ಇದೆಂತಹಾ ಅ್ಯಾಂಟೀಬಯೋಟಿಕ್
*✒ಯೂಸುಫ್ ನಬ್ಹಾನಿ ಕುಕ್ಕಾಜೆ*
▪ಸ್ವಹಾಬಿಯಾದ *ಫುದೈಕ್ ಬಿನ್ ಅಮ್ರ್*(ರ) ರವರು ಒಮ್ಮೆ ಒಂದು ಗುಡ್ಡಗಾಡು ಪ್ರದೇಶದಲ್ಲಿ ಒಂಟೆಯಲ್ಲಿ ಸಂಚಾರ ಮಾಡುತ್ತಿರುವಾಗ ಒಂದು ಕಡೆ ಇಳಿಯುವ ಅಗತ್ಯ ಬಂದಾಗ ಅಕಸ್ಮಾತ್ ತಿಳಿಯದೆ ಮಹಾ ವಿಷ ಸರ್ಪದ ಮೊಟ್ಟೆಯ ಮೇಲೆ ಕಾಲಿಟ್ಟರು.
▪ *ವಿಷಪೂರಿತ* ಹಾವಿನ ಮೊಟ್ಟೆಯ ಮೇಲೆ ಪಾದರಕ್ಷೆಯಿಲ್ಲದೆ ಕಾಲಿಟ್ಟ ಕಾರಣ ಕೆಲವು ದಿನಗಳು ಕಳೆಯುವಾಗ ಅದರ ವಿಷದ ಫಲವಾಗಿ ಅವರ ಎರಡು ಕಣ್ಣಿನ ದೃಷ್ಟಿ ಸಂಪುರ್ಣವಾಗಿ ನಷ್ಟವಾಯಿತು. ತುಂಬು ಯೌವನದಲ್ಲಿ ಉಂಟಾದ ಈ ಮಹಾ ದುರಂತ ಅವರಿಗೆ ತನ್ನ ಭವಿಷ್ಯದ ಬದುಕನ್ನು ಮುಂದಕ್ಕೆ ಕೊಂಡು ಹೋಗುವುದಕ್ಕೆ ಒಂದು ಅಡ್ಡಿಯಾಯಿತು.
▪ *ಅಂತೆಯೇ* ಇವರನ್ನು ಇತರ ಕೆಲವು ಸ್ವಹಾಬಿಗಳು ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಸನ್ನಿಧಿಗೆ ತಂದರು. ಕೂಡಲೇ ಕುರುಡನಾಗಿದ್ದ *ಪುದೈಕ್* (ರ) ರವರ ಎರಡು ಕಣ್ಣುಗಳಿಗೂ ಪ್ರವಾದಿಯವರು ತನ್ನ ಪವಿತ್ರ ಉಗುಳು ನೀರನ್ನು ಉಗುಳಿದರು. ಸುಬ್ಹಾನಲ್ಲಾಹ್.. ಉಗುಳಿದ್ದೇ ತಡ ನಷ್ಟವಾದ ದೃಷ್ಟಿ ಸಂಪೂರ್ಣವಾಗಿ ಮರಳಿ ಬಂತು.
▪ *ಗಮನಾರ್ಹ* ಸಂಗತಿಯೆಂದರೆ, ಈ ಸ್ವಹಾಬಿಯವರಿಗೆ ಸುಮಾರು ಎಂಬತ್ತು ವರ್ಷ ಕಳೆದ ನಂತರವೂ ತನ್ನ ಬಟ್ಟೆ ಹೊಲಿಯುವ ಅಗತ್ಯ ಬರುವಾಗ ತಾನೇ ಸೂಜಿಗೆ ದಾರ (ನೂಲು) ಹಾಕುತ್ತಿದ್ದರು.! ಆಗಲೂ ಆ ಪ್ರವಾದಿಯವರಿಂದ ಪವಾಡವಾಗಿ ದೊರೆತ ಅ್ಯಾಂಟೀಬಯೋಟಿಕ್ನ ಫಲಕ್ಕೆ ಯಾವುದೇ ಕೊರತೆಯಿರಲಿಲ್ಲ.
ಸಂಗ್ರಹ ; ಬಿನ್ ಹಜರ್ ಅಸ್ಖಲಾನಿಯ *ಅಲ್ ಇಸಾಬಾ ಫೀ ತಮ್ಯೀಝ್ ಅಲ್ ಸ್ವಹಾಬಾ* ಎಂಬ ಗ್ರಂಥ.

Comments