Skip to main content

ಮಕ್ಕಳಿಗೆ ಪರಾನುಭೂತಿ ಕಲಿಸುವುದು ಹೇಗೆ


KCF INC ಕೋಶಾಧಿಕಾರಿ ಹಾಜಿ ಶೈಖ್ ಬಾವಾರವರ ಇಂಗ್ಲೀಷ್ ಲೇಖನದಿಂದ ಭಾಷಾಂತರಿಸಲಾಗಿದೆ
ಭಾಗ-4
✍🏻Nizzu4ever👁
ಉರುವಾಲು ಪದವು
niznam4ever@gmail.com
ಮಕ್ಕಳಿಗೆ ಪರಾನುಭೂತಿ ಕಲಿಸುವುದು ಹೇಗೆ

*9.ಇತರರ ನೋವು ಮತ್ತು ಭಾವನೆಗಳನ್ನು ಮಕ್ಕಳೊಂದಿಗೆ ಹಂಚಿಕೊಳ್ಳಿ*
ನಿಮ್ಮ ಮಕ್ಕಳಿಗೆ ಪರಾನುಭೂತಿಯನ್ನು ಬೋಧಿಸುವ ಪರಿಣಾಮಕಾರಿ ವಿಧಾನಗಳಲ್ಲಿ ಒಂದಾಗಿದೆ ಅವರು ಇತರರ ನೋವಿನ ಅನುಭವಗಳನ್ನು ಅರ್ಥೈಸಿಕೊಳ್ಳುವುದು. ಉದಾಹರಣೆಗೆ ಅಮೀನ್ ಅರೋಗ್ಯ ಸರಿ ಇಲ್ಲ, ಅವನಿಗೆ ಈ ಔಷದಿ ಕೊಟ್ಟು ಸಹಾಯ ಮಾಡಿ ಬರ್ತಿಯಾ? ಝಿಯಾಳೊಂದಿಗೆ ಆಟವಾಡಲು ಯಾರು ಇಲ್ಲ ಅವಳು ತುಂಬಾ ದುಃಖಿತಳಾಗಿದ್ದಾಳೆ ನೀನು ಅವಳೊಂದಿಗೆ ಆಟವಾಡಿ ಸಮಾಧಾನ ಪಡಿಸುವೆಯಾ? ಈ ರೀತಿಯಾಗಿ ಸನ್ನಿವೇಶಗಳನ್ನು ಅರಿತು ಮಕ್ಕಳ ಮನಸ್ಸುಗಳನ್ನು ಸಂಪರ್ಕಿಸಿದರೆ ಅವರಿಂದ ಸಕಾರಾತ್ಮಕ ಫಲಿತಾಂಶಗಳನ್ನು ನಿರೀಕ್ಷೆ ಮಾಡಬಹುದು.
*10.ಮಕ್ಕಳೊಂದಿಗೆ ತಾಳ್ಮೆಯಿಂದ ವರ್ತಿಸುವುದನ್ನು ಕಲಿಯಿರಿ.*
ಪರಾನುಭೂತಿಯನ್ನು ಮಕ್ಕಳಿಗೆ ಕಲಿಸಿಕೊಡುವ ಸಂದರ್ಭಗಳಲ್ಲಿ ಮಕ್ಕಳು ಅದನ್ನು ಕರಗತ ಮಾಡಿಕೊಳ್ಳಲು ದೀರ್ಘ ಸಮಯ ಬೇಕಾಗುತ್ತದೆ. ಆ ಸಂದರ್ಭಗಳಲ್ಲಿ ಪೋಷಕರು ತಾಳ್ಮೆ ವಹಿಸಬೇಕು. ವಯಸ್ಕರು ಹದಿಹರೆಯದವರು ಪರಾನುಭೂತಿಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿರುವುದಿಲ್ಲ, ಆದ್ದರಿಂದ ಮಕ್ಕಳೊಂದಿಗೆ ತಾಳ್ಮೆಯಿಂದ ಇರಬೇಕು.
*11. ನಾವು ಮಾಡುವ ಪ್ರತಿಯೊಂದಕ್ಕೂ ಅರ್ಥವಿದೆ.*
ತಾಯಿಯು ಪ್ರತೀಯೊಂದು  ಗುಣಗಳನ್ನು ಮಕ್ಕಳಿಗೆ ಕಲಿಸಿಕೊಡಬೇಕು. ಉದಾಹರಣೆಗೆ; ಮಕ್ಕಳ ಸೌಂದರ್ಯದ ಬಗ್ಗೆ ತಿಳಿಸಿ ಈ ಸೌಂದರ್ಯವು ಹೊರಗಿನ ಗಲ್ಲಿಗಳಲ್ಲಿ ಪ್ರದರ್ಶಿಸಲು ಅಲ್ಲ, ಅನ್ಯ ಪುರುಷರು ನಿನ್ನ ಸೌಂದರ್ಯವನ್ನು ನೋಡದಂತೆ ನೀನು ಕಾಪಾಡಬೇಕು ಎಂದು ಎಚ್ಚರಿಕೆಯನ್ನು ನೀಡುತ್ತಿರಬೇಕು. ನಮ್ರತೆ, ಗೌರವ ಮತ್ತು ಲಜ್ಜಾಶೀಲತೆಯನ್ನು ಅವರಿಗೆ ಕಲಿಸಬೇಕು. ಕಾನೂನುಬದ್ಧ ಸುಸಂಕೃತ  ಬದುಕನ್ನು ಬಯಸುವ ಪೋಷಕರ ನಡುವೆ ಶುದ್ಧ ಮತ್ತು ಸಂತೋಷಕರ ಜೀವನವನ್ನು ಅಂತಿಮವಾಗಿ ನೆರವೇರಿಸುವವನು ಸೃಷ್ಟಿಕರ್ತನಾಗಿರುತ್ತಾನೆ. ಪರಸಹಿಷ್ಣುತೆಯ ಉದಾತ್ತವಾದ ಅರ್ಥ ಮತ್ತು ಮೌಲ್ಯವನ್ನು ತಿಳಿಸಿಕೊಡದೆ ಅಂತಹಾ ಆದೇಶಗಳನ್ನು ಮಕ್ಕಳು ಪಾಲಿಸಬೇಕೆಂದು ಇದ್ದಕ್ಕಿದ್ದಂತೆ ಆಜ್ಞಾಪಿಸೋದರಲ್ಲಿ ಏನು ಸಹಕಾರಿಯಾಗಲಾರದು. ಪೋಷಕರು ಯಾವುದೇ ಸೂಚನೆಗಳನ್ನು ಆಜ್ಞೆಗಳನ್ನು ನೀಡುವಾಗ ಅದರ ಬಗ್ಗೆ ಇರುವ  ಅನಾಹುತಗಳನ್ನು ಸರಿಯಾದ ರೀತಿಯಲ್ಲಿ ತಿಳಿಸಿಕೊಡಬೇಕು. ದೈಹಿಕವಾಗಿ ಮಕ್ಕಳ ತಪ್ಪುಗಳನ್ನು ಸರಿಪಡಿಸಿಕೊಂಡು ಹೋಗುವುದಕ್ಕಿಂತ ನೆನಪಿನಲ್ಲಿ ಅಳಿಯದೆ ಉಳಿಯುವ ರೀತಿಯಲ್ಲಿ ಪ್ರಾಯೋಗಿಕವಾಗಿ ಸರಿಪಡಿಸುವುದು ಉತ್ತಮವೆನಿಸುತ್ತದೆ.
ಮುಗಿಯಿತು.....

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...