ಮಂದಹಾಸ
✍ ನವಾಝ್ ಸಖಾಫಿ ಅಲ್ ಅಮ್ಜದಿ ಅಕ್ಕರೆಕೆರೆ ಉಳ್ಳಾಲ
" ನೀನು ತುಂಬಾ ಕ್ಷೀಣಿಸಿದ್ದೀಯಲ್ವಾ, ತುಂಬಾ ದಪ್ಪಗಾಗಿದ್ದೀಯಲ್ವಾ, ಕೂದಲು ತುಂಬಾ ನೆರೆತ ಉಂಟಾಗಿದೆಯಲ್ವಾ " ಮುಂತಾದ ಮಾತುಗಳಿಂದ ಇತರರು ನಮ್ಮ ಬಗ್ಗೆ ಈ ರೀತಿ ಬೆಲೆ ಕಲ್ಪಿಸುವಿಕೆ ನಮ್ಮ ಎಷ್ಟೋ ದಿನ ರಾತ್ರಿಗಳನ್ನು ನಷ್ಟಪಡಿಸಿರುತ್ತದೆ. ಇಂತಹ ಜನರಿಂದ ಒಮ್ಮೆಯಾದರೂ ತಪ್ಪಿಸಿಕೊಳ್ಳಲು ಪ್ರಯತ್ನಿಸದವರು ವಿರಳ. ಈ ರೀತಿಯ ಮಾತುಗಳು ಮನಸ್ಸನ್ನು ವಿಘ್ನಗೊಳಿಸುತ್ತದೆ. ಅದೂ ಕೂಡಾ ಗುಂಪಿನ ಮಧ್ಯೆ ಈ ರೀತಿಯ ಮಾತುಗಳು ಇತರರಿಂದ ಬಂದರೆ ಮುಜುಗರಕ್ಕೊಳಗಾಗುವುದರ ಜೊತೆಗೆ ತನ್ನ ಬಗ್ಗೆ ಕೀಳು ಭಾವನೆ ಉಂಟಾಗುವುದು ಸಹಜವಾಗಿರುತ್ತದೆ.
ಒಬ್ಬ ವ್ಯಕ್ತಿಯನ್ನು ಭೇಟಿ ಮಾಡುವಾಗ ಅಥವಾ ಬೆರೆಯುವಾಗ ಸಾಧ್ಯವಾದಷ್ಟು ಉತ್ತಮ ಮಾತುಗಳಿಂದ ಪ್ರಾರಂಭಿಸಿರಿ. ಹೆಚ್ಚಾಗಿ ನಮ್ಮ ಮನಸ್ಸಿಗೆ ಇನ್ನೊಬ್ಬರ ತಪ್ಪು, ಅವರ ಕುಂದು ಕೊರತೆಗಳು, ಲೋಪದೋಷಗಳು ಮನುಷ್ಯ ಸಹಜವಾಗಿ ಬಂದು ಬಿಡಬಹುದು. ಆದರೆ ಅದಕ್ಕೆ ಪ್ರಾಧಾನ್ಯತೆ ನೀಡದೆ ಆ ವ್ಯಕ್ತಿಯಲ್ಲಿರುವ ಏನಾದರೂ ಉತ್ತಮ, ಮನಸ್ಸಿಗೆ ಮುದ ನೀಡುವ ಮಾತುಗಳಿಂದ ಪ್ರಾರಂಭಿಸುವುದಾಗಿದೆ ಒಳಿತು.

Comments