Skip to main content

ಪ್ರಖ್ಯಾತ ಪಂಡಿತ ಕುಖ್ಯಾತ ಕಳ್ಳನೊಂದಿಗೆ

ಪ್ರಖ್ಯಾತ ಪಂಡಿತ ಕುಖ್ಯಾತ ಕಳ್ಳನೊಂದಿಗೆ

*✍🏻ಯೂಸುಫ್ ನಬ್‌ಹಾನಿ ಕುಕ್ಕಾಜೆ*
📞00971 553499119


   ▪ *ಒಂದು ದಿನ* ರಾತ್ರಿ ಇಮಾಮ್ ಮಾಲಿಕ್ ಬಿನ್ ದೀನಾರ್ (ರ) ರ ಮನೆಗೆ ಒಬ್ಬ ಕಳ್ಳನು ನುಗ್ಗಿದನು. ಮನೆಯಲ್ಲಿ ಎಲ್ಲಿ ಹುಡಿಕಿದರೂ ಕಳ್ಳನಿಗೆ ಕದಿಯಲು ಯೋಗ್ಯವಾದ ಯಾವುದೇ ಸಾಮಾನು ಸಿಗಲಿಲ್ಲ. ಕೊನೆಗೆ ಮನೆಯಲ್ಲಿ ಒಂದು ಕೊಠಡಿಯ ಒಳಗೆ ಹೋದಾಗ ಇಮಾಮ್ ಮಾಲಿಕ್ ಬಿನ್ ದೀನಾರರು (ರ) ಒಂಟಿಯಾಗಿ ನಮಾಝು ಮಾಡುತ್ತಿದ್ದರು.
   ▪ *ನಮಾಝ್* ಮುಗಿದ ಬಳಿಕ ಇಮಾಮ್ ಮಾಲಿಕ್ ಬಿನ್ ದೀನಾರರು ಮನೆಗೆ ನುಗ್ಗಿದ ಕಳ್ಳನಲ್ಲಿ ಕೇಳಿದರು. *"ನೀನು ನಿನ್ನ ಇಹಲೋಕದ ಸುಖಕ್ಕೆ ಬೇಕಾದ ಏನದಾರೂ ಸಿಗಬಹುದಾ ಎಂದು ಹುಡುಕಿ ಬಂದರೂ ನಿನಗೆ ಏನೂ ಸಿಗಲಿಲ್ಲ. ಆದರೆ ನೀನು ಈ ತನಕ ನಿನ್ನ ಪರಲೋಕದ ಸುಖಕ್ಕೆ ಏನಾದರೂ ಹುಡುಕಿ ತಯಾರು ಮಾಡಿದ್ದಿಯಾ..?"*
   ▪ *ಮಾಲಿಕ್* ಬಿನ್ ದೀನಾರ್ (ರ) ರಿಂದ ಉತ್ತರ ಕೊಡಲು ಅಸಾಧ್ಯವಾದ ಈ ಅರ್ಥವತ್ತಾದ ಮಾತು ಕೇಳಿದಾಗ ಕಳ್ಳನು ಒಂದು ನಿಮಿಷ ಮಾತನಾಡಲಾಗದೆ ಮೌನವಾಗಿ ಒಂದು ಕಡೆ ಕುಳಿತನು. ಬಳಿಕ ಇಮಾಮರು ಆತನನ್ನು ತನ್ನ ಹಾಸಿಗೆಯ ಮೇಲೆ ಕುಳ್ಳಿರಿಸಿ ಆತನಿಗೆ ಬೇಕಾದ ಉಪದೇಶ ಕೊಟ್ಟರು. ಅವರ ಉಪದೇಶದಿಂದ ಮನ ಪರಿವರ್ತನೆಯಾದ ಆತನಿಗೆ ತಾನು ಈ ತನಕ ಮಾಡುತ್ತಿದ್ದ ತಪ್ಪಿನ ಅರಿವಾಗಿ ಬಿಕ್ಕಿ ಬಿಕ್ಕಿ ಆಳಲು ತೊಡಗಿದನು.
   ▪ *ಊರಲ್ಲೆಲ್ಲಾ* ಕಳ್ಳತನ ಮಾಡಿ ಕುಖ್ಯಾತನಾದ ಆತನನ್ನು ಆ ಊರಲ್ಲಿ ತಿಳಿಯದವರು ಯಾರೂ ಇರಲಿಲ್ಲ. ಇಮಾಮರ ಉಪದೇಶದಿಂದ ಮನ ಬದಲಾವಣೆಯಾದ ಆತ ಆದಿನ ಬೆಳಗಿನ ಸುಬ್‌ಹ್ ನಮಾಝಿಗೆ ಇಮಾಮ್ ಮಾಲಿಕ್ ಬಿನ್ ದೀನಾರರೊಂದಿಗೆ ಮಸೀದಿಗೆ ಹೋದನು. ಮಸೀದಿಯಲ್ಲಿ ಪ್ರಥಮ ಸಾಲಿನಲ್ಲಿ ಇಮಾಮ್ ಮಾಲಿಕ್ ಬಿನ್ ದೀನಾರರ ಸಮೀಪ ಅವರಿಗೆ ಬುಜಕ್ಕೆ ಬುಜಕೊಟ್ಟು ನಮಾಝು ಮಾಡಲು ನಿಂತನು. ಈ ಅದ್ಭುತ ದೃಶ್ಯವನ್ನು ಕಂಡಾಗ ಮಸೀದಿಯಲ್ಲಿ ಹಾಜರಾದ ಜನರು ಪರಸ್ಪರ ಹೇಳ ತೊಡಗಿದರು. *"ಪ್ರಖ್ಯಾತ ಪಂಡಿತ ಕುಖ್ಯಾತ ಚೋರನೊಂದಿಗೆ... ಏನಿದು ಅವಸ್ಥೆ..? ಊಹಿಸಲು ಕೂಡ ಸಾಧ್ಯವಾಗುವುದಿಲ್ಲ."*
   ▪ *ಇಮಾಮ್* ಮಾಲಿಕ್ ಬಿನ್ ದೀನಾರ್ (ರ) ಹೇಳಿದರು. *"ಗಾಬರಿ ಪಡಬೇಡಿ. ಆತ ನಮ್ಮನ್ನು ಕದಿಯಲು ಬಂದಾಗ ನಾನು ಅವನ ಹೃದಯವನ್ನು ಕದ್ದು ತೆಗೆದೆನು"*

ಸಂಗ್ರಹ; ಇಮಾಮ್ ಝಯಬಿಯ *ತಾರೀಖುಲ್ ಇಸ್ಲಾಮ್* ಎಂಬ ಗ್ರಂಥ.

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...