Skip to main content

ಬೀವಿ ರಾಬಿಅತುಲ್ ಅದವಿಯ್ಯ ಮತ್ತು ಸುಟ್ಟ ಆಡು

ಬೀವಿ ರಾಬಿಅತುಲ್ ಅದವಿಯ್ಯ ಮತ್ತು ಸುಟ್ಟ ಆಡು

*✍🏻ಯೂಸುಫ್ ನಬ್‌ಹಾನಿ ಕುಕ್ಕಾಜೆ*
📞00971 553499119


▪ *ಒಮ್ಮೆ* ಸೂಫಿವರ್ಯೆ ಪಂಡಿತೆ ಬೀವಿ ರಾಬಿಅತುಲ್ ಅದವಿಯ್ಯ (ರ) ರು ಒಂದು ದಾರಿಯಾಗಿ ಹೋಗುತ್ತಿರುವಾಗ ಒಬ್ಬನು ತನ್ನ ಮನೆಯಲ್ಲಿರುವ ಒಂದು ಔತನಕೂಟಕ್ಕೆ ಮಾರುಕಟ್ಟೆಯಿಂದ ಒಂದು ಸುಟ್ಟ ಆಡನ್ನು ಖರಿದಿಸಿ ತರುತ್ತಿದ್ದನು. ಬೀವಿ ರಾಬಿಅ (ರ) ರು ಅವನ ಕೈಯಲ್ಲಿರುವ ಈ ಸುಟ್ಟ ಆಡನ್ನು ತುಂಬಾ ಸಮಯ ಬಹಳ ಆಶ್ಚರ್ಯದಿಂದ ನೋಡಿದರು. ಬೀವಿಯವರ ಆಶ್ಚರ್ಯಕರ ನೋಟವನ್ನು ಗಮನಿಸಿದ ಆ ಬಡಪಾಯಿ ವ್ಯಕ್ತಿ ಅವರಲ್ಲಿ ಕೇಳಿದನು. *ಬೀವಿ ರಾಬಿಆರವರೇ.., ನಿಮಗೆ ಹುರಿದ ಆಡನ್ನು ಕಾಣುವಾಗ ಆಸೆ ಆಗುತ್ತದಾ...? ಪರವಾಗಿಲ್ಲ. ನಿಮಗೆ ಬೇಕಾದರೆ ಇದರಿಂದ ಒಂದು ತುಂಡು ತುಂಡುಮಾಡಿ ಕೊಡುತ್ತೇನೆ. "*
   ▪ *ಬೀವಿ ಅದವಿಯ್ಯಾ* ಅವನಲ್ಲಿ ಹೇಳಿದರು. *"ನಿನ್ನ ಆಡನ್ನು ನೋಡಿ ನನಗೆ ಯಾವುದೇ ಆಸೆಯಾಗಲಿಲ್ಲ. ಆದರೆ ನನಗೆ ಈ ಸುಟ್ಟ ಆಡನ್ನು ನೋಡಿದಾಗ ಬಹಳ ಆಶ್ಚರ್ಯವಾಯಿತು. ಅದೇನೆಂದರೆ.., "ಆಡನ್ನು ಸುಡುವಾಗ ಅದನ್ನು ಕೊಂದ ನಂತರ ಬೆಂಕಿಗೆ ಹಾಕಲಾಗುತ್ತದೆ. ಆದರೆ ನಾಳೆ ಪರಲೋಕದಲ್ಲಿ ಮನುಷ್ಯನನ್ನು ಜೀವಂತವಾಗಿಯೇ ಬೆಂಕಿಗೆ ಹಾಕುವುದರ ಭಯಾನಕತೆಯ ಬಗ್ಗೆ ಆಲೋಚಿಸಿದಾಗ ತುಂಬಾ ಸಮಯ ನಿನ್ನ ಕೈಯಲ್ಲಿರುವ ಆಡನ್ನು ನೋಡಿದೆ."*

ಸಂಗ್ರಹ; ಇಮಾಮ್ ಸ್ವಫೂರಿಯ *ನುಝ್‌ಹತುಲ್ ಮಜಾಲಿಸ್* ಎಂಬ ಗ್ರಂಥ.

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...