ಮಿಸ್ವಾಕ್'ನ(ಹಲ್ಲುಜ್ಜುವುದು) ಬಗ್ಗೆ ಪುಣ್ಯ ಪ್ರವಾದಿ(ﷺ) ರವರ 10 ನುಡಿ ಮುತ್ತುಗಳು.
1. ಹಲ್ಲುಜ್ಜಿ 2 ರಕಾತ್ ನಮಾಝ್ ನಿರ್ವಹಿಸುವುದು ಹಲ್ಲುಜ್ಜದೆ 70 ರಕಾತ್ ನಮಾಝ್ ನಿರ್ವಹಿಸುವುದಕ್ಕೆ ಸಮಾನ.
(ಅತ್ತರ್'ಗಿಬ್ ವತ್ತರ್'ಹೀಬ್, ಸಂಪುಟ-1, ಪುಟ-102, ಹದೀಸ್-18)
2. ಹಲ್ಲನ್ನು ಉಜ್ಜಿ ನಮಾಝ್ ನಿರ್ವಹಿಸುವುದು, ಮಿಸ್ವಾಕ್ ಮಾಡದೇನೇ... 70 ಬಾರಿ ನಮಾಜ್ ಮಾಡುದಕ್ಕಿಂತ ಹೆಚ್ಚು ಪುಣ್ಯದಾಯಕವಾಗಿದೆ.
(ಸು'ಅಬ್ ಅಲ್ ಇಮಾನ್ ಸಂಪುಟ-3, ಪುಟ-26, ಹದೀಸ್-2774)
3.ಈ 4 ಪುಣ್ಯ ಕ್ರಿಯೆಗಳು ಪುಣ್ಯ ಪ್ರವಾದಿ (ﷺ)'ರವರ ಚರ್ಯೆಯಾಗಿದೆ.
(i) ಅತ್ತರ್ (ಸುಗಂಧ ದ್ರವ್ಯ) ಲೇಪಿಸುವುದು
(ii) ನಿಕಾಹ್ ನಿರ್ವಹಿಸುವುದು.
(iii) ಮಿಸ್ವಾಕ್ ಉಪಯೋಗಿಸುವುದು (ಹಲ್ಲುಜ್ಜುವುದು)
(iv) ಲಜ್ಜೆಯನ್ನು ಹೊಂದಿರುವುದು.
(ಮುಸ್ನದ್ ಇಮಾಮ್ ಅಹ್ಮದ್ ಬಿನ್ ಹಂಬಲ್, ಸಂಪುಟ-9, ಪುಟ-147, ಹದೀಸ್ 2364)
4. ಮಿಸ್ವಾಕನ್ನು ಉಪಯೋಗಿಸಿರಿ (ಹಲ್ಲುಜ್ಜಿರಿ) ! ಹಳದಿ ಹಲ್ಲುಗಳಿಂದ ನನ್ನನ್ನು ಸಮೀಪಿಸದಿರಿ.
(ಜಾಮಿ ಉಲ್ ಜವಾಮಿ, ಸಂಪುಟ-1, ಪುಟ-389, ಹದೀಸ್-2875)
5. ಮಿಸ್ವಾಕ್ ನಿಂದ (ಹಲ್ಲುಜ್ಜುವುದುರಿಂದ) ಮರಣವನ್ನು ಬಿಟ್ಟು ಎಲ್ಲಾ ರೋಗಕ್ಕೆ ಶಮನವಿದೆ.
(ಜಾಮಿ ಉಸ್-ಸಘೀರ್, ಪುಟ-297, ಹದೀಸ್-4840)
6.ಪ್ರವಾದಿ (ﷺ) ಹೇಳಿದರು ನನ್ನ ಸಮುದಾಯಕ್ಕೆ ಕಷ್ಟವಾಗದಿರುತ್ತಿದ್ದರೆ ಪ್ರತಿಯೊಂದು ನಮಾಝ್'ಗಾಗಿ ಹಲ್ಲುಜ್ಜುವುದನ್ನು ಕಡ್ಡಾಯವಾಗಿ ಆದೇಶಿಸುತ್ತಿದ್ದೆ.
(ಸಹೀಹ್ ಅಲ್ ಬುಖಾರಿ, ಸಂಪುಟ-2, ಗ್ರಂಥ್-13, ಹದೀಸ್-12)
7. ಹಲ್ಲುಜ್ಜುವುದು ರೂಡಿಮಾಡಿರಿ, ಏಕೆಂದರೆ ಇದು ನಿಮ್ಮ ಬಾಯಿಯನ್ನು ಶುಚಿಯಾಗಿರಿಸುತ್ತದೆ. ಮತ್ತು ಅಲ್ಲಾಹನ ಕರುಣೆಯನ್ನು ಪಡೆಯಲು ಇದು ಸಹಕಾರಿಯಾಗುವುದು.
(ಮುಸ್ನದ್ ಇಮಾಮ್ ಅಹ್ಮದ್ ಬಿನ್ ಹಂಬಲ್, ಸಂಪುಟ-7, ಪುಟ-437, ಹದೀಸ್-5869)
8. ವುಝು ಇಮಾನಿನ ಅರ್ಧ ಭಾಗವಾಗಿದೆ. ಮತ್ತು ಹಲ್ಲುಜ್ಜುವುದು(ಮಿಸ್ವಾಕ್) ವುಝುವಿನ ಅರ್ಧ ಭಾಗವಾಗಿದೆ.
(ಮುಸನ್ನಫ್ ಇಬ್ನ್ ಅಭೀ ಶೈಬಾ- ಸಂಪುಟ-1, ಪುಟ-197, ಹದೀಸ್-22)
9. ಒಂದು ವ್ಯಕ್ತಿಯು ಮಿಸ್ವಾಕನ್ನು ಉಪಯೋಗಿಸಿ (ಹಲ್ಲುಜ್ಜಿ ) ನಮಾಜ್ ನಿರ್ವಹಿಸಿದಲ್ಲಿ ಮಲಾಯಿಕ್(ದೇವದೂತರು) ಅವರ ಪಠಣವನ್ನು ಆಲಿಸಲು ಅವರ ಹಿಂದೆ ನಿಲ್ಲುವರು. ಮತ್ತೆ ಅವರು(ದೇವದೂತರು) ಅವನ ಹತ್ತಿರಕ್ಕೆ ಬಂದು ಆತನ ಬಾಯಿಗೆ ಅವರ ಬಾಯಿಯನ್ನಿಡುವರು.
(ಅಲ್- ಬಹರ್-ಉಝ್-ಜ಼ಖರ್, ಸಂಪುಟ-2, ಪುಟ-214, ಹದೀಸ್-603)
10. ಯಾರಾದರೂ ಜುಮಾ ದಿವಸದಂದು ಮಿಸ್ವಾಕ್ ಉಪಯೋಗಿಸಿ (ಹಲ್ಲುಜ್ಜಿ ), ಅತ್ತರ್(ಸುಗಂಧ ದ್ರವ್ಯ)ವನ್ನು ಲೇಪಿಸಿ, ಉತ್ತಮ ವಸ್ತ್ರವನ್ನು ಧರಿಸಿ ಮಸೀದಿಗೆ ಹೊರಟು, ನಮಾಝ್ ನಿರ್ವಹಿಸಿ ಇಮಾಮ್ ಆಗಮಿಸಿದ ಬಳಿಕ(ಕುತುಬಾದ ಸಮಯದಲ್ಲಿ) ನಮಾಝ್ ಮುಗಿಯುವವರೆಗೂ ನಿಶಬ್ದವಾಗಿ ಕುಳಿತಲ್ಲಿ ಅಲ್ಲಾಹನು ಆತನ ಆ ವಾರದ ಪಾಪವನ್ನು ಮನ್ನಿಸುವನು.
(ಮುಸ್ನದ್ ಇಮಾಮ್ ಅಹ್ಮದ್ ಬಿನ್ ಹಂಬಲ್, ಸಂಪುಟ-4, ಪುಟ-162, ಹದೀಸ್-117)
*ಹಲ್ಲುಜ್ಜುವ ಮುಂಚೆ:*
ನಿಶ್ಚಯ ಕರ್ಮಗಳೆಲ್ಲವೂ ನಿಯ್ಯತ್(ಸಂಕಲ್ಪ)'ಗಳಿಂದ ಮಾತ್ರ ಸ್ವಿಕೃತವಾಗುವುವು" ಎಂಬ ಪ್ರವಾದಿ(ﷺ)ರವರ ವಚನವು ಇದಕ್ಕೂ ಅನ್ವಯಿಸುವುದು.. ಆದುದರಿಂದ ಹಲ್ಲುಜ್ಜುವುದರ ಮೊದಲು ಉತ್ತಮ ನಿಯ್ಯತ್ ಮಾಡದಿದ್ದರೆ ಮೇಲೆ ತಿಳಿಸಲಾದ ಪ್ರತಿಫಲ ಲಭಿಸುವುದಿಲ್ಲ. ಪ್ರವಾದಿ (ﷺ)ರವರ ಚರ್ಯೆಯ(ಸುನ್ನತ್) ಪ್ರತಿಫಲ ಲಬಿಸಬೇಕಾದರೆ ಈ ರೀತಿಯ ನಿಯ್ಯತ್ ಮಾಡಿರಿ. ನೀವು ಪವಿತ್ರ ಖುರಾನ್ ಓದಲು ಹಲ್ಲುಜ್ಜಲು ಮುಂದಾದಲ್ಲಿ, *"ನಾನು ಅಲ್ಲಾಹನ ಪವಿತ್ರ ಗ್ರಂಥವಾದ ಖುರ್'ಆನ್ ಓದಲು ನನ್ನ ಬಾಯಿಯನ್ನು ಹಲ್ಲುಜ್ಜಿ ಸ್ವಚ್ಚಗೊಳಿಸುತ್ತೇನೆ."* ಎಂದೂ, ಅಲ್ಲಾಹನ ದ್ಸಿಕ್ರ್ ಹೇಳಲು ಮುಂದಾದಲ್ಲಿ *"ಅಲ್ಲಾಹನ ದ್ಸಿಕ್ರ್ ಹೇಳಲು ಬಾಯಿಯನ್ನು ಹಲ್ಲುಜ್ಜಿ ಸ್ವಚ್ಚಗೊಳಿಸುತ್ತೇನೆ."* ಎಂದು ನಿಯ್ಯಾತ್ ಮಾಡಿ ಹೀಗೆ ನೀವು ಯಾವ ಉದ್ದೇಶಕ್ಕೆ ಹಲ್ಲಜ್ಜುತ್ತೀರೋ ಆ ಉದ್ದೇಶವನ್ನು ಮನಸ್ಸಿನಲ್ಲಿ ಸಂಕಲ್ಪಿಸಬೇಕಾಗಿದೆ.
*ಈ ಸಂದೇಶವನ್ನು ಎಲ್ಲರಿಗೂ ರವಾನಿಸಿರಿ. ನೀವು ರವಾನಿಸಿದ ಈ ಸಂದೇಶದಿಂದ ಯಾರಾದರೂ ಮೇಲೆ ತಿಳಿಸಲಾದ ಪ್ರವಾದಿ (ﷺ)ರವರ ಚರ್ಯೆಯನ್ನು(ಸುನ್ನತ್ತ್) ಜೀವನದಲ್ಲಿ ಅಳವಡಿಸಿದ್ದಲ್ಲಿ ಅದರ ಪ್ರತಿಫಲ ನಿಮಗೂ, ಇದನ್ನು ಬರೆದ ಪಾಪಿಯಾದ ನನಗೂ ಲಭಿಸಿವುದು.*
ಅಲ್ಲಾಹನು ನಮಗೆಲ್ಲರಿಗೂ ಪ್ರವಾದಿ (ﷺ)ರವರ ಚರ್ಯೆಯನ್ನು ಕಲಿಯಲು ಮತ್ತು ಅದನ್ನು ಜೀವನದಲ್ಲಿ ಅಳವಡಿಸಲು ಭಾಗ್ಯವನ್ನು ಮತ್ತು ಶಕ್ತಿಯನ್ನು ನೀಡಲಿ.. ಆಮೀನ್.
✍ ರಿಯಾಝ್ ಮಲಾರ್
Comments