Skip to main content

ಸೌರ್ ಗುಹೆ

 ಸೌರ್ ಗುಹೆ (ಘಾರ್ ಸೌರ್):

ಮಕ್ಕಾದಲ್ಲಿ ಕುರೈಶಿಗಳ ಉಪಟಳ ವಿಪರೀತಗೊಂಡಾಗ ಅಲ್ಲಾಹನ ಆಜ್ಞೆಯಂತೆ ಪ್ರವಾದಿ ​ﷺ​ ರವರು ಮದೀನಾಕ್ಕೆ ಹಿಜ್'ರಾ ಹೋಗಲು ಸನ್ನದ್ಧರಾದರು.ಜೊತೆಯಲ್ಲಿ ಅಬೂಬಕ್ಕರ್ ರದಿಯಲ್ಲಾಹು ಅನ್ಹು ರವರೂ ಇದ್ದಾರೆ. ಸಾಗುತ್ತಾ ಹೋದಂತೆ ದಾರಿ ಮಧ್ಯೆ ಅವರಿಗೆ ​ಸೌರ್​ ಗುಹೆ ಸಿಗುತ್ತದೆ. ತಂಗಲು ಇದೇ ಸೂಕ್ತ ಸ್ಥಳವೆಂದು ತೀರ್ಮಾನಿಸಿದ ಅವರು ಆ ಗುಹೆಯ ಒಳ ಪ್ರವೇಶಿಸಲು ಅಣಿಯಾದರು.ಆಗ ಅಬೂಬಕ್ಕರ್ ರದಿಯಲ್ಲಾಹು ಅನ್ಹು ರವರು ತಡೆಯುತ್ತಾ, "ಪ್ರವಾದಿ ​ﷺ​ ರವರೇ, ಮೊದಲು ನಾನು ಒಳಗೆ ಪ್ರವೇಶಿಸಿ ಏನಾದರೂ ವಿಷಜಂತುಗಳು ಇದೆಯಾ ಎಂದು ನೋಡಿ ಬರುತ್ತೇನೆ" ಎಂದರು.

ಒಳಗೆ ಪ್ರವೇಶಿಸಿದ ಅಬೂಬಕ್ಕರ್ ರದಿಯಲ್ಲಾಹು ಅನ್ಹು ರವರು ಅಲ್ಲಿದ್ದ ಕಸಕಡ್ಡಿಗಳನ್ನು ತೆಗೆದು ಶುಚಿಗೊಳಿಸಿದರು.ತರುವಾಯ ಪ್ರವಾದಿ ​ﷺ​ ರವರನ್ನು ಒಳಗೆ ಕರೆದರು. ಗುಹೆಯೊಳಗೆ ಹಲವು ದ್ವಾರಗಳಿದ್ದವು.ಅವುಗಳನ್ನು ಅಬೂಬಕ್ಕರ್ ರದಿಯಲ್ಲಾಹು ಅನ್ಹುರವರು ವಸ್ತ್ರದ ತುಂಡುಗಳಿಂದಲೂ ಇತರ ವಸ್ತ್ರಗಳಿಂದಲೂ ಮುಚ್ಚಿದರು.ಇದೀಗ ಒಂದು ದ್ವಾರ ಮಾತ್ರವೇ ಬಾಕಿ ಉಳಿದಿತ್ತು.ಸಿದ್ದೀಕ್ ರದಿಯಲ್ಲಾಹು ಅನ್ಹುರವರು ಅದನ್ನು ತಮ್ಮ ಕಾಲಿನಿಂದ ಮುಚ್ಚಿದರು.ಅದೇ ದ್ವಾರದಲ್ಲಿ ವಿಷವೇರಿದ ಸರ್ಪವೊಂದಿತ್ತು.ಅದು ಸಿದ್ದೀಕ್ ರದಿಯಲ್ಲಾಹು ಅನ್ಹುರವರ ಕಾಲಿಗೆ ಕಚ್ಚಿಬಿಟ್ಟಿತು.ಅಸಹನೀಯ ನೋವು! ಸಿದ್ದೀಕ್ ರದಿಯಲ್ಲಾಹು ಅನ್ಹುರವರು ನೋವು ತಾಳಲಾರದೆ ಕಣ್ಣೀರಿಟ್ಟರು.

ಅವರ ಮಡಿಲಲ್ಲಿ ಪ್ರವಾದಿ ​ﷺ​ ರವರು ಮಲಗಿ ನಿದ್ರಿಸುತ್ತಿದ್ದರು. ಸಿದ್ದೀಕ್ ರದಿಯಲ್ಲಾಹು ಅನ್ಹು'ರವರ ಕಣ್ಣಿನಿಂದ ಜಾರಿ ಬಿದ್ದ ಅಶ್ರು ಬಿಂದುಗಳು ಪ್ರವಾದಿ ​ﷺ​ ರವರ ಪವಿತ್ರ ಮುಖದ ಮೇಲೆ ಬಿತ್ತು. ಕಣ್ತೆರೆದು ನೋಡಿದಾಗ ಸಿದ್ದೀಕ್ ರದಿಯಲ್ಲಾಹು ಅನ್ಹು'ರವರ ಕಣ್ಣಲ್ಲಿ ನೀರು! ಯಾಕೆ ಅಳುತ್ತಿದ್ದೀರಿ? ಎಂದು ಪ್ರವಾದಿ ​ﷺ​ ರವರು ಕೇಳಿದಾಗ ನಡೆದ ಘಟನೆಯನ್ನು ವಿವರಿಸಿದರು.ತಕ್ಷಣವೇ ಪ್ರವಾದಿ ​ﷺ​ ರವರು ತಮ್ಮ ಪವಿತ್ರ ಉಗುಳನ್ನು ತೆಗೆದು ಕಾಲಿಗೆ ಸವರಿದಾಗ ನೋವು ಮಾಯವಾಯಿತು! ಅಷ್ಟಕ್ಕೂ ಆ ಹಾವು ಕಾಲನ್ನು ಕಚ್ಚಿದ್ದೇಕೆ ಗೊತ್ತೇ? ಗುಹೆಯೊಳಗಿದ್ದ ಪುಣ್ಯ ಪ್ರವಾದಿ ​ﷺ​ ರವರ ಪುಣ್ಯ ಮುಖಾರವಿಂದವನ್ನೊಮ್ಮೆ ನೋಡಬೇಕೆಂಬ ಅದಮ್ಯ ಆಸೆಯಿಂದ.

"ನಾನು ಬಹಳಷ್ಟು ದಿನಗಳಿಂದ ಆ ಪುಣ್ಯ ಪ್ರವಾದಿ ​ﷺ​ ರವರನ್ನು ನೋಡಬೇಕೆಂಬ ಆಸೆ ಹೊತ್ತಿದ್ದೇನೆ.ಆದರೆ ಇಂದು ನನ್ನ ಆಸೆ ಈಡೇರಿಸಬೇಕೆನ್ನುವಾಗ ನಿಮ್ಮ ಕಾಲು ಅದಕ್ಕೆ ತಡೆಯಾಯಿತು.ಅದಕ್ಕೆ ಕಚ್ಚಿ ಬಿಟ್ಟೆ." ಎನ್ನುತ್ತದೆ ಆ ಹಾವು.

✍ ​​PM​​ ​​ಪಾಲ್ತಾಡು

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...