Skip to main content

ಅಹ್ಲುಬೈತ್'ನೊಂದಿಗಿನ ಸ್ನೇಹ

ಅಹ್ಲುಬೈತ್'ನೊಂದಿಗಿನ ಸ್ನೇಹ
ಮುಹಮ್ಮದ್ ತೌಸ್ವೀಫ್ ಕಾಪು

      ಬಗ್ದಾದಿನ ವ್ಯಾಪಾರಿಯೊಬ್ಬರು ನಮಾಝ್ ನಿರ್ವಹಿಸಲು ಮಸ್ಜಿದ್'ಗೆ ಪ್ರವೇಶಿಸಿದರು. ಅಲ್ಲಿ *ಜಮಾಅತ್ (ಸಾಮೂಹಿಕ)* ನಮಾಝ್ ನಡೆಯುತ್ತಿತ್ತು. ನಮಾಝ್ ಮುಗಿದೊಡನೆ ಆ ನಮಾಝಿನಲ್ಲಿ ಭಾಗವಹಿಸಿದ್ದ ವ್ಯಕ್ತಿಯೊಬ್ಬರು ಎದ್ದು ನಿಂತು ಹೇಳಿದರು; *'ಸ್ನೇಹಿತರೇ ನಾನು ನಬಿ ಕುಟುಂಬದ ಓರ್ವ ಸದಸ್ಯನಾಗಿದ್ದೇನೆ. ನನಗೆ ವಿವಾಹ ಪ್ರಾಯ ತಲುಪಿದ ಓರ್ವ ಮಗಳಿದ್ದಾಳೆ. ಅವಳನ್ನು ಮದುವೆ ಮಾಡಿಕೊಡಲು ಆರ್ಥಿಕ ಸಾಮರ್ಥ್ಯವು ನನಗಿಲ್ಲ. ಆದ್ದರಿಂದ ನನ್ನ ಪಿತಾಮಹರಾದ ನಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರನ್ನು ನೆನೆದು ನೀವು ನನಗೆ ಸಹಾಯ ಮಾಡಬೇಕು.'*

     ನಮಾಝ್ ಮುಗಿಸಿ ಹೊರಟ ಹಲವರು, *'ಇವರಂತೆ ಅದೆಷ್ಟೋ ಮಂದಿಯನ್ನು ನಾವು ಕಂಡಿದ್ದೇವೆ'* ಎಂಬ ಭಾವನೆಯೊಂದಿಗೆ ಆ ವ್ಯಕ್ತಿಯನ್ನು ಕಡೆಗಣಿಸಿದರು. ಕೆಲವೇ ಕೆಲವರು ಮಾತ್ರ ಸಣ್ಣ ಪುಟ್ಟ ಸಹಾಯವನ್ನು ಮಾಡಿದರು. *ಆದರೆ ಒಬ್ಬ ವ್ಯಾಪಾರಿಗೆ ಈ ಅಪೇಕ್ಷೆಯು ಸಣ್ಣದಾಗಿ ಕಾಣಲಿಲ್ಲ. ಓರ್ವ ಸಯ್ಯದ್ ಅಲ್ಲವೇ ಈ ರೀತಿ ಕೇಳುತ್ತಿರುವುದು? ಮತ್ತವರು ಹೆಚ್ಚೇನೂ ಚಿಂತಿಸಲಿಲ್ಲ. ತನ್ನ ಕೈಯಲ್ಲಿದ್ದ ಐನೂರು ಬೆಳ್ಳಿ ನಾಣ್ಯಗಳನ್ನು ಆ ಸಯ್ಯದರಿಗೆ ಅವರು ಕೊಟ್ಟುಬಿಟ್ಟರು‌.! ಸಯ್ಯದ್‌ರವರಿಗೆ ತುಂಬಾ ಸಂತೋಷವಾಯಿತು. ಓರ್ವ ಸಯ್ಯದರಿಗೆ ಸಹಾಯ ಮಾಡಿದ್ದೇನೆಂದು ವ್ಯಾಪಾರಿಗೂ ಆತ್ಮ ತೃಪ್ತಿ! ಇಬ್ಬರೂ ಪರಸ್ಪರ ಬೀಳ್ಕೊಟ್ಟು ಹೊರಟು ಹೋದರು.*

         ಅಂದು ರಾತ್ರಿ ಆ ವ್ಯಾಪಾರಿಯು *ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರನ್ನು* ಕನಸಿನಲ್ಲಿ ದರ್ಶಿಸಿದರು. ಪ್ರಕಾಶಿಸುತ್ತಿರುವ ಮುಖ! ಹಬೀಬ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಮುಗುಳ್ನಕ್ಕರು! ನಂತರ ಹೇಳಿದರು; *“ಓ ಯುವಕನೇ... ನನ್ನ ಪೌತ್ರನಿಗೆ ತಾವು ನೀಡಿದ ಕೊಡುಗೆಯ ಬಗ್ಗೆ ನಾನು ತಿಳಿದುಕೊಂಡೆ. ತಾವು `ಬಲ್ಖಾ' ನಗರಕ್ಕೆ ಹೋಗಿ ಅಬ್ದುಲ್ಲಾಹಿಬ್ನು ತ್ವಾಹಿರ್ ಎಂಬವರನ್ನು ಭೇಟಿಯಾಗಬೇಕು. ಅವರಿಗೆ ನನ್ನ  ಸಲಾಂ ತಿಳಿಸಿದ ನಂತರ ಐನೂರು ಚಿನ್ನದ ನಾಣ್ಯಗಳನ್ನು ನೀಡಲು ಹೇಳಬೇಕು.'*
ಇಷ್ಟರಲ್ಲಿ ಆ ವ್ಯಾಪಾರಿ ನಿದ್ದೆಯಿಂದ ಎದ್ದು ಬಿಟ್ಟರು. ತಾನು ಕಂಡ ಕನಸಿನ ವಿಷಯವನ್ನು ತನ್ನ ಪತ್ನಿಗೆ ತಿಳಿಸಿದರು. ಪತ್ನಿಗೆ ಸಂತೋಷವಾದರೂ ಒಂದು
ಕಳವಳ, ಅದನ್ನವಳು ಸ್ಪಷ್ಟವಾಗಿ ಹೇಳಿದಳು; *'ತಾವು ಬಲ್ಕಾಗೆ ಹೋಗಿ ಮರಳಿ ಬರುವವರೆಗೂ ನಾನು ಹೇಗೆ ಜೀವನ ಸಾಗಿಸಲಿ?* ಖರ್ಚಿಗೆ ನಮ್ಮ ಕೈಯಲ್ಲಿ ಏನೂ ಇಲ್ಲವಲ್ಲ...!”

    ಪತ್ನಿಯ ಮಾತುಗಳನ್ನು ಕೇಳಿದ ವ್ಯಾಪಾರಿಯು ಚಿಂತಿಸತೊಡಗಿದರು.ಅವಳು ಹೇಳುತ್ತಿರುವುದು ಸರೀನೇ ಎಂದು ಅವರಿಗೆ ಹೊಳೆಯಿತು. ಆದರೆ, ಏನು ಮಾಡವುದು? ಏನೇ ಆಗಲಿ, ಎಂದು ಭಾವಿಸಿದ ಆ ವ್ಯಾಪಾರಿಯು ಅದಕ್ಕೊಂದು ಪರಿಹಾರವನ್ನು ಕಂಡುಕೊಳ್ಳಲು ತನ್ನ ಮಿತ್ರನಾಗಿರುವ ನೆರೆಮನೆಯವನನ್ನು ಭೇಟಿ
ಮಾಡಿದರು. ಅವರಲ್ಲಿ ತನ್ನ ವ್ಯಥೆಯನ್ನು ತೋಡಿಕೊಂಡರು. ನಂತರ ಹೇಳಿದರು; *'ಮಿತ್ರಾ...* ನಾನು ಒಂದು ಉದ್ದೇಶಕ್ಕಾಗಿ ಬಲ್ಕಾಗೆ ಹೊರಡುತ್ತೇನೆ. ನಾನು ಮರಳಿ ಬರುವವರೆಗೂ ನನ್ನ ಕುಟುಂಬಕ್ಕೆ ನಿತ್ಯ ಖರ್ಚಿಗೆ ಅಗತ್ಯವಾದ ಬೆಳ್ಳಿ ನಾಣ್ಯಗಳನ್ನು
ತಾವು ಅವರಿಗೆ ನೀಡಬೇಕು. ತಾವು ಖರ್ಚು ಮಾಡಿದ ಪ್ರತಿಯೊಂದು ಬೆಳ್ಳಿ ನಾಣ್ಯಕ್ಕೂ ಬದಲಾಗಿ ನಾನು *ಚಿನ್ನದ ನಾಣ್ಯವನ್ನು* ನೀಡುತ್ತೇನೆ.'

       ಇದನ್ನು ಕೇಳಿದ ಆ ಮಿತ್ರನು ನೀಡಿದ ಪ್ರತಿಕ್ರಿಯೆಯು ವ್ಯಾಪಾರಿಯಲ್ಲಿ
ಆಶ್ಚರ್ಯವನ್ನು ಮೂಡಿಸಿತು. ಅವರು ಹೇಳಿದರು; *'ಮಿತ್ರಾ... ತಾವು ಬಲ್ಖಾಕ್ಕೆ ಹೋಗಿ ಮರಳಿ ಬರುವವರೆಗೂ ತಮ್ಮ ಕುಟುಂಬದ ಖರ್ಚು ವೆಚ್ಚವನ್ನು ನೋಡಿಕೊಳ್ಳಲು ನಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಕನಸಿನಲ್ಲಿ ನನಗೆ ಆದೇಶಿಸಿದ್ದಾರೆ.!* ನೀವು ಬಲ್ಕಾಕ್ಕೆ ಹೊರಡಿರಿ. ತಮ್ಮ ಕುಟುಂಬವನ್ನು ನಾನು ಚೆನ್ನಾಗಿ ನೋಡಿಕೊಳ್ಳುತ್ತೇನೆ.' ಇದನ್ನು ಕೇಳಿದ ವ್ಯಾಪಾರಿಯು ವಿಳಂಬ ಮಾಡದೆ ಬಲ್ಖಾದತ್ತ ಹೊರಟರು.

     ಅಲ್ಲಿಗೆ ತಲುಪಿ ನೋಡುವಾಗ ನಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಕನಸಿನಲ್ಲಿ ಭೇಟಿಯಾಗಲು ನಿರ್ದೇಶಿಸಿದ್ದ *ಅಬ್ದುಲ್ಲಾಹಿ ಬಿನ್ ತ್ವಾಹಿರ್‌ರವರು* ಈ ವ್ಯಾಪಾರಿಯನ್ನು ಸ್ವೀಕರಿಸಲು ಕಾದು ನಿಂತಿದ್ದರು. ಅವರು ಇವರನ್ನು ಕಂಡ ತಕ್ಷಣ ಹೇಳಿದರು; *“ಪ್ರೀತಿಯ ಮಿತ್ರಾ.. ಬಗ್ದಾದಿನಿಂದ ಆಗಮಿಸುವ ನಿಮ್ಮನ್ನು ಸ್ವೀಕರಿಸಲು, ಗೌರವಿಸಲು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ನನಗೆ ಕನಸಿನಲ್ಲಿ ನಿರ್ದೇಶಿಸಿದ್ದಾರೆ.*

   ತದನಂತರ *ಅಬ್ದುಲ್ಲಾಹಿಬ್‌ನು ತ್ವಾಹಿರ್‌ರವರು* ಯುವಕನಾದ ಆ
ವ್ಯಾಪಾರಿಯನ್ನು ತನ್ನ ಮನೆಗೆ ಕರೆದುಕೊಂಡು ಹೋದರು. ಮೂರು ದಿನಗಳವರೆಗೆ ಅವರ ಮನೆಯಲ್ಲಿಯೇ ವಸತಿ ವ್ಯವಸ್ಥೆ ಮಾಡಿ ಸತ್ಕರಿಸಿದರು. ಮರಳಿ ಹೋಗುವಾಗ
*ಐನೂರು ಚಿನ್ನ ನಾಣ್ಯಗಳನ್ನು ನೀಡಿ ಬಿಳ್ಕೊಟ್ಟರು.* ಅಷ್ಟೇ ಅಲ್ಲ, ಆ ಯುವ ವ್ಯಾಪಾರಿಯನ್ನು ನಿರ್ಭಯವಾಗಿ ಅವರ ಮನೆ ತಲುಪಿಸಲು ಒಂದು ಸಂಘವನ್ನೂ
ಕಳುಹಿಸಿದರು.
*(ತಪ್ಸೀರ್ ರೂಹುಲ್ ಬಯಾನಿ)*

_ಇದರಲ್ಲಿ ವಿವರಿಸಿದ ಈ ಘಟನೆಯು *ಅಹ್ಲುಬೈತಿನ ಅಥವಾ ಪ್ರವಾದಿ ಕುಟುಂಬದ ಮಹತ್ವವನ್ನು, ಅವರನ್ನು ಗೌರವಿಸುವುದರ ಪುಣ್ಯವನ್ನೂ ನಮಗೆ ಕಲಿಸಿಕೊಡುತ್ತದೆ.* ನಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಮೊಮ್ಮಕ್ಕಳಾದ ಹಸನ್, ಹುಸೈನ್ ರಳಿಯಲ್ಲಾಹು ಅನ್'ಹುಮಾರವರ ಸಂತಾನ ಪರಂಪರೆಯಲ್ಲಿ ಒಳಪಟ್ಟವರಾಗಿದ್ದಾರೆ *ತಂಙಲ್‌ಗಳೆಂದು* ಪರಿಚಿತರಾದ ಸಯ್ಯದರುಗಳು. ಅವರೊಂದಿಗಿನ ಸ್ನೇಹವು ಸತ್ಯವಿಶ್ವಾಸದ ಒಂದು ಭಾಗವಾಗಿದೆ. ಪ್ರಪಂಚದಾದ್ಯಂತ ಸಾಮಾನ್ಯವಾಗಿ ಹಾಗೂ ಪ್ರತ್ಯೇಕವಾಗಿ *ಕೇರಳದಲ್ಲಿ ಇಸ್ಲಾಂ ಧರ್ಮ ಪ್ರಚಾರದಲ್ಲಿಯೂ, ಈ ಸಮುದಾಯಕ್ಕೆ ಎಲ್ಲಾ ಕಾಲದಲ್ಲಿಯೂ ನಾಯಕತ್ವ ನೀಡುವುದರಲ್ಲಿ ತಂಙಲ್‌ಗಳ ಪಾತ್ರವು ಅಪಾರ.🥰*_

☘☘☘☘🍀🍀🍀🍀🍀

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...