ನಾವೆಷ್ಟು ಭಾಗ್ಯವಂತರು
ಈ ವ್ಯಕ್ತಿಯ ಹೆಸರೇಳಿದರೆ
ಗುರುತಿಸುವುದು ದೇಶವನ್ನು!
ಒಂದು ದಿನ ಫೇಸ್ಬುಕ್ನಲ್ಲಿ ಇಂಡೋನೇಷಿಯಾದ ವ್ಯಕ್ತಿಯೊಬ್ಬರು ಪರಿಚಯಗೊಂಡರು.ಅಲ್ಪಸಮಯ ಪರಸ್ಪರ ಮಾತುಕತೆ ನಡೆಸಿದ ಬಳಿಕ ನನ್ನ ಹೆಸರು ಮತ್ತು ದೇಶ ಭಾರತ ಎಂದ ಕೂಡಲೇ ಅವರು ಕೇಳಿದ ಮಾತು ನೀವು ಕೇರಳದವರೇ?
ನಾನು ಆಶ್ಚರ್ಯ ಚಿಕಿತನಾಗಿ ಕೇಳಿದೆ! ನಿಮಗೆ ಹೇಗೆ ಕೇರಳ ಗೊತ್ತು ? ಅವರು ಹೇಳಿದ ಮಾತು...
ಅಲ್ಲೊಂದು ಮಹಾ ವಿದ್ವಾಂಸರಿರುವರು...
ಸಾವಿರಾರು ಅನಾಥರ ತಂದೆ (ಅಬುಲ್ ಐತಾಂ)
ಖಮರುಲ್ ಉಲಮಾ(ಉಲಮಾಗಳ ಚಂದ್ರ)
ಅವರನ್ನು ಅತಿಯಾಗಿ ಇಷ್ಟಪಡುವೆನು.
ಅವರ ಜೀವನವೇ ನನಗೆ ಸ್ಫೂರ್ತಿ...
ಅವರ ಕಾರ್ಯವೈಖರಿ ಕಂಡು ನಾವೂ ಅದೇ ರೀತಿ ಇಲ್ಲಿ ಇಸ್ಲಾಂ ಕಲಿಸಲು ಪ್ರತ್ನಿಸುತ್ತಿದ್ದೇವೆ...
ನಾನು ಭಾರತ ಎಂಬ ದೇಶ ಅರಿತದ್ದೇ ಉಸ್ತಾದರಿಂದ...ಉಸ್ತಾದರನ್ನು ಕಾಣುವುದೇ
ಒಂದು ಆನಂದ...
ನಾವೆಷ್ಟು ಭಾಗ್ಯವಂತರಲ್ಲವೇ
ಆ ಜ್ಞಾನಮರದ ನೆರಳು ಅನುಭವಿಸಲು
ಅಲ್ಲಾಹು ನಮಗೆಲ್ಲರಿಗೂ ಭಾಗ್ಯ ನೀಡಿದ...
ಅಲ್ಲಾಹು ಇನ್ನಷ್ಟು ಕಾಲ ದೀರ್ಘಾಯುಷ್ಯ ನೀಡಿ ಅನುಗ್ರಹಿಸಲಿ ಆಮೀನ್....
SIRJ ಬಾರೆಬೆಟ್ಟು
Comments