Skip to main content

ಬದ್ರ್ ಯುದ್ದ

ಬದ್ರ್ ಯುದ್ಧ

✍🏾ಗಫೂರ್ ಬಾಯಾರ್.

ಬದ್ರ್ ಎಲ್ಲಿ ನೆಲೆಗೊಂಡಿದೆ❓

👉�ಮದೀನದಿಂದ 135 ಕಿ.ಮೀಟರ್, ಮಕ್ಕದಿಂದ  345 ಕಿ.ಮೀಟರ್ ದೂರದಲ್ಲಿದೆ.

ಆ ಸ್ಥಳಕ್ಕೆ ಬದ್ರ್ ಎಂಬ ಹೆಸರು ಬರಲು ಕಾರಣ❓

👉�ಬದ್ರ್ ಬಿನ್ ಯಕ್ಲದ್ ಎಂಬವರು ವಾಸ ಮಾಡಿರುವುದರಿಂದಾಗಿದೆ.

ಒಂದನೇ ಬದ್ರ್ ಎಂದು ಚರಿತ್ರೆಗಾರರು ಉಲ್ಲೇಖಿಸಿದ ಘಟನೆ ಯಾವುದು❓

👉�ಕುರ್ಸ್ ಬಿನು ಜಾಬಿರ್ ಅಲ್ ಫಿಹ್ರಿ ಎಂಬವರು ಮದೀನಾದವರ ಜಾನುವಾರುಗಳನ್ನು ಕಳ್ಳತನ ಮಾಡಿದ್ದನ್ನು ವಿಚಾರಿಸಲು ನಬಿ ﷺ  ರವರು ಹಾಗೂ ಕೆಲವು ಅನುಯಾಯಿಗಳು ಬದ್ರ್ ಗೆ ಹೋದರೂ ಫಿಹ್ರಿನನ್ನು ಕಾಣದೆ ಹಿಂದಿರುಗಿ ಬಂದ ಘಟನೆಯಾಗಿದೆ.

ಬದ್ರ್ ನಲ್ಲಿ ಯುದ್ಧ ನಡೆದದ್ದು ಯಾವಾಗ❓

👉�ಹಿಜರಿ 2ನೇ ರಮಳಾನ್ 17ಕ್ಕೆ ಆಗಿದೆ.

ಮುಸ್ಲಿಂ ಸಂಘಬಲ ಎಷ್ಟು❓

👉�313 ಜನರು.

ಶತ್ರು ಸೈನ್ಯ ಬಲ ಎಷ್ಟು❓

👉� ಸಾವಿರದಷ್ಟು ಜನರು.

ಬದ್ರ್ ಗೆ ಹೊರಡುವಾಗ ಮುಸ್ಲಿಂಗಳ ಗುರಿ ಏನಾಗಿತ್ತು❓

👉�ಶಾಮಿನಿಂದ ಬರುವ ಅಬೂ
ಸುಫ್ಯಾನ್ ನ ವ್ಯಾಪಾರ ಸಂಘವನ್ನು ಎದುರಿಸುವುದಾಗಿದೆ.

ಮುಸ್ಲಿಂಗಳ ವಾಹನ ಎಷ್ಟು❓

👉�70 ಒಂಟೆಗಳು.

ನಬಿ ﷺ ರವರೊಂದಿಗೆ ಒಂಟೆಯ ಮೇಲೆ ಸಹ ಯಾತ್ರಿಕರು ಯಾರಾಗಿದ್ದರು❓

👉� ಅಲಿ (ರ) ಮತ್ತು ಮಾರ್ಸದ್ ಬಿನ್ ಮಾರ್ಸದ್ (ರ) ಆಗಿದ್ದರು.

ವ್ಯಾಪಾರ ಸಂಘವನ್ನು ಮುಸ್ಲಿಂಗಳಿಂದ ರಕ್ಷಿಸಬೇಕೆಂದು ತಿಳಿಸಲು ಅಬೂ ಸುಫ್ಯಾನ್ ಮಕ್ಕಾಗೆ ಕಳುಹಿಸಿದ್ದು ಯಾರನ್ನು❓

👉�ಲಂಳಮು ಇಬ್ನು ಅಂರಿಲ್ ಗಿಫಾರಿಯನ್ನು

ವ್ಯಾಪಾರ ಸಂಘ ಪಾರಾದ
ವಿಷಯ ತಿಳಿದಾಗ ಖುರೈಷಿ ಪಕ್ಷದಿಂದ ಒಂದು ಸಂಘ ಹಿಂದಿರುಗಿ ಹೋದವರು ಯಾರು❓

👉�ಅಖ್ನಸು ಇಬ್ನು ಶರಿಖಿನ ನೇತೃತ್ವದಲ್ಲಿನ ಸಹ್ರಾ ಗೋತ್ರದವರು.

ಮುಸ್ಲಿಂಗಳ ಜಲಸಂಭರಣಿ ಹೊಡೆಯಲು ಬಂದರು ಯಾರು❓

👉�ಅಸ್ವದ್ ಬಿನ್ ಅಬ್ದುಲ್ ಅಸದ್.

ಅಸ್ವದ್ ನನ್ನು ವಧಿಸಿದ್ದು ಯಾರು❓

👉�ಹಜ್ರತ್ ಹಂಝ (ರ)ರವರು.

ಖುರೈಷಿ ಮುಖಂಡನಾದ ಅಬೂ ಜಹ್ಲನನ್ನು ಕೊಂದದ್ದು ಯಾರು❓

👉�ಮುಹಾದ್ ಇಬ್ನು ಅಂರ್ (ರ), ಮುಹವ್ವಿದ್ ಇಬ್ನು ಅಫ್ರಾಹ್ ಎಂಬ 2 ಮಕ್ಕಳು.

ಖುರೈಷಿ ಪ್ರಮುಖನಾದ ಉಮಯ್ಯತ್ ನನ್ನು ಹತ್ಯೆ ಮಾಡಿದ್ದು ಯಾರು❓

👉�ಮೊದಲು ತನ್ನ ಅಡಿಯಾಲಾಗಿದ್ದ ಬಿಲಾಲ್ (ರ)ರವರು.

ಬದ್ರ್ ನಲ್ಲಿ ಪಿಶಾಚಿ ಯಾರ ವೇಷದಲ್ಲಿ ಬಂದದ್ದು❓

👉� ಕಿನಾನ ಗೋತ್ರ ಪ್ರಮುಖನಾದ ಸುರಾಖತು ಇಬ್ನು ಮಾಲಿಕಿನ ವೇಷದಲ್ಲಾಗಿದೆ.

ಬದ್ರ್ ಗೆ ನಬಿ ﷺ ರವರು ಹೊರಟದ್ದು ಯಾವಾಗ❓

👉�ರಮಳಾನ್ 12ನೇ ಶನಿವಾರ.

ಮದೀನದಲ್ಲಿ ನಮಾಜಿಗೆ ನೇತೃತ್ವ ಕೊಡಲು ನಬಿ ﷺ ರವರು ನೇಮಿಸಿದ್ದು ಯಾರನ್ನು❓

👉�ಅಬ್ದುಲ್ಲಾಹಿ ಇಬ್ನು ಉಮ್ಮಿ ಮಕ್ತುಮ್ (ರ) ರವರನ್ನಾಗಿದೆ.

ಮದೀನಾದ ಆಡಳಿತ ನೇತೃತ್ವವನ್ನು ನೀಡಿದ್ದು ಯಾರಿಗೆ❓

👉�ರೌಹಾಇನ್ ನಿಂದ  ಹಿಂದಿರುಗಿಸಿದ ಅಬೂ ಲುಬಾಬ (ರ)ರವರನ್ನು.

16 ವಯಸ್ಸಿನವರಾದ ಒಬ್ಬರನ್ನು ನಬಿ ﷺ ರವರು ಯುದ್ಧ ಭೂಮಿಯಿಂದ ಹಿಂದಿರುಗಲು ಹೇಳಿದಾಗ ಅವರು ಅತ್ತರು. ಆಗ ನಬಿ ﷺ ರವರು ಅವರಿಗೆ ಯುದ್ಧದಲ್ಲಿ ಭಾಗವಹಿಸಲು ಅನುಮತಿ ಕೊಟ್ಟರು. ಅವರು ಬದ್ರ್ ಯುದ್ಧದಲ್ಲಿ ರಕ್ತಸಾಕ್ಷಿ ಕೂಡ ಆದರು.
ಯಾರು ಆ ವ್ಯಕ್ತಿ❓

👉�ಉಮೈರು ಇಬ್ನು ಅಬಿ ವಖಾಸ್ (ರ)ರವರು.

ಕಾವಲುಪಡೆಯ ನೇತಾರನ್ನಾಗಿ
ನೇಮಿಸಿದು ಯಾರನ್ನು❓

👉�ಖೈಸು ಇಬ್ನು ಅಬಿ ಸಹ್ ಸಹ (ರ)ರವರನ್ನಾಗಿದೆ.

ವ್ಯಾಪಾರಸಂಘದವರು ಪಾರಾಗಿದ್ದಾರೆಂದು ತಿಳಿದ ಅಬೂ ಸುಫ್ಯಾನ್, ಖುರೈಷಿಯವರತ್ತಿರ ಮರಳಿ ಹೋಗಲು ಆಜ್ಞಾಪಿಸಲು ಯಾರ ಹತ್ತಿರ ಹೇಳಿ ಕಳುಹಿಸಿದು❓

👉�ಖೈಸು ಇಬ್ನು ಇಂರಿಲ್ ಖೈಸ್ ನನ್ನು.

ಬದ್ರ್ ನಲ್ಲಿ ಭಾಗವಹಿಸದೆ ಬದ್ರ್ ಶುಹಾದ ಆದವರಾಗಿದ್ದಾರೆ ಉಸ್ಮಾನ್ (ರ) ರವರು.
ಕಾರಣ ಏನು❓

👉�ತನ್ನ ಮಡದಿಯು, ಪವಿತ್ರ ನಬಿ ﷺ ರವರ ಮಗಳು ಆದ ರುಖಿಯ್ಯ (ರ) ರವರು ಬದ್ರ್ ಯುದ್ಧ ಸಮಯದಲ್ಲಿ ರೋಗಶಯ್ಯೆಯಲ್ಲಿ ಇದ್ದರಿಂದ್ದ
ಶುಶ್ರೂಷಸೆಗೆ ಪವಿತ್ರ ನಬಿ ﷺ ರವರು ಉಸ್ಮಾನ್ (ರ)ರವರಿಗೆ ಅನುಮತಿ ಕೊಟ್ಟಿದ್ದರು.

ಬದ್ರ್ ನಲ್ಲಿ ಮುಸ್ಲಿಂ ಪಕ್ಷದ ಪತಾಕೆ ವಾಹಕರು ಯಾರು❓

👉�ಮುಸ್ವಹಬ್ ಇಬ್ನು ಉಮೈರ್ (ರ) ರವರಾಗಿದ್ದರು.

ಸೈನ್ಯದ ಎರಡು ಭಾಗದಲ್ಲಿಯೂ ಕಪ್ಪು ಬಣ್ಣದ ಒಂದೊಂದು ಪತಾಕೆ ಇತ್ತು. ಅದರ ವಾಹಕರು ಯಾರು❓

👉�ಅಲಿ (ರ) ರವರು ಮತ್ತು ಓರ್ವ ಅನ್ಸ್ವಾರಿಯಾಗಿದ್ದರು.

ಬದ್ರ್ ನ ಪ್ರಥಮ ಮುಸ್ಲಿಂ ಶಹೀದ್ ಯಾರು❓

👉�ಉಮರ್ (ರ) ರವರ ಅಡಿಯಾಳು ಆಗಿದ್ದ ಮಿಹ್ಜಹ್ (ರ) ರವರಾಗಿದ್ದರೆ.
🎀🎀🎀🎀🎀🎀🎀
✍🏾 ಗಫೂರ್ ಬಾಯಾರ್.

*اَشْهَدُ اَن لَاإِلَهَ اِلَّاالله أَسْتَغْفِرُ الله أَسْئَلُكَ الجنة واعوذ بك من النار.*

*اللهم اغفرلى ذنوبى يارب العالمين*
🌺🌺🌺🌺🌺🌺🌺

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...