Skip to main content

ಮೌಲಿದ್, ಪ್ರವಾದಿ ಪ್ರೇಮ

ನಬಿ ದಿನ ಕೊನೆಗೊಂಡಿದೆ
ನಬಿ ಸ್ನೇಹ ಕೊನೆಗೊಳ್ಳಲಿಲ್ಲ

1. *ಅಲೀ(ರ) ಹೇಳಿದರು*:
*ನಾವು ನಮ್ಮ ಸಂಪತ್ತಿಗಿಂತಲೂ ಮಕ್ಕಳಿಗಿಂತಲೂ ಮಾತಾ ಪಿತರಿಗಿಂತಲೂ ನಮಗೆ ತೀವ್ರ ಬಾಯಾರಿಗೆಯಾಗುವಾಗ ನಾವು ಇಷ್ಟಪಡುವ ತಂಪು ನೀರಿಗಿಂತಲೂ ಹೆಚ್ಚು ನಾವು ಪ್ರವಾದಿ ﷺ ರನ್ನು ಪ್ರೀತಿಸುತ್ತೇವೆ*

2. ಒಮ್ಮೆ ಉಮರ್(ರ)ರವರು ಪ್ರವಾದಿ ﷺ ರೊಡನೆ ಹೇಳಿದರು: ನನ್ನ ದೇಹವನ್ನು ಬಿಟ್ಟರೆ ನನಗೆ ಹೆಚ್ಚು ಪ್ರೀತಿ ನಿಮ್ಮೊಂದಿಗಾಗಿದೆ. ಆಗ ಪ್ರವಾದಿ ﷺ ರವರು ಹೇಳಿದರು: ನಿಮ್ಮ ಶರೀರಕ್ಕಿಂತಲೂ ಹೆಚ್ಚು ನಿಮಗೆ ನನ್ನ ಮೇಲೆ ಪ್ರೀತಿಯುಂಟಾಗುವವರೆಗೆ ನಿಮ್ಮ ಈಮಾನ್ ಪೂರ್ತಿಯಾಗಲ್ಲ. ತಕ್ಷಣ ಉಮರ್(ರ)ರವರು ಹೇಳಿದರು: ನನಗೆ ಈಗ ನನ್ನ ದೇಹಕ್ಕಿಂತ ಹೆಚ್ಚು ನಿಮ್ಮೊಂದಿಗೆ ಪ್ರೀತಿಯುಂಟಾಗಿದೆ. ಆಗ ಪ್ರವಾದಿ ﷺ ರವರು ಹೇಳಿದರು: ಈಗ ನಿಮ್ಮ ಈಮಾನ್ ಪೂರ್ತಿಯಾಯಿತು.

3. *ತ್ವಲಹತುಬ್ನು ಉಬೈದಿಲ್ಲಾಹ್(ರ)ರವರು ಉಹ್ದ್ ಯುದ್ಧದಲ್ಲಿ ಪ್ರವಾದಿ  ﷺ ರವರ ಕಡೆಗೆ ಬರುತಿದ್ದ ಬಾಣಗಳನ್ನು ಮನುಷ್ಯ ಗೋಡೆಯಾಗಿ ನಿಂತು ತಡೆದರು. ಆ ಕಾರಣದಿಂದ ಅವರ ದೇಹದಲ್ಲಿ 70ಕ್ಕಿಂತ ಹೆಚ್ಚು ಗಾಯಗಳಿದ್ದವು‌.ರಕ್ತ ಧಾರಕಾರವಾಗಿ ಹರಿಯುತ್ತಿತ್ತು..* *ಒಮ್ಮೆ ಪ್ರವಾದಿ(  ﷺ)ರವರು ಹೇಳಿದರು: ನೀವು ಭೂಮಿಯ ಮೇಲೆ ನಡೆದಾಡುತ್ತಿರುವ ಹುತಾತ್ಮನನ್ನು (ಶಹೀದನ್ನು) ನೋಡಲು ಇಚ್ಛೆಪಡುವುದಾದರೆ ತ್ವಲಹಃ(ರ)ರವರನ್ನು ನೋಡಿರಿ* .

4. ಅಬೂ ಉಬೈದ(ರ)ರವರು
ಉಹ್ದ್ ಯುದ್ಧದಲ್ಲಿ
ಪ್ರವಾದಿ ﷺ ರವರ ಮುಖಕ್ಕೆ ತಾಗಿದ ಮೊಳೆಯನ್ನು ಹಲ್ಲಿನಿಂತ ಕಚ್ಚಿ ತೆಗೆದ ಕಾರಣ ಅವರಿಗೆ ಮರಣದವರೆಗೆ ಎದುರು ಹಲ್ಲು ಇಲ್ಲದವರಾಗಿ ಜೀವಿಸಬೇಕಾಯಿತು.

5. *ಬಿಲಾಲ್ ಇಬ್ನ್ ರಬಾಹ(ರ)ರವರು ಪ್ರವಾದಿ ﷺ ರವರ ವಫಾತಿನ ನಂತರ ದುಃಖದಿಂದ ಮದೀನಾದಲ್ಲಿ ಅದಾನ್ ಕರೆಯಲು ಸಾಧ್ಯವಾಗದೆ ಮದೀನಾ ಬಿಟ್ಟು ಹೊರಟು ಹೋದರು* *ಉಮರ್(ರ)ರವರ ಖಿಲಾಫತ್ ಕಾಲದಲ್ಲಿ ಅವರ ಒತ್ತಾಯದ ಮೇರೆಗೆ ಅದಾನ್ ಕೊಡಲು ತಯಾರಾದರಾದರೂ ಅದಾನ್ ಪೂರ್ತಿಗೊಳಿಸಲಿಕ್ಕೆ ಸಾಧ್ಯವಾಗಲಿಲ್ಲ*

7. ಫಾತಿಮಾ(ರ)ರವರು ಪ್ರವಾದಿ( ﷺ)ರವರ ವಫಾತಿನ ನಂತರ ದಫನ ಮಾಡಿ ಬಂದ ಬಳಿಕ ಅನಸ್(ರ)ರೊಡನೆ ಕೇಳಿದರು: ನಿಮಗೆ ಪ್ರವಾದಿ( ﷺ  )ರವರ ಮೃತ ದೇಹವನ್ನು(ಮಯ್ಯತನ್ನು) ಕಬ್ರ್'ನಲ್ಲಿಟ್ಟು ಹೇಗೆ ಮಣ್ಣು ಹಾಕಲು ಮನಸ್ಸು ಬಂತು.

7. *ಝೈದ್ ಬಿನ್ ದಸಿರಾ(ರ)ರವರನ್ನು ಮುಶ್ರಿಕರು ಕೊಲ್ಲಲು ತಯಾರಾದ ಸಂದರ್ಭದಲ್ಲಿ ಅವರು ಕೇಳಿದರು: ನಿನ್ನ ಸ್ಥಾನದಲ್ಲಿ ಮುಹಮ್ಮದರನ್ನು ﷺ  ನಿಲ್ಲಿಸಿ ನೀನು ನಿನ್ನ ಕುಟುಂಬಕ್ಕೆ ಹೋಗುವುದನ್ನು ಇಚ್ಛೆಪಡುವುದಿಲ್ಲವೇ?*
*ಆಗ ಅವರು ಹೇಳಿದರು: ನನ್ನ ಪ್ರಾಣ ಹೋದರೂ ಪರವಾಗಿಲ್ಲ.ಆದರೆ ಪ್ರವಾದಿ(  ﷺ)ರವರ ಕಾಲಿಗೆ ಒಂದು ಮುಳ್ಳು ತಾಗುವುದನ್ನೂ ನಾನು ಇಷ್ಟಪಡುವುದಿಲ್ಲ.*
*ನಬಿ  ‌‌ﷺ ಸ್ನೇಹ*

*ಹೌದು ನಬಿ  ﷺ ರವರ ಸ್ನೇಹ ಅಂದರೆ ಹಾಗೆ.*
*ಅದಕ್ಕೆ ಯಾವ ಕಟ್ಟುಪಾಡು ಇಲ್ಲ. ಅದು ಯಾವ ವಿಧ ಬಹಿರ್ಗಳಿಸುವುದೆಂದು ಹೇಳಲಾಗುವುದಿಲ್ಲ‌* . *ನಿಯಮದ ಮೇರೆ ಮೀರದಂತೆ ಅದು ಹೇಗೆ ಪ್ರಕಟವಾದರೂ ಅದು ನಬಿ   ﷺ ರವರ ಸ್ನೇಹ*. 
*ಅದು ಅದಮ್ಯ ಸ್ನೇಹ*.
*ಮನದಾಳದಲ್ಲಿ ಅಚ್ಚೊತ್ತಿದ ಪ್ರೇಮ.*
*ಈಮಾನ್ ಇರುವವನು ಪ್ರಾಣ ಬೇಕಾದರೆ ಬಿಟ್ಟಾನು,  ನಬಿ  ﷺ ಪ್ರೇಮ ಬಿಟ್ಟುಬಿಡಲಾರನು.  ಯಾರೇ , ಏನೇ ಹೇಳಿದರೂ ಸರಿ.*

ನಬಿ  ﷺ ರವರ  ವಫಾತಾದ  ಸುದ್ಧಿ ತಿಳಿದ ತಕ್ಷಣ ಓರ್ವ ಸ್ವಹಾಬಿ ; " ಅಲ್ಲಾಹ್ ! ಪರಲೋಕದಲ್ಲಿ ಮುತ್ತು ಹಬೀಬರನ್ನು ನಾನು ಕಾಣುವ ತನಕ ನನಗೆ ಕಣ್ಣುಗಳೇ ಬೇಡ " ಎಂದು ಪ್ರಾರ್ಥಿಸಿದರು‌ . ಆಗಲೇ ಅವರ ದ್ರಷ್ಟಿ ಹೊರಟು ಹೋಯಿತು.

ನಾನು ಮರಣಹೊಂದಿದರೆ ನೀನು ಹೀಗೆ ಪ್ರಾರ್ಥಿಸಬೇಕು ಎಂದು ನಬಿ  ﷺ ರವರು ಸ್ವಹಾಬಿಯೊಡನೆ ಹೇಳಿರಲಿಲ್ಲ. ಆದರೂ ಸ್ವಹಾಬಿ ಹಾಗೆ ಪ್ರಾರ್ಥಿಸಿದರು. ಮಾತ್ರವಲ್ಲ , ಅಲ್ಲಾಹು ಆ ಪ್ರಾರ್ಥನೆಯನ್ನು ಸ್ವೀಕರಿಸಿದನು. .ಆದ್ದರಿಂದಲೇ  ಅವರ ದೃಷ್ಟಿಯನ್ನು ಅಲ್ಲಾಹು ಆಗಲೇ ತೆಗೆದು ಹಾಕಿದ್ದು.
ಇದು ನಬಿ  ﷺ ರವರ ಸ್ನೇಹವಾಗಿತ್ತು.ಭಾವುಕತೆಯಾಗಿತ್ತು. ಅದಕ್ಕೆ ಪ್ರವಾದಿ     ﷺ ರವರಿಂದ ಮಾದರಿ ಇಲ್ಲದಿದ್ದರೂ ಅಲ್ಲಾಹು ಅಂಗೀಕರಿಸಿದನು.

*ಪ್ರವಾದಿ ﷺ ರವರ ಸ್ನೇಹ ಪ್ರವಾದಿ ಪ್ರೇಮಿಗಳಿಗೆ ಗೊತ್ತೇ ಹೊರತು ಹ್ರದಯ ಸತ್ತವರಿಗೆ ಹೇಗೆ ಗೊತ್ತಾದೀತು..?*

ಆದ್ದರಿಂದ
*اللَّهُمَّ صَلِّ عَلَى سَيِّدِنَا مُحَمَّدٍ عَدَدَ مَا فِي عِلْمِ الله صَلاَةً دَائِمَةً بِدَوَامِ مُلْكِ الله*

*ಬನ್ನಿ , ಸ್ರಷ್ಟಿ ಶ್ರೇಷ್ಠ ವಿಶ್ವಾನುಗ್ರಹಿಯನ್ನು ನಾವು ಪ್ರೀತಿಸುವ. ಪ್ರೇಮಿಸುವ.*
*ಅವರ ಸ್ನೇಹ ಸಾಗರದಲ್ಲಿ ಮಿಂದು ಅನುರಾಗದ ಅನನ್ಯ ಸವಿಯನ್ನು ಪಡೆಯುವ.*

ಈ ಸುಸಂದರ್ಭದಲ್ಲಿ ಪ್ರವಾದಿ ﷺ ರವರ ಈ ಕೆಳಗಿನ ವಚನಗಳನ್ನು  ಮರೆಯದಿರೋಣ

*ಮನುಷ್ಯನು ತಾನು ಯಾರನ್ನು ಪ್ರೀತಿಸುವನೋ ಅವನೊಂದಿಗೆ ಪರಲೋಕದಲ್ಲಿರುವನು.( ಹದೀಸ್ ).*

*ಇತರೆಲ್ಲಾ ವಸ್ತುವಿಗಿಂತಲೂ ಅಲ್ಲಾಹು ಮತ್ತು ರಸೂಲರನ್ನು ಪ್ರೀತಿಸುವವನು ಈಮಾನಿನ ಸವಿ ಲಭಿಸಿದವನಾಗಿರುವನು.‌( ಹದೀಸ್ )*

*ತನ್ಬ ತಂದೆ,  ತಾಯಿ, ಪತ್ನಿ ಮಕ್ಕಳು, ಹಾಗೂ ಇತರೆಲ್ಲಾ ಮನುಷ್ಯರಿಗಿಂತ ಹೆಚ್ಚಾಗಿ ನನ್ನನ್ನು ಪ್ರೀತಿಸುವವರೆಗೆ ನಿಮ್ಮ ಪೈಕಿ ಯಾರು ಸಂಪೂರ್ಣ ಸತ್ಯವಿಶ್ವಾಸಿಯಾಗಲಾರರು. ( ಹದೀಸ್ )*

          *ಎಂ.ಎಂ. ಸಖಾಫಿ*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...