Skip to main content

ಲೈಲತುಲ್ ಖದರ್ ದಿನದಂದು ಏನು ಮಾಡಬೇಕು

ಲೈಲತುಲ್ ಖದರ್ ದಿನದಂದು ಏನು ಮಾಡಬೇಕು

✍🏽 *ರಜಬ್ ನಾವುಂದ(ಜ್ಞಾನದಾಹಿ)*

```{ ಸೂಚನೆ:- ಇದರಲ್ಲಿ ಲೈಲತುಲ್ ಖದರ್ ದಿನದಂದು ಏನು ಮಾಡಬೇಕು. ಮತ್ತು ಆ ದಿನದ ಮಹತ್ವ ಮತ್ತು ಆ ದಿನದ ಪ್ರತಿಫಲ ಲಭಿಸದೆ ಇರುವರ್ಯಾರು ಈ 3 ರ ಬಗ್ಗೆ ತಿಳಿಸಲಾಗಿದೆ. ಅದರ ಮಹತ್ವದ ಬಗ್ಗೆ ತಿಳಿದವರು ಆ ದಿನದಂದು ತನ್ನ ಇಬಾದತ್ತಿನ ಮೂಲಕ ಸಜೀವಗೊಳಿಸದೆ ಇರಲಾರ. }```

_ಸಾವಿರ ಮಾಸಗಳ ಕಾಲ ಆರಾಧಿಸಿದರೂ ದೊರೆಯದ ಹೇರಳ ಪುಣ್ಯವನ್ನು ಒಂದೇ ಒಂದು ರಾತ್ರಿಯ ಆರಾಧನೆಯ ಮೂಲಕ ಬಾಚಿ ಕೊಳ್ಳಬೇಕಾದರೆ ಆ ರಾತ್ರಿಯನ್ನು ಪ್ರತ್ಯೇಕವಾಗಿ ಪರಿಗಣಿಸಬೇಕಾದುದ್ದೇ. ನೆಬಿ ( ﷺ ), ಸ್ವಹಾಬಿಗಳು, ತಾಬಿಅಗಳು, ನಂತರದ ಮಹಾತ್ಮರುಗಳು ರಮಳಾನಿನ ಹಗಲು-ರಾತ್ರಿಗಳನ್ನು ಸತ್ಕರ್ಮಗಳಿಂದ ಜೀವಂತಗೋಳಿಸಿದ್ದಾರೆಂಬುವುದನ್ನು ಚರಿತ್ರೆಯು ನಮ್ಮೊಂದಿಗೆ ಸಾರಿ ಹೇಳುತ್ತದೆ._

_ಆಯಿಷಾ ( ರ.ಅ )ರಿಂದ ವರದಿಯಾದ ಹದೀಸೊಂದರಲ್ಲಿ ಹೀಗಿದೆ. ಆಯಿಷಾ ( ರ.ಅ ) ಹೇಳುತ್ತಾರೆ, *"ನಾನು ಲೈಲತುಲ್ ಖದರ್ ನಂದು ಏನು ಹೇಳಬೇಕೆಂದು ಪ್ರವಾದಿ ( ﷺ )ರವರೊಂದಿಗೆ ಕೇಳಿದೆ." ಆಗ ಪ್ರವಾದಿ ( ﷺ )ರವರು ಹೇಳಿದರು "ಆಯಿಷಾ... ನೀನು*_
*اَللَّهُمَّ إِنَّكَ عَفُوٌّ تُحِبُّ الْعَفُوَ فَاعْفُ عَنِّي*
*{ ಅಲ್ಲಾಹುಮ್ಮ ಇನ್ನಕ ಅಫ್ಫುವ್ವುನ್ ತುಹಿಬ್ಬುಲ್ ಅಫ್ವ ಫಅಫು ಅನ್ನೀ } ಎಂಬ ಝೀಕ್ರನ್ನು ಹೇಳು."* _ಈ ದುವಾವನ್ನು ಹೆಚ್ಚಿಸಲು, ಖುರ್ ಆನ್ ಪಾರಾಯಣ ಗೈಯ್ಯಲು ಇತರ ಝಿಕ್ರಗಳನ್ನು ತಲ್ಲೀನವಾಗಲು ಸುನ್ನತ್ತಾಗಿದೆಯೆಂದು ಶಾಫಿಈ ಇಮಾಮರ ಅಸ್ಹಾಬ್ ಹೇಳಿದ್ದಾರೆ._

_ಇಮಾಂ ಶಾಫಿಈ ( ರ.ಅ ) ರವರು ಹೇಳುತ್ತಾರೆ. *"ಆ ರಾತ್ರಿಯಲ್ಲಿ ನಿಮಗೆ ಎಷ್ಟು ಪರಿಶ್ರಮ ಪಡಲು ಸಾಧ್ಯವೋ ಅದರ ಹಗಲಿನಲ್ಲಿಯೂ ಸಹಾ ಅದೇ ರೀತಿ ಪರಿಶ್ರಮ ಪಡಬೇಕು.  ಮುಸ್ಲಿಮರು ಮುಖ್ಯವಾದ ವಿಷಯದಲ್ಲಿ ದುವಾ ನಡೆಸಬೇಕು. ಇದು ಸಜ್ಜನರ ರೂಢಿಯಾಗಿದೆ"*_ { ಅದ್ಸ್ ಕಾರ್ -173 }

👇 👇🏻 👇🏼 👇🏽 👇🏾 👇🏿

*' ಲೈಲತುಲ್ ಖದರ್ 'ನ ಮಹತ್ವ*

_ನಬಿ( ﷺ ) ಹೇಳಿದರು:-_
         *"ಯಾರಾದರೂ ಲೈಲತುಲ್ ಖದರ್ ದಿನದಂದು ವಿಶ್ವಾಸದೊಂದಿಗೆ ಪುಣ್ಯಾಪೇಕ್ಷೆಯೊಂದಿಗೆ ನಮಾಝ್ ನಿರ್ವಹಿಸಿದರೆ ಅವರ ಸಕಲ ಪಾಪಗಳನ್ನು ಮನ್ನಿಸಲ್ಪಡುವುದು."*
{ ಇರ್ಶಾದುಲ್ ಇಬಾದ್ -72 }

_ಆಯಿಷಾ ( ರ ) ಹೇಳಿದರು:-_
         *"ಯಾರಾದರೂ ಲೈಲತುಲ್ ಖದರ್ ದಿನವನ್ನು ಸಜೀವಗೊಳಿಸಿದರೆ, ಆ ರಾತ್ರಿಯಲ್ಲಿ ಎರಡು ರಕಾತ್ ನಮಾಝ್ ನಿರ್ವಹಿಸಿ ತನ್ನ ಗತಕಾಲದ ಪಾಪಗಳಿಂದ ಪಶ್ಚಾತ್ತಾಪಪಟ್ಟರೆ ಅಲ್ಲಾಹನ ಅನುಗ್ರಹದಲ್ಲಿ ಅವರು ಮುಳುಗಿಹೋಗುವರು. ಮತ್ತು ಜಿಬ್ರೀಲ್( ಅ ) ರವರು ತನ್ನ ರೆಕ್ಕೆಯಿಂದ ಅವರನ್ನು ಸವರುವರು. ಹಾಗೇನಾದರೂ ಸವರಿದರೆ ಖಂಡಿತವಾಗಿಯೂ ಅವರು ಸ್ವರ್ಗಕ್ಕೆ ಪ್ರವೇಶಿಸುತ್ತಾರೆ."*
{ ಮುಕಾಶಫತುಲ್ ಖುಲೂಬ್ 418 }

👇 👇🏻 👇🏼 👇🏽 👇🏾 👇🏿

*4⃣ ವಿಭಾಗದವರಿಗೆ ಲೈಲತುಲ್ ಖದರ್ ನ ಪವಿತ್ರತೆ ಲಭಿಸುವುದಿಲ್ಲ.*

1⃣. *ಮಧ್ಯಪಾನ ಸೇವಿಸುವವನು.*

2⃣. *ತಾಯಿ ತಂದೆಯರನ್ನು ತೊಂದರೆಯಾಗಿಸುವವನು.*

3⃣. *ವಿಶ್ವಾಸಿಗಳಾದ ಸಹೋದರರೊಂದಿಗೆ ಕೋಪಿಸಿರುವವನು.*

4⃣. *ಕುಟುಂಬ ಸಂಬಂಧ ಮುರಿಯುವವನು.*

_ಅಲ್ಲಾಹನು ನಮಗೆಲ್ಲರಿಗೂ ಲೈಲತುಲ್ ಖದರ್ ದಿನದಂದು ಆರಾಧನೆಯಲ್ಲಿ ಸಕ್ರೀಯವಾಗಲು ತೌಫೀಕ್ ನೀಡಲಿ._

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...