Skip to main content

ಮಹಾತ್ಮರೊಂದಿಗೆ ಆಟವಾಡದಿರಿ

ಸಯ್ಯಿದ್ ಮದನಿ ತಂಙಲ್ ರವರ ವಫಾತಿನ ಬಳಿಕ ನಡೆದ ಅದ್ಭುತ ಒಂದು ಘಟನೆ. ಒಂದಭಿಪ್ರಾಯದಂತೆ ಅಳೇಕಲದ ಪೊಲ್ಕರೆಯ ಮದನಿ ತಂಙಲ್ ರವರ ಮನೆಯ ತೆಂಗಿನ ಮರಗಳಿಂದ ಕಾಯಿ ಸೀಳಲು ಬಂದ ವ್ಯಕ್ತಿ ಸೋಮಾರಿತನ, ಅಸಡ್ಡೆ ತೋರಿಸಿದಾಗ ಸನಿಹವಿದ್ದವರು ನೀನು ಏನು ಮಾಡ್ತಾ ಇರುವೆ. ಇದು ಸಯ್ಯಿದ್ ಮದನಿ ತಂಙಲ್ ರವರ ತೆಂಗಿನ ಮರಗಳು ಎಂದು ಹೇಳಿದರಂತೆ. ಅದಕ್ಕೆ ಆತ ಅದಕ್ಕೇನಂತೆ, ಅವರ ತೆಂಗಿನಕಾಯಿಗೆ ಕೊಂಬಿದೆಯೇ ಎಂದು ತಾತ್ಸಾರ ಮನೋಭಾವದಿಂದ ಮಾತನಾಡಿದನಂತೆ. ಬಳಿಕ ಮರ ಹತ್ತಿ ತೆಂಗಿನ ಕಾಯಿ ಸೀಳಲು ಅಣಿಯಾದಾಗ ಏನದ್ಭುತ, ತೆಂಗಿನ ಕಾಯಿ ಗೊನೆಯಲ್ಲಿ ಕೊಂಬು ಕಂಡು ಆತ ಆಶ್ಚರ್ಯ ಚಕಿತನಾದನು. ಮತ್ತೆ ತನ್ನ ತಪ್ಪಿನ ಅರಿವಾಗಿ ಕ್ಷಮೆಯಾಚಿಸಿದನು. ಮತ್ತೊಂದು ಅಭಿಪ್ರಾಯದ ಪ್ರಕಾರ ಸಯ್ಯಿದ್ ಮದನಿ ತಂಗಳರ ಅತಿಯಾಗಿ ಗೌರವಿಸುತ್ತಿದ್ದ ಓರ್ವರು ತನ್ನ ಜಾಗದಲ್ಲಿ ತೆಂಗಿನ ಕಾಯಿಯನ್ನು ನೆಡುವಾಗ ಇದು ಮುಂದಕ್ಕೆ ಫಸಲು ನೀಡಿದರೆ ಮೊದಲ ಫಸಲಿನ ತೆಂಗಿನಕಾಯಿ ಗೊನೆಯನ್ನು ಸಯ್ಯಿದ್ ಮದನಿ ತಂಙಲ್ ಖ.ಸಿ ರವರ ದರ್ಬಾರಿಗೆ ನೀಡುತ್ತೇನೆ ಎಂದು ಹರಕೆ (ನೇರ್ಚೆ) ಮಾಡಿ ನೆಟ್ಟರು. ಆಗ ಅಲ್ಲಿದ್ದ ಓರ್ವ ವ್ಯಕ್ತಿ ಮದನಿ ತಂಙಲ್ ಹೆಸರಿನಲ್ಲಿ ಯಾಕೆ ಹರಕೆ ಮಾಡ್ತೀಯಾ, ಅವರಿಗೆ ಹರಕೆ ಮಾಡಿದರೆ ತೆಂಗಿನಕಾಯಿಗೆ ಕೊಂಬು ಬರುತ್ತದೆಯೇ ಎಂದು ವ್ಯಂಗ್ಯವಾಗಿ ಹೇಳಿದನಂತೆ. ತೆಂಗಿನ ಕಾಯಿ ಮೊಳಕೆಯೊಡೆಯಿತು. ಬೆಳೆಯಿತು. ಮರವಾಯಿತು. ಫಸಲು ನೀಡಿತು. ಮೊದಲ ಗೊನೆಯಲ್ಲಿ ಕೊಂಬಿರುವ ತೆಂಗಿನಕಾಯಿಗಳು ಪ್ರತ್ಯಕ್ಷವಾಯಿತು. ಅದನ್ನು ದರ್ಗಾಕ್ಕೆ ತಲುಪಿಸಲಾಯಿತು. ವ್ಯಂಗ್ಯವಾಗಿ ನುಡಿದವನಿಗೂ ಈ ವಿಷಯ ತಲುಪಿತು. ಆತ ಬಳಿಕ ಕ್ಷಮೆಯಾಚಿಸಿದನು.  ಈಗಲೂ ಆ ತೆಂಗಿನಕಾಯಿಗಳು ದರ್ಗಾದಲ್ಲಿ ಕಾಣಬಹುದು.
ಸಯ್ಯಿದ್ ಮದನಿ ತಂಗಲ್ ರವರನ್ನು ತಾತ್ಸಾರ ಮನೋಭಾವದಿಂದ, ಗೇಲಿ ಮಾಡುವ ರೂಪದಲ್ಲಿ ಯಾರಾದರೂ ಪ್ರವರ್ತಿಸಿದರೆ ಅದರ ಪರಿಣಾಮ ಎದುರಿಸದೇ ಇರಲಾರ ಎಂದು ಈ ಘಟನೆಯಿಂದ ತಿಳಿಯಬಹುದು.

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...