ಸುನ್ನೀ ಸಮಸ್ತ ವಿಜಯದ ಹಾದಿಯಲ್ಲಿ
ಅಂದು 1933, ಮಾರ್ಚ್ 5..
ಸಮಸ್ತ ಅಧ್ಯಕ್ಷರಿಗೆ ವಕೀಲರ ನೋಟಿಸ್.
ಕೇರಳ ಜಂಇಯ್ಯತುಲ್ ಉಲಮಾದ ಹೆಸರಲ್ಲಿ ಫಾರೂಖ್ನಲ್ಲಿ
ಸಮಸ್ತ ಸಮ್ಮೇಳನ ನಡೆಸಲು ಆಯೋಜಿಸಲಾಗಿದೆ ಎಂಬ ಮಾಹಿತಿ ನಮಗೆ ಸಿಕ್ಕಿದೆ.
ಕೇರಳ ಜಂಇಯ್ಯತುಲ್ ಉಲಮಾ ಈಗಾಗಲೇ ನೊಂದಾಯಿತ ಸಂಸ್ಥೆಯಾಗಿದೆ.
ಈ ಸಂಘನೆಯ ಗಮನಕ್ಕೆ ಬಾರದೇ, ಅವರ ಅನುಮತಿಯನ್ನು ಪಡೆಯದೇ ಅವರ ಹೆಸರಲ್ಲಿ ಸಮ್ಮೇಳನ ನಡೆಸುವುದು ಕಾನೂನು ಬಾಹಿರವಾಗಿದೆ.
ಸಮ್ಮೇಳನ ನಡೆಸಿದ್ದಲ್ಲಿ ಕ್ರಿಮಿನಲ್ ಕ್ರಮ ಕೈಗೊಳ್ಳಲಾಗುವುದು.
ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ದ ಆರನೇ ವಾರ್ಷಿಕ ಸಮ್ಮೇಳನಕ್ಕೆ ಮುಂಚಿತವಾಗಿ ವಕೀಲ ಕೆ. ಕೆ. ಪೋಕರ್ ಸಾಹೆಬ್ ಮುಖಾಂತರ ಸಲಫಿಗಳು ನೀಡಿದ ನೋಟಿಸ್ ಇದಾಗಿತ್ತು.
ನಾಲ್ಕು ಮದ್ಹಬ್ ಗಳಲ್ಲಿ ಪ್ರಾವೀಣ್ಯತೆ ಪಡೆದಿದ್ದ,
20 ನೇ ಶತಮಾನದ ಮುಜದ್ದಿದ್ ಇಮಾಂ ಅಹ್ಮದ್ ರಝಾಖಾನ್ ( ರ ) ರವರ ಶಿಷ್ಯ
ಇಮಾಂ ಅಹ್ಮದ್ ಕೋಯ ಶಾಲಿಯಾತೀ ( ರ ) ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಇಮಾಂ ಶಾಲಿಯಾತೀ ( ರ ) ತಕ್ಷಣ ಉತ್ತರಿಸಿದರು.
ಸಮ್ಮೇಳನ ನಡೆಸುವುದು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಹೆಸರಲ್ಲಿ.
ಅದಕ್ಕೂ ಕೇರಳ ಜಂಇಯ್ಯತುಲ್ ಉಲಮಾಕ್ಕೂ, ಯಾವುದೇ ಸಂಬಂಧವಿಲ್ಲ.
ಅದರೊಂದಿಗೆ ಯಾವುದೇ ವ್ಯವಹಾರವೂ ಇಲ್ಲ.
ಸಮಸ್ತ..
ಇಸ್ಲಾಮಿನ ನೈಜ ಆದರ್ಶ ಸಂಹಿತೆಯನ್ನು ಹುಟ್ಟು ಹಾಕಲು ರಚಿಸಿದ ಸಂಸ್ಥೆ. ನೂತನವಾದಿಗಳು ಇಸ್ಲಾಮಿನ ತತ್ವಾದರ್ಶಗಳನ್ನು ವಿಕೃತಗೊಳಿಸಿದಾಗ , ಸುಮ್ಮನಿರುವುದು ತರವಲ್ಲವೆಂದು ಭಾವಿಸಿ , ಧರ್ಮದ ರಕ್ಷಣೆಗಾಗಿ ವಿದ್ವಾಂಸರು ಹುಟ್ಟು ಹಾಕಿದ ಚಳವಳಿಯಿದು.
ಈ ಮಹತ್ತರ ಚಳವಳಿಗೆ 96 ರ ಸಂಭ್ರಮ.
ಒಂದು ಕಾಲದಲ್ಲಿ ಇಸ್ಲಾಮಿಗೆ, ನೂತನವಾದಿಗಳ ಮಾತ್ರ ಬೆದರಿಕೆಯಿತ್ತು,
ಆದರೆ ಕಳೆದ 50 - 40 ವರ್ಷಗಳಿಂದೀಚೆಗೆ ರಾಜಕೀಯದಿಂದಲೂ ಬೆದರಿಕೆ ಬಂದಿದೆ.
ಆಗಲೂ ಸಮಸ್ತ ತನ್ನ ದೌತ್ಯವನ್ನು ಯಶಸ್ವಿಯಾಗಿ ನಿಭಾಯಿಸಿದೆ.
ಅಂದು ವರಕ್ಕಲ್ ಮುಲ್ಲಕೋಯ ತಂಙಲ್ (ರ) ರವರ ನೇತೃತ್ವದಲ್ಲಿ ನೂತನವಾದದ ವಿರುದ್ದ ಸಮರ ಸಾರಿದರೆ..
ನಂತರ ತಾಜುಲ್ ಉಲಮಾ (ಖ:ಸಿ) ರ ನೇತೃತ್ವದಲ್ಲಿ ನೂತನವಾದ ಮತ್ತು ಕುಟಿಲ ರಾಜಕಾರಣದ
ವಿರುದ್ಧ ಜಂಟಿ ಸಮರ ಸಾರಲಾಯಿತು.
ಸಮಸ್ತದ ಈ ಐತಿಹಾಸಿಕ ನಡೆಯೇ ಅದರ ವಿಜಯಕ್ಕೆ ಕಾರಣ.
ಯಾರ ಮುಂದೆಯೂ ಆದರ್ಶ ಹೇಳಬಲ್ಲ ದಿಟ್ಟ ನಾಯಕರ ದಂಡೇ ಈಗ ನಮಗಿದೆ.
ಎದುರುಗಿವವನು ನೂತನವಾದಿಯೇ ಆಗಲೀ, ರಾಜಕೀಯ ನಾಯಕನೇ ಆಗಲೀ,
ಅಥವಾ ಯಾವುದೇ ಗಣ್ಯನೇ ಆಗಲೀ
ಇಸ್ಲಾಮಿನ ಅದರ್ಶ ಹೇಳಲು ಹಿಂದೆ ಮುಂದೆ ನೋಡದ ದಿಟ್ಟ ನೇತೃತ್ವ ಸಮಸ್ತಕ್ಕಿದೆ.
ಅಲ್ಲಾಹನ ಸಹಾಯದಿಂದ
ಈ ನಾಯಕತ್ವ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ.
ಅಲ್ಲಾಹನೇ ಸಮಸ್ತ ನಾಯಕರಾದ ಸುಲೈಮಾನ್ ಉಸ್ತಾದರಿಗೂ, ಕಾಂತಪುರಂ ಎಪಿ ಉಸ್ತದರಿಗೂ, ಅದೇ ರೀತಿ ಸರ್ವ ನಾಯಕರಿಗೂ ದೀರ್ಘಾಯುಷ್ಯ, ಆಫಿಯತ್ ನೀಡಿ ಅನುಗ್ರಹಿಸು ಆಮೀನ್
*@ ಅಬೂ ರಾಝೀ*
Comments