Skip to main content

ಮೃತರಿಗೆ ಖುರ್ ಆನ್ ಪಾರಾಯಣ

ಮೃತರಿಗೆ ಖುರ್ ಆನ್ ಪಾರಾಯಣ:

        ಮರಣ ಹೊಂದಿದವರಿಗಾಗಿ ಅವರ ಖಬರಿನ ಬಳಿ ಖುರ್ ಆನ್ ಪಾರಾಯಣ ಮಾಡುವುದು ಸುನ್ನತ್ತಾದ ಕಾರ್ಯವಾಗಿದೆಯೆಂಬುವುದರಲ್ಲಿ ಯಾವುದೇ ಒಬ್ಬ ವಿಧ್ವಾಂಸನಿಗೂ ಅಭಿಪ್ರಾಯ ವ್ಯತ್ಯಾಸವಿಲ್ಲದ
ಇಜ್ ಮಾಅ್  ಅಥವಾ ಒಮ್ಮತಾಭಿಯದ ಮೂಲಕ ಸಾಬಿತಾದ ಕಾರ್ಯವಾಗಿದೆ.
        ಬಹು ! ಇಮಾಮ್ ಸುಯೂತಿ ರಳಿಯಲ್ಲಾಹು ಅನ್ಹು ರವರು ಹೇಳುತ್ತಾರೆ; ಮರಣ ಹೊಂದಿದವರಿಗಾಗಿ ಖುರ್ ಆನ್ ಪಾರಾಯಣ ಮಾಡುವುದು ಎಲ್ಲಾ ಕಾಲ ಹಾಗೂ ಸ್ಥಳದಲ್ಲಿ ನಡೆದು ಬಂದ ಕಾರ್ಯವಾಗಿದೆ.ಒಬ್ಬರೂ ಕೂಡಾ ಅದನ್ನು ವಿರೋಧಿಸಿಲ್ಲ.ಆದರಿಂದಲೇ ಅದು ಮುಸ್ಲಿಮ್ ಜಗತ್ತಿನ ಇಜ್ಮಾಅ್
( ಒಮ್ಮತಾಭಿಪ್ರಾಯ) ಆಗಿದೆ.
( ಮಿರ್ಖಾತ್ 382/2, ಶರಹುಸ್ಸುದೂರ್ 311)

ಹದೀಸುಗಳಲ್ಲಿ......

     ಮಅ್ ಖಿಲ್ ಬಿನ್ ಯಸಾರ್ ರಳಿಯಲ್ಲಾಹು ಅನ್ಹು ವರದಿ; ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ, ನಿಮ್ಮಿಂದ ಮೃತಪಟ್ಟವರಿಗಾಗಿ ಸೂರಾ ಯಾಸೀನನ್ನು ಪಠಿಸಿರಿ.
(ಅಹ್ಮದ್ , ಇಬ್ನ್ ಮಾಜ,ಅಬೂದಾವೂದ್ ,ಇಬ್ನ್ ಅಬೀ ಶೈಬ ,ನಸಾಈ, ಇಬ್ನ್ ಹಿಬ್ಬಾನ್ )

ಈ ಹದೀಸ್ ಸ್ವಹೀಹ್ ಆಗಿದೆಯೆಂದು ಇಮಾಮ್ ಖತೀಬುಶ್ಶಿರ್ಬೀನಿ ತನ್ನ ಮುಗ್ನಿಯ 320/ 1 ಲ್ಲೂ ಇಮಾಮ್ ಇಬ್ನ್ ಹಜರ್ ತನ್ನ ತುಹ್ಫ 93/3 ರಲ್ಲೂ ಇಮಾಮ್ ಮಹಲ್ಲಿ ತನ್ನ ಕಂಝ್ಝುರ್ರಾಗಿಬೀನ್ ನ 312/1 ರಲ್ಲೂ ಸ್ಪಷ್ಟಪಡಿಸಿದ್ದಾರೆ.

ಅಬುದ್ದರ್ ದಾಅ್ ರಳಿಯಲ್ಲಾಹು ಅನ್ಹು ವರದಿ,ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳುತ್ತಾರೆ." ಯಾವುದಾದರೊಂದು ಮಯ್ಯಿತ್ ನ ತಲೆ ಭಾಗದಲ್ಲಿ ಯಾಸೀನ್ ಸೂರಾ ಪಠಿಸಿದರೆ ಅಲ್ಲಾಹನು ಅವನ ಶಿಕ್ಷೆಯನ್ನು ಲಘುಗೊಳಿಸುವನು"( ಇಬ್ನ್ ಅಬಿದ್ದುನ್ಯಾ, ದೈಲಮಿ, ಮಿರ್ಖಾತ್ 331/2)
       ಸ್ವಹಾಬಿಗಳ ಚರ್ಯೆ:

ನೂತನವಾದಿಗಳ ಅಂಗೀಕೃತ ನೇತಾರ ಇಬ್ನುಲ್ ಖಯ್ಯಿಂ ಹೇಳುವುದನ್ನು ನೋಡಿ; ತಮ್ಮಲ್ಲಿ ಯಾರದರೂ ಮರಣ ಹೊಂದಿದರೆ ಸ್ವಹಾಬಿಗಳು ಅವರ ಖಬರಿನ ಬಳಿ ಖುರ್ ಆನ್ ಪಾರಯಣ ಮಾಡುತಿದ್ದರು. ( ಅರ್ರೂಹ್ 12, ಮಿರ್ಖಾತ್ 382/2)

ಬಹು! ಇಮಾಮ್ ನವವಿ ರಳಿಯಲ್ಲಾಹು ಅನ್ಹು ಹೇಳುತ್ತಾರೆ "ಸ್ವಹಾಬಿ ವರ್ಯರಾದ ಇಬ್ನ್ ಉಮರ್ ರಳಿಯಲ್ಲಾಹು ಅನ್ಹು ರವರು ಖಬರಿನ ಬಳಿ ಅಲ್ ಬಖರ ಸೂರಾದ ಆರಂಭದ ಮತ್ತು ಕೊನೆಯ ಸೂಕ್ತಗಳನ್ನು ಓದುವುದು ಸುನ್ನತ್ತಾಗಿದೆಯೆಂದು ತಿಳಿಸಿದ್ದಾರೆ.( ಅಲ್ ಅದ್ಸ್ ಕಾರ್ 164).

ಇಮಾಮರುಗಳ ಹೇಳಿಕೆಗಳು:

ಬಹು! ಇಮಾಮ್ ಅಹ್ಮದ್ ಬಿನ್ ಹಂಬಲ್ ರವರು ಹೇಳುತ್ತಾರೆ " ನೀವು ಖಬರ್ ಸಂದರ್ಶಿಸಿದರೆ ಅಲ್ಲಿ ಸೂರಾ ಫಾತಿಹ, ಮುಅವ್ವಿಝತೈನಿ, ಸೂರಾ ಇಕ್ಲಾಸ್ ಓದಿರ್  ಹಾಗೂ ಅದರ ಫಲವನ್ನು ಖಬರಿನಲ್ಲಿರುವವರಿಗೆ ಸಮರ್ಪಿಸಿರಿ"
(ಶರಹುತ್ತೀಬಿ 414/4 )
ಇಮಾಮ್ ನವವಿ ರಲಿಯಲ್ಲಾಹು ಅನ್ಹು ಹೇಳುತ್ತಾರೆ " ಇಮಾಮ್ ಶಾಫಿ ರಲಿಯಲ್ಲಾಹು ಅನ್ಹು ಮತ್ತು ಅವರ ಅನುಯಾಯಿಗಳು ಖಬರಿನ ಬಳಿ ಖುರ್ ಆನ್ ಪಾರಾಯಣ ಮಾಡುವುದು ಸುನ್ನತ್ತೆಂದು ತಿಳಿಸಿದ್ದಾರೆ."
(ಅಲ್ ಅದ್ಸ್ ಕಾರ್ 170).

ಇಮಾಮ್ ನವವಿ ರಲಿಯಲ್ಲಾಹು ಅನ್ಹು ಹೇಳುತ್ತಾರೆ; " ಖಬರ್ ಸಂದರ್ಶಿಸಿದವನು  ಅಲ್ಲಿ ಖುರ್ ಆನ್ ಓದುವುದನ್ನು ಹೆಚ್ಚಿಸಬೇಕು"
( ಅಲ್ ಅದ್ಸ್ ಕಾರ್ 170).

ಇಮಾಮ್ ಖತೀಬುಶ್ಶಿರ್ಬೀನಿ ಹೇಳುತ್ತಾರೆ; " ಖಬರಿನ ಬಳಿ ಖುರ್ ಆನ್ ಪಠಿಸುವುದು ಸುನ್ನತ್ತಾಗಿದೆ" 
( ಮುಗ್ನಿ 57/2)

ಇಮಾಮ್ ರಂಲಿ ರಲಿಯಲ್ಲಾಹು ಅನ್ಹು ಹೇಳುತ್ತಾರೆ " ಖಬರಿನ ಬಳಿ ಖುರ್ ಆನ್ ಓದುವುದು ಸುನ್ನತ್ತಾಗಿದೆ "
(ನಿಹಾಯ 37/3).

ಅದೇ ರೀತಿ ಇಮಾಮ್ ಝಕರಿಯ್ಯಲ್ ಅನ್ಸ್ವಾರಿ ತನ್ನ ಮನ್ ಹಜ್ 210/ 2 ರಲ್ಲೂ
ಇಮಾಮ್ ಇಬ್ನ್ ಖುದಾಮ ತನ್ನ ಮುಗ್ನಿ 567 /2 ರಲ್ಲೂ
ಇಮಾಮ್ ಇಬ್ನ್ ಹಜರ್ ತನ್ನ ತುಹ್ಫಾ 203/3 ರಲ್ಲೂ ,
ಹೀಗೆ ಸರ್ವ ಇಮಾಮರುಗಳು ಸ್ಪಷ್ಟಪಡಿಸಿದ್ದಾರೆ.

ಸೊಳಪಿಗಳ ನೇತಾರರೇ ಅಂಗೀಕರಿಸಿದಾಗ......!

          ಸರ್ವ ಸೊಳಪಿಗಳು ತಮ್ಮ ಪ್ರೀತಿಯ ನಾಯಕನಾಗಿ ಕೊಂಡಾಡುತ್ತಿರುವ ಇಬ್ನ್ ತೈಮಿಯ್ಯರವರೇ ಮರಣ ಹೊಂದಿದದವರಿಗಾಗಿ ಖುರ್ ಆನ್ ಪಾರಾಯಣ ಮಾಡುವುದು ಸುನ್ನತ್ತಾಗಿದೆಯೆಂದು ಸ್ಪಷ್ಟ ಪಡಿಸಿದ್ದಾರೆ.ಅವರು ಹೇಳುವುದನ್ನು ನೋಡಿ " ಯಾರಾದರೂ ಅಲ್ಲಾಹನ ಪ್ರತಿಫಲ ಆಗ್ರಹಿಸಿ ಖುರ್ ಆನ್ ಓದಿ ನಂತರ ಅದನ್ನು ಮೃತ ಪಟ್ಟವರಿಗೆ ಸಮರ್ಪಿಸಿದರೆ ಅದು ಅವರಿಗೆ ತಲುಪುವುದು".
( ಮಜ್ಮೂಉಲ್ ಫತಾವ 300/ 24)

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...