Skip to main content

ತಾಯಿ

ತಾಯಿ

ಶಾಲೆಯಿಂದ ಮರಳಿ ಬಂದ ಮಗುವಿನಲ್ಲಿ ತಾಯಿ ವಿಚಾರಿಸಿದರು  :  ಯಾಕೆ ಮಗು ಹಿಂತಿರುಗಿ ಬಂದದ್ದೆಂದು

ಆಗ ಮಗ ಟೀಚರ್ ಕೊಟ್ಟ ಕಾಗದವನ್ನು ತಾಯಿಯ ಕೈಗೆ ನೀಡುತ್ತಾನೆ.

ತಾಯಿ ಪತ್ರ ಓದುತ್ತಾ ಕಣ್ಣಿನಿಂದ ಅಶ್ರುಧಾರೆ ಹರಿಯಿತು..

ಮಗ : ಯಾಕಮ್ಮಾ ಏನಾಯಿತು?
ಯಾಕೆ‌ ಅಳುತಿದ್ದೀ ?

ತಾಯಿ: ಇಲ್ಲಮ್ಮಾ ಏನಿಲ್ಲ, ಟೀಚರ್ ಹೇಳುವುದೇನೆಂದರೆ ನಿಮ್ಮ ಮಗು ಒಳ್ಳೆಯ ಚುರುಕಾಗಿದ್ದಾನೆ. ಎಲ್ಲದರಲ್ಲೂ ಮುಂದು, ಕಲಿಕೆಯಲ್ಲಿ ಎತ್ತಿದ ಕೈ ,ಅವನಿಗೆ ಶಾಲೆಯ ಅಗತ್ಯ ಕಾಣುವುದಿಲ್ಲ,ಎಂದು

ಇದನ್ನು ಕೇಳಿದ ‌ಮಗು ಖುಷಿಯಿಂದ, ಹೆಮ್ಮೆಯಿಂದ ತಾಯಿಯ ಕಡೆಗೆ ನೋಡಿದನು.
ತಾಯಿಯು ಇವನ ಸಂತೋಷ ನೋಡಿ ನಗಾಡಿದಳು..

ಹೀಗೆ ವರ್ಷ ಉರುಳಿತು..

ತಾಯಿ‌ ಇಹಲೋಕ ತ್ಯಜಿಸಿದಳು.

ಹುಡುಗ ದೊಡ್ಡವನಾದ,ಒಳ್ಳೆಯ ಕಲಿಕೆಯ ಮೂಲಕ ಉತ್ತುಂಗಕ್ಕೆ  ಏರಿದನು..

ಅವನೊಬ್ಬ ಪ್ರಖ್ಯಾತ ವಿಜ್ಞಾನಿ ಯಾದನು..

ಹೀಗಿರುವಾಗ ಒಂದು ದಿನ ತಾಯಿಯ ನೆನಪು ಅವನಿಗೆ ‌ಕಾಡಿತು,ಹಾಗೆ ಅವನು‌ ತಾಯಿಯ ಹಳೆಯ ಪೆಟ್ಟಿಗೆ ತೆರದು ನೋಡುತಿದ್ದನು, ಇವನ ಆಟಿಕೆ ಸಾಮಾಗ್ರಿಗಳು ,ಅದರ ಜೊತೆ ಇವನಿಗೆ ಪತ್ರ ಸಿಕ್ಕಿತು..

ವರ್ಷಗಳ ಹಿಂದೆ ಇವನ ತಾಯಿಗೆ  ಇವನ ಮೂಲಕ ಟೀಚರ್ ಕಳುಹಿಸಿದ ಅದೇ ಪತ್ರ..

ಅವನು ತೆರೆದು ನೋಡಿದ

ಅದರಲ್ಲಿ ಹೀಗಿತ್ತು....

ನೀವು ನಿಮ್ಮ ಮಗನನ್ನು ಇನ್ನು ಶಾಲೆಗೆ ಕಳುಹಿಸಬೇಡಿ..

ನಿಮ್ಮ ಮಗು ಬುಧ್ದಿಮಾಂದ್ಯನಾದ ಕಾರಣ ಅವನು ಕಲಿಯಲು ಅನರ್ಹನಾಗಿದ್ದಾನೆ...

ಅವನು‌ ಶಾಲೆಗೆ ಬಂದರೆ  ಒಳ್ಳೆಯ ರೀತಿಯಲ್ಲಿ ಕಲಿಯುವ ಉಳಿದ ಮಕ್ಕಳಿಗೆ ತೊಂದರೆಯಾಗುತ್ತದೆ..

ಇದು ಓದಿದಾಗ ಕಣ್ಣೀರಿನ ಹೊಳೆ ಹರಿಯಿತು ಇವನ ಕಣ್ಣಿನಿಂದ ಹರಿಯಿತು..

ಆವತ್ತು ತಾಯಿ ಹೇಳಿದ್ದು ಸುಳ್ಳು ಹೇಳಿದ್ದು ಇವನಿಗೆ ಮನವರಿಕೆಯಾಗಿತ್ತು..

ಇವನ ಮನಸ್ಸು ನೋವಾಗದಿರಲಿ ಎಂಬ ಕಾರಣದಿಂದ ತಾಯಿ ಈ ರೀತಿ ಹೇಳಿದ್ದರು..

➖➖➖➖➖➖➖

ನೀತಿ ಪಾಠ :-

ಪ್ರತಿಯೊಬ್ಬರೂ ಯಾವುದಾದರೂ ಒಂದು ವಿಷಯದಲ್ಲಿ ಪ್ರತಿಭೆ ಸಾಧಿಸುವವರಾಗಿದ್ದಾರೆ..

ಪ್ರತಿ ಮಕ್ಕಳಲ್ಲಿ ಪ್ರತಿಭೆಗಳಿವೆ.

ಅದನ್ನು ನಾವು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುವ ಬದಲು  ಅವರ ಹೃದಯದಲ್ಲಿ ಮೊಳಕೆಯೊಡೆಯುವ ಪ್ರತಿಭೆಯನ್ನು ಚಿವುಟಿ ಬಿಡಬೇಡಿ. ಅದಕ್ಕೆ ಬೇಕಾದ ಪ್ರೋತ್ಸಾಹ ವನ್ನು ನೀಡಿದರೆ ಅವರು ಭವಿಷ್ಯದಲ್ಲಿ ಒಳ್ಳೆಯ ಯಶಸ್ಸು ಸಾಧಿಸಬಹುದು..

ಸಮೀರಾ ಬಿಂತ್ ಅಹ್ಮದ್ ✍🌹

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...