Skip to main content

ಝಿಯಾರತ್ತ್ ಕೇಂದ್ರ​ *👉🏻5⃣4⃣* ------------------------ ಓಮನ್ನೂರ್ ಶುಹದಾಗಳು ಕೊಂಡೊಟ್ಟಿ, ಮಲಪ್ಪುರಂ

ಹಿಜರಿ ವರ್ಷ 1128 ದುಲ್'ಹಿಜ್ಜ್ 7ರಂದು ಇಸ್ಲಾಮನ್ನು ನಾಶ ಮಾಡಲು ಶ್ರಮಿಸಿದ ಶತ್ರು ಸೈನಿಕರ ವಿರುದ್ಧ ಯುದ್ಧ ಸಾರಿದ ಮುಸ್ಲಿಂಗಳಲ್ಲಿ ಕುಂಞಾಲಿ (ರ), ಅಬೂಬಕ್ಕರ್ (ರ), ಮೊಯ್ತಿನ್ (ರ) ಎಂಬ ಮೂವರು ಯೋಧರು ಶಹೀದಾದರು.

ಕಲ್ಲಿಕೋಟೆ ಜಿಲ್ಲೆಯ ಮಾವೂರ್ ಎಂಬ ಸ್ಥಳದ ಹತ್ತಿರವಿರುವ ಚೆರುಪ್ಪ ಪಳ್ಳಿಕುನ್ನು ಪ್ರದೇಶದ "ಅಮ್ಮಾಳು ಅಮ್ಮ" ಎಂಬ  ಅಮುಸ್ಲಿಂ ಮಹಿಳೆ ಸ್ವಇಚ್ಛೆಯಿಂದ ಮುಸ್ಲಿಂ ಧರ್ಮ ಸ್ವೀಕಾರ ಸಂಬಂಧಿಸಿ ಉಂಟಾದ ತರ್ಕದಿಂದ ಕೆಲವು ಅಮುಸ್ಲಿಮರು,  ಅಮ್ಮಾಳರನ್ನು ಪುನಃ ಹಿಂದು ಧರ್ಮಕ್ಕೆ ಮರಳಿಸಬೇಕೆಂದು ಹಠ ಹಿಡಿದು ಗಲಭೆ ಎಬ್ಬಿಸಲಿಕ್ಕಾಗಿ ಅಲ್ಲಿನ ಮಸೀದಿಯನ್ನು  ಅಶುದ್ಧಿಗೊಳಿಸಲು  ಪ್ರಯತ್ನಿಸಿದ ಕಾರಣದಿಂದಾಗಿದೆ ಓಮನ್ನೂರ್ ಯುದ್ಧದ ಆರಂಭವಾದರೂ, ಇದನ್ನೇ ಬಂಡವಾಳವನ್ನಾಗಿ ತೆಗೆದುಕೊಂಡ ಬ್ರಿಟಿಷ್ ಸೈನ್ಯವು ಯುದ್ಧವನ್ನು ಇನ್ನಷ್ಟು ಗಂಭೀರ ಸ್ವರೂಪಕ್ಕೆ ತಳ್ಳಿರುದರು.
ಅವರು ಮೂರು ಸಾವಿರದಷ್ಟು ಜನರನ್ನು ಯಾವುದೇ ಮುನ್ಸೂಚನೆ ನೀಡದೆ ಯುದ್ದ ಮುಖಕ್ಕೆ ತಲುಪಿಸಿದರು.

ಮುಸ್ಲಿಮರು ಅಲ್ಪ ಸಂಖ್ಯೆಯಲ್ಲಿ ಇದ್ದರಾದರೂ ಶತ್ರು ಸೈನ್ಯಕ್ಕೆ ಹೆದರದೆ, ಜಗ್ಗದೆ ಧೀರವಾಗಿ ಬ್ರಿಟಿಷ್ ಸೈನಿಕರೊಂದಿಗಿದ್ದ ಅಮುಸ್ಲಿಂ ಶತ್ರುಗಳ ವಿರುದ್ಧ ಸೆಣಗಾಡಿ  ಹಲವಾರು ಸೈನಿಕರನ್ನು ವಧಿಸಿದರು. ಮುಸ್ಲಿಮರ ಕಡೆಯಿಂದ ಮೂವರು  ಹುತಾತ್ಮರಾದರು.

ಓಮನ್ನೂರ್ ಪೂರ್ವ ಕಾಲದಲ್ಲಿ ಅಮುಸ್ಲಿಂ ಪರಿಸರವಾಗಿದರಿಂದ್ದ ಯುದ್ಧದಲ್ಲಿ ಶಹೀದಾದ ಹುತಾತ್ಮರ ಮಯ್ಯಿತ್'ಗಳನ್ನು  ಕೊಂಡೊಟ್ಟಿ ಪಯಂಗಾಡಿ ಜಮಾಅತ್ತ್ ಮಸೀದಿಯ  ಪೂರ್ವದಲ್ಲಿ ಚದುರ ಆಕ್ರತಿಯಲ್ಲಿ ನಿಶಾನೆ ಮಾಡಿದ ಕಾಂಪೌಂಡ್'ನ ಒಳಗಡೆ ದಫನ್ ಮಾಡಲಾಯಿತು.

ದೀರ್ಘ ಕಾಲದವರೆಗೆ ಇಲ್ಲಿಯ ಖಾಝಿಯಾಗಿದ್ದ ಝೈನುದ್ದೀನ್ ಮಖ್ಡೂಮ್ (ರ) ನಾಲ್ಕನೇಯವರು ಹಾಗೂ ಮಟ್ಟತ್ತೂರ್ ಖಾಝಿಯವರ ಮಕ್ಬರಗಳು ಕೂಡಾ ಇಲ್ಲಿ ನೆಲೆಗೊಂಡಿದೆ.

ಮಲಬಾರಿನ ಹಲವಾರು ಪ್ರದೇಶಗಳಲ್ಲಿ ಇಂದು ಕೂಡ ದುಲ್'ಹಜ್ಜ್ 7ಕ್ಕೆ ಓಮನ್ನೂರ್ ಶುಹದಾಗಳ ವಾರ್ಷಿಕ ನೇರ್ಚೆ ನಡೆಯುತ್ತಿದೆ. ಈ ಮಖಾಮಿಗೆ ಕಾಣಿಕೆ ನೀಡಿದರೆ ಯಾವುದೇ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಬಹು ಬೇಗನೇ ಪರಾಗಬಹುದೆಂದು ಅನುಭವಸ್ಥರು ಸಾಕ್ಸ್ಯ ನುಡಿಯುತ್ತಾರೆ. ಇಲ್ಲಿಯ ನೇರ್ಚೆಯ ಮುಖ್ಯ ಆಕರ್ಷಣೆವೆಂದರೆ ಅನ್ನದಾನ ವಿತರಣೆ. ಈ ಅನ್ನದಾನದಲ್ಲಿ ಎಲ್ಲಾ ಧರ್ಮದವರು ಸಹಕರಿಸುತ್ತಾರೆ.

ದಾರಿ: ಕೊಂಡೊಟ್ಟಿ-ಪಯಂಗಾಡಿ ಮಸ್ಜಿದ್'ನ ಪೂರ್ವ ಭಾಗದಲ್ಲಾಗಿದೆ ಮಕ್ಬರಗಳು ನೆಲೆಗೊಳ್ಳುತಿರುವುದು.

✍ಗಫೂರ್ ಬಾಯಾರ್
☯☯☯☯☯☯☯☯☯

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...