Skip to main content

ಹಾರಿ ಹೋಗಲು ರೆಕ್ಕೆಗಳಿಲ್ಲ ಆ ಮದೀನದ ಮಣ್ಣಿಗೆ

*﷽*
     *🎙️Madeena Madh Singers*
🪀Whatsapp Group

*Singer🎤:-Nizam Inoli*
*------------------------------------*
         *🎙️Eid Meelad Songs*

ಹಾರಿ ಹೋಗಲು ರೆಕ್ಕೆಗಳಿಲ್ಲ ಆ ಮದೀನದ ಮಣ್ಣಿಗೆ
ಈಜಿ ಹೋಗಲು ತ್ರಾಣವಿಲ್ಲ ಆ ಮದೀನದ ಮಣ್ಣಿಗೆ
                         *(ಹಾರಿ ಹೋಗಲು)*
  ಮನಸು ತೆರೆದು ಕವಿತೆ ಬರೆದು 
  ಈಗಲೇ ನಾ ಹಾಡುವೆ....
  ಮನಸು ತೆರೆದು ಕವಿತೆ ಬರೆದು
  ಈಗಲೇ ನಾ ಹಾಡುವೆ ...

ಕನಸು ಗಣ್ಣಲಿ ಹೋಗಬೇಕು ಆ ಮದೀನದ ಮಣ್ಣಿಗೆ 
                           *(ಹಾರಿ ಹೋಗಲು)*
ಆ ಮದೀನಾ ಶಾಂತಿ ಭವನಾ...
ಎದೆಯ ನೋವಿಗೆ ಅಲ್ಲಿ ಶಮನ
ಆ ಮದೀನಾ ಶಾಂತಿ ಭವನಾ...
ಎದೆಯ ನೋವಿಗೆ ಅಲ್ಲಿ ಶಮನ

  ನೋವ ಮರೆತು ಹಾರಬೇಕು
  ಆ ಮದೀನದ ಮಣ್ಣಿಗೆ
                           *(ಹಾರಿ ಹೋಗಲು)*
  ಯಾರ ಬಳಿಗೆ ಹೋಗಲಿ ನಾ
  ಯಾರ ಮುಂದೆ ಹೇಳಲಿ...
  ಯಾರ ಬಳಿಗೆ ಹೋಗಲಿ ನಾ
  ಯಾರ ಮುಂದೆ ಹೇಳಲಿ...

ಯಾವ ಕಾಲಕೆ ಹೋಗಿ ಸೇರುವೆ
ಆ ಮದೀನದ ಮಣ್ಣಿಗೆ
                         *(ಹಾರಿ ಹೋಗಲು)*
  ಬಾವ ತೀರದ ಬದುಕು ನನ್ನದು
  ದಾರಿ ತೋರಿಸಿ ಯಾ ಹಬೀಬ್ 
  ಬಾವ ತೀರದ ಬದುಕು ನನ್ನದು
  ದಾರಿ ತೋರಿಸಿ ಯಾ ಹಬೀಬ್

ಯಾವ ದಾರಿಯ ಹುಡುಕಲಿ ನಾ
ಆ ಮದೀನದ ಮಣ್ಣಿಗೆ
                            *(ಹಾರಿ ಹೋಗಲು)*
ಬಾಳ ದಾರಿಯ ಪಯಣ ತುಂಬಾ
ಕದನ ಕಲುಷಿತ ಯಾ ರಸೂಲ್ 
ಬಾಳ ದಾರಿಯ ಪಯಣ ತುಂಬಾ
ಕದನ ಕಲುಷಿತ ಯಾ ರಸೂಲ್ 

  ಬದುಕು ಮುಗಿಯುವ ಮುನ್ನ ಕರೆಯಿರಿ 
  ಆ ಮದೀನದ ಮಣ್ಣಿಗೆ
                             *(ಹಾರಿ ಹೋಗಲು)*–2
                             *(ಮನಸು ತೆರೆದು)* –2
                             *(ಹಾರಿ ಹೋಗಲು)*
*_______________________________*
*✍️Madeena Madh Singers🎤*
🪀Whatsapp Group

*📱ಅಹ್ಮದ್ ನವಾಝ್ ಕೊಣಾಜೆ*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...