Skip to main content

ಹಜರುಲ್ ಅಸ್ವದ್...ಗಫೂರ್ ಬಾಯಾರ್

�� *ಹಜರುಲ್ ಅಸ್ವದ್*��

✍  _ಗಫೂರ್ ಬಾಯಾರ್_

*ಸ್ವರ್ಗದಿಂದ ತರಲಾದ ಮುತ್ತು ನಬಿ ﷺ ರವರು ಚುಂಬಿಸಿದ ಹಜರುಲ್ ಅಸ್ವದ್ ಹಲವಾರು ಸಲ ಚುಂಬಿಸಲು ನೀ ಭಾಗ್ಯವ ನೀಡು ಅಲ್ಲಾಹ್ ಆಮೀನ್*

��ವಿಶುದ್ಧ ಕಅಬಾಲಯದ ಆರಂಭದಿಂದಲೇ ಕಅಬಾಲಯದ ಒಂದು ಮೂಲೆಯಲ್ಲಿ ಸಂರಕ್ಷಿಸಿಕೊಂಡು ಬರುತ್ತಿರುವ, ಅತೀ ಪುರಾತನವಾದ ಒಂದು ಕಪ್ಪು ಕಲ್ಲಾಗಿದೆ
_ಹಜರುಲ್ ಅಸ್ವದ್_.

ಮನುಷ್ಯರು ಅಲ್ಲಾಹುವನ್ನು ಆರಾಧಿಸಲಿಕ್ಕಾಗಿ ಭೂಮಿಯಲ್ಲಿ ಸ್ಥಾಪಿಸಿದ ಮೊದಲನೇ ಭವನ ಕಅಬಾಲಯ. ಇದರ ಆರಂಭದಿಂದಲೇ ಏಕ ಇಲಾಹಿ ಆರಾಧನೆಗೆ ಸಾಕ್ಷಿ ವಹಿಸಿದ ಒಂದು ಕಲ್ಲು, ಎಂಬಿ ಚರಿತ್ರೆ ಪ್ರಾಧಾನ್ಯವಿದೆ ಈ ಕಲ್ಲಿಗೆ.

ಇದಕ್ಕೆ ಆಧಾರವಾಗಿ ಹದೀಸ್ ಉಲ್ಲೇಖಿಸುವುದು ಹೀಗೆಯಾಗಿದೆ.....

*ಹಜರುಲ್ ಅಸ್ವದ್ ಸ್ವರ್ಗದ ಕಲ್ಲಾಗಿದೆ. ಇಬ್ನು ಅಬ್ಬಾಸ್ (ರ)ರವರ ಒಂದು ಹದೀಸಿನಲ್ಲಿ ಈ ಪ್ರಕಾರ ಕಾಣಬಹುದು. "ಹಜರುಲ್ ಅಸ್ವದ್ ಸ್ವರ್ಗದಿಂದ ತಂದಿರುದಾಗಿದೆ. (ತಿರ್ಮುದಿ, ನಸಾಈ (ರ))*

ಮುಹಮ್ಮದ್ ನಬಿ ﷺ ರವರು ಕಅಬಾಲಯ ಪ್ರದಕ್ಷಿಣೆ ಸಮಯ ಆರಂಭಿಸಲಿಕ್ಕಿರುವ ಗುರುತಾಗಿ ಇದನ್ನು ನಿಶ್ಚಯಿಸಿದ್ದರು.
ಅದನ್ನು ಚುಂಬಿಸುವುದು, ಮುಟ್ಟಿ ಚುಂಬಿಸುವುದು, ಅದಕ್ಕೂ ಸಾದ್ಯವಾಗದ ಅವಸ್ಥೆಯಾದರೆ ಕೈಯಿಂದ ಅದರ ನೇರಕ್ಕೆ ಆಂಗ್ಯ ತೋರಿಸಿ
ತವಾಫ್ (ಪ್ರದಕ್ಷಿಣೆ) ಮಾಡಬೇಕು. (ಆರಂಭಿಸಬೇಕು)

ಈ ವಿಷಯದಲ್ಲಿ 2ನೇ ಖಲೀಫರಾದ ಉಮರುಲ್ ಫಾರೂಖ್ (ರ)ರವರು ನಡೆಸಿದ ಮಾತು ಬಹಳ ಪ್ರಶಿದ್ದವಾಗಿದೆ.

*ಕಅಬಾಲಯ ಪ್ರದಿಕ್ಷಿಣೆ ಮಾಡುವ ಸಮಯ ಹಜರುಲ್ ಅಸ್ವದ್ ಚುಂಬಿಸಿಕೊಂಡು ಉಮರ್ (ರ)ರವರು ಹೇಳಿದರು, "ಕಲ್ಲೇ, ನೀನು ಒಂದು ಕಲ್ಲು ಮಾತ್ರವಾಗಿದೆ ಎಂದು ನನಗೆ ಗೊತ್ತು. ನಿನಗೆ ಏನಾದರೂ ಉಪಕಾರ ಮಾಡಿ ಕೊಡಲೋ, ಉಪದ್ರದಿಂದ ನನ್ನನ್ನು ಸಂರಕ್ಷಿಸಲೋ, ಸಾಧ್ಯವಿಲ್ಲ. ನಬಿ  ﷺ ರವರು ನಿನ್ನನ್ನು ಚುಂಬಿಸುವುದು ನಾನು ಕಂಡಿಲ್ಲವಾದರೆ ನಾನು ಒಮ್ಮೆಯೂ ನಿನ್ನನ್ನು ಚುಂಬಿಸುತ್ತಿರಲಿಲ್ಲ."*

ಅದೇ ಸಮಯ ಸಾವಿರಾರು ಜನರು ಒಂದೇ ಸಮಯ ಕಅಬಾಲಯಕ್ಕೆ ಸುತ್ತಲೂ *ತವಾಫ್* ಮಾಡುವಾಗ ಹಜರುಲ್ ಅಸ್ವದನ್ನು ಚುಂಬಿಸಲು, ಮುಟ್ಟಿ ಚುಂಬಿಸಲು,  ಎಲ್ಲರಿಗೂ
ಸಾಧ್ಯವಾಗುವುದಿಲ್ಲ.

ನೂಕುನುಗ್ಗಲನಲ್ಲಿ ತವಾಫ್ ಮಾಡುವವರಿಗೆ ಕಷ್ಟವಾಗದೆ ಈ ಕಾಲದಲ್ಲಿ ಹಜರುಲ್ ಅಸ್ವದಿನ ಹತ್ತಿರಕ್ಕೆ ಕೂಡ ತಲುಪಲು ಸಾಧ್ಯವಿಲ್ಲ. ಪ್ರತ್ಯೇಕಿಸಿ ರಮಳಾನ್ ಕಾಲದಲ್ಲಿ.

ಹಜರುಲ್ ಅಸ್ವದ್ ಚುಂಬಿಸುವುದೆಂದರೆ  *ಸುನ್ನತ್ತ್* ಮಾತ್ರವಾಗಿದೆ. ಅದಕ್ಕಾಗಿ ಒಟ್ಟಿಗೆ ತವಾಫ್ ಮಾಡುವವರಿಗೆ ತೊಂದರೆ ಕೊಡುವುದು ನಿಷಿದ್ಧವಾಗಿದೆ. ನೂಕುನುಗ್ಗಲಿನೊಂದಿಗೆ ತವಾಫ್ ಮಾಡುವವರಿಗೆ ಕಷ್ಟಗಳನ್ನು ಕೊಟ್ಟು ಹಜರುಲ್ ಅಸ್ವದನ್ನು ಚುಂಬಿಸಲು ಶ್ರಮಿಸುವಾಗ ನಷ್ಟವಾಗುವುದು *ಉಮ್ರ* ಒಳಗೊಂಡ ನಮ್ಮ  ಸತ್ಕರ್ಮಗಳಾಗಿದೆ.

ಚುಂಬಿಸುವುದು, ಮುಟ್ಟಿ ಚುಂಬಿಸುವುದು.. ಇದಕ್ಕೆ ಸಾಧ್ಯವಾಗದ ಅವಸ್ಥೆಯಾದರೆ ಕೈಯಿಂದ ಕಲ್ಲಿನ ನೇರ ಆಂಗ್ಯ ತೋರಿಸುವುದು.. ಇದಾಗಿದೆ ಪ್ರವಾದಿ ﷺ ನಿರ್ದೇಶಗಳು.

ನೂಕುನುಗ್ಗಲಿನಿಂದ ತವಾಫ್ ಮಾಡುವ ವೃದ್ದೆಯರು, ಅಬಲೆಯರು ಒಳಗೊಂಡ ಜನರಿಗೆ ಪ್ರಯಾಸ ಉಂಟು ಮಾಡಿ ಹಜರುಲ್ ಅಸ್ವದನ್ನು ಚುಂಬಿಸುವುದಕ್ಕಿಂತ ಒಳ್ಳೆಯದು ಕೈಯಿಂದ ಕಲ್ಲಿನ ನೇರಕ್ಕೆ ಆಂಗ್ಯ ತೋರಿಸುವುದಾಗಿದೆ ಉತ್ತಮ. ಪ್ರತ್ಯೇಕಿಸಿ ಸ್ತ್ರೀಯರಿಗಾಗಿ ಎಚ್ಚರಿಕೆ ವಹಿಸುವುದು ಒಳ್ಳೆಯದು.

✍ _ಗಫೂರ್ ಬಾಯಾರ್_
����������������

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...