Skip to main content

ನೀವು ಇಹಕ್ಕಾಗಿ ಬದುಕಬಾರದು. ನೀವು ಅಲ್ಲಾಹನ ಧರ್ಮಕ್ಕಾಗಿ ಬದುಕಬೇಕು


 ಕಾಂತಪುರಂ ಉಸ್ತಾದ್ ಕೋಟ್ಯಂತರ ರೂಪಾಯಿ ಸಂಪಾದಿಸಿ ಐಷಾರಾಮಿ ಜೀವನ ನಡೆಸುತ್ತಾರೆ ಎಂದು ನಾಡಿನುದ್ದಗಲಕ್ಕೂ ಹೇಳಿ ನಡೆಯುವವರೊಂದಿಗೆ.

ಸುಲ್ತಾನುಲ್ ಉಲಮಾ  ಉಸ್ತಾದರು ತನ್ನ ಅತಿದೊಡ್ಡ ನಿಧಿಯಾದ ತಮ್ಮ ಶಿಷ್ಯರಿಗೆ ಮರ್ಕಝಿನಲ್ಲಿ ಹೇಳಿದ ಹೃದಯ ಕರಗಿಸುವ ಮಾತುಗಳು ...

ನನಗೆ ಒಳ್ಳೆಯ ಅಡಿಕೆ ತೋಟವಿದೆ. ಅದರಿಂದ ಪ್ರತೀ ವರ್ಷ ಅಡಿಕೆ ಮಾರಿ ಉತ್ತಮ ಸಂಖ್ಯೆ ನನಗೆ ಲಭಿಸುತ್ತಿತ್ತು. ಈ ಬಾರಿ ನನಗೆ 40,000 ಸಿಕ್ಕಿತು, ಕಳೆದ ಬಾರಿ ನನಗೆ 30,000 ಸಿಕ್ಕಿತು ಮತ್ತು ಅದರ ಹಿಂದಿನ ವರ್ಷ ನನಗೆ 50,000 ಸಿಕ್ಕಿತು. ಇದು ಮಾಸಿಕ ಆದಾಯವಲ್ಲ, ಇದು ಒಂದು ವರ್ಷದ್ದಾಗಿದೆ. ನನ್ನ ಬಳಿ ಒಂದು ಅಂಗಡಿ ಇದೆ ಮತ್ತು ಅದರಿಂದ ತಿಂಗಳಿಗೆ ನಾಲ್ಕು ಸಾವಿರ ರೂಪಾಯಿ ಸಿಗುತ್ತದೆ. ಇದರ ಹೊರತು ನನ್ನದೆಂದು ಹೇಳುವ ಯಾವುದೊಂದೂ ನನ್ನ ಬಳಿ ಇಲ್ಲ. ನನಗೆ ಅನಾರೋಗ್ಯ ಉಂಟಾಗಿ ಹಾಸಿಗೆ ಹಿಡಿದರೆ ಚಿಕಿತ್ಸೆಗಾಗಿಯೂ ನನ್ನ ಬಳಿ ಹಣ ಇಲ್ಲ. ಮಾಸಿಕ ಮತ್ತು ವಾರ್ಷಿಕವಾಗಿ ಸಿಗುವ ಈ ಆದಾಯ ನನಗೆ ಹೇಗೆ ಸಾಕಾಗಬಹುದು.  ನಾನು ಶುಕ್ರವಾರ ಮನೆಯಲ್ಲಿದ್ದಾಗ ಮನೆಗೆ ಬರುವವರಿಗೆ ಆಹಾರವನ್ನು ನೀಡಲು ಅಥವಾ ಬಡವರು ನನ್ನನ್ನು ಕೇಳಿದಾಗ ನೀಡಲು ಈ ಸಂಖ್ಯೆ ಸಾಕಾಗುವುದಿಲ್ಲ. ಮುತಅಲ್ಲಿಮರು, ಅನಾಥರು ಮತ್ತು ಇತರ ಧಾರ್ಮಿಕ ಚಟುವಟಿಕೆಗಳಿಗಾಗಿ ನಾನು ಸಾಕಷ್ಟು ದೇಣಿಗೆ ಪಡೆದಿದ್ದೇನೆ. ಆದರೆ ಇಲ್ಲಿಯವರೆಗೆ ನನ್ನ ಅಗತ್ಯಗಳಿಗಾಗಿ ನಾನು ಸಂಗ್ರಹಿಸಿದ ದೇಣಿಗೆಯಿಂದ ಐದು ಪೈಸೆ ಕೂಡ ತೆಗೆದುಕೊಂಡಿಲ್ಲ. ಮತ್ತು ಇನ್ನು ಮುಂದೆಯೂ ತೆಗೆದುಕೊಳ್ಳುವುದಿಲ್ಲ. ಮತ್ತು ಈ ಸಂಗ್ರಹಗಳಿಂದ ನಾನು ಒಂದು ಪೈಸೆಯನ್ನೂ ಕಮೀಷನ್ ರೂಪದಲ್ಲಿ ಕೈ ವಶ ಮಾಡಿಲ್ಲ. ಕಮಿಶನ್ ಮಾತ್ರ ತೆಗೆದುಕೊಂಡಿದ್ದರೆ ನಾನು ಇಂದು ಕೋಟ್ಯಂತರ ರೂಪಾಯಿಗಳನ್ನು ಸಂಪಾದಿಸುತ್ತಿದ್ದೆ. ಅಲ್ಲಾಹನಿಗೆ ಇದೆಲ್ಲವೂ ತಿಳಿದಿದೆ .. ಬಹಳಷ್ಟು ಜನರು ಮರ್ಕಝ್‌ಗಾಗಿ, ಮಕ್ಕಳಿಗಾಗಿ ಎಂದು ಹೇಳಿ ನನಗೆ ಹಣವನ್ನು ನೀಡುತ್ತಾರೆ. ಇದು ಉಸ್ತಾದರಿಗೆ ಎಂದು ಹೇಳಿ ನನಗೆ ಕೊಟ್ಟ ಹಣವನ್ನು ದಾನ ನೀಡಲು ಮತ್ತು ನನ್ನ ಸಣ್ಣ ಪುಟ್ಟ ಅಗತ್ಯಗಳಿಗಾಗಿ ಬಳಸುತ್ತೇನೆ. 

ಮತ್ತು ಕೆಲವರು ಮೋಸ ಮತ್ತು ವಂಚನೆಯಿಂದ ದುನಿಯಾವನ್ನು ಹಣಕ್ಕಾಗಿ ಮಾರಿದ್ದಾರೆ ಎಂದು ಹೇಳುವುದನ್ನು ನಾನು ಕೇಳಿದಾಗ ನನಗೆ ಅವರ ಮೇಲೆ ಯಾವುದೇ ದೂರುಗಳಿಲ್ಲದಿದ್ದರೂ ನನಗೆ ದುಃಖವಾಗುತ್ತದೆ.

ನೀವು ಇಹಕ್ಕಾಗಿ ಬದುಕಬಾರದು. ನೀವು ಅಲ್ಲಾಹನ ಧರ್ಮಕ್ಕಾಗಿ ಬದುಕಬೇಕು. ಆ ಸಮಯದಲ್ಲಿ ನಿಮಗೆ ಅಗತ್ಯವಿರುವಾಗ ಅಲ್ಲಾಹನು ನಿಮಗೆ ಎಲ್ಲವನ್ನೂ ನೀಡುತ್ತಾನೆ .. ""

ಉಸ್ತಾದ್ ಹೇಳಿದ್ದಕ್ಕೆ ನಾವು ಇನ್ನೂ ಒಂದು ವಿಷಯವನ್ನು ಸೇರಿಸಬೇಕಾಗಿದೆ. ಉಸ್ತಾದ್ 43 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಮರ್ಕಝಿನಲ್ಲಿ ಮೊದಲ ಹತ್ತು ವರ್ಷಗಳನ್ನು ಹೊರತುಪಡಿಸಿ ಉಸ್ತಾದ್ ಅವರಿಗೆ ಅರ್ಹವಾದ ಸಂಬಳವನ್ನು ಸಹ ಪಡೆದಿಲ್ಲ!

ನಮ್ಮ ಸುಲ್ತಾನುಲ್ ಉಲಮಾ ಉಸ್ತಾದರಿಗೆ ಅಲ್ಲಾಹನು ಆರೋಗ್ಯದೊಂದಿಗಿನ ದೀರ್ಘಾಯುಷ್ಯ ನೀಡಲಿ ಮತ್ತು ನಮಗೆ ಅವರ ನೆರಳು ಇನ್ನಷ್ಟು ಕಾಲ ದೀರ್ಘಿಸಲಿ. ಆಮೀನ್

ಕನ್ನಡಕ್ಕೆ : ನವಾಝ್ ಸಖಾಫಿ ಉಳ್ಳಾಲ

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...