್ಣ ಗ್ರಾಮವಿದೆ.
ಶತಮಾನಗಳಷ್ಟು ಹಳೆಯ ತಾತ್ತೂರ್ ಮಸೀದಿ ಮತ್ತು ಶುಹದಾಗಳ ಮಕ್ಬರಗಳು ಇಲ್ಲಿನ ಪ್ರಕೃತಿ ರಮಣೀಯವಾದ ಹಸಿರು ಹಾಸಿದ ಗುಡ್ಡೆಯ ಮೇಲೆ ನೆಲೆಗೊಳ್ಳುತ್ತದೆ.

ಹಿಂದಿನ ಕಾಲದಲ್ಲಿ ಅರಿಕೊಡ್, ವಾಯಕಾಡ್ ಹಾಗೂ ಮುಕ್ಕಂ ಪ್ರದೇಶಗಳಿಂದ ವಿಶ್ವಾಸಿಗಳ ಮಯ್ಯಿತ್ತ್ ಕೊಂಡು ಬರುತ್ತಿರುವುದು  400 ವರ್ಷಗಳ ಪುರಾತನವಾದ ಇಲ್ಲಿನ ಮಸೀದಿಗಾಗಿತ್ತು.

ಧರ್ಮ ವಿರುದ್ಧ ಅತಿಯಾದ ವಿದ್ವೇಷ, ಕೆಲವರ ಅವಿವೇಕದಿಂದ ಹಾಗೂ ಏಕಪಕ್ಷೀಯವಾದ ಆಕ್ರಮಣದಲ್ಲಿ ಹುತಾತ್ಮರಾದವರಾಗಿದ್ದಾರೆ ತಾತ್ತೂರ್ ಶುಹದಾಗಳು.

ಅತಿಕ್ರಮಿಸಿ ಹತ್ತಿ ಮಸೀದಿಯನ್ನು ಹೊಡೆದುರಳಿಸಲು ಬಂದವರನ್ನು ತಡೆದಿರುದರಿಂದಾಗಿದೆ  ಸಂಘರ್ಷದಲ್ಲಿ ಸಮಾಪ್ತಿಗೊಂಡಿರುವುದು.

ತಾತ್ತೂರ್ ಹುತಾತ್ಮಗಳ ಕುರಿತು ಹೇಳಲಾಗುತ್ತಿರುವ ಚರಿತ್ರೆ ಹೀಗಿದೆ.

ಮೊಹರಂ 22ರಂದು
ತಾತ್ತೂರ್ ಮಸೀದಿಯಲ್ಲಿ  ಮೊಳಗುತ್ತಿರುವ ಆಝಾನ್' ಅಲ್ಲಿನ "ಕೊಲೊತ್ತ್ ಕೊವಿಲಕಂ ತಂಬುರಾಟ್ಟಿ" ಎಂಬ ರಾಣಿಗೆ ನಿರಸ ಉಂಟು ಮಾಡಿತು. ಇದರಿಂದ್ದ ರೋಷ ರಾಜನು ಆತನ ಸಂಘ ಪರಿವಾರವು  ಜುಮಾ ನಡೆಯುತ್ತಿರುವ ಮಸೀದಿಯನ್ನು ಬಿಟ್ಟು ಕೊಡಬೇಕೆಂದು ಆವಶ್ಯಪಟ್ಟರು. ಆದರೆ ಮುಸ್ಲಿಮರು ಅದಕ್ಕೆ  ಒಪ್ಪಲಿಲ್ಲ.

ಅಂಗಾಡಿಕಡವ್ ಎಂಬ ಸ್ಥಳದ ಹತ್ತಿರವಿರುವ ಕ್ಷೇತ್ರ ಪರಿಸರದಲ್ಲಿ ಒಂದು ಮೀನು ದೋಣಿಯನ್ನು ಯಾರೋ ನಿಲ್ಲಿಸಿದರು. (ಮೀನು ಇಷ್ಟವಿಲ್ಲದ ಕೆಲವು ಅಮುಸ್ಲಿಮರಿಗೆ  ಕ್ಷೇತ್ರದ ಪರಿಸರದಲ್ಲಿ ಮೀನಿನ ದೋಣಿ ನಿಲ್ಲಿಸಿರುವುದು ಅವರ ಪ್ರಕೋಪಕ್ಕೆ ಕಾರಣವಾಯಿತು ಎಂದು ಹೇಳಾಲಾಗುತ್ತದೆ.) ಇದನ್ನು ಕೆಲವರು ಪ್ರಶ್ನಿಸಲು  ತಲುಪಿರುವುದು ಈ  ಮಸೀದಿಗಾಗಿತ್ತು.
ಮಸೀದಿಗೆ ಹಂದಿ ಮಾಂಸವನ್ನು ಎಸೆದು ಮಸೀದಿಯನ್ನು ಅಶುದ್ಧಿ ಮಾಡಿ ದ್ವಂಸ ಮಾಡಲು ಪ್ರಯತ್ನಿಸುವಾಗ ಮುಸ್ಲಿಮರು ಶತ್ರು ಪಡೆಯನ್ನು ಎದುರಿಸಿ ಹೋರಾಡಿ ಅವರನ್ನು ಸೋಲಿಸಿದರು.

ನಂತರ ನಿರಂತರವಾಗಿ ನಡೆದ ಸಂಘರ್ಷದಲ್ಲಿ 22 ಮುಸ್ಲಿಮರು ಶಹೀದಾದರು.

ಮುಸ್ಲಿಂ ಪಕ್ಷದಲ್ಲಿ ಕುರಿಕಲ್ ಶಹೀದ್ (ರ), ಕೊನ್ನೊಲತ್ತ್ ಹಸನ್ ಕೊಯ (ರ), ಮಂಗಟನ್ ಮಾಹಿನ್  ಮೊಹ್ತಿನ್ (ರ) ಎಂಬ ಮೂವರಾಗಿದ್ದರು ನೇತೃತ್ವ ವಹಿಸಿರುವುದು.

ತಾತ್ತೂರ್ ಶುಹದಾಗಳ ಮಕ್ಬರ ಸಂದರ್ಶಿಸಿದ ಹಲವರಿಗೆ ಮಾರಕವಾದ ರೋಗಗಳಿಗೆ ಶಮನ ಲಭಿಸಿರುದಾಗಿ ಅನುಭವಸ್ಥರು ಹೇಳುತ್ತಾರೆ.

1986ರಲ್ಲಿ ಮಸ್ಜಿದ್ ನವೀಕರಣ ಕೆಲಸ ನಡೆಯುತ್ತಿರುವಾಗ ಓರ್ವ ಶಹೀದ್'ರ ಖಬರ್ ಕಫನ್ ಬಟ್ಟೆ ಸಹಿತ ಕಂಡಿರುವುದಾಗಿ ವಾರ್ತಾ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು.

ಈ ಶುಹದಾಗಳ ಝಿಯಾರತ್ತ್ ಮಾಡಲು ಹಲವಾರು ಸತ್ಯವಿಶ್ವಾಸಿಗಳು ಈಗಲೂ ಮಖ್ಬರ ಸಂದರ್ಶಿಸುತ್ತಿದ್ದಾರೆ..

ದಾರಿ: ಕಲ್ಲಿಕೋಟೆಯಿಂದ ಮಾವೂರ್-ಕೂಳಿಮಾಡ್ ಮಾರ್ಗದಲ್ಲಿ ತಾತ್ತೂರ್ P.H.E.D. ಜುಮಾ ಮಸ್ಜಿದ್ ಪರಿಸರದಲ್ಲಿ ತಾತ್ತೂರ್ ಶುಹದಾ ಮಖಾಂ ನೆಲೆಗೊಳ್ಳುವುದು.

✍ ಗಫೂರ್ ಬಾಯಾರ್
🌿🌿🌿🌿🌿🌿🌿🌿🌿

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...