Skip to main content

ಸೂರತುಲ್ ಕಹ್ಫ್ ನ ಮಹತ್ವ

         ಸೂರತುಲ್ ಕಹ್ಫ್ ನ ಮಹತ್ವ

_ಶುಕ್ರವಾರ ದಿವಸ ಸೂರತುಲ್ ಕಹ್ಫ್ ಪಾರಾಯಣಗೈಯ್ಯುವುದರ ಪ್ರಾಮುಖ್ಯತೆಯ ಕುರಿತು ಪ್ರವಾದಿ   ﷺ ತಿಳಿಸಿದ ಹದೀಸ್ ಗಳನ್ನು ಕಾಣಬಹುದು._

_*عن أبي سعيد الخدري ، قال عليه الصلاة والسلام: " من قرأ سورة الكهف ليلة الجمعة أضاء له من النور فيما بينه وبين البيت العتيق "*_

*_ಅಬೀ ಸಈದಲ್ ಖುದ್ರಿ (ರ) ನಿವೇದನೆ. ನಬಿ  ﷺ   ಹೇಳಿದರು: ಯಾರಾದರು ಶುಕ್ರವಾರ ರಾತ್ರಿ ಸೂರತುಲ್ ಕಹ್ಫ್ ಪಠಿಸುವುದಾದರೆ ಅವನ ಮತ್ತು ಬೈತುಲ್ ಅತೀಕ್(ಕ ಅಬಾ)ನ ನಡುವೆ ಇರುವ ಅಷ್ಟು ದೂರ ಪ್ರಕಾಶ ಲಭಿಸುವುದು.[ಸ್ವಹೀಹ್-ಅಲ್ಬಾನಿ (ರ)]_*

_ಇನ್ನೊಂದು ಹದೀಸಿನಲ್ಲಿ ಈ ರೀತಿ ಕಾಣಬಹುದು._
_*" من قرأ سورة الكهف في يوم الجمعة أضاء له من النور ما بين الجمعتين "*_

*_"ಯಾರಾದರು ಶುಕ್ರವಾರ ದಿವಸ ಸೂರತುಲ್ ಕಹ್ಫ್ ಪಠಿಸುವುದಾದರೆ ಆ ಎರಡು ಜುಮುಅಗಳ ನಡುವೆ ಇರುವಷ್ಟು ಪ್ರಕಾಶ ಲಭಿಸುವುದು."[ಸ್ವಹೀಹ್-ಅಲ್ಬಾನಿ]. ಜುಮುಅ ದಿವಸ ಸೂರತುಲ್ ಕಹ್ಫ್ ಪಾರಾಯಣದ ಸಂಬಂಧಿಸಿ ಬಂದ ಹದೀಸ್ಗಳಲ್ಲಿ ಅತ್ಯಂತ ಪ್ರಬಲವಾದ ಹದೀಸಾಗಿದೆ ಇದು._*

_ಅದೇ ರೀತಿ ಇಬ್ನು ಉಮರ್ (ರ) ರಿಪೋರ್ಟ್ ಮಾಡಿದ ಇನ್ನೊಂದು ಹದೀಸ್ ಈ ರೀತಿ ಕಾಣಬಹುದು:_

_*عن ابن عمر رضي الله عنهما قال : قال رسول الله صلى الله عليه وسلم : " من قرأ سورة الكهف في يوم الجمعة سطع له نور من تحت قدمه إلى عنان السماء يضيء له يوم القيامة ، وغفر له ما بين الجمعتين ".*_

*_ಯಾರಾದರು ಜುಮುಅ ದಿನ ಸೂರತುಲ್ ಕಹ್ಫ್ ಪಾರಾಯಣಗೈದರೆ ಅವನ ಪಾದದಿಂದ ಬಾನಲೋಕದವರೆಗೆ ಪ್ರಕಾಶ ಅಂತ್ಯ ದಿನದಲ್ಲಿ ಅವನಿಗೆ ಲಭಿಸುವುದು. ಅವನ ಎರಡು ಜುಮುಅಗಳ ನಡುವಿನ ಪಾಪಗಳನ್ನೂ ಮನ್ನಿಸಲ್ಪಡುವುದು.[ ಅತ್ತರ್ಗೀಬ್ ವತ್ತರ್ಹೀಬ್ 298/1]_*

_ಈ ಹದೀಸುಗಳಿಂದ ನಾವು ಮನಗಾಣಬಹುದಾದ ವಿಷಯ ಶುಕ್ರವಾರ ರಾತ್ರಿ, ಶುಕ್ರವಾರ ದಿವಸ, ಸೂರತುಲ್ ಕಹ್ಫ್ ಪಾರಾಯಣಕ್ಕೆ ಶ್ರೇಷ್ಠವಾದ ಸಮಯವಾಗಿದೆಯೆಂದು. ಗುರುವಾರ ಸೂರ್ಯಾಸ್ತಮಾನದಿಂದ ಶುಕ್ರವಾರ ಸೂರ್ಯಾಸ್ತಮಾನದವರೆಗೆ ಸೂರತುಲ್ ಕಹ್ಫ್ ಪಾರಾಯಣಕ್ಕೆ ಹದೀಸ್ ಗಳಲ್ಲಿ ಪರಾಮರ್ಶಿಸಿದ ಪ್ರತ್ಯೇಕ ಸಮಯವಾಗಿದೆ._

_"ಶುಕ್ರವಾರ ದಿವಸ, ಶುಕ್ರವಾರ ರಾತ್ರಿ ಸೂರತುಲ್ ಕಹ್ಫ್ ಪಾರಾಯಣ ಅತ್ಯಂತ ಪುಣ್ಯದಾಯಕ ಕರ್ಮವಾಗಿದೆಯೆಂದು ಇಮಾಂ ಶಾಫಿಈ (ರ) ರಂತಹ ಇಮಾಮ್ಗಳು ವಿವರಿಸಿದ್ದಾರೆ._

_ಅಲ್ಲಾಹು ಅನುಗ್ರಹಿಸಲಿ....ಆಮೀನ್._

_*تقبل الله منى*_

✍ 💐 _*ಹಸ ಗುಲ್ವಾಡಿ*_   💐

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...