ಗ್ರಹಣ ನೋಡಿ ದೃಷ್ಟಿ ಕಳೆದುಕೊಂಡ ಸ್ವಹಾಬಿ
*✒ಯೂಸುಫ್ ನಬ್ಹಾನಿ ಕುಕ್ಕಾಜೆ*
▪ *ಪ್ರವಾದಿ* ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಪುತ್ರನಾದ ಹಝ್ರತ್ ಇಬ್ರಾಹೀಮರು ಹದಿನೆಂಟು ತಿಂಗಳ ಪುಟ್ಟ ಮಗುವಾಗಿರುವಾಗಲೇ ಇಹಲೋಕ ತ್ಯಜಿಸಿದರು.
▪ *ಈ ಕಂದನ* ವಫಾತಿನ ದಿನ ಸಂಪೂರ್ಣ ಸೂರ್ಯಗ್ರಹಣವಾಗಿತ್ತು. ಸೂರ್ಯಗ್ರಹಣ ಮತ್ತು ಪ್ರವಾದಿಯವರ ಪುತ್ರನ ಮರಣ ಒಂದೇ ದಿನವಾದಾಗ ಕೆಲವು ಸಹಾಬಿಗಳು ಹೇಳಿದರು. *"ಇಬ್ರಾಹೀಮರ ಮರಣವೇ ಈ ಗ್ರಹಣಕ್ಕೆ ಕಾರಣ"* ಇದನ್ನು ಕೇಳಿದ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದರು. *"ಯಾವೊಬ್ಬನ ಜನನದ ಅಥವಾ ಮರಣದ ಕಾರಣದಿಂದ ಗ್ರಹಣವುಂಟಾಗದು,ಸೂರ್ಯ ಮತ್ತು ಚಂದ್ರ ಇವೆರಡೂ ಅಲ್ಲಾಹನ ಮಹಾ ದೃಷ್ಟಾಂತಗಳು. ಅವುಗಳು ಅವುಗಳ ಪಥದಲ್ಲಿ ಚಲಿಸುತ್ತಿರುವಾಗ ಅಲ್ಲಾಹನು ನಿಶ್ಚಯಿಸಿದ ಸಮಯದಲ್ಲಿ ಗೃಹಣವಾಗುತ್ತದೆ. ಗ್ರಹಣವಾದರೆ ಸುನ್ನತ್ತಾದ ನಮಾಝ್ ಮಾಡಿ."*
▪ *ಉಲ್ಲೇಖನೀಯವೆಂದರೆ,* ಸ್ವಹಾಬಿಶ್ರೇಷ್ಠ ಹಝ್ರತ್ *ಮುಗಯ್ರ ಬಿನ್ ಶುಅ್ಬಾಃ* (ರ) ರವರು ಈ ಗ್ರಹಣವನ್ನು ನೇರವಾಗಿ ನೋಡಿದರು. ಆ ಕಾರಣದಿಂದ ಅವರಿಗೆ ಸಂಪೂರ್ಣವಾಗಿ ದೃಷ್ಟಿ ನಷ್ಟವಾಯಿತು.!!!
▪ *ಹಿಜ್ರಾ* ವರ್ಷ ಐವತ್ತರಲ್ಲಿ ವಫಾತಾದ ಇವರ ಮಖ್ಬರ ಇರಾಕಿನ ಕೂಫಾದಲ್ಲಿದೆ.
ಸಂಗ್ರಹ: ಇಮಾಮ್ ಝಹಬಿಯ *ಸಿಯರು ಅಅ್ಲಾಮಿನ್ನುಬಲಾಅ್* ಮತ್ತು ಇಮಾಮ್ ಇಬ್ನು ಅಸಾಕಿರ್ರ *ತಾರೀಖ್ ದಿಮಷ್ಖ್* ಎಂಬ ಗ್ರಂಥಗಳು.

Comments