ಪೈಸಾಚಿಕ ಸಹಾಯ
*✒ಯೂಸುಫ್ ನಬ್ಹಾನಿ ಕುಕ್ಕಾಜೆ*
📞00971553499119
▪ *ಒಮ್ಮೆ* ಹನಫೀ ಮದ್ಹಬಿನ ಇಮಾಮರಾದ ಜ್ಞಾನಸೂರ್ಯ ಇಮಾಮ್ ಅಬೂ ಹನೀಫ (ರಅ) ರವರ ಸನ್ನಿಧಿಗೆ ಒಬ್ಬನು ಬಂದು ಹೇಳಿದನು. *"ಇಮಾಮರೇ.., ನಾನೊಂದು ದೊಡ್ಡ ಸಮಸ್ಯೆಗೆ ಒಳಗಾಗಿದ್ದೇನೆ. ನಾನು ಒಂದೆರಡು ವರ್ಷಗಳ ಮೊದಲು ಕಳ್ಳರ ಹಾವಳಿ ಮತ್ತು ಇತರ ಕೆಲವು ಸಮಸ್ಯೆಗಳಿಂದಾಗಿ ನನ್ನಲ್ಲಿರುವ ಬಂಗಾರ, ಬೆಳ್ಳಿ, ಹಣ ಅಂತೆಯೇ ಹಲವಾರು ಬೆಲೆಬಾಳುವ ವಸ್ತುಗಳನ್ನು ಒಂದು ಪೆಟ್ಟಿಗೆಯಲ್ಲಿಟ್ಟು ಒಂದು ಕಡೆ ಹುಗಿದಿಟ್ಟಿದ್ದೆನು. ಆದರೆ ಈಗ ಅದರ ಅಗತ್ಯ ಬರುವಾಗ ಹುಗಿದಿಟ್ಟ ಜಾಗ ನೆನಪಿನಿಂದ ಮರೆತು ಹೋಗಿದೆ. ಏನು ಮಾಡಬೇಕೆಂದು ತಿಳಿಯದೆ ಕಂಗಾಲಾಗಿದ್ದೇನೆ. ತಲೆಬಿಸಿಯಿಂದ ಹಲವಾರು ದಿನಗಳಿಂದ ನಿದ್ದೆ ಬರುವುದಿಲ್ಲ. ಊಟ ಪಾನೀಯಗಳು ಕೂಡ ಬೇಡವೆಂದೆನಿಸುತ್ತದೆ. ಆದ್ದರಿಂದ ಅದನ್ನು ಸಿಗುವಂತೆ ಮಾಡಲು ನಿಮ್ಮಲ್ಲಿ ಏನಾದರೂ ಮಾರ್ಗವಿದೆಯಾ..? ದಯೆಮಾಡಿ ನನಗೆ ತಿಳಿಸುವಿರಾ..? ಅದಕ್ಕೋಸ್ಕರ ನಾನು ನಿಮ್ಮ ಈ ಮಹಾ ಸನ್ನಿಧಿಗೆ ಬಂದಿದ್ದೇನೆ."*
▪ *ಇಮಾಮ್* ಅಬೂಹನೀಫ (ರಅ) ಹೇಳಿದರು. *"ನನ್ನಲ್ಲಿ ಇದಕ್ಕೆ ಏನು ಪರಿಹಾರ..? ನಾನೊಬ್ಬ ಇಸ್ಲಾಮಿನ ಕರ್ಮಶಾಸ್ತ್ರ ಪಂಡಿತ. ಆ ವಿಷಯದಲ್ಲಿ ಏನಾದರು ಸಮಸ್ಯೆಯಿದ್ದಲ್ಲಿ ಪರಿಹಾರ ಹುಡುಕಬಹುದಿತ್ತು. ಆದರೆ ಇದಕ್ಕೆ ನನ್ನಲ್ಲಿ ಪರಿಹಾರವಿಲ್ಲ."*
▪ *ಸಮಸ್ಯೆಗೊಳಗಾದ* ಬಡಪಾಯಿಯು, ಇಮಾಮ್ ಅಬೂಹನೀಫರಿಂದ ಈ ನಿರಾಶಾದಾಯಕ ಉತ್ತರ ದೊರೆತಾಗ ಬಹಳ ಚಿಂತೆಗೊಳಗಾದನು. ಏನು ಮಾಡಬೇಕೆಂದು ತಿಳಿಯದೆ ಬಹಳ ಬೇಸರದಿಂದ ಮನೆಯಿಂದ ಹೊರಡಲು ರೆಡಿಯಾಗುವಾಗ ಬುದ್ದಿವಂತನಾದ ಇಮಾಮರಿಗೆ ಒಂದು ಉಪಾಯ ಹೊಳೆಯಿತು. ಸಮಸ್ಯೆಗೆ ಪರಿಹಾರ ಹುಡುಕಲು ತನ್ನ ಮನೆಬಾಗಿಲಿಗೆ ಬಂದ ವ್ಯಕ್ತಿಯಲ್ಲಿ ಇಮಾಮರು ಹೇಳಿದರು. *"ಗಾಬರಿಪಡಬೇಡ. ಒಂದು ಉಪಾಯವಿದೆ. ನೀನಿವತ್ತು ರಾತ್ರಿ ಇಶಾ ನಮಾಝು ಮುಗಿದು ಬೆಳಗಿನ ತನಕ ಬಹಳ ಭಕ್ತಿಯಿಂದ ಸುನ್ನತ್ ನಮಾಝು ಮಾಡಬೇಕು. ಇಂಶಾ ಅಲ್ಲಾಹ್.. ಅದರೆಡೆಯಲ್ಲಿ ನಿನ್ನ ಹೂತಿಟ್ಟ ಹಣ ಎಲ್ಲಿದೆಯೆಂದು ತಿಳಿಯಬಹುದು."*
▪ *ಇಮಾಮರ* ಮಾತು ಯಾವತ್ತೂ ಸುಳ್ಳಾಗದು ಎಂಬ ದೃಡವಾದ ನಂಬಿಕೆಯಲ್ಲಿ ಈತನು ರಾತ್ರಿ ಇಶಾ ನಮಾಝು ಮುಗಿದು ಸುನ್ನತ್ ನಮಾಝ್ ಮಾಡಲು ಶುರು ಮಾಡಿದನು. ಸುಬ್ಹಾನಲ್ಲಾಹ್ ಬೆಳಗಾಗುವುವುದು ಬಿಟ್ಟು ನಾಲ್ಕು ರಕಅತ್ ಪೂರ್ತಿಯಾಗುದಕ್ಕೆ ಮೊದಲೇ ಹಣ ಹುಗಿದಿಟ್ಡ ಸ್ಥಳ ಎಲ್ಲಿಯೆಂದು ನೆನಪಿಗೆ ಬಂತು.
▪ *ಕೂಡಲೇ* ನಮಾಝು ಪೂರ್ತಿಮಾಡದೆ ಅಲ್ಲಿಂದಲೇ ಕೈಬಿಟ್ಟು ನಮಾಝು ನಾಳೆ ಮಾಡುವ ಎಂದು ಮನದಲ್ಲಿ ಹೇಳಿ ಹೂತಿಟ್ಟ ಹಣದ ಪೆಟ್ಟಿಗೆ ತೆಗೆಯಲು ಹೋದನು. ನಂತರ ಪೆಟ್ಟಿಗೆಯನ್ನು ಹೊರ ತೆಗೆದು ಮನೆಗೆ ತಂದು ಆರಾಮವಾಗಿ ಮಲಗಿದನು.
▪ *ಮಾರನೆಯ* ದಿನ ಬೆಳಿಗ್ಗೆ ಈತನು ಇಮಾಮ್ ಅಬೂಹನೀಫರ ಸನ್ನಿಧಿಗೆ ಕೃತಜ್ಞತೆ ಹೇಳಲು ಬಂದಾಗ ಅವರಲ್ಲಿ ಕೇಳಿದ. *"ಇಮಾಮರೇ.., ನೀವು ನನ್ನ ಹಣದ ಪೆಟ್ಟಿಗೆ ಹುಗಿದಿಟ್ಟ ಜಾಗ ತಿಳಿಯದೆ ಹೋದಾಗ ನಮಾಝು ಮಾಡಲು ಹೇಳಿದಿರಿ. ಅಂತೆಯೇ ನಾನು ನಮಾಝಿಗೆ ಪ್ರವೇಶಿಸಿ ಒಂದೆರಡು ರಕಅತ್ ಪೂರ್ತಿಯಾಗುವುದಕ್ಕೆ ಮೊದಲೇ ಜಾಗ ತಿಳಿಯಿತು. ಏನಿದರ ರಹಸ್ಯ...? ನನಗದನ್ನು ತಿಳಿಯುವ ಕುತೂಹಲವಿದೆ."*
▪ *ಇಮಾಮ್* ಅಬೂಹನೀಫ (ರಅ) ಹೇಳಿದರು. *"ನಾನು ಬಹಳ ಆಲೋಚನೆ ಮಾಡಿದಾಗ ಮನಸಿಗೆ ಹೊಳೆದ ಒಂದು ಉಪಾಯವಾಗಿದೆ ಅದು. ನೀನು ಹುಗಿದಿಟ್ಟ ಜಾಗವನ್ನು ನಿನ್ನ ನೆನಪಿನಿಂದ ತೆಗೆದದ್ದು ಶೈತಾನನು. ನೀನಿನ್ನು ಅದಕ್ಕೆ ಬೇಕಾಗಿ ರಾತ್ರಿಯಿಂದ ಬೆಳಗಿನ ತನಕ ನಮಾಝು ಮಾಡುವುದು ಅದು ಅವನಿಗೆ ಬಹಳ ಕಹಿಯಾದ ವಿಷಯ. ಅದನ್ನು ಅವನಿಗೆ ಯಾವತ್ತೂ ಸಹಿಸಲು ಸಾಧ್ಯವಿಲ್ಲ. ಆದ್ದರಿಂದಲೇ ಅವನು ನಿನ್ನ ಮನಸ್ಸಿಗೆ ಹುಗಿದಿಟ್ಟ ಜಾಗವನ್ನು ನೆನಪಿಗೆ ತಂದನು. ಆಗ ನೀನು ನಮಾಝು ಬಿಟ್ಟು ಓಡಿದೆ."*
ಸಂಗ್ರಹ; *ಖತಾಯಿಫ್ ಅಲ್ ಲತಾಯಿಫ್* ಎಂಬ ಗ್ರಂಥ.
*✒ಯೂಸುಫ್ ನಬ್ಹಾನಿ ಕುಕ್ಕಾಜೆ*
📞00971553499119
▪ *ಒಮ್ಮೆ* ಹನಫೀ ಮದ್ಹಬಿನ ಇಮಾಮರಾದ ಜ್ಞಾನಸೂರ್ಯ ಇಮಾಮ್ ಅಬೂ ಹನೀಫ (ರಅ) ರವರ ಸನ್ನಿಧಿಗೆ ಒಬ್ಬನು ಬಂದು ಹೇಳಿದನು. *"ಇಮಾಮರೇ.., ನಾನೊಂದು ದೊಡ್ಡ ಸಮಸ್ಯೆಗೆ ಒಳಗಾಗಿದ್ದೇನೆ. ನಾನು ಒಂದೆರಡು ವರ್ಷಗಳ ಮೊದಲು ಕಳ್ಳರ ಹಾವಳಿ ಮತ್ತು ಇತರ ಕೆಲವು ಸಮಸ್ಯೆಗಳಿಂದಾಗಿ ನನ್ನಲ್ಲಿರುವ ಬಂಗಾರ, ಬೆಳ್ಳಿ, ಹಣ ಅಂತೆಯೇ ಹಲವಾರು ಬೆಲೆಬಾಳುವ ವಸ್ತುಗಳನ್ನು ಒಂದು ಪೆಟ್ಟಿಗೆಯಲ್ಲಿಟ್ಟು ಒಂದು ಕಡೆ ಹುಗಿದಿಟ್ಟಿದ್ದೆನು. ಆದರೆ ಈಗ ಅದರ ಅಗತ್ಯ ಬರುವಾಗ ಹುಗಿದಿಟ್ಟ ಜಾಗ ನೆನಪಿನಿಂದ ಮರೆತು ಹೋಗಿದೆ. ಏನು ಮಾಡಬೇಕೆಂದು ತಿಳಿಯದೆ ಕಂಗಾಲಾಗಿದ್ದೇನೆ. ತಲೆಬಿಸಿಯಿಂದ ಹಲವಾರು ದಿನಗಳಿಂದ ನಿದ್ದೆ ಬರುವುದಿಲ್ಲ. ಊಟ ಪಾನೀಯಗಳು ಕೂಡ ಬೇಡವೆಂದೆನಿಸುತ್ತದೆ. ಆದ್ದರಿಂದ ಅದನ್ನು ಸಿಗುವಂತೆ ಮಾಡಲು ನಿಮ್ಮಲ್ಲಿ ಏನಾದರೂ ಮಾರ್ಗವಿದೆಯಾ..? ದಯೆಮಾಡಿ ನನಗೆ ತಿಳಿಸುವಿರಾ..? ಅದಕ್ಕೋಸ್ಕರ ನಾನು ನಿಮ್ಮ ಈ ಮಹಾ ಸನ್ನಿಧಿಗೆ ಬಂದಿದ್ದೇನೆ."*
▪ *ಇಮಾಮ್* ಅಬೂಹನೀಫ (ರಅ) ಹೇಳಿದರು. *"ನನ್ನಲ್ಲಿ ಇದಕ್ಕೆ ಏನು ಪರಿಹಾರ..? ನಾನೊಬ್ಬ ಇಸ್ಲಾಮಿನ ಕರ್ಮಶಾಸ್ತ್ರ ಪಂಡಿತ. ಆ ವಿಷಯದಲ್ಲಿ ಏನಾದರು ಸಮಸ್ಯೆಯಿದ್ದಲ್ಲಿ ಪರಿಹಾರ ಹುಡುಕಬಹುದಿತ್ತು. ಆದರೆ ಇದಕ್ಕೆ ನನ್ನಲ್ಲಿ ಪರಿಹಾರವಿಲ್ಲ."*
▪ *ಸಮಸ್ಯೆಗೊಳಗಾದ* ಬಡಪಾಯಿಯು, ಇಮಾಮ್ ಅಬೂಹನೀಫರಿಂದ ಈ ನಿರಾಶಾದಾಯಕ ಉತ್ತರ ದೊರೆತಾಗ ಬಹಳ ಚಿಂತೆಗೊಳಗಾದನು. ಏನು ಮಾಡಬೇಕೆಂದು ತಿಳಿಯದೆ ಬಹಳ ಬೇಸರದಿಂದ ಮನೆಯಿಂದ ಹೊರಡಲು ರೆಡಿಯಾಗುವಾಗ ಬುದ್ದಿವಂತನಾದ ಇಮಾಮರಿಗೆ ಒಂದು ಉಪಾಯ ಹೊಳೆಯಿತು. ಸಮಸ್ಯೆಗೆ ಪರಿಹಾರ ಹುಡುಕಲು ತನ್ನ ಮನೆಬಾಗಿಲಿಗೆ ಬಂದ ವ್ಯಕ್ತಿಯಲ್ಲಿ ಇಮಾಮರು ಹೇಳಿದರು. *"ಗಾಬರಿಪಡಬೇಡ. ಒಂದು ಉಪಾಯವಿದೆ. ನೀನಿವತ್ತು ರಾತ್ರಿ ಇಶಾ ನಮಾಝು ಮುಗಿದು ಬೆಳಗಿನ ತನಕ ಬಹಳ ಭಕ್ತಿಯಿಂದ ಸುನ್ನತ್ ನಮಾಝು ಮಾಡಬೇಕು. ಇಂಶಾ ಅಲ್ಲಾಹ್.. ಅದರೆಡೆಯಲ್ಲಿ ನಿನ್ನ ಹೂತಿಟ್ಟ ಹಣ ಎಲ್ಲಿದೆಯೆಂದು ತಿಳಿಯಬಹುದು."*
▪ *ಇಮಾಮರ* ಮಾತು ಯಾವತ್ತೂ ಸುಳ್ಳಾಗದು ಎಂಬ ದೃಡವಾದ ನಂಬಿಕೆಯಲ್ಲಿ ಈತನು ರಾತ್ರಿ ಇಶಾ ನಮಾಝು ಮುಗಿದು ಸುನ್ನತ್ ನಮಾಝ್ ಮಾಡಲು ಶುರು ಮಾಡಿದನು. ಸುಬ್ಹಾನಲ್ಲಾಹ್ ಬೆಳಗಾಗುವುವುದು ಬಿಟ್ಟು ನಾಲ್ಕು ರಕಅತ್ ಪೂರ್ತಿಯಾಗುದಕ್ಕೆ ಮೊದಲೇ ಹಣ ಹುಗಿದಿಟ್ಡ ಸ್ಥಳ ಎಲ್ಲಿಯೆಂದು ನೆನಪಿಗೆ ಬಂತು.
▪ *ಕೂಡಲೇ* ನಮಾಝು ಪೂರ್ತಿಮಾಡದೆ ಅಲ್ಲಿಂದಲೇ ಕೈಬಿಟ್ಟು ನಮಾಝು ನಾಳೆ ಮಾಡುವ ಎಂದು ಮನದಲ್ಲಿ ಹೇಳಿ ಹೂತಿಟ್ಟ ಹಣದ ಪೆಟ್ಟಿಗೆ ತೆಗೆಯಲು ಹೋದನು. ನಂತರ ಪೆಟ್ಟಿಗೆಯನ್ನು ಹೊರ ತೆಗೆದು ಮನೆಗೆ ತಂದು ಆರಾಮವಾಗಿ ಮಲಗಿದನು.
▪ *ಮಾರನೆಯ* ದಿನ ಬೆಳಿಗ್ಗೆ ಈತನು ಇಮಾಮ್ ಅಬೂಹನೀಫರ ಸನ್ನಿಧಿಗೆ ಕೃತಜ್ಞತೆ ಹೇಳಲು ಬಂದಾಗ ಅವರಲ್ಲಿ ಕೇಳಿದ. *"ಇಮಾಮರೇ.., ನೀವು ನನ್ನ ಹಣದ ಪೆಟ್ಟಿಗೆ ಹುಗಿದಿಟ್ಟ ಜಾಗ ತಿಳಿಯದೆ ಹೋದಾಗ ನಮಾಝು ಮಾಡಲು ಹೇಳಿದಿರಿ. ಅಂತೆಯೇ ನಾನು ನಮಾಝಿಗೆ ಪ್ರವೇಶಿಸಿ ಒಂದೆರಡು ರಕಅತ್ ಪೂರ್ತಿಯಾಗುವುದಕ್ಕೆ ಮೊದಲೇ ಜಾಗ ತಿಳಿಯಿತು. ಏನಿದರ ರಹಸ್ಯ...? ನನಗದನ್ನು ತಿಳಿಯುವ ಕುತೂಹಲವಿದೆ."*
▪ *ಇಮಾಮ್* ಅಬೂಹನೀಫ (ರಅ) ಹೇಳಿದರು. *"ನಾನು ಬಹಳ ಆಲೋಚನೆ ಮಾಡಿದಾಗ ಮನಸಿಗೆ ಹೊಳೆದ ಒಂದು ಉಪಾಯವಾಗಿದೆ ಅದು. ನೀನು ಹುಗಿದಿಟ್ಟ ಜಾಗವನ್ನು ನಿನ್ನ ನೆನಪಿನಿಂದ ತೆಗೆದದ್ದು ಶೈತಾನನು. ನೀನಿನ್ನು ಅದಕ್ಕೆ ಬೇಕಾಗಿ ರಾತ್ರಿಯಿಂದ ಬೆಳಗಿನ ತನಕ ನಮಾಝು ಮಾಡುವುದು ಅದು ಅವನಿಗೆ ಬಹಳ ಕಹಿಯಾದ ವಿಷಯ. ಅದನ್ನು ಅವನಿಗೆ ಯಾವತ್ತೂ ಸಹಿಸಲು ಸಾಧ್ಯವಿಲ್ಲ. ಆದ್ದರಿಂದಲೇ ಅವನು ನಿನ್ನ ಮನಸ್ಸಿಗೆ ಹುಗಿದಿಟ್ಟ ಜಾಗವನ್ನು ನೆನಪಿಗೆ ತಂದನು. ಆಗ ನೀನು ನಮಾಝು ಬಿಟ್ಟು ಓಡಿದೆ."*
ಸಂಗ್ರಹ; *ಖತಾಯಿಫ್ ಅಲ್ ಲತಾಯಿಫ್* ಎಂಬ ಗ್ರಂಥ.
Comments