Skip to main content

ಕಣ್ಣಾರೆ ಕಂಡು ಅನುಭವಿಸಿದ ತಾಜುಲ್ ಉಲಮಾರ ಕರಾಮತು ✍ಪಿ.ಪಿ.ಎ.ಹಮೀದ್ ಕಾಶಿಪಟ್ಣ ಕೆಸಿಎಫ್ ಕುವೈತ್

ಕಣ್ಣಾರೆ ಕಂಡು ಅನುಭವಿಸಿದ
ತಾಜುಲ್ ಉಲಮಾರ ಕರಾಮತು

    ✍ಪಿ.ಪಿ.ಎ.ಹಮೀದ್ ಕಾಶಿಪಟ್ಣ
ಕೆಸಿಎಫ್ ಕುವೈತ್

ತಾಜುಲ್ ಉಲಮಾರ ಶಿಷ್ಯಂದಿರ ಸಂಘಟನೆ ಮದನೀಸ್ ಎಸೋಶಿಯೇಶನ್. ನನ್ನ ಜ್ಞಾಪಕ ಸರಿಯಾಗಿದ್ದಲ್ಲಿ ಸುಮಾರು 18/19 ವರ್ಷಗಳ ಹಿಂದೆ ನಡೆದ ಉಳ್ಳಾಲ ದರ್ಗಾ ಮೈದಾನದಲ್ಲಿ  ಮದನೀಸ್ ಸಂಘಟನೆಯ ಅಧೀನದಲ್ಲಿ ನಡೆದ ಅತಿರಥ ಮಹಾರಥರಾದ ಉಲಮಾ ,ಉಮರಾ,ಹಾಗು ರಾಜಕೀಯ ಮುಖಂಡರು ಭಾಗವಹಿಸಿದ ಸಮ್ಮೇಳನ. ಅದು ವೇದಿಕೆಯಲ್ಲಿ  ಶೈಖುನಾ ಎಪಿ ಉಸ್ತಾದ್, ಶೈಖುನಾ ಎಮ್ ಎ ಉಸ್ತಾದ್ ಸೇರಿದಂತೆ  ಗಣ್ಯಾತಿಗಣ್ಯರು ಬಂದು ಸೇರಿದ್ದರು ಇನ್ನೇನು  ಕೆಲವೇ  ಕ್ಷಣಗಳಲ್ಲಿ ಸಮ್ಮೇಳನ ಆರಂಭವಾಗುವ ಸಮಯ. ಮೈದಾನವು ಸುನ್ನಿ ಕಾರ್ಯಕರ್ತರಿಂದ ತುಂಬಿ ತುಳುಕುತ್ತಿದೆ. ತಾಜುಲ್ ಉಲಮಾರವರು ವೇದಿಕೆಗೆ ಆಗಮನವಾಗುತ್ತಿದ್ದಂತೆಯೇ ಮೈದಾನದಲ್ಲಿ ಸೇರಿದ ಸುನ್ನಿ ಮಕ್ಕಳ ಹರ್ಷೋದ್ಗಾರ ಮುಗಿಲು ಮುಟ್ಟುತ್ತಿತ್ತು. ಮದನೀಸ್ ಸಂಘದ ಅದ್ಯಕ್ಷರಾದ ಟಿ ಎಚ್ ಉಸ್ತಾದರು ಸ್ವಾಗತ ಭಾಷಣಕ್ಕೆ ಅನುವಾದಾಗ ಆಗ ತಾನೆ ಸಂಘಟಕರು ಸೇರಿದಂತೆ  ನಾನಾ ದಿಕ್ಕುಗಳಿಂದ ಬಂದು ಸೇರಿದ ಸುನ್ನಿ ಕಾರ್ಯಕರ್ತರಿಗೆ ಆತಂಕ. ಕಾರಣ,ಸಿಡಿಲು ಮಿಂಚು. ಮಳೆರಾಯನ ಸ್ವಾಗತಕ್ಕೆ ಕತ್ತಲು ಕವಿದ ವಾತಾವರಣ.  ನಾಯಕರ ಭಾಷಣ ಆಲಿಸಬೇಕೆಂಬ ಅತಿ ಆಸೆಯಿಂದ ಬಂದ ಕಾರ್ಯಕರ್ತರಿಗೆ ನಿರಾಶೆಯ ಮೌನ..
ಆಗ ತಾಜುಲ್ ಉಲಮಾರ ಪವಿತ್ರವಾದ  ಬಾಯಿಯಿಂದ ಆ ಮಾತು ಹೊರಬಿತ್ತು.
*ಯಾರು ಇದ್ದಲ್ಲಿಂದ ಕದಲಬೇಡಿ. ಮಳೆಯ ವಿಷಯ ನಾನು ವಹಿಸಿಕೊಳ್ಳುವೆನು...ಅಲ್ಲಾಹವೇ ನಿನ್ನ ಅನುಗ್ರಹವಾದ  ಮಳೆಯನ್ನು ನಮ್ಮ ಕಾರ್ಯಕ್ರಮ ಮುಗಿಯುವವರೆಗೆ ನೀಡಬೇಡ. ಆಸುಪಾಸಿಗೆ  ಕೊಡು ರಬ್ಬೇ.*
ತೊಕ್ಕೋಟು, ತಲಪಾಡಿ ಮಂಗಳೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆರಾಯನ ಆರ್ಭಟವಿರುವಾಗ
ಸರಿ ಸುಮಾರು  ಸಂಜೆ 6 ರಿಂದ ರಾತ್ರಿ 10ಗಂಟೆಯವರೆಗೆ ಉಳ್ಳಾಲ ಮೈದಾನದಲ್ಲಿ ಕಾರ್ಯಕ್ರಮ ಯಾವುದೇ ತೊಡಕು ಇಲ್ಲದೇ, ಕೊನೇಯದಾಗಿ ಪೇರೋಡು ಉಸ್ತಾದರ ಭಾಷಣ ಮುಕ್ತಾಯ ಆಗುತ್ತಿದ್ದಂತೆ ಮಳೆರಾಯ ಬಂದೆ ಬಿಟ್ಟ..
ಇದನ್ನು  ಪ್ರತ್ಯಕ್ಷ  ಕಣ್ಣಾರೆ ಕಂಡು ಅನುಭವಿಸಿದ ಈ ವಿನೀತ..
ಮಾತ್ರವಲ್ಲದೇ ಕರ್ನಾಟಕ,ಕೇರಳದ ಹಲವಾರು ಪತ್ರಿಕಾ ಪ್ರತಿನಿಧಿಗಳು ಸಮ್ಮೇಳದಲ್ಲಿ ಭಾಗಿಯಿದ್ದು ಪ್ರತ್ಯಕ್ಷ ಕಂಡು ಬೆಳಗಿನ ಪತ್ರಿಕೆಯಲ್ಲಿ  ಉಳ್ಳಾಲ ತಂಙಳ್'ರವರ ಕರಾಮತು ಎಂದು ಹೆಡ್'ಲೈನ್'ನಲ್ಲಿ ಪ್ರಕಟಿಸಿದ್ದರು.

*ಇದಾಗಿದೆ ಕಣ್ಮರೆಯಾದರೂ ಮನ್ಮರೆಯಾಗದ ತಾಜುಲ್ ಉಲಮಾ ( ಖ.ಸಿ)*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...