Skip to main content

ಜೀವಂತ ಮರ, BLESSED TREE

ಜೀವಂತ ಮರ

*﷽*

*1450 ಕ್ಕಿಂತ ಹೆಚ್ಚು ಕಾಲದಿಂದ ಜೀವಂತವಿರುವ ವಿಶಾಲ ಮರ. ಪ್ರವಾದಿ ಮುಹಮ್ಮದ್ (ಸ ಅ) ರವರಿಗೆ ನೆರಳು ನೀಡಿದ ಮರವಿದು.* ಸುಡು ಬಿಸಿಲಿನ ಮರುಭೂಲಿಯಲ್ಲಿ ಸುತ್ತಮುತ್ತ ಒಂದು ಮರವೂ ಇಲ್ಲ. ನೀರಿಲ್ಲದ ಜಾಗದಲ್ಲಿ 1450 ವರ್ಷಗಳಿಂದ ಈ ಮರ ಜೀವಂತವಾಗಿದೆ. ಇದಕ್ಕೆ ಜೀವಂತ ಸ್ವಹಾಬಿ ಎಂಬ ಹೆಸರಿನಿಂದಲು ಕರೆಯುತ್ತಾರೆ. ಸ್ವಹಾಬಿಯ ಅರ್ಥ ಪ್ರವಾದಿಯನ್ನು ಭೇಟಿಯಾಗಿದ್ದ ಅನುಯಾಯಿ.

*ಈ ಮರದ ವಿಶೇಷತೆ ಇಲ್ಲಿದೆ.*

ಒಮ್ಮೆ ಪ್ರವಾದಿಯವರು 9 ರಿಂದ 12 ವರ್ಷದ ವಯಸ್ಸಿನವರಾಗಿದ್ದಾಗ ಮಕ್ಕಾದಿಂದ ಸಿರಿಯಾಕ್ಕೆ ಹೋಗುತ್ತಿದ್ದ ವ್ಯಾಪಾರಿಗಳ ತಂಡದಲ್ಲಿ ಹೋಗುತ್ತಿದ್ದರು. ವಿಶೇಷತೆಯೇನೆಂದರೆ ಸುಡು ಬಿಸಿಲಿನ ಸಮಯದಲ್ಲಿ ಅವರ ತಂಡ ಹೋಗುತ್ತಿದ್ದ ಎಲ್ಲ ಕಡೆ ಅವರಿಗೆ ಒಂದು ಮೋಡ ನೆರಳಿಗಾಗಿ ಹಿಂದೆ ಹಿಂದೆ ಬರುತ್ತಿತ್ತು. ಅವರು ನಿಂತಲ್ಲಿ ನಿಲ್ಲುತ್ತಿದ್ದ ಆ ಮೋಡ ಅವರ ಪ್ರಯಾಣ ಮುಗಿಯುವವರೆಗೆ ಅವರಿಗೆ ನೆರಳಾಗಿ ಬರುತ್ತಿತ್ತು. ನಂತರ ಸಿರಿಯಾದ ಮತ್ತು ಮಕ್ಕಾ ನಗರದ ಮಧ್ಯ ಜೋರ್ಡಾನ್ ನ ಒಂದು ಪ್ರದೇಶದಲ್ಲಿ ಮರವನ್ನು ಕಂಡ ಅವರ ತಂಡ ಅದರ ಕೆಳಗೆ ಕುಳಿತಾಗ ಆ ಮರ ಬಾಲಕ ಮುಹಮ್ಮದ್ ( ಸ ಅ) ರವರಿಗೆ ನೆರಳು ನೀಡುವ ಉದ್ದೇಶದಿಂದ ತನ್ನ ಟೊಂಗೆಗಳನ್ನು ಕೆಳಗೆ ಚಾಚಿತು. ಈ ವಿಸ್ಮಯಗಳನ್ನೆಲ್ಲ ನೋಡುತ್ತಿದ್ದ ಓರ್ವ ಜೋರ್ಡಾನಿನ ಕ್ರಿಶ್ಚಿಯನ್ ಪಾದ್ರಿ ಬಾಹಿರಾ ಎನ್ನುವವರು ಆಶ್ಚರ್ಯಚಕಿತರಾಗಿ ತಂಡದಲ್ಲಿ ಯಾವುದೋ ಪವಾಡ ಶಕ್ತಿ ಇದೆ ಎಂದು ಮನಗಂಡು ತಂಡದಲ್ಲಿದ್ದ ಎಲ್ಲರನ್ನು ಒಬ್ಬೊಬ್ಬರಾಗಿ ಪ್ರಶ್ನಿಸತೊಡಗಿದರು.ಕೊನೆಗೆ ಉಳಿದ ಬಾಲಕನ ಬಗ್ಗೆ ವಿಚಾರಿಸಿದಾಗ ಅವರ ಬಗ್ಗೆ ಎಲ್ಲವನ್ನು ವಿಚಾರಿಸಿ ಪಾದ್ರಿಯವರ ಪೂರ್ವಜರು ಜೀವಿತಾವಧಿಯಲ್ಲಿ ಓರ್ವ ಪ್ರವಾದಿ ಜನಿಸುವವರಿದ್ದಾರೆ ಅವರೊಂದಿಗೆ ಕೆಲವು ವಿಸ್ಮಯಗಳು ನಡೆಯಲಿದೆ ಎಂಬ ಮಾತು ನೆನಪಾಯಿತು. ಈ ಪಾದ್ರಿಯವರು ಭವಿಷ್ಯದಲ್ಲಿ ಬರಲಿರುವ ಪ್ರವಾದಿಯ ಬಗ್ಗೆಯೇ ತಿಳಿದುಕೊಳ್ಳುವ ಉದ್ದೇಶದಿಂದ ಅರಬ್ ದೇಶದಿಂದ ಬರುವ ಎಲ್ಲ ತಂಡಗಳನ್ನು ಸೂಕ್ಷಮವಾಗಿ ಗಮನಿಸುತ್ತಿದ್ದರು. ಎಲ್ಲ ಸಂಗತಿಗಳನ್ನು ವಿಚಾರಿಸಿ ಅದು ಇವರೇ ಎಂದು ಮನಗಂಡ ಅವರು ಪ್ರವಾದಿಯೊಂದಿಗಿದ್ದ ಅವರ ಚಿಕ್ಕಪ್ಪರವರನ್ನು ಕರೆದು ಇವರಿಗೆ ಮಕ್ಕಾಗೆ ಕರೆದುಕೊಂಡು ಹೋಗಿ ಕೆಟ್ಟ ಶಕ್ತಿಗಳಿಂದ ಅವರ ರಕ್ಷಣೆ ಮಾಡಲು ತಿಳಿಹೇಳಿದರು.

ಇದೇ ಮರ ಸುಡುವಂತಹ ಬಿಸಿಲಿರುವ ಮರುಭೂಮಿಯಲ್ಲಿ ಇಂದಿಗೂ ಜಿವಂತವಾಗಿದೆ. ಇದನ್ನು , Blessed Tree  ಎಂದೂ ಸಹ ಕರೆಯುತ್ತಾರೆ.
➖➖➖➖➖➖➖➖➖➖
 ಇಸ್ಲಾಮಿಕ್ ಚರಿತ್ರೆ ಸಮೂಹ ನಿರ್ವಾಹಕರು
ಜೆ .ಮುಹಮ್ಮದ್ ಫಾರೂಕ್ ಪಾಣೆಮಂಗಳೂರು
   &
ಹಂಝ ಬಜ್ಪೆ (ಹಂಷಮಿ ಬಜ್ಪೆ )

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...