ಕಾಲದ ಸಂಗಾತಿ -- "ಸೂರತುಲ್ ವಾಖಿಅಃ"
ಯೂಸುಫ್ ನಬ್ಹಾನಿ ಕುಕ್ಕಾಜೆ
📞00971 553499119
▪ *ಪ್ರಖ್ಯಾತ* ಸ್ವಹಾಬಿ ಹಝ್ರತ್ ಅಬ್ದುಲ್ಲಾಹ್ ಬಿನ್ ಮಸ್ಊದ್ (ರ) ರವರು ಖಲೀಫಾ ಉಸ್ಮಾನ್ (ರ) ರ ಖಿಲಾಫತಿನ ವೇಳೆ ಇರಾಕಿನ 'ಕೂಫಾ' ಪ್ರಾಂತದ ಗವರ್ನರ್ ಆಗಿ ನಿಯುಕ್ತರಾಗಿದ್ದರು.
▪ *ಅಧಿಕಾರದಲ್ಲಿರುವಾಗಲೇ* ಅನಾರೋಗ್ಯ ಪೀಡಿತರಾದ ಅವರು ತನ್ನ ಊರಾದ ಮದೀನಾಕ್ಕೆ ವಾಪಾಸಾದರು. ಸ್ವಗೃಹದಲ್ಲಿ ಖಾಯಿಲೆ ಪೀಡಿತರಾಗಿ ಮಲಗಿರುವಾಗ ಒಮ್ಮೆ ಖಲೀಫಾ ಉಸ್ಮಾನ್ (ರ), ಅವರನ್ನು ಸಂದರ್ಶಿಸಲು ಹೋದರು. ಮನೆ ತಲುಪಿದ ಖಲೀಫರು ಬಿನ್ ಮಸ್ಊದ್ (ರ) ರನ್ನುದ್ದೇಶಿಸಿ, *"ತಾವು ವಫಾತಿನ ನಂತರ ತಮ್ಮ ಮಕ್ಕಳಿಗೆ ಬದುಕಲು ಏನಾದರು ಆಸ್ತಿಪಾಸ್ತಿ ಮಾಡಿ ಇಟ್ಟಿದ್ದೀರಾ.?ಇಲ್ಲವೆಂದಾದಲ್ಲಿ ನಾನು ಇಲ್ಲಿನ ದಾನಿಗಳಿಂದ ಸಂಗ್ರಹಿಸಿ ತಮ್ಮ ಮಕ್ಕಳ ಭವಿಷ್ಯಕ್ಕೆ ಒಂದು ವ್ಯವಸ್ಥೆ ಮಾಡಿದರೆ ಹೇಗೆ?* ಮಹಾತ್ಮರು ಮುಗುಳ್ನಗುತ್ತಾ *"ಬೇಡ.. ಬೇಡ... ನನಗೆ ಅದರ ಅಗತ್ಯವಿಲ್ಲ. ದೊಡ್ಡ ಆಸ್ತಿಪಾಸ್ತಿ ಏನೂ ನಾನು ಮಾಡಿಟ್ಟಿಲ್ಲ. ಆದರೆ ನನ್ನ ಮಕ್ಕಳು ಮೂರು ಹೊತ್ತಿನ ಅನ್ನ ಸಿಗದೆ ಹಸಿವಿಗೆ ಈಡಾಗುವ ಭಯ ನನಗೆ ಕಿಂಚಿತ್ತೂ ಇಲ್ಲ. ಯಾಕೆಂದರೆ, ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಕಲಿಸಿ ಕೊಟ್ಟ ಖುರ್ಆನಿನ "ಸೂರಃ ಅಲ್ ವಾಖಿಅ" ವನ್ನು (الواقعة) ಅವರಿಗೆ ನಾನು ಕಲಿಸಿ ಕೊಟ್ಟಿದ್ದೇನೆ. ಅವರೆಲ್ಲರೂ ಅದನ್ನು ತಪ್ಪದೆ ದಿನಾಲೂ ಓದುತ್ತಿದ್ದಾರೆ. "ಆ ಸೂರತನ್ನು ರೂಢಿಯಾಗಿಸಿದವರಿಗೆ ಬಡತನದ ರುಚಿ ಮುಟ್ಟದು. ಯಾವತ್ತೂ ಬೇರೊಬ್ಬರಲ್ಲಿ ಹಸ್ತ ಚಾಚುವ ಗತಿ ಬಾರದು." ಎಂದು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ನನ್ನಲ್ಲಿ ಹೇಳಿದ್ದಾರೆ"* ಎಂದು ಉತ್ತರ ಕೊಟ್ಟರು.
▪ *ರಸೂಲ್* ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರಿಂದ ಎಂಟುನೂರ ನಲವತ್ತು ಹದೀಸುಗಳನ್ನು ವರದಿ ಮಾಡಿದ ಈ ಮಹಾನ್ ಸ್ವಹಾಬಿಯ ಮಖ್ಬರ *ಮದೀನದ ಜನ್ನತುಲ್ ಬಖೀಇ* ನಲ್ಲಿದೆ.
✍🏻ಸಂಗ್ರಹ: ಇಮಾಮ್ ಮುಹಮ್ಮದ್ ಜರ್ದಾನಿಯ *"ಅಲ್ ಜವಾಹಿರ್ ಅಲ್ ಲುಅ್ಲುಇಯ್ಯ ಫಿ ಶರಹಿ ಅರ್ಬ'ಈನ ಅಲ್ ನವವಿಯ್ಯ"* ಎಂಬ ಗ್ರಂಥದಿಂದ.

Comments