Skip to main content

ಝಿಯಾರತ್ತ್ ಕೇಂದ್ರ 💎4⃣6⃣💎 ಕುಂಬೋಳ್ ಸದಾತ್ತುಗಳು 〰〰〰〰〰〰〰〰〰 _ಸಯ್ಯಿದ್ ಮುಹಮ್ಮದ್ ಪಾಪ್ಪಂಕೊಯ ತಂಗಳ್. (ಖ:ಸಿ) ಕುಂಬೋಳ್, ಕಾಸರಗೋಡು._

ಝಿಯಾರತ್ತ್ ಕೇಂದ್ರ
      💎4⃣6⃣💎
ಕುಂಬೋಳ್ ಸದಾತ್ತುಗಳು
〰〰〰〰〰〰〰〰〰
_ಸಯ್ಯಿದ್ ಮುಹಮ್ಮದ್ ಪಾಪ್ಪಂಕೊಯ ತಂಗಳ್. (ಖ:ಸಿ) ಕುಂಬೋಳ್, ಕಾಸರಗೋಡು._

ಸಾಮಾನ್ಯ ಜನರೊಂದಿಗೆ ಸೇರಿಕೊಂಡು  ಭಕ್ತಿಯಿಂದ ಕೂಡಿದ ಜೀವನ ಶೈಲಿಯೊಂದಿಗೆ ಜೀವಿಸುತ್ತಾ ನಿರ್ಗತಿಕರಿಗೆ, ಅನಾಥರಿಗೆ, ಬಡವರಿಗೆ ಆಸರೆಯಾಗಿ ನಿಂತು ಮತ ಸೌಹಾರ್ದತೆಯ ಸಂದೇಶವನ್ನು ಪ್ರಚಾರಪಡಿಸುತ್ತಾ, ಕೆಲವು ಕಾಲಗಳ ಹಿಂದೆ ನಮ್ಮಿಂದ ಅಗಲಿದ ಪುಣ್ಯ ಪುರುಷರಾಗಿದ್ದರು "ಪಾಪ್ಪಂ ಕೋಯ ತಂಙಳ್" ಎಂಬ ಸಯ್ಯಿದ್ ಮುಹಮ್ಮದ್ ಅಲ್ ಹೈದರೂಸ್ (ಖ:ಸಿ) ರವರು.

ಅಲ್ಲಾಹನ ಇಷ್ಟದಾಸರಾಗಿದ್ದ ತಂಙಳ್'ರವರ ಜೀವನದಲ್ಲಿ ಪ್ರಕಾಶ ಕಿರಣಗಳು ಕಂಡವರು ಅಧಿಕ ಮಂದಿ‌ ಇದ್ದರು..

ಕೇರಳದ ವಡಗರಕ್ಕೆ ಹತ್ತಿರವಿರುವ ನಾದಾಪುರಂ ಕಾರಕಾಡ್ ಮನೆತನದಲ್ಲಿ ಹಿಜರಿ ವರ್ಷ 1234ರಲ್ಲಿ ಹೈದರೂಸ್ ಖಬಿಲದಲ್ಲಾಗಿತು ಮಹಾನರ ಜನನ. ಆ ಕಾಲದ ಪ್ರಸಿದ್ಧ ವಿದ್ವಾಂಸರು, ಸಾತ್ವಿಕರು ಆದ ಸಯ್ಯಿದ್ ಕುಂಞಿಕೋಯ ತಂಙಳವರಾಗಿದ್ದಾರೆ ಮಹಾನರ ತಂದೆ.

ತನ್ನ 20ನೇ ಪ್ರಾಯದಲ್ಲೇ ಆತ್ಮೀಯ ಚೈತನ್ಯ ಹುಡುಕಿಕೊಂಡು ಸ್ವದೇಶ ಬಿಟ್ಟ ಮಹಾನರು  ಸುದೀರ್ಘವಾದ ತೀರ್ಥ ಯಾತ್ರೆ ಕೈಗೊಂಡರು. ಆ ಯಾತ್ರೆಯಲ್ಲಿ ಹೆಚ್ಚಿನ ಭಾಗವು ವಿಶುದ್ಧ ನಗರಗಳಾದ ಮಕ್ಕ, ಮದೀನ, ಬೈತ್ತುಲ್ ಮುಖದ್ದಿಸ್, ಬಾಗ್ದಾದ್, ಉಮ್ಮು ಉಬೈದ, ಹಾಗೂ ಆಜ್ಮೀರ್ ಶರೀಫ್ ಎಂಬಿತ್ಯಾದಿ ಪುಣ್ಯ ಸ್ಥಳಗಳಲ್ಲಿ ಕಳೆದರು.

ನಂತರ ಕೇರಳಕ್ಕೆ ಮರಳಿದ ಮಹಾನರು ಕಾಸರಗೋಡ್ ಜಿಲ್ಲೆಯ ಕುಂಬಳೆಯ ಹತ್ತಿರ ಕುಂಬೋಳ್ ಸಯ್ಯಿದ್ ಉಮರ್ ಖಾಝಿಯವರ ಏಕ ಮಗಳನ್ನು ವಿವಾಹವಾದರು.
ಈ ದಾಂಪತ್ಯ ಜೀವನದಲ್ಲಿ
ಮಹಾನರಿಗೆ 6 ಹೆಣ್ಣು ಮಕ್ಕಳು, 2 ಗಂಡು ಮಕ್ಕಳು ಜನಿಸಿದರು.
ಹಿರಿಯ ಪುತ್ರರಾದ ಸಯ್ಯಿದ್ ಉಮರ್ ಕುಂಞಿಕೊಯ ತಂಙಳ್ ತಂದೆಯವರ ವಫಾತ್ತಿನ 6 ತಿಂಗಳು ನಂತರ ಇಹಲೋಕ ತ್ಯಜಿಸಿದರು.
ದ್ವಿತೀಯ ಪುತ್ರರು ಮರ್ಹೂಂ ಸಯ್ಯಿದ್ ಫಸಲ್ ಪೂಕೊಯ ತಂಙಳ್ (ಖ:ಸಿ)ರವರಾಗಿದ್ದಾರೆ.

ಬಹಳ ಶಾಂತ ಸ್ವಭಾವದ ವ್ಯಕ್ತಿತ್ವ ಹೊಂದಿದವರಾಗಿದ್ದ ಪಾಪ್ಪಮ್ ಕೋಯ ತಂಙಳ್(ಖ:ಸಿ) ರವರು. ಸಾಮಾನ್ಯ ಜನರೊಂದಿಗೆ ಆಗಿತ್ತು ಹೆಚ್ಚು ಒಡನಾಟ. ಬಡವರ ಸ್ವಂತ ತಂಙಳ್ ಎಂಬ ನೆಲೆಯಲ್ಲಿ ತಂಙಳರನ್ನು ಪಾಪ್ಪಂಕೋಯ ತಂಙಳೆಂದು (ಖ:ಸಿ) ಕರೆಯಲಾರಂಭಿಸಿದರು.

ಕಾಸರಗೋಡು ಭಾಷೆ ಶೈಲಿಯಲ್ಲಿ ಮಲಯಾಳದ "ಪಾವಂ" ಎಂಬುದು "ಪಾಪ್ಪಂ" ಎಂದಾಗಿ ಬದಲಾಯಿತು.
ಬಾಲ್ಯದಲ್ಲೇ ತಂದೆಯವರಿಂದಲೂ, ಶೈಖ್'ಗಳಿಂದಲೂ ಕಲಿತುಕೊಂಡ ಆರಾಧನಾ ಕ್ರಮಗಳನ್ನು ಜೀವನದಲ್ಲಿ ನಿರಂತರವಾಗಿ ಅಳವಡಿಸಿಕೊಂಡು ಮಹಾನರು ರಾತ್ರಿಯ ಸಮಯಗಳಲ್ಲಿ ಇಬಾದತ್ತಿನಲ್ಲಿ ತಲ್ಲೀನರಾಗುವುದು ರೂಢಿಯಾಗಿತ್ತು.

ನಿರ್ಜನ ಪ್ರದೇಶವಾಗಿದ್ದ "ಕುನ್ನಿಲ್" ಎಂಬ ಸ್ಥಳವನ್ನು ಮಹಾನರು ಇಬಾದತ್ತಿಗಾಗಿ ಆರಿಸಿದ್ದರು. ಮಹಾನರು ಇಬಾದತ್ತ್ ನಿರ್ವಹಿಸುತ್ತಿದ್ದ ಆ ಪ್ರದೇಶವಾಗಿದೆ ಇಂದಿನ "ಪಾಪ್ಪಂಕೋಯ ನಗರ್" ಪಾಪ್ಪಂಕೋಯ (ಖ:ಸಿ) ರವರು ತನ್ನ ಆತ್ಮೀಯ ಯಾತ್ರೆಯಲ್ಲಿ ಬಾಗ್ದಾದ್'ನಿಂದ ಖಾದಿರಿಯ್ಯ, ಉಮ್ಮು ಉಬೈದದಿಂದ ರಿಫಾಇಯ್ಯ, ಅಜ್ಮೀರ್'ನಿಂದ ಚಿಶ್'ತಿಯ್ಯ, ಮೊದಲಾದ ತ್ವರಿಖತ್ತುಗಳು ಹಾಗೂ ಆತ್ಮೀಯ ಜ್ಞಾನಗಳನ್ನು ಸಂಪಾದಿಸಿದರು.

ಮಹಾನರಿಗೆ ಹಲವಾರು ಶಿಷ್ಯಯಂದಿರುಗಳು ಇದ್ದರು. ಮಹಾನರಿಂದ ನೇರವಾಗಿ ತ್ವರೀಖತ್ತಿನ ಬೈಅತ್ತ್ ಮಾಡಿದ ಹಲವು ಪಂಡಿತರು ಅಭಿಮಾನದಿಂದ ಆ ವಿಷಯವನ್ನು ನೆನಪಿಸುತ್ತಿದ್ದರು.

ವಿಶ್ವದ ನಾನಾ ದಿಕ್ಕುಗಳಿಗೆ ಇಸ್ಲಾಂ ಧರ್ಮ ಪ್ರಚಾರಕ್ಕಾಗಿ ತೆರಳುತ್ತಿದ್ದ ಪಂಡಿತರುಗಳ ಕೇಂದ್ರವಾದ ಯೆಮೆನಿನ ಪೂರ್ವ ಪ್ರದೇಶವಾದ ಹಳರ್'ಮೌತ್ತಿನಿಂದ ಕೇರಳಕ್ಕೆ ಇಸ್ಲಾಂ ಪ್ರಬೋಧನೆಗಾಗಿ ಆಗಮಿಸಿದ ಪ್ರಮುಖರಲ್ಲಿ "ಹೈದರೂಸ್" ಕಬಿಲದ ಪ್ರಮುಖರಾಗಿದ್ದರು ಮಹಾನರು.

*'ಸುಮ್ಮ್'ನ*  ಇಜಾಸಿಯ್ಯತ್ತಿನಲ್ಲಿ ಪ್ರತ್ಯೇಕ ಸಿದ್ಧಿಗಳಿಸಿದ ಮಹಾನುಭಾವರು, ವಿಷಬಾಧೆ ತಗುಲಿದವರಿಗೆ ವಿಷ ಹೊರಗಡೆ ತೆಗೆಯುವುದರಲ್ಲಿ ಪ್ರಸಿದ್ದಿಗಳಿಸಿದವರಾಗಿದ್ದರು.
ಯಾವಾಗಲೂ ಮಹಾನರ ಕೈಯಲ್ಲಿ ಒಂದು ಬೆತ್ತ ಇರುತಿತ್ತು. ಮಹಾನರು ಆ ಬೆತ್ತವನ್ನು ಉಪಯೋಗಿಸಿ ವಿಷ ಬಾದೆಯನ್ನು, ದೊಡ್ಡ ರೋಗಗಳು  ತಗುಲಿದವರ  ಖಾಯಿಲೆಯನ್ನು ಗುಣಮುಖಗೊಳಿಸುತ್ತಿದ್ದರು. ಮಹಾನರು ಅನುಗ್ರಹಿಸಿ ಆಶಿರ್ವಾದಿಸಿದ ಹಲವಾರು ವ್ಯಕ್ತಿಗಳು ನಂತರದ ಕಾಲದಲ್ಲಿ ಉನ್ನತ ವಿದ್ವಾಂಸರಾಗಿ ಹೊರಹೊಮ್ಮಿದ್ದಾರೆ.
ಜೀವಿತ ಕಾಲದಲ್ಲಿ ಸಂಪೂರ್ಣವಾಗಿ ಇಬಾದತ್ತಿಗೂ, ಮನುಷ್ಯ ಸೇವೆಗೂ ತನ್ನ ಜೀವನವನ್ನೇ ಸಮರ್ಪಿಸಿದ ಮಹಾನರು ಹಿಜರಿ ವರ್ಷ 1353ರ ದುಲ್'ಹಜ್ಜ್ 23ಕ್ಕೆ ತನ್ನ 109ನೇ ವಯಸ್ಸಿನಲ್ಲಿ ಕುಂಬೋಳ್'ನಲ್ಲಿ ಅಲ್ಲಾಹನ ಸನ್ನಿದಿಗೆ ಯಾತ್ರೆಯಾದರು.
ಮಹಾನರ ಮಕ್ಬರದ ಪಕ್ಕದಲ್ಲೇ ಹಿರಿಯ ಮಗನ ಮಖ್ಬರವು ಇದೆ.
ಅಲ್ಲಾಹು ಅವರ ಬರ್ಕತ್ತಿನಿಂದ ನಮ್ಮ ಇಹಪರ ಜೀವನ ವಿಜಯಗೊಳಿಸಲಿ ಆಮೀನ್.

*ದಾರಿ:* ಕುಂಬಳೆ ಆರಿಕ್ಕಾಡಿಯ ಹತ್ತಿರ ಕುಂಬೋಳ್ ಜುಮಾ ಮಸ್ಜಿದ್'ನ ಅಂಗಣದಲ್ಲಾಗಿದೆ. ಮಕ್ಬರವಿರುವುದು.
ಅನುವಾದ:
✍ಗಫೂರ್ ಬಾಯಾರ್

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...