ﷺ- ಮೌಲಿದುನ್ನಬಿ
ಸ್ವಹಾಬೀ ವರ್ಯರಾದ ಜಾಬಿರ್ ಬಿನು ಅಬ್ದಿಲ್ಲಾಹ್(ರ) ರವರು ಹೇಳುತ್ತಾರೆ: "ನಾವೊಮ್ಮೆ ಪ್ರವಾಸ ಮುಗಿಸಿ ಬರುವ ಹಾದಿಯಲ್ವಿ ನಜ್ಜಾರ್ ವಂಶದವರ ತೋಟವೊಂದರ ಬಳಿ ತಲುಪಿದೆವು. ಅಲ್ಲೊಂದು ಸಿಟ್ಟು ಬಂದು ಸ್ಥಿಮಿತ ತಪ್ಪಿದ ಒಂಟೆಯು ಅಲೆಯುತ್ತಿತ್ತು. ಅದನ್ನು ಕಟ್ಟಿಹಾಕಿದ ನಂತರವಲ್ಲದೆ ಯಾರಿಗೂ ಅತ್ತ ಸುಳಿಯಲು ಧೈರ್ಯವಿರಲಿಲ್ಲ. ನಬಿ ﷺ ನೇರ ಬಂದು ಆ ಒಂಟೆಯನ್ನು ಕರೆದರು. ಏನದ್ಭುತ!. ಆ ಒಂಟೆಯು ತನ್ನೆಲ್ಲಾ ಸಿಟ್ಟನ್ನು ಬದಿಗಿಟ್ಟು ಶಿರಭಾಗಿ ಬಂದು ತನ್ನ ಮುಂಗೈಗಳೆರಡನ್ನೂ ನೆಲದಲ್ಲಿ ಚಾಚಿ ಮಂಡಿಯೂರಿ ವಿನಮ್ರವಾಗಿ ನಬಿ ﷺರ ಬಳಿ ಬಂದು ನಿಂತಿತು. ನಬಿ ﷺರು ಅನುಚರರೊಂದಿಗೆ ಮೂಗುದಾರವನ್ನು ತಂದು ಕಟ್ಟಿ ಈ ಒಂಟೆಯನ್ನು ಒಡೆಯನಿಗೆ ತಲುಪಿಸುವಂತೆ ಸೂಚಿಸಿ ಜನರತ್ತ ಮುಖ ಮಾಡಿ ಹೇಳಿದರು: "ಅಲ್ಲಾಹನಾಣೆ!. ಖಂಡಿತವಾಗಿಯೂ ಆಕಾಶ ಭೂಮಿಗಳೆಡೆಯಲ್ಲಿ ನಾನು ಅಲ್ಲಾಹನ ರಸೂಲರೆಂದು ತಿಳಿಯದ ಒಂದೇ ಒಂದು ವಸ್ತು ಇಲ್ಲ. ಜಿನ್ನ್ ಹಾಗೂ ಮನುಷ್ಯರ ಪೈಕಿಯಿರುವ ಅಹಂಕಾರಿಗಳ ಹೊರತು".(ಶರಹುಲ್ ಅಸೀದ)
*ಯಾ ರಸೂಲಲ್ಲಾಹ್ ﷺ ...ಖುಝ್ ಬಿ ಐದೀನಾ...*
Comments