ಹಿಜರಿ ವರ್ಷ 1128 ದುಲ್'ಹಿಜ್ಜ್ 7ರಂದು ಇಸ್ಲಾಮನ್ನು ನಾಶ ಮಾಡಲು ಶ್ರಮಿಸಿದ ಶತ್ರು ಸೈನಿಕರ ವಿರುದ್ಧ ಯುದ್ಧ ಸಾರಿದ ಮುಸ್ಲಿಂಗಳಲ್ಲಿ ಕುಂಞಾಲಿ (ರ), ಅಬೂಬಕ್ಕರ್ (ರ), ಮೊಯ್ತಿನ್ (ರ) ಎಂಬ ಮೂವರು ಯೋಧರು ಶಹೀದಾದರು.
ಕಲ್ಲಿಕೋಟೆ ಜಿಲ್ಲೆಯ ಮಾವೂರ್ ಎಂಬ ಸ್ಥಳದ ಹತ್ತಿರವಿರುವ ಚೆರುಪ್ಪ ಪಳ್ಳಿಕುನ್ನು ಪ್ರದೇಶದ "ಅಮ್ಮಾಳು ಅಮ್ಮ" ಎಂಬ ಅಮುಸ್ಲಿಂ ಮಹಿಳೆ ಸ್ವಇಚ್ಛೆಯಿಂದ ಮುಸ್ಲಿಂ ಧರ್ಮ ಸ್ವೀಕಾರ ಸಂಬಂಧಿಸಿ ಉಂಟಾದ ತರ್ಕದಿಂದ ಕೆಲವು ಅಮುಸ್ಲಿಮರು, ಅಮ್ಮಾಳರನ್ನು ಪುನಃ ಹಿಂದು ಧರ್ಮಕ್ಕೆ ಮರಳಿಸಬೇಕೆಂದು ಹಠ ಹಿಡಿದು ಗಲಭೆ ಎಬ್ಬಿಸಲಿಕ್ಕಾಗಿ ಅಲ್ಲಿನ ಮಸೀದಿಯನ್ನು ಅಶುದ್ಧಿಗೊಳಿಸಲು ಪ್ರಯತ್ನಿಸಿದ ಕಾರಣದಿಂದಾಗಿದೆ ಓಮನ್ನೂರ್ ಯುದ್ಧದ ಆರಂಭವಾದರೂ, ಇದನ್ನೇ ಬಂಡವಾಳವನ್ನಾಗಿ ತೆಗೆದುಕೊಂಡ ಬ್ರಿಟಿಷ್ ಸೈನ್ಯವು ಯುದ್ಧವನ್ನು ಇನ್ನಷ್ಟು ಗಂಭೀರ ಸ್ವರೂಪಕ್ಕೆ ತಳ್ಳಿರುದರು.
ಅವರು ಮೂರು ಸಾವಿರದಷ್ಟು ಜನರನ್ನು ಯಾವುದೇ ಮುನ್ಸೂಚನೆ ನೀಡದೆ ಯುದ್ದ ಮುಖಕ್ಕೆ ತಲುಪಿಸಿದರು.
ಮುಸ್ಲಿಮರು ಅಲ್ಪ ಸಂಖ್ಯೆಯಲ್ಲಿ ಇದ್ದರಾದರೂ ಶತ್ರು ಸೈನ್ಯಕ್ಕೆ ಹೆದರದೆ, ಜಗ್ಗದೆ ಧೀರವಾಗಿ ಬ್ರಿಟಿಷ್ ಸೈನಿಕರೊಂದಿಗಿದ್ದ ಅಮುಸ್ಲಿಂ ಶತ್ರುಗಳ ವಿರುದ್ಧ ಸೆಣಗಾಡಿ ಹಲವಾರು ಸೈನಿಕರನ್ನು ವಧಿಸಿದರು. ಮುಸ್ಲಿಮರ ಕಡೆಯಿಂದ ಮೂವರು ಹುತಾತ್ಮರಾದರು.
ಓಮನ್ನೂರ್ ಪೂರ್ವ ಕಾಲದಲ್ಲಿ ಅಮುಸ್ಲಿಂ ಪರಿಸರವಾಗಿದರಿಂದ್ದ ಯುದ್ಧದಲ್ಲಿ ಶಹೀದಾದ ಹುತಾತ್ಮರ ಮಯ್ಯಿತ್'ಗಳನ್ನು ಕೊಂಡೊಟ್ಟಿ ಪಯಂಗಾಡಿ ಜಮಾಅತ್ತ್ ಮಸೀದಿಯ ಪೂರ್ವದಲ್ಲಿ ಚದುರ ಆಕ್ರತಿಯಲ್ಲಿ ನಿಶಾನೆ ಮಾಡಿದ ಕಾಂಪೌಂಡ್'ನ ಒಳಗಡೆ ದಫನ್ ಮಾಡಲಾಯಿತು.
ದೀರ್ಘ ಕಾಲದವರೆಗೆ ಇಲ್ಲಿಯ ಖಾಝಿಯಾಗಿದ್ದ ಝೈನುದ್ದೀನ್ ಮಖ್ಡೂಮ್ (ರ) ನಾಲ್ಕನೇಯವರು ಹಾಗೂ ಮಟ್ಟತ್ತೂರ್ ಖಾಝಿಯವರ ಮಕ್ಬರಗಳು ಕೂಡಾ ಇಲ್ಲಿ ನೆಲೆಗೊಂಡಿದೆ.
ಮಲಬಾರಿನ ಹಲವಾರು ಪ್ರದೇಶಗಳಲ್ಲಿ ಇಂದು ಕೂಡ ದುಲ್'ಹಜ್ಜ್ 7ಕ್ಕೆ ಓಮನ್ನೂರ್ ಶುಹದಾಗಳ ವಾರ್ಷಿಕ ನೇರ್ಚೆ ನಡೆಯುತ್ತಿದೆ. ಈ ಮಖಾಮಿಗೆ ಕಾಣಿಕೆ ನೀಡಿದರೆ ಯಾವುದೇ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಬಹು ಬೇಗನೇ ಪರಾಗಬಹುದೆಂದು ಅನುಭವಸ್ಥರು ಸಾಕ್ಸ್ಯ ನುಡಿಯುತ್ತಾರೆ. ಇಲ್ಲಿಯ ನೇರ್ಚೆಯ ಮುಖ್ಯ ಆಕರ್ಷಣೆವೆಂದರೆ ಅನ್ನದಾನ ವಿತರಣೆ. ಈ ಅನ್ನದಾನದಲ್ಲಿ ಎಲ್ಲಾ ಧರ್ಮದವರು ಸಹಕರಿಸುತ್ತಾರೆ.
ದಾರಿ: ಕೊಂಡೊಟ್ಟಿ-ಪಯಂಗಾಡಿ ಮಸ್ಜಿದ್'ನ ಪೂರ್ವ ಭಾಗದಲ್ಲಾಗಿದೆ ಮಕ್ಬರಗಳು ನೆಲೆಗೊಳ್ಳುತಿರುವುದು.
✍ಗಫೂರ್ ಬಾಯಾರ್
☯☯☯☯☯☯☯☯☯
Comments