Skip to main content

ಅಹ್ಮದ್ ಇಬ್ನು ಅತ್ವಾಹಿಲ್ಲಾಹಿ ಸಿಕಂದರಿ (ರ ) ವಫಾತಾದ ದಿನ

ಜುಮಾದಿಲ್ ಆಖಿರ್ -- 13.

ಅಹ್ಮದ್ ಇಬ್ನು ಅತ್ವಾಹಿಲ್ಲಾಹಿ ಸಿಕಂದರಿ (ರ ) ವಫಾತಾದ ದಿನ

ಇವರು ಶಾದುಲಿ ತ್ವರೀಕತ್‌ನ ಪ್ರಮುಖ ಶೈಖ್ ಆಗಿದ್ದು, ಪ್ರಗಲ್ಭ ವಿದ್ವಾಂಸರೂ, ಸೂಫಿವರ್ಯರೂ ಆಗಿದ್ದಾರೆ. ಜಗತ್ಪ್ರಸಿದ್ಧ ತಸವ್ವುಫ್ ಗ್ರಂಥ "ಹಿಕಂ " ಇವರ ರಚನೆಯಾಗಿದೆ.
ಶಾದುಲೀ ಇಮಾಮರ ಸಂದೇಶಗಳನ್ನು , ತ್ವರೀಕತ್ತನ್ನು ವಿಶ್ವ ಪ್ರಸಿದ್ದಿ ಮಾಡುವುದರಲ್ಲಿ ಇವರ ಸೇವೆ ಗಮನಾರ್ಹ.

ಅಲೆಕ್ಸಾಂಡ್ರಿಯ ಎಂಬ  ಪ್ರದೇಶದಲ್ಲಿ ಮಹಾತ್ಮರು ಜನಿಸಿದರು. ತಂದೆ,  ತಾತಂದಿರು ಮಾಲಿಕಿ ಮದ್‌ಹಬ್‌ನ ವಿದ್ವಾಂಸರಾಗಿದ್ದು ಅವರ ಹಾದಿಯಲ್ಲಿಯೇ ಸಿಖಂದರ್ (ರ )ರವರು ಸಾಗಿದರು. ಅಗಾಧವಾದ ಪಾಂಡಿತ್ಯವನ್ನು ಕರಗತ ಮಾಡಿಕೊಂಡರು. 

ಹಿಜ್ರಾ 674 ಕೈರೋದಲ್ಲಿ ಫಕೀರರಾಗಿ ಜೀವನ ನಡೆಸುತ್ತಿದ್ದ ಸಂದರ್ಭ. ಶಾದುಲೀ ತ್ವರೀಕತ್‌ನ ಶೈಖ್ ಆಗಿದ್ದ ಅಬ್ಬಾಸಿಲ್ ಮುರ್ಸೀ ( ರ ) ರವರ ಸಭೆಗೆ ಒಮ್ಮೆ ಹೋಗಿದ್ದರು. ಅಲ್ಲಿ ಶೈಖ್‌ರವರ ಉಪದೇಶ ಮಹಾತ್ಮರ ಜೀವನದಲ್ಲಿ ಆತ್ಮೀಯ ಬದಲಾವಣೆ ಉಂಟು ಮಾಡಿತು. 

*ಸೂಫಿಗಳ ಮಾತೆಂದರೆ ಮಾತು. ಅವರು ಅಲ್ಲಾಹುವಿ‌ನ ವಿಶೇಷ ಅನುಗ್ರಹ ಪಡೆದವರು. ಅವರ ಮಾತು ಎಂತಹ ಕಲ್ಲು ಹ್ರದಯವನ್ನು ಕರಗಿಸಬಲ್ಲದು*.

ಮಹಾತ್ಮರಾದ ಸಿಖಂದರ್ (ರ) ರವರಿಗೆ ಇಂತಹ ಮಧುರ ಅನುಭವವಾಯಿತು. ಅವರು ಹೆಚ್ಚು ಚಿಂತಿಸಲಿಲ್ಲ. ನೇರವಾಗಿ ಶೈಖ್‌ರವರ ಶಿಷ್ಯತ್ವ ಸ್ವೀಕರಿಸಿದರು. ಸುಧೀರ್ಘ 12 ವರ್ಷಗಳ ಕಾಲ ಅವರಲ್ಲಿ ಕಲಿತರು.    ಮುಂದೆ ಅಗ್ರಗಣ್ಯ ವಿದ್ವಾಂಸರಾಗಿ, ಸೂಫಿವರ್ಯರಾಗಿ ಮಾರ್ಪಟ್ಟರು. ಮಾತ್ರವಲ್ಲ ಶಾದುಲೀ ತ್ವರೀಕತ್‌ನ ಖಲೀಫರಾದರು.

ಹಿಜರಿ 709 ರಲ್ಲಿ ಮಹಾತ್ಮರು ವಫಾತಾದರು. ಈಜಿಪ್ಟ್‌ ನ ಕೈರೋದಲ್ಲಿ ಮಹಾತ್ಮರ ದರ್ಗವಿದೆ.

*ಅಲ್ಲಾಹು ನಮ್ಮೆಲ್ಲರನ್ನು ಮಹಾತ್ಮರ ಜೊತೆ ಸ್ವರ್ಗದಲ್ಲಿ ಒಗ್ಗೂಡಿಸಲಿ‌. ಆಮೀನ್*

    *ಎಂ ಎಂ ಸಖಾಫಿ*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...