Skip to main content

ಆರೋಗ್ಯದ ಅಂಗಿ

ಆರೋಗ್ಯದ ಅಂಗಿ

*✍🏻ಯೂಸುಫ್ ನಬ್‌ಹಾನಿ ಕುಕ್ಕಾಜೆ*
📞0097155 3499119

 ▪ *ಪ್ರವಾದಿ* ಮೂಸಾ (ಅ) ರಿಗೆ ಒಮ್ಮೆ ಅನಾರೋಗ್ಯವಾಯಿತು. ಮಾಡಿದ ಯಾವ  ಚಿಕಿತ್ಸೆಯೂ ಫಲ ಕಾಣದೆ ಹೋದಾಗ ಅವರು ತನ್ನ ಸಂಕಟವನ್ನು ಅಲ್ಲಾಹನಲ್ಲಿ ಹೇಳಿದರು. ಕೂಡಲೇ ಅಲ್ಲಾಹನು ಜಿಬ್‌ರೀಲ್ (ಅ) ಮುಖಾಂತರ ಸ್ವರ್ಗದಿಂದ ಒಂದು ಅಂಗಿಯನ್ನು ತೆಗೆದು ಅವರಿಗೆ ಧರಿಸಲು ಆಜ್ಞಾಪಿಸಿದನು.
   ▪ *ಅಲ್ಲಾಹನ* ಆಜ್ಞೆಯಂತೆ ಹಝ್ರತ್ ಜಿಬ್‌ರೀಲ್ (ಅ) ರು ಸ್ವರ್ಗದಿಂದ *ಖಮೀಸುಲ್ ಆಫಿಯಾ* (ಆರೋಗ್ಯದ ಅಂಗಿ) ಎಂಬ ಒಂದು ಅಂಗಿಯನ್ನು ತೆಗೆದು ಅವರಿಗೆ ಧರಿಸಿಕೊಟ್ಟರು. ಸುಬ್‌ಹಾನಲ್ಲಾಹ್.. ಧರಿಸಿದ್ದೇ ತಡ ಖಾಯಿಲೆ ಗುಣವಾಯಿತಲ್ಲದೆ ಅವರಿಗೆ ಮತ್ತೆ ತನ್ನ ಜೀವಮಾನದಲ್ಲಿ ಮರಣದ ತನಕ ಒಮ್ಮೆಯೂ ಒಂದು ಜ್ವರ ಕೂಡ ಬರಲಿಲ್ಲ.
   ▪ *ಹಝ್ರತ್* ಮೂಸಾ (ಅ) ರವರ ವಫಾತಿನ ಸಮಯವಾದಾಗ ಅವರ ಬಳಿ ಮಲಕ್ ಜಿಬ್‌ರೀಲ್ (ಅ) ಮತ್ತು ಮಲಕ್ ಅಝ್‌ರಾಯೀಲ್ (ಅ) ಜಂಟಿಯಾಗಿ ಬಂದಿದ್ದರು. ಅಝ್‌ರಾಯೀಲ್ (ಅ) ರವರು ಅವರ ರೂಹನ್ನು ತೆಗೆದುಕೊಂಡು ಹೋಗುವಾಗ ಜಿಬ್‌ರೀಲ್ (ಅ) ಅವರು ಧರಿಸಿದ್ದ ಆ ಅಂಗಿಯನ್ನು ಕಳಚಿ ಕೊಂಡುಹೋದರು.
   ▪ *ಕಳಚಿದ* ಈ ಅಂಗಿಯನ್ನು ಏನು ಮಾಡಬೇಕೆಂದು ಮಲಕ್ ಜಿಬ್‌ರೀಲರು ಅಲ್ಲಾಹನಲ್ಲಿ ಕೇಳಿದಾಗ ಅದನ್ನು ಸೂರ್ಯನಿಗೆ ಹೊದಿಸಲು ಆಜ್ಞಾಪಿಸಿದನು.
   ▪ *ಗಮನಾರ್ಹ* ಸಂಗತಿಯೆಂದರೆ, ಈ ಕಾರಣದಿಂದ ಯಾವುದೇ ಖಾಯಿಲೆಗಳ ಅಥವಾ ರೋಗಗಳ ಉಲ್ಬಣವು ರಾತ್ರಿಯಾಗಿರುತ್ತದೆ ಎಂದು ಉಲಮಾಗಳು ಅಭಿಪ್ರಾಯ ಪಟ್ಟಿದ್ದಾರೆ. ಉದಾಹರಣೆಗೆ; ಶರೀರದಲ್ಲಿ ಒಂದು ಬೊಕ್ಕೆ ಆಗುವುದಾದರೂ ಅದು ರಾತ್ರಿಯಾಗುವುದು. ರಾತ್ರಿ ವಿಪರೀತವಿದ್ದ ಜ್ವರ ಬೆಳಗ್ಗೆ ಎದ್ದೇಳಿ ಸ್ವಲ್ಪ ಸಮಯ ಕಳೆದಾಗ ಆರಾಮವಾಗುವುದು ಮಾಮೂಲು.
   ▪ *ಸೂರ್ಯನಲ್ಲಿ* ಈವೊಂದು ಗುಣವಿರುವುದರಿಂದ ಸಾಧಾರಣ ಮೃಗಗಳು ಕೂಡ ಯಾವಾಗಲೂ ವಿರಾಮ ವೇಳೆಯಲ್ಲಿ ಸೂರ್ಯನಿಗೆ ಮುಖಮಾಡಿ ನಿಲ್ಲುತ್ತದೆ. ಅಂತೆಯೇ ಯಾವುದೇ ಗಿಡ ಅಥವಾ ಮರಗಳು ಕೂಡ ಸೂರ್ಯನ ಬೆಳಕಿನತ್ತ ವಾಲುತ್ತದೆ.

ಸಂಗ್ರಹ; ಇಮಾಮ್ ಅಬುಲ್ ಹಸನ್ ಅಲ್ ಖಯ್‌ಸಿಯ *ಅಲ್ ಝಾಹಿರ್ ಫೀ ಬಯಾನಿ ಮಾ ಯಜ್‌ತನಿಬು ಮಿನಲ್ ಖಬಾಯಿಸ್* ಎಂಬ ಗ್ರಂಥ.

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...