Skip to main content

ತಾಯಿಗಿಂತ ಪ್ರೀತಿಯಾ

🌹 ತಾಯಿಗಿಂತ ಪ್ರೀತಿಯಾ.!🌹

*ಒಂದು ಮಗುವನ್ನು ಅತೀ ಹೆಚ್ಚಾಗಿ ಪ್ರೀತಿಸೂದು ಈ ಲೋಕದಲ್ಲಿ ತಾಯಿ ಮಾತ್ರ ಆದರೆ ಇದೊಂದು ಘಟನೆ ನೋಡಿ ತಾಯಿ ಬೇಡ ಎಂದಾಗಳು ಮಗನ ಕೈ ಹಿಡಿದ ಒಬ್ಬರು ಅದು ಯಾರು ಕೆಳಗೆ ಓದಿ*👇🏽

*ಒಂದು ದಿನ ಪ್ರವಾದಿ ಸ.ಅ ತಙಲ್ ಒಂದು ಕಬರ್ ಸ್ಥಾನದ ಹತ್ತಿರದಿಂದ ಹಾದು ಹೋಗುತ್ತಾ ಇರಬೇಕಾದರೆ.*
*ಕಬರ್ ಒಳಗಡೆ ಒಂದು ಶಬ್ದ* *(ಅಲ್ ಅಮಾನ್ ಅಲ್ ಅಮಾನ್ ಮಿನ್ ಅಝಾಬಿಲ್ ಕಬ್ರ್)*
🔥 *ಯಾ ರಸೂಲಲ್ಲಾಹ್ ನನ್ನ ರಕ್ಷಿಸಿ ಕಬ್ರ್ ಶಿಕ್ಷೆಯಿಂದ*🔥

*ಪ್ರವಾದಿ ಸ.ಅ ತಙಲ್ ಆ ಶಬ್ದ ಕೇಳಿ ಅಲ್ಲಿಯೇ ನಿಂತು ಬಿಟ್ಟರು*
*ಹತ್ತಿರ ಇದ್ದ ಸ್ವಹಾಬಿ ವರ್ಯರಲ್ಲಿ ಹೇಳಿದರು "ಓ ಸ್ವಹಾಬಿಗಳೇ ಊರ ಜನರನ್ನು ಎಲ್ಲರನ್ನು ಬರಳು ಹೇಳಿರಿ*

*ಸ್ವಹಾಬಿ ಊರ ಜನರನ್ನು ಕಬರ್ ಸ್ಥಾನದಲ್ಲಿ ಒಂದು ಗೂಡಿಸಿದರು ನಬಿ ಸ.ಅ ತಙಲ್ ಆ ಕಬರ್ ಸ್ಥಾನಕ್ಕೆ ಕೈ ತೋರಿಸಿ ಹೇಳಿದರು "ಓ ಜನರೇ ಈ ಕಾನುವ ಕಬರ್ ಸ್ಥಾನ ಯಾರದ್ದು.?*
*ಎಲ್ಲರೂ ಸುಮ್ಮನೇ ನಿಂತರು ಮುಖ ಮುಖ ನೋಡಿದರು ಯಾರು ಕೂಡ ಉತ್ತರ ಕೊಡಲಿಲ್ಲ ಪ್ರವಾದಿ ಸ.ಅ ಮತ್ತೆಯೂ ಕೇಳಿದರು ಆಗಳಾಗಿದೆ ಒಂದು ವಯಸ್ಸಾದ ತಾಯಿ "ಯಾ ರಸೂಲಲ್ಲಾಹ್ ಆ ಕಬರ್ ನನ್ನ ಪ್ರೀತಿಯ ಮಗನದ್ದು*

*ಪ್ರವಾದಿ ಸ.ಅ ತಙಲ್ ಕೇಳಿದರು ನಿಮ್ಮ ಮಗನ ಜೀವನ ಚರ್ಯೆ ಹೇಗಿತ್ತು ಅವನು ಯಾಕೆ ಕಬರಲ್ಲಿ ಶಿಕ್ಷಿಸಲ್ ಪಡುತ್ತಾ ಇದ್ದಾನೆ ಅವನು ಮಾಡಿದ ತಪ್ಪಾದರೂ ಏನು.?*

*ಆ ತಾಯಿ ಕಣ್ಣೀರು ಹಾಕುತ್ತಾ ಹೇಳಿದರು "ಯಾ ರಸೂಲಲ್ಲಾಹ್ ಸ.ಅ ತಙಲೇ ನನ್ನ ಮಗ ಏನು ತಪ್ಪು ಮಾಡಿಲ್ಲ ಅವನು ನನ್ನನ್ನು ಚನ್ನಾಗಿ ಪ್ರೀತಿಸುತ್ತಾ ಇದ್ದ ನಮಾಝ್ ಕೈ ಬಿಟ್ಟವನಲ್ಲ.*
*ಆದರೆ ಒಂದು ದಿನ ಅವನು ಕುಡಿದು ಬಂದು ನನ್ನಲ್ಲಿ ಬೇಡದ ರೀತಿ  ವರ್ತಿಸಿದ ಅದು ನಾನು ಅವನೆಗೆ ಯಾವತ್ತು ಮಾಪ್ ಕೊಡಲ್ಲ ಅವನು ಅವತ್ತು ಮಾಡಿದ ಕೃತ್ಯಕ್ಕೆ ನಾನು ಕಂಡಿತಾ ಮಾಪ್ ಕೊಡಲ್ಲ ಎಂದು ಹೇಳಿಯೇ ಬಿಟ್ಟರು*

*ಇದನ್ನು ಕೇಳಿದ ಪ್ರವಾದಿ ಸ.ಅ ತಙಲ್ ಆ ತಾಯಿಯಲ್ಲಿ ಹೇಳಿದರು "ನಿಮ್ಮ ಮಗ ಕಬರಿನಲ್ಲಿ ಶಿಕ್ಷಿಸಲ್ಪಡುತ್ತಾ ಇದ್ದಾನೆ ದಯವಿಟ್ಟು ಅವನಿಗೆ ಕ್ಷಮಿಸಿ ಬಿಡಿ" ಎಂದರು.*

*"ಇಲ್ಲ ನಾನು ಕ್ಷಮಿಸಲ್ಲ" ಎಂದೂ ಹೇಳಿಯೇ ಬಿಟ್ಟರು ಆ ತಾಯಿ.*

*ಅದೆಷ್ಟೋ ಸಾರಿ ಅಂಗಳಾಚಿದರು ಪ್ರವಾದಿ ಸ.ಅ*
*ಇಲ್ಲ ಆ ತಾಯಿ ಕ್ಷಮಿಸಲೇ ಇಲ್ಲ*

*ಕೊನೆಗೆ ಪ್ರವಾದಿ ಸ.ಅ ತಙಲ್ ತಾಯಿಯನ್ನು ಕಬರ್ ಹತ್ತಿರ ಕರೆದರು ಆ ತಾಯಿಯ ಕಿವಿಯನ್ನು ಕಬರ್ ಹತ್ತಿರ ಮಾಡಲು ಹೇಳಿದರು ಪ್ರವಾದಿ ಸ.ಅ ತಙಲ ಮುಹ್ ಜಿಝತ್ ನಿಂದ ಆ ತಾಯಿಗೆ ಮಗನ ಕೂಗು ಕೇಳಿತು (ಅಲ್ ಅಮಾನು ಅಲ್ ಅಮಾನ್ ಮಿನ್ ಅಝಾಬಿಲ್ ಕಬ್ರ್ )*
*ಇದು ಕೇಳಿದಾಗ ಆ ತಾಯಿಯ ಮನ ಕರಗಿತು ಯಾ ರಸೂಲಲ್ಲಾಹ್ ನನ್ನ ಮಗನಿಗೆ ನಾನು ಕ್ಷಮಿಸಿದೆ ನಾನು ಕ್ಷಮಿಸಿದೆ ಎಂದು ಜೋರಾಗಿ ಹೇಳಿದರು*

*ಅಷ್ಟು ಹೇಳಿದ್ದೇ ತಡ  ಕಬರ್ ಶಿಕ್ಷೆ ನಿಂತೇ ಬಿಟ್ಟಿತು.*

*ಕಬರ್ ನಿಂದ ಒಂದು ಶಬ್ದ ಯಾ ರಸೂಲಲ್ಲಾಹ್ ಜಝಾಕಲ್ಲಾಹು ಕೈರ್ ನನ್ನ ಶಿಕ್ಷೆ ನಿಂತು ಹೋಯಿತು ನಾನು ಈಗ ಸಂತೋಷದಲ್ಲಿ ಇದ್ದೇನೆ*

*ನೋಡಿದಿರಾ ಗೆಳೆಯರೆ ತಾಯಿ ಕ್ಷಮಿಸಲ್ಲ ಎಂದರು ಪ್ರವಾದಿ ಸ.ಅ ಸಹಾಯ ಮಾಡಿದ್ದು  ಯಾ ಅಲ್ಲಾಹ್ ಆ ಪ್ರವಾದಿ ವರ್ಯರ ಪ್ರೀತಿ ಮಾಡದೆ ಮತ್ತೆ ಯಾರ ಪ್ರೀತಿ ಮಾಡಲಿ*

*ಇದರಲ್ಲಿ ತುಂಬಾ ಪಾಠಗಳಿವೆ.*

🌹 *ತಾಯಿಯ ಮನ ನೋಯಿಸಿದರೆ ಯಾವತ್ತೂ ನಮಗೆ ಸಂತೋಷ ಇಲ್ಲ*

🌹 *ಯಾರು ಕೈ ಬಿಟ್ಟರು ಆ ರಸೂಲ್ ಸ.ಅ ತಙಲ್ ಯಾವತ್ತೂ ನಮ್ಮ ಕೈ ಬಿಡಲ್ಲ*

🌹 *ಮದ್ಯಪಾನ ನರಕದ ಚಾವಿಯಾಗಿದೆ*

*ಅಲ್ಲಾಹು ನಮ್ಮ ಇಹ ಪರ ಜೀವನ ಸಂತೋಷ ಗೊಳಿಸಲಿ ಆಮೀನ್*

*ಆ ರಸೂಲ್ ಸ.ಅ ತಙಲ ಪ್ರೀತಿಸುವ ಮನಸ್ಸು ನಮ್ಮದಾಗಲಿ*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...